ಭಾರತೀಯ ಪ್ರಜಾಸತ್ತೆ
ಇಂದಿನ ಭಾರತೀಯ ಪ್ರಜಾಸತ್ತೆ ಸರಿಯಾದ ದಾರಿಯಲ್ಲಿ ಚಲಿಸುತ್ತಿದೆಯೇ ?
ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆಂಬುವು , ರಥದ ಎರಡು ಚಕ್ರಗಳು. ಕಾಲಕ್ರಮದಲ್ಲಿ ಇವು ಒಂದರ ಸ್ಥಾನಕ್ಕೆ ಇನ್ನೊಂದು ಬರುವುದು ಪ್ರಜಾಸತ್ತೆಯ ಸಹಜ ಪ್ರಕ್ರಿಯೆ. ರಾಜಕೀಯ ಪಕ್ಷವೊಂದು ಆಡಳಿತ ಪಕ್ಷವಾಗಿದ್ದರೂ ; ವಿರೋಧ ಪಕ್ಷವಾಗಿದ್ದರೂ ಅದರ ಸ್ಥಾನಬಲದ ಮೇಲೆ ಸಾಂವಿಧಾನಿಕ ಕರ್ತ ವ್ಯಗಳಿದ್ದೇ ಇರುತ್ತವೆ.
ಬಂದಿರುವ ತೊಂದರೆ ಎಂದರೆ ಯಾವ ಪಕ್ಷವೂ ಈಗ ವಿರೋಧಪಕ್ಷವಾಗಲು ಇಷ್ತಪಡುತ್ತಿಲ್ಲ.ಪ್ರಜಾ ಪ್ರಭುತ್ವದಲ್ಲಿ ಯಾವ ಸ್ಥಾನವಾದರೂ ನಿರ್ಣಾಯಕವೇ ಎಂಬ ಅರಿವಿನ ಕೊರತೆಯಿಂದ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾದ ಪಕ್ಷಗಳು ಆಜನ್ಮ ವೈರಿ ಪಡೆಗಳಂತೆ ಬವಿದಾಡುತ್ತಿವೆ
ಪಕ್ಷಗಳು ಪರಸ್ಪರ ಗೌರವ ತೋರಿಸದಿರುವ; ಉದಾರತೆ ಮೆರೆಯದಿರುವ ಪರಿಣಾಮವಾಗಿ, ಸಂಸತ್ತು ಯಾವುದೇ ಪರಿಣಾಮಕಾರಿಯಾದ ಚರ್ಚೆಯನ್ನು ನಡೆಸಲಾರದ ಸ್ಠಿತಿಗೆ ಮುಟ್ಟಿ, ಕೇವಲ ಗಲಭೆ ಗೊಂದಲಗಳ ಗೂಡಾಗುತ್ತಿದೆ.
ಸಂವಿಧಾನಾತ್ಮಕವಾಗಿ ಚುನಾವಣೆಗೆ ನಿಲ್ಲುವ ಅರ್ಹತೆಯನ್ನು ಪಡೆದ ಪಕ್ಷಗಳನ್ನು ಸಮಾಜವಿರೋಧಿಗಳಂತೆ ಚಿತ್ರಿಸುವ ಪರಿಪಾಠ ಸಹ ಸಂವಿಧಾನಕ್ಕೆ ಮತ್ತು ಆರಿಸಿದ ಜನ ಸಮುದಾಯಕ್ಕೆ ಮಾಡುವ ಅಪಮಾನವೇ ಆಗುತ್ತದೆ ;ಹಾಗೂ ಪಕ್ಷಗಳೂ ಸಹ ತುಂಬಾ ಜಾವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯಕ್ಕೆ ಬದ್ದವಾಗಬೇಕಾಗುತ್ತದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ವಂಶಾಧಿಕಾರ ಪದ್ದತಿಯನ್ನು ಎಗ್ಗಿಲ್ಲದೆ ಪ್ರತಿಪಾದಿಸಲಾಗುತ್ತಿದೆ.ಇದು ಪ್ರಜಾಸತ್ತೆಯ ಮೇಲೆ ನಡೇಸುವ ಕ್ರೂರ ದಾಳಿ.ನಾಡಿನ ಪ್ರತಿಭ್ಹಾವಂತ ಯುವ ಸಮುದಾಯದ ಮೇಲೆ ಇದರ ಕೆಟ್ಟ ಪರಿಣಾಮ ಊಹಿಸಲು ಬಾರದ್ದು.
ಭಾರತದಂತಹ ಬೃಹತ್ ಪ್ರಜಾಸತ್ತೆಯ ಹೊಣೆಯನ್ನು ಹೊತ್ತ ಕೇಂದ್ರ ಸರ್ಕಾರದಲ್ಲಿ ಎಷ್ಟು ಮಾನವ ಪ್ರತಿಭ್ಹೆ ಇದ್ದರೂ ಸಾಲದು,ಅದಕ್ಕೆ ಬದಲಾಗಿ, ಕೇವಲ ನಾಯಕ ನಿಷ್ಟೆಗೆ; ವಿಚಾರಹೀನ ವಿಧೇಯತೆಗೆ ಒತ್ತು ಕೊಡುತ್ತಿರುವುದು ಪ್ರಜಾಸತ್ತೆಯನ್ನು ಮರಣಾಸನ್ನ ಸ್ಠಿತಿಗೆ ದೂಡಿದಂತೆಯೇ ಆಗುತ್ತದೆ.
ರಾಜ್ಯಾಂಗದತ್ತವಾದ ತನಿಖಾ ಸಂಸ್ಠೆಗಳನ್ನು , ಸ್ವಾಯತ್ತೆ ಸಂಸ್ಠೆಗಳನ್ನು ದುರುಪಯೋಗಪಡೀಸಿ ಎದುರಾಳಿಗಳನ್ನು ಸದೆಬಡಿಯಲು; ಸ್ವಜನರನ್ನು ಬಚಾವು ಮಾಡಲು ಉಪಯೋಗಿಸಿಕೊಳ್ಳುವುದು ಪ್ರಜಾಸತ್ತೆಯನ್ನು ದುರ್ಬಲಗೊಳಿಸುವ ಕ್ರಮವಾಗುತ್ತದೆ.
ಸ್ವಾತಂತ್ರ್ಯ ನಂತರ ಕೇವಲ ಅರವತ್ತು ವರ್ಷಗಳಲ್ಲಿ ಭಾರತೀಯ ಪ್ರಜಾಸತ್ತೆ ಚಲಿಸುತ್ತಿರುವ ಇಂತಹ ಅಪಾಯದ ಹಾದಿಯನ್ನು ಕಂಡೂ ಎಚ್ಚರಿಸದಿರುವುದು ಪ್ರಾಜ್ನರ ಕರ್ತವ್ಯ ಲೋಪವೇ ಆಗುತ್ತದೆ

- Login or register to post comments
- 340 hits
- Email this forum





RSS: