ಪ್ರಸಾದ್ ಹೆಗ್ಡೆ
ಮೊನ್ನೆ ಅಸ್ತೆ S.L. ಬೈರಪ್ಪ ಅವರ "ವಂಶವೃಕ್ಷ" ಓದಿ ಮುಗಿಸಿದೆ..ಅದ್ರೆ ಏಕೋ ಏನು ನನಗೆ ಬೈರಪ್ಪನವರು ಕತ್ಯಯಿನಿ ಪತ್ರಕ್ಕೆ ಮೋಸ ಮಾಡಿದಂಗೆ ಅನಿಸುಥ ಇದೆ..ಏಕೆಂದರೆ ಪಾಪ,ಅವಳು ತನ್ನ ಯೌವನದಲ್ಲೇ ಗಂಡನನ್ನು ಕಳೆದುಕೊಂಡು,ನಂತರ ಅವಳು ರಾಜನನ್ನು ಮದುವೆ ಆಗಿದ್ದು ನನಗೆ ಸರಿ ಅನಿಸಿತ್ತು. ಆದ್ರೆ ನಂತರ ಕತ್ಯಯಿನಿ ಬರಿ ಗೋಳಿನಲ್ಲೇ ತನ್ನ ಜೀವನ ಕಳೆಯುವಂಗೆ ಆಗಿದ್ದು ಏಕೋ ಸರಿ ಕಾಣಲ್ಲಿಲ್ಲ.. ನಿಮ್ಮಲ್ಲಿ ಯಾರಾದ್ರು ಓದಿದರೆ ಎ ಚರ್ಚೆ ಗೆ ಬಾಘವಹಿಸಿ..

- Login or register to post comments
- 447 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಪ್ರಸಾದ್ ಹೆಗ್ಡೆ
ಪ್ರಸಾದ್ ಹೆಗ್ಡೆ, ವಂಶವೃಕ್ಷದ ಕುರಿತಾಗಿ ಕೆಲವು ಚರ್ಚೆಗಳು ಸಂಪದದ್ದಲ್ಲಿ ನಡೆದೇ ಇದೆ.
೧. ನರೇಂದ್ರ ಅವರು ಸಂಸ್ಕಾರ ಮತ್ತು ವಂಶವೃಕ್ಷದಲ್ಲಿ ಒಂದು ತುಲನಾತ್ಮಕ ವಿಶ್ಲೇಷಣೆಯನ್ನು ಮುಂದಿಡುತ್ತಾ ಒಂದು ಒಳ್ಳೆಯ ಓದನ್ನು ನೀಡಿದ್ದರು.
೨. ಪಾಪ ಮತ್ತು ಪಾಪಪ್ರಜ್ಞೆ ಎಂಬ ಎಳೆಯಲ್ಲಿ, ಕಾತ್ಯಾಯಿನಿ ಪಾತ್ರದ ಸುತ್ತ ಕೆಲವು ಚರ್ಚೆಗಳಾಗಿದ್ದವು. ಕಾತ್ಯಾಯಿನಿ ಪಾತ್ರ, "ಪಾಪಪ್ರಜ್ಞೆಯಲ್ಲಿ ಸಿಲುಕುವ ಜನರು" ಅದರಿಂದ ಆಚೆಬರಲು ಯಾವ ರೀತಿ ಹೆಣಗಾಡುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ನಾನು ಹೇಳಿದ್ದೆ.
೩. ಅಂದಹಾಗೆ, ನಾನು ವಂಶವೃಕ್ಷವನ್ನು ಮೊದಲ ಬಾರಿ ಓದಿದಾಗ, ನನ್ನ ಅನಿಸಿಕೆಯನ್ನು ಒಂದು ಅಪಕ್ವಲೇಖನದ ಮೂಲಕ ಓದುಗರ ಮುಂದಿಟ್ಟುದ್ದುಂಟು.
ಕೊಕೊ(ಕೊನೆಯ ಕೊಸರು) - ಪ್ರಸಾದ್ ಹೆಗ್ಡೆ, ನಿಮ್ಮ ಬರಹದಲ್ಲಿ ಕೆಲವೊಂದು ಕಾಗುಣಿತ ತಪ್ಪುಗಳು ನುಸುಳಿವೆ. ಈ ತಪ್ಪುಗಳ ಮೇಲೆ ಒಂದು ಕಣ್ಣಿರಲಿ.