Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ಕನ್ನಡದಲ್ಲಿ ಹಿನ್ನೆಲೆ ಗಾಯಕರ ಕೊರತೆಯೆ?

November 14, 2005 - 12:44pm — honnung

ಧ್ವನಿ ಮುದ್ರಣಕ್ಕಾಗಿ ಮೊದಲು ಸಂಗೀತ ನಿರ್ದೇಶಕರು ಟ್ರ್ಯಾಕ್ ಸಿಂಗರ್ ಗಳನ್ನು ಬಳಸಿಕೊಳ್ಳುತ್ತಾರೆ. ಇದು ಬಿಡುಗಡೆಯಾಗುವ ಹಾಡಿನ ಮೊದಲ ಕರಡು ಪ್ರತಿ. ಈ ಗಾಯಕರು ಕನ್ನಡಿಗರೇ ಆಗಿರುವುದರಿಂದ ಅಪಭ್ರಂಶ ಆಗುವ ಸಾಧ್ಯತೆ ಕಡಿಮೆ. ಈ ಹಾಡನ್ನು ಪ್ರಸಿದ್ಧ ಗಾಯಕರಿಗೆ ಕೇಳಿಸುತ್ತಾರೆ. ನಂತರ ಈ ಹೆಸರಾನ್ವಿತ ಹಿನ್ನೆಲೆ ಗಾಯಕರು ಅದೇ ರೀತಿ ತಮ್ಮ ಧ್ವನಿಯಲ್ಲೇ ಹಾಡುತ್ತಾರೆ. ಇದು ಕೊನೆಯ ಹಾಡಿನ ಕೊನೆಯ ಆವೃತ್ತಿ. ಕೊನೆಯ ಮುದ್ರಣವನ್ನೇ ನಾವು ಕ್ಯಾಸೆಟ್ ಗಳಲ್ಲಿ ಕೇಳುವುದು.

ಈಗೀಗ ಕನ್ನಡದ ಗಂಧವೂ ಅರಿಯದ ಹಾಗೂ ಅರಿಯಲು ಎಳ್ಳಷ್ಟೂ ಆಸಕ್ತಿಯಿಲ್ಲದ ಕನ್ನಡ ಚಿತ್ರ ಹಿನ್ನೆಲೆ ಗಾಯಕರ ಸಂಖ್ಯೆ ಹೆಚ್ಚುತ್ತಿದೆ! ಹಾಗಾಗಿ ಈ ಟ್ರ್ಯಾಕ್ ಸಿಂಗರ್ ಗಳ ಬಳಕೆ ಅನಿವಾರ್ಯವಾಗಿದೆ.

ಈ ಘಟನೆ ನಡೆದಿದ್ದು 'ಪ್ರೀತ್ಸೆ ಪ್ರೀತ್ಸೆ' ಚಿತ್ರದ ಹಾಡಿನ ಧ್ವನಿ ಮುದ್ರಣ ನಡೆಯುತ್ತಿದ್ದ ಸಂದರ್ಭದಲ್ಲಿ.

ಮೊದಲು ಹೇಮಂತ್ ಎಂಬವರನ್ನು ಟ್ರ್ಯಾಕ್ ಸಿಂಗರ್ ಆಗಿ ಬಳಸಿಕೊಳ್ಳಲಾಗಿತ್ತು. ಈ ಹಾಡಿಂದಲೇ ಅವರು ಮನೆಮಾತಾದರು ಬಿಡಿ. ನಂತರ ಹಿಂದಿಯ ಪ್ರಸಿದ್ಧ ಗಾಯಕರೊಬ್ಬರನ್ನು (ಹೆಸರು ಮುಖ್ಯವಲ್ಲ) ಅಂತಿಮ ಸುತ್ತಿನ ಮುದ್ರಣಕ್ಕೆ ಬಳಸಿಕೊಳ್ಳಲಾಯಿತು.

ಆದರೆ ಈ ಎರಡೂ ಆವೃತ್ತಿಯನ್ನು ಕೇಳಿದ ಉಪೇಂದ್ರರಿಗೆ ಮೊದಲ ಹಾಡೇ ಇಷ್ಟವಾಯಿತು. ಕಾರಣ ಅದರಲ್ಲಿರುವ ಆವೇಶ, ಆವೇಗ, ಉತ್ಕಟತೆ, ಸರಿಯಾದ ಉಚ್ಛಾರಣೆ, ಮತ್ತು ಧ್ವನಿಯ ಏರಿಳಿತ (ಈ ಹಾಡನ್ನು ಇನ್ನೊಮ್ಮೆ ಕೇಳಿ ನೋಡಿ ನಿಮಗೇ ತಿಳಿಯುವುದು). ಇವೆಲ್ಲವನ್ನೂ ಯಾರಾದರೂ ಯಥಾವತ್ತಾಗಿ ನಕಲು ಹೊಡೆಯಲು ಸಾಧ್ಯವೇ ಇಲ್ಲ. ಅದಕ್ಕೆ ಉಪ್ಪಿ ಸಾರ್ ಗೆ ಆ ಮುಖ್ಯ ಗಾಯಕನ ಪ್ರಯತ್ನವೆಲ್ಲಾ ಕೃತ್ರಿಮ ಎನಿಸಿರಲೂಬಹುದು.

ಹೀಗೆ ಹೇಮಂತ್ ಟ್ರ್ಯಾಕ್ ಸಿಂಗರ್ ಹಿನ್ನೆಲೆ ಗಾಯಕರಾಗಿ ಬಡ್ತಿ ಹೊಂದಿದರು. ಒಮ್ಮೊಮ್ಮೆ ನನ್ನಲ್ಲಿ ಒಂದು ಪ್ರಶ್ನೆ ಏಳುತ್ತದೆ. ನಿಜವಾಗಿ ಯಾರೋ ಹಿಂದಿ ಗಾಯಕರ ಧ್ವನಿಯಲ್ಲಿ ಈ ಹಾಡು ಮಾರುಕಟ್ಟೆಗೆ ಬಂದರೆ ಜನರು ಈ ಮಟ್ಟಿಗೆ ಇಷ್ಟಪಡುತ್ತಿದ್ದರೆ?

ದರೋಡೆಗಿಳಿದ ಉದಯ ಜಾದೂಗಾರ್ ›
  • ಸಿನಿಮಾ
Ornamental seperator
  • Login or register to post comments
  • 789 hits
  • Email this forum
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ.
  • ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
  • 2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!
  • ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?
  • ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
Syndicate content

ಲೇಖಕರು

honnung's picture

ಪರಿಚಯ

A fellow kannadiga like to see much of Kannada on net world

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಚಾಗದ ಭೋಗದಕ್ಕರದ...
  • ಏಕೆ ಹೀಗೆ ಅನಿಸುತ್ತದೆಯೋ!
  • ನರಸಿಂಹ ಯಾರು ?
  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
  • ಸವಾಲೊಂದು ನಿನ್ನ ಮ್ಯಾಲ...
  • ತುರುಸಿನ ವೋಟಿಂಗ್ ಅಂದರೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 5:00am
  • hamsanandi
    ಉ: ಯು ಮಿ ಔರ್ ಹಮ್
    May 22, 2008 - 12:14am
  • hamsanandi
    ಉ: ಉಳ್ಳವರು ಶಿವಾಲಯವ ಮಾಡುವರು
    May 21, 2008 - 10:02pm
  • hamsanandi
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 9:55pm
  • Sunil Jayaprakash
    ಉ: ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
    May 21, 2008 - 9:28pm
  • ಕರಿ ತವಳೆ
    ಉ: ಚಾಗದ ಭೋಗದಕ್ಕರದ...
    May 21, 2008 - 8:26pm
  • harshab
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 8:01pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 21, 2008 - 7:52pm
  • Sunil Jayaprakash
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 7:34pm
  • ವೈಭವ
    ಉ: ಕಲಿತರೆ ಹೀಗೆ...
    May 21, 2008 - 7:32pm
ಇನ್ನಷ್ಟು

ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator