Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಹೊಸ ಸದಸ್ಯರು

ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?

November 18, 2007 - 10:39am — gopinatha

ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?

ವರ್ತುಲ ರಸ್ತೆಯಲ್ಲಿ, ಪ್ರತಿ ದಿನದ ದಿನಚರಿಯಲ್ಲಿ

ನಗರದ ಧಾವಂತತೆ ರಸ್ತೆಯಲ್ಲಿ ಎದ್ದು ಕಾಣುತ್ತಿತ್ತು.ಕಣ್ಣೆಣಿಕೆಯಷ್ಟು ದೂರವೂ ಗಾಡಿಗಳು ದ್ವಿಚಕ್ರ, ತ್ರಿಚಕ್ರ,ಚತುರ್ಚಕ್ರ ಮತ್ತು ಬಹು ಚಕ್ರ ವಾಹನಗಳದ್ದೇ ಸಂತೆ, ಅದೂ ಈ ವರ್ತುಲ ರಸ್ತೆಯಲ್ಲಂತೂ ಎತ್ತನೋಡಿದರತ್ತ ಅವುಗಳೇ. ಪ್ರತಿ ಸವಾರರಿಗೂ ಧಾವಂತತೆಯ ಅವರದ್ದೇ ಆದ ಲೋಕ,ತಲೆಬಿಸಿಯ ಸಂಸಾರ, ಕಾಯಿದೆ ಕಾನೂನು, ಮತ್ತು ಕಾರಣ. ಪ್ರಾಯಶಃ ಡ್ರೈವಿಂಗ್ ಕಲಿಯುವಾಗಲಷ್ಟೇ ನೋಡಿಕೊಂಡಿದ್ದ, ಕಲಿತುಕೊಂಡಿದ್ದ ರಹದಾರಿಯ ಸೂಚನೆ ನಿಯಮಗಳು ಅನಂತರ ೞಲಕಗಳಲ್ಲಷ್ಟೇ ಲಭ್ಯ. ಈಗಂತೂ "ಚಲನೆಯೇ ಜೀವನ ಇಲ್ಲದಿರೆ ಮರಣ" ಅಂದುಕೊಳ್ತಾರೆ ಅನ್ನಿಸುವಷ್ಟರ ಮಟ್ಟಿಗೆ ಇವರ ಚಲನೆ. ಯಾಕೆಂದರೆ ಈ ವಾಹನಗಳು ಚಲಿಸುತ್ತಲೇ ಇವೆಯಲ್ಲಾ, ಅದರಲ್ಲೂ ದ್ವಿಚಕ್ರ ವಾಹನಗಳಾದರೆ ಇದು ಇನ್ನೂ ಹೆಚ್ಚು. ನಾನು ಒಳ ರಸ್ತೆಯಿಂದ ವರ್ತುಲ ರಸ್ತೆಗೆ ಕಷ್ಟಪಟ್ಟು ರವಾನೆಯಾದೆ. ಕಷ್ಟ ಅಂತ ಯಾಕೆ ಹೇಳಿದೆನೆಂದರೆ ಎಡೆಬಿಡದೆ ಚಲಿಸುವ ವಾಹನಗಳ ಈ ಮಧ್ಯಕ್ಕೆ ಸಮತೋಲನ ಕಾಯ್ದುಕೊಂಡು ಸೇರುವುದಂದರೆ ಅದೇ ಒಂದು ಮಹಾ ಯುದ್ಧವನ್ನು ಜೈಸಿದಂತೆಯೇ.ಒಮ್ಮೆ ನುಗ್ಗಿದರೂ ನಮ್ಮ ಲೇನ್ ಕಾದುಕೊಳುವುದೂ ಮಹಾ ಕಷ್ಟ. ಒಮ್ಮೆಯಂತೂ ಜಾಲಹಳ್ಳಿ ಕ್ರಾಸಿನಿಂದ ಯಶ್ವಂತಪುರ ರೈಲ್ವೇ ನಿಲ್ದಾಣ ತಲುಪಲು ಬರೇ ಆರು ಕಿಮೀ ದಾರಿ ನಾನು ಒಂದೂವರೆ ಘಂಟೆ ಕಾಲ ಕ್ರಮಿಸಿದ್ದೆ.ಹೊಸ ಹಾಸ್ಯ ಕೇಳಿದ್ದೀರಾ ದುಬೈಯಿಂದ ಇಲ್ಲಿಗೆ ಬರಲು ಮೂರು ಘಂಟೆ ಆದರೆ ವಿಮಾನ ನಿಲ್ದಾಣದಿಂದ ಮನೆಗೆ ಬರಲು ಬರೇ ಅರ್ಧ ಘಂತೆ ಜಾಸ್ತಿ ಬೇಕು ಅಂತ. ಇವತ್ತೂ ಹಾಗೆಯೇ, ನಾನು ವರ್ತುಲ ರಸ್ತೆಯ ತೀರಾ ಎಡಗಡೆ ಇದ್ದರೂ ಮುಂದಿನ ವಾಹನಗಳು ನಿಂತರೆ,ನಾನೂ ನಿಲ್ಲಲೇ ಬೇಕಲ್ಲ! ಆದರೆ ಆಗ ನನ್ನ ಎಡಬಲಗಳ ಎಲ್ಲಾ ಕಡೆಯಿಂದಲೂ ರುಂ ಝುಂ ಅಂತ ಪುಂಖಾನು ಪುಂಖವಾಗಿ ರಭಸದಿಂದ ಅನಾಯಾಸವೆಂಬಂತೆ ಚಲಿಸುತ್ತಿರುತ್ತವೆ. ಕಣ್ಣೆದುರಿನಲ್ಲಿಯೇ ರಸ್ತೆಯಾಚೆಗಿನ ಜಾಗ ಅಂದರೆ ಕಾಲು ದಾರಿ (ೞುಟ್ ಪಾಥ್) ಯಲ್ಲೂ ಇದೂ ರಸ್ತೆಯೇ ಎಂಬಂತೆ ಈ ದ್ವಿಚಕ್ರವಾಹನಗಳನ್ನು ಚಲಿಸುತ್ತಿರುವುದು ನೋಡುವಾಗ ನನ್ನ ಕಿವಿಗಳೆರಡು ಬಿಸಿಯಾಗತೊಡಗುತ್ತವೆ.ನಾನು ಯಾವುದೋ ಲಾರಿಯ ಹಿಂಬದಿ ನಿಂತಿದ್ದೆ. ನನ್ನ ಬಲಗಡೆ ನನ್ನ ಹಾಗೇ ನಿಂತಿದ್ದ ಕೆಂಪುಹೊಂಡಾ, ಶರ್ಟು, ಹೆಲ್ಮೆಟ್(ಎಲ್ಲಾ ಕೆಂಪೇ) ವ್ಯಕ್ತಿಗೆ ಇದೆಲ್ಲ ತೋರಿಸಿ" ಅಲ್ಲ ರೀ ಇವರಿಗೆಲ್ಲಾ ಯಾಕೆ ಇಷ್ಟು ಧಾವಂತ? ಇವರೆಲ್ಲಾ ನಮ್ಮ ಹಾಗೆ ರಹದಾರೀ ನಿಯಮಗಳನ್ನು ಅನುಸರಿಸೋದಿಲ್ಲ ಯಾಕೆ? ಹೀಗಾದರೇನೇ ಅವಘಡಗಳು ಜಾಸ್ತಿಯಾಗುತ್ತವೆ ಅಲ್ಲವಾ..........?"ಎಂದ ನನ್ನ ಮಾತನ್ನು ನಿರ್ಲಿಪ್ತತೆಯಿಂದ ಕೇಳಿದ ಆ ವ್ಯಕ್ತಿ "ಸ್ವಲ್ಪ ಹಿಂದೆ ಸರಿಸುತ್ತೀರಾ ನಿಮ್ಮ ಗಾಡಿ!" ಎಂದ. ನಾನುಗಾಡಿ ಹಿಂತೆಗೆದೆ. ಆತ ತನ್ನ ಹೀರೋ ಹೊಂಡವನ್ನು ನನ್ನ ಎಡಗಡೆಗೆ ತಿರುಗಿಸಿ ಬರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ ಎಂದು ಓಡುತ್ತಿರುವ ಗಾಡಿಗಳ ಜತೆ ತಾನೂ ನೂರರಲ್ಲೊಂದಾಗಿ ಬಿಟ್ಟ. ನಾನು ಇಂಗು ತಿಂದ ಮಂಗನಂತಾಗಿ ಆ ಕಡೆಯೇ ನೋಡುತ್ತಿದ್ದುಬಿಟ್ಟೆ.

ಇದಿರಿನ ಲಾರಿ ನಿಧಾನವಾಗಿ ಚಲಿಸತೊಡಗಿತು. ನಾನೂ ಅದರ ಹಿಂದೆಯೇ ಅದರಂತೆಯೇ ಚಲಿಸತೊಡಗಿದೆ.ಮುಂದಿನ ನನ್ನ ನಿಲ್ಲುವಿಕೆ ಗುರುಗುಂಟೆ ಪಾಳ್ಯದ ಸಿಗ್ನಲ್. ಕಾಲು ದಾರಿಯನ್ನೇ ನೋಡದದವರಿಗೆ ಈ ಸಿಗ್ನಲ್ ಕಾಣುತ್ತದಾ?ಇವೆಲ್ಲ ರಹದಾರೀ ನಿಯಮಗಳು ಅದನ್ನು ಅನುಸರಿಸುವವರಿಗೆ ಮಾತ್ರ.ಇಲ್ಲಿಯೂ ಬರ್ರ್ರ್ರ್ರ್ರ್ ಅಂತ ಹೋಗುವವರು ಇನ್ನೂ ಹೋಗುತ್ತಲೇ ಇದ್ದರು. ನನ್ನ ಹಿಂದೆ ಬರುವವರಿಗೂ ಅದೇ ಧಾವಂತ.ಹಿಂದಿನಿಂದ ಹಾರ್ನ ಗಳ ಸುರಿಮಳೆ. ನೋಡಿದರೆ ಮತ್ತೆ ಅದೇ ಕೆಂಪು ಬೈಕಿನವ.ನನಗೆ ಒಂದೇ ಮುಂದೆ ಹೋಗಿ ಇಲ್ಲವಾದರೆ ದಾರಿ ಬಿಡಿ ಎಂಬ ಸಂಜ್~ಜೆ ಬೇರೆ. ನಾನು ಆತನಿಗೆ ಸಿಗ್ನಲ್ ಇನ್ನೂ ಕೆಂಪಿರುವುದನ್ನು ತೋರಿಸಿದರೆ, ಆತ ನಾನೆಲ್ಲೋ ಹಳ್ಳಿ ಗುಗ್ಗು ಎಂಬಂತೆ ತಾತ್ಸಾರ ಮಾಡಿ, ನನ್ನ ಪಕ್ಕದ ಮಣ್ಣು ದಿನ್ನೆಯನ್ನು ಕಷ್ಟ ಪಟ್ಟು ಹತ್ತಿ ನಾನು ನೋಡನೋಡುತ್ತಿರುವಂತೆಯೇ ಧೂಳೆಬ್ಬಿಸಿ ಹೋಗಿಯೇ ಬಿಟ್ಟ. ಮತ್ತು ಅವನ ಹಿಂದೆಯೇ ಧೂಳೆಬ್ಬಿಸುತ್ತಾ ಅಸಂಖ್ಯಾತ ದ್ವಿಚಕ್ರಿಗಳೂ. ಅಷ್ಟರಲ್ಲಿ ದೀಪ ಹಸಿರಾಯಿತು. ನಾನೂ ಹೊರಟೆ.

ಮಾತೆತ್ತಿದರೆ ಸರ್ಕಾರ ಏನೂ ಮಾಡಿಲ್ಲ, ಮುನ್ಸಿಪಾಲಿಟಿ, ಕಾರ್ಪೋರೇಶನ್ ಏನೂ ಮಾಡಿಲ್ಲಾ ಅನ್ನುವವರು,ನಾವು ಏನು ಮಾಡಿದ್ದೀವಿ ಅನ್ನೋದು ಕೇಳಿಕೊಳ್ಳಬೇಕಾದ ಪ್ರSನೆ.ಬಡಾವಣೆ ಅಭಿವ್Rಅದ್ಧಿಆಗಿಲ್ಲ ಅನ್ನೋ ನಾವು ಅದಕ್ಕೆ ಸರ್ಕಾರದತ್ತ ಬೊಟ್ಟೂ ಮಾಡುತ್ತೇವೆಯೇ ಹೊರತು ಮನೆ ತೆರಿಗೆ/ಬೆಟರ್ಮೆಂಟ್ ಚಾರ್ಜ್ ಸರಿಯಾಗಿ ಕಟ್ಟುತ್ತೇವಾ? ಕೇಳಿದರೆ ಇದಕ್ಕೆ ಉತ್ತರ ನೋಡೋಣ ನನ್ನೊಬ್ಬನಿಂದ ಏನಾಗತ್ತೆ ಎಲ್ಲರೂ ಕಟ್ಟಿದರೆ ಆಗ ನೋಡೋಣ ಅಂತ. ಒಮ್ಮೆ ನಮ್ಮ ವೈದ್ಯರೊಬ್ಬರು " ಅಲ್ಲಾರೀ ಈರಸ್ತೆ ರಿಪೇರಿ ಹೇಗೆ ಮಾಡಿಸುತ್ತಾರೆ ಗೊತ್ತಾ? ಒಂದು! ಕೇವಲ ಒಂದು ತಿಂಗಳಲ್ಲಿ ರಸ್ತೆ ಹಾಳಾಗಿ ರಿಪೇರಿಗೆ ಬರುತ್ತೆ ಗೊತ್ತಾ?. ಈಗಂತೂ ಎಲ್ಲಿ ನೋಡಿದರಲ್ಲಿ ಹೊಂಡ ಗುಂಡಿಗಳಿದ್ದು ಗಾಡಿ ಸರಿಯಾಗಿ ಓಡಿಸುವುದೇ ಕಷ್ಟ. " ನಾನು ಕೇಳಿದೆ " ಅಲ್ಲಾ ಸಾರ್ ಈರಸ್ತೆಯಲ್ಲಿ ಹತ್ತು ವರ್ಷದ ಹಿಂದೆ ವಾಹನ ಸಂಚಾರ ದಟ್ಟಣೆ ಹೇಗಿತ್ತು ಈಗ ಹೇಗಿದೆ? ನೀವೊಮ್ಮೆ ರಸ್ತೆ ರಿಪೇರಿ ಯಾವ ಸಮಯದಲ್ಲಿ ಆಗತ್ತೆ ಯೋಚಿಸಿದ್ದೀರಾ? ನಾನು ಯಾರ ಕಡೆಗೂ ಇಲ್ಲ.ಆದರೆ ರಿಪೇರಿಯಾಗಬೇಕಾದರೂ ನಾವು ನಮಗೆ ಆಗುವ ತೊಂದರೆ ಸಹಿಸೋದಿಲ್ಲ, ರಸ್ತೆ ತಡೆಯಬಾರದು,ಹೀಗಿರುವಾಗ ವಾಹನ ದಟ್ಟಣೆಯ ನಡುವೆಯೂ ಹೇಗೆ ಸರಿಯಾದ ಕ್ವಾಲಿಟಿ ಕೆಲಸ ಸಾಧ್ಯ ಹೇಳಿ?ನಮಗೆ ಹೆಲ್ಮೆಟ್ ಅಲರ್ಜಿ. ಯಧ್ವಾ ತದ್ವಾ ಗಾಡಿ ಓಡಿಸಿ ಅಪಘಾತ ವಾದರೆ ಅದಕ್ಕೆ ಸರ್ಕಾರ ಹೊಣೆ.ರಸ್ತೆಯ ಪಕ್ಕ ಪಾದಚಾರೀ ಜಾಗದಲ್ಲೇ ನಮಗೆ ವ್ಯಾಪಾರ ವ್ಯವಹಾರ ನಡೆಯಬೇಕು, ಬಸ್ಸಿದ್ದರೂ ನಮ್ಮ ದೊಡ್ಡ ಸೈzಇನ ಕಾರೇ ಸಂಚಾರಕ್ಕೆ ಬೇಕು, ಆದರೆ ವಾಹನ ದಟ್ಟಣೆ ಬೇಡ. ನಮ್ಮ ಮನೆಯ ಸುತ್ತ ನಾವು ಕಾಂಕ್ರೀಟ್ ಕಾಡು ಮಾಡಿಕೊಂಡರೂ ಅದು ಸರಿಯೇ, ನಮಗೆ ಕುಡಿಯಲು ಕಾವೇರೀ ನೀರೇ ಬೇಕು.ಸುತ್ತ ಕಾಂಕ್ರೀಟ್ ಕಾಡಾಗಿ ಮಳೆಬಿದ್ದು ನೀರು ಒಟ್ಟಾಗಿ ಹರಿದು ನಮ್ಮ ಮನೆಯನ್ನೇ ಮುಳುಗಿಸಲು ಬಂದಾಗ ನಮಗೆ ಸರ್ಕಾರದ ತಪ್ಪು ಕಾಣ್ತದೆ.ನೆಲವನ್ನು ಎಲ್ಲರೂ ತೂತು ಕೊರೆದೂ ಕೊರೆದೂ ನೀರನ್ನೆತ್ತಿ ಎತ್ತೀ ನೀರಿನ ಮುಖ್ಯ ಶ್Rಓತವನ್ನೇ ಕಡೆಗಣಿಸಿದ್ದೇವೆಯೇ ಹೊರತೂ ಅದನ್ನ ಪುನಹಾ ಮರು ತುಂಬುವಿಕೆಯತ್ತ ಎಷ್ಟು ಗಮನಹರಿಸಿದ್ದೀವಿ? ಸರ್ಕಾರೀ/ಸಾರ್ವಜನಿಕ ವಸ್ತುಗಳ ಸಧ್ಬಳಕೆಯ ಕಾಳಜಿ ನಮಗೆ ಎಷ್ಟಿದೆ?

ಇದು ಸರಿಯೇ?

‹ ನಮಸ್ಕಾರ Sharanree naavu gokakdavari..neev yellyavari.. ›
  • ಹೊಸ ಸದಸ್ಯರು
Ornamental seperator
  • Login or register to post comments
  • 408 hits
  • Email this forum
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಬ್ಬಬ್ಬಾ ಬೆಂಗಳೂರಿನ ಭಯಾನಕ ಟ್ರಾಫಿಕ್
  • ನಾನೂ ನನ್ನ ಬಾಸೂ
  • ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ?
  • "ಪ್ರಥಮ ಚುಂಬನ೦, ದಂತ ಭಗ್ನಂ"
  • ಸಿಪ್ಪೆ ಸಮೇತ ತಿನ್ನುವುದು
Syndicate content

ಲೇಖಕರು

gopinatha's picture

ಪೂರ್ಣ ಹೆಸರು
ಬೆಳ್ಳಾಲ ಗೋಪೀನಾಥ ರಾವ್

ಪರಿಚಯ

ಅಪ್ಪಟ ಕನ್ನಡದವ

ಪ್ರಸ್ತುತ ಭಾರತೀಯ ಭೂ ಸೇನೆಯಲ್ಲಿದ್ದೇನೆ

ಕನ್ನಡ ನೆಲ ಜಲ ಸಂಸ್ಕೃತಿಯ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿರುವವ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator