ಶಂಬಾರ ಒಂದು ಮಣಿಪು
ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು ತೊರೇ|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|
ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇದನ್ನು ಬಿಡಿಸಿ ಹೇಳ್ತಿರಾ?

- Login or register to post comments
- 469 hits
- Email this forum





RSS:
ಉ: ಶಂಬಾರ ಒಂದು ಮಣಿಪು
ಮನ್ನಿಪು ನೀಡಿ, ಅದು ಹೀಗಾಗಬೇಕು....
ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು [b]ತೋರೆ[/b]|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|
ಉ: ಶಂಬಾರ ಒಂದು ಮಣಿಪು
ಅರ್ಥ ಸರಳ ಇದೆ .
"ಹಿರಣ್ಮಯೇನ ಪಾತ್ರೇನ ...." ಅಂತ ಏನೋ ಸಂಸ್ಕೃತದಲ್ಲೆಲ್ಲೋ ಇದೆ . ಅದರರ್ಥ ; ಸತ್ಯವು ಬಂಗಾರದ ಪಾತ್ರೆಯಲ್ಲಿ ಅಡಗಿದೆ . ಬಂಗಾರ ಅದನ್ನು ಮುಚ್ಚಿದೆ. ಎಂಬರ್ಥದ್ದು ಅದು .
ಸತ್ಯವನ್ನು ಶಂ ಬಾ ಅವರು ಅನ್ವೇಶಿಸುತ್ತಿದ್ದರು .
ಬಂಗಾರದ ಮುಸುಕನ್ನು ಸರಿಸಿ ಓ ಸತ್ಯವೇ ( ನನ್ನಿಯೇ) ನಿನ್ನ ಮುಖವನ್ನು ತೋರಿಸು .
ಕಷ್ಟ ( ಬನ್ನ) ಪಡುತ್ತಿದ್ದೇನೆ ನಿನ್ನ ( ಸತ್ಯದ ) ದರುಷನ( ದರ್ಶನ - ಸಾಕ್ಷಾತ್ಕಾರ? ) ಕ್ಕಾಗಿ , ಹಡೆದಮ್ಮ ( ಕನ್ನಡಮ್ಮ ಇರಬಹುದು ... ಕನ್ನಡದ ಮೂಲ , ಹುಟ್ಟು , ಕಣ್ಮರೆ ಇತ್ಯಾದಿ ವಿಷಯಗಳ ಕುರಿತು ಆಗ ಯೋಚಿಸುತ್ತಿದ್ದರು ಅಂತ ಕಾಣುತ್ತದೆ . ) ಅದಕ್ಕಾಗಿ ವರವ ಕೊಡು ಅಂತ
ಬೇಡಿಕೊಂಡಿದ್ದಾರೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಶಂಬಾರ ಒಂದು ಮಣಿಪು
ಅದು ಸರಿ , ’ಮಣಿಪು’ ಅಂದ್ರೆ ಏನು ? ಸ್ವಲ್ಪ ಹೇಳ್ತೀರಾ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಶಂಬಾರ ಒಂದು ಮಣಿಪು
ಮಿಶ್ರಿಕೋಟಿಯವರಿಗೆ ನನ್ನ ಮಣಿಪು
'ಮಣಿ' ಅಂದರೆ ಬಾಗು, ತಲೆವಾಗು ಅಲ್ಲವೇ. ಮಣಿಪು ಅಂದರೆ ತಲೆಬಾಗುವಿಕೆ, ನಮನ, ನಮಸ್ಕಾರ, ಪ್ರಾರ್ಥನೆ ಈ ಎಲ್ಲ ತಿಳಿವುಗಳನ್ನು ತೆಗೆದುಕೊಳ್ಳಬಹುದಲ್ಲವೇ?
ಉ: ಶಂಬಾರ ಒಂದು ಮಣಿಪು
"ಹಿರಣ್ಮಯೇನ ಪಾತ್ರೇನ ...." - ಇದು ಈಶಾವಾಸ್ಯೋಪನಿಷತ್ತಿನಲ್ಲಿ ಬರತ್ತೆ.
ಡಾ||ಚಿದಾನಂದಮೂರ್ತಿಯವರ "ಭಾಷಿಕ ಬೃಹತ್ ಕರ್ನಾಟಕ" ಎಂಬ ಒಂದು ಪುಸ್ತಕವಿದೆ. ಅದರಲ್ಲಿ ಅವರು ಮರಾಠಿಯ ಕೆಲವು ಉಪಭಾಷೆ ಎನ್ನಲಾಗಿರುವ ಕೆಲವು ನುಡಿಗಳನ್ನು ಅವಲೋಕಿಸಿದ್ದಾರೆ. ಇಷ್ಟೇ ಅಲ್ಲದೆ, ಬ್ರಟೀಷರ ಕಾಲದ ಮೇಪುಗಳು ಹಾಗೆಯೇ ಮಹಾಜನ್ ವರದಿಯ ಒಟ್ಟಂದ ಎಲ್ಲವೂ ಕೂಡ ಆ ಪುಸ್ತಕದಲ್ಲಿ ಸಿಗುತ್ತವೆ. ಮಹಾಜನ್ ಅವರು ಯಾವ ಯಾವ ದೃಷ್ಟಿಕೋನದಲ್ಲಿ, ಯಾರ ಯಾರನ್ನು ಭೇಟಿ ಮಾಡಿದ್ದಾರೆ, ಏನೇನು ಅಂಶ ಕಲೆಹಾಕಿದ್ದಾರೆ ಎಂಬ ವಿಚಾರಗಳು ಓದುಗರ ಗಮನಕ್ಕೆ ಬರುತ್ತದೆ. ಒಳ್ಳೆಯ ಪುಸ್ತಕ. ನಾನು ಶಂಭಾ ಜೋಶಿಯವರ ಪುಸ್ತಕ ಓದಿಲ್ಲ. ಇದರ ಬಗ್ಗೆ ತಿಳಿಯುವ ಕುತೂಹಲವಿದೆ.