"ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?
ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ
(ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ, ಪದ್ಯ ೧೭.)
ವಿ.ವಿ.ಯವರು ಈ ಪದ್ಯದ ಅರ್ಥವನ್ನು ಬಹಳ ಹಿಂದೆಯೇ ಕೇಳಿದ್ದರು.
ಗೊತ್ತಿರುವವರು ಹೇಳುತ್ತಿರಾ?
ಮುಂಗಡವಾಗಿ ನನ್ನಿ!

- Login or register to post comments
- 532 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?
ಪದ್ಯದ ಸ್ಥೂಲ ಅರ್ಥ ಹೀಗಿದೆ:
"
ಈ ನಮ್ಮ ಭೂಮಿಯು (ಅಂದರೆ ಭೂಗೋಳವು) ಆದಿಶೇಷನ ತಲೆಯ ಮೇಲೆ ನಿಂತಿದೆ ಎಂದು ನಂಬಿಕೆ.
ಈ ನಮ್ಮ ಭೂಮಿಯ ಮೇಲೆ, ರಾಮಾಯಣವನ್ನು ಬರೆದ ಕವಿಗಳು ಅನೇಕರಿದ್ದಾರೆ - ವಾಲ್ಮೀಕಿಯಿಂದ ಹಿಡಿದು ವೀರಪ್ಪಮೊಯಿಲಿವರೆಗೆ... (ಅಫ್ಕೋರ್ಸ್ ಕುಮಾರವ್ಯಾಸನ ಕಾಲದಲ್ಲಿ ವೀರಪ್ಪಮೊಯಿಲಿ ಇರಲಿಲ್ಲ, ಕುಮಾರಸ್ವಾಮಿಯ ಕಾಲದಲ್ಲಿ ಇದ್ದಾರೆ).
ರಾಮಾಯಣದ ಬೇರೆಬೇರೆ ಆವೃತ್ತಿಗಳಿಂದ ಮತ್ತು ಅವನ್ನು ಬರೆದಿರುವ ಕವಿಗಳಿಂದ ಭೂಮಿಭಾರವಾಗಿದೆ; ಭೂಮಿಯನ್ನು ಹೊತ್ತ ಫಣಿರಾಯ ಅಂದರೆ ಆದಿಶೇಷ ತಿಣುಕುವಂತಾಗಿದೆ; ಭೂಮಿಯ ಮೇಲೆ ಕಾಲಿಡಲೂ ಜಾಗ (ತೆರಪು) ಇಲ್ಲದಷ್ಟು ಸಾಂದ್ರವಾಗಿ ರಾಮಾಯಣ ಕವಿಗಳು ತುಂಬಿಕೊಂಡಿದ್ದಾರೆ.
ಅದಕ್ಕಾಗಿ ನಾನು (= ಕುಮಾರವ್ಯಾಸ) ರಾಮಾಯಣದ ಗೋಜಿಗೆ ಹೋಗದೆ ಮಹಾಭಾರತದ ಕಥೆಯನ್ನು ಪೇಳುವಂಥವನಾಗುತ್ತೇನೆ.
"
ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?
ಜಗತ್ತಿನಲ್ಲಿರುವ ರಾಮಾಯಣಗಳ ಸಂಖ್ಯೆ - ನಂಬಿದರೆ ನಂಬಿ , ಇಲ್ಲವೆ ಬಿಡಿ - ಒಂದು ಲಕ್ಷ ಅಂತೆ ! - ಈ ವಾರದ ಸುಧಾದಲ್ಲಿ ಈ ವಿಷಯ ಬಂದಿದೆ.
"ಕನ್ನಡಗೆ ಪರಮ ಪಾವನ ತುಳಸಿ"
ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?
ಪ್ರಿಯರೇ,
ಶ್ರೀ ಜೋಶಿಯವರು ಹೇಳಿದ್ದನ್ನು ಮುಂದುವರೆಸುತ್ತೀದ್ದೇನೆ. ಕುಮಾರವ್ಯಾಸನ ಕಾಲದಲ್ಲಿ ಪ್ರಚಲಿತವಾಗಿದ್ದ ರಾಮಾಯಣಗಳ ಸಂಖ್ಯಾಬಾಹುಳ್ಯ ತುಂಬಾ ಇದ್ದಿರಬೇಕು. ಆದ್ದರಿಂದಲೇ ಆತ ಹಾಗೆ ಹೇಳಿದ್ದಾನೆ. ಭೂಮಿಯ ಮೇಲೆ ಕಾಲಿಡಲು ಸ್ಠಳವಿಲ್ಲದಂತೆ ರಾಮಾಯಣಗಳು ತುಂಬಿಕೊಂಡಿವೆ ಎನ್ನುತ್ತಾನೆ. ಅನಂತರ ಆ ಕಾಲದಲ್ಲಿದ್ದ ಕವಿಗಳನ್ನು ಗೇಲಿ ಮಾಡುತ್ತಾ ಬಣಗುಕವಿಗಳ ಲೆಕ್ಕಿಪನೇ ಎನ್ನುತ್ತಾನೆ. ಇಧು ಅಹಂಕಾರವೆಂದಲ್ಲ. ತನ್ನ ಆತ್ಮವಿಶ್ವಾಸವನ್ನು ಇಲ್ಲಿ ಪ್ರಕಟಿಸಿದ್ದಾನೆ. ಅಂದರೆ ತಾನು ಅಲ್ಪಕವಿಗಳ ಸಾಲಿನಲ್ಲಿ ಸೇರುವಂತಹವನಲ್ಲ. ಅಂತಹವರನ್ನು ತಾನು ಗಣನೆಗೆ ತೆಗೆದುಕೊಳ್ಳುವವನೇ? ತಾನು ಕುವರ ವ್ಯಾಸ. ಶುಕರೂಪ. ವ್ಯಾಸರ ಕುವರ. ಈ ಅಲ್ಪ ಕವಿಗಳನ್ನು ತಾನು ಕುಣಿಸಿ ನಗುವುದಿಲ್ಲವೇ? ಎಂದು ಹೇಳುತ್ತಾನೆ.
ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?
ಜೋಶಿ ಮತ್ತು ಜವಳಿಯವರಿಗೆ ನನ್ನಿಗಳು. ಅರ್ಥ ತುಂಬ ಸೊಗಸಾಗಿದೆ.
ಬಣಗು ಕವಿ ಅರ್ಥ ಸ್ಥೂಲವಾಗಿ ಗೊತ್ತಾಯಿತು. ಆದರೆ ಹಾಗಂದರೇನು?
ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?
ಬಣಗು ಕವಿಗಳು ಎಂದರೆ ಅಲ್ಪ , ಹೀನ,ಕೀಳಾದ ಕವಿಗಳು ಎಂದರ್ಥ. ತನ್ನ ಕಾಲದ ಕವಿಗಳನ್ನು ಆತ ಗೇಲಿ ಮಾಡುತ್ತಾನೆ., ಅಂದರೆ ಕುವರವ್ಯಾಸ ಅಹಂಕಾರಿ ಎಂದು ಹೇಳಲಿಕ್ಕಾಗುವುದಿಲ್ಲ. ಹಲಗೆ ಬಳಪವ ಪಿಡಿಯದ ಒಂದು ಅಗ್ಗಳಿಕೆ ಎಂಬ ಆತ್ಮವಿಶ್ವಾಸ ಇಲ್ಲೂ ಕಾಣಿಸಿಕೊಂಡಿದೆ ಅಷ್ಟೆ
ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?
ನನ್ನಿ.
ನಿಜ. ಈ ತರದ ಆತ್ಮವಿಶ್ವಾಸವನ್ನು ಹಿಂದಿನ ನಮ್ಮ ಅನೇಕ ಕವಿಗಳಲ್ಲಿ ಕಾಣಬಹುದು.