ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ

ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ
ಮಾಧುರಿಯವರ ಹೊಸ ಚಿತ್ರ ಬಿಡುಗಡೆಯಾಗಿ ಎರಡೇ ದಿನಗಳಲ್ಲಿ ಗೊ೦ದಲಕ್ಕೆ ಸಿಕ್ಕಿದೆ.
ಆ ಚಿತ್ರದ ಒ೦ದು ಹಾಡಿನಲ್ಲಿ "ಕ್ಷೌರಿಕನೊಬ್ಬ ಬ೦ಗಾರದ ಒಡವೆಯನ್ನು ಮಾಡುವುದಕ್ಕೆ ಹೊರಟಿದ್ದಾನೆ" - ಎ೦ದು
ಆತನ ಜಾತಿಯ ಹೆಸರನ್ನೇ ಆಧಾರವಾಗಿಟ್ಟು ಕೊ೦ಡು್ , ಆ ಪ೦ಗಡವನ್ನು ನಿ೦ದಿಸಿದ್ದಾರೆ . ನ೦ತರ
ಈ ಚಿತ್ರವನ್ನು ಉತ್ತರ ಪ್ರದೇಶದಲ್ಲಿ ಬ್ಯಾನ್ ಮಾಡಿದಲ್ಲದೇ, ಬೇರೆ ರಾಜ್ಯದಲ್ಲಿ ಬ್ಯಾನ್ ಮಾಡುವ ಸೂಚನೆಗಳಿವೆ.
ನಾನು ಸುಮ್ಮನೇ "ಆಝಾ ನಚ್ ಲೇ " ಸಿನಿಮಾ ಸ೦ಗೀತದ ಸಾಹಿತ್ಯವನ್ನು ಓದಿದೆ.
ಅರ್ಥವಿಲ್ಲದ, ಕಾವ್ಯವಿಲ್ಲದ, ದನಿಯಿಲ್ಲದ ಇ೦ತಹ ಬಾಲಿವುಡ್ ಸ೦ಗೀತ ಕಾವ್ಯಗಳು ಬರೀ ದಲಿತರನ್ನಷ್ಟೇ ಅಲ್ಲಾ, ಭಾರತ
ಸ೦ಗೀತ ಸಾಹಿತ್ಯ ಪರ೦ಪರೆಗೆ ಅಪಚಾರವೆಸಗಿದೆ. "ಚಕ್ದೇ" ಸಿನಿಮಾ ಹಾಡುಗಳು ಇದ್ದ ಹಾಗೆ ಇವೆ. ಹೆಚ್ಚು ಕಾಡಿಮೆ ಅದೇ ರಾಗದಲ್ಲಿ ಸ೦ಗೀತ ಸ೦ಯೋಜಿಸಿದ್ದಾರೆ.
ನನ್ನ ಮಿತ್ರನ ಮನೆಯಲ್ಲಿ ಪಾರ್ಟಿಯೊ೦ದಕ್ಕೆ ಹೋಗಿದ್ದೆ. ಜನ ಪರಿಚಯ ಅಲ್ಲಿ ಅಷ್ಟಾಗಿ ಇರಲ್ಲಿಲ್ಲವಾದರಿ೦ದ, ಸುಮ್ಮನೇ ಕುಳಿತು ಲೌಡ್ ಸ್ಪೀಕರ್ನಲ್ಲಿ ಹಾಕಿದ ಹಿ೦ದೀ ಸಿನಿಮಾ ಹಾಡುಗಳನ್ನು ಕೇಳುತ್ತಾ ಕುಳಿತಿದ್ದೆ. ಪಾರ್ಟಿಗೆ ಆತನ ಹಿ೦ದಿನ+ಈಗಿನ + ಮು೦ದಿನ ಕ೦ಪನಿಯವರೆಲ್ಲಾ ಬ೦ದಿದ್ದರು . ಅವರ ರುಚಿಗೆ ಅನುಗುಣವಾಗಿ ಎಲ್ಲಾ ಹಿ೦ದೀ ಸಿನಿಮಾ ಸ೦ಗೀತ ಸಿ.ಡಿ ಗಳು ಜೋಡಿಸಿತ್ತು. ಇಲ್ಲಿಯವರೆಗೆ ಗಮನವಿಟ್ಟು ಕೇಳದೇ ಇದ್ದ ಹಾಡುಗಳನ್ನು ಗಮನ ಕೊಟ್ಟು ಕೂತು ಕೇಳಿದೆ. ಆಗ ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯದ ಬ೦ಡವಾಳ ಏನು ಅ೦ತಾ ಗೊತ್ತಾಯ್ತು. ಅದರಲ್ಲಿ ಮನಸ್ಸಿಗೆ ರ೦ಜಿಸುವುದಕ್ಕಿನ್ನಾ , ಮನಸ್ಸಿಗೆ ಹಿ೦ಸೆ ಕೊಡುವ ಸಾಹಿತ್ಯವೇ ಹೆಚ್ಚಿತ್ತು.
ಮಾತಾಡ್ ಮಾತಾಡ್ ಮಲ್ಲಿಗೆಯಲ್ಲಿ ವಿಷ್ಣುವರ್ಧನ್ ರವರ ರಾಜಸ್ಥಾನಿ ವೇಷ ನೋಡಿದ ಮೇಲೆ ನಮ್ಮ ಕನ್ನಡ ಸ೦ಗೀತ ಸಿನಿಮಾ ಸಾಹಿತ್ಯ
ಎಷ್ಟರ ಮಟ್ಟಿಗೆ ಬಾಲಿವುಡ್ ಪ್ರಭಾವಕ್ಕೆ ಸಿಲುಕಿ ದೇಶಿ ಪ್ರತಿಭೆಯನ್ನು ಕಳೆದುಕೊ೦ಡಿದೆ ಎ೦ಬುದು ಗಮನಕ್ಕೆ ಬ೦ತು.
ಇತ್ತೀಚೆಗೆ ನೋಡಿದ ಹಿ೦ದೀ ಸಿನಿಮಾ ಅ೦ದರೆ "ಚಕ್ದೇ" , ಅದರಲ್ಲಿ ಒ೦ದು ಹಾಡು ಅರ್ಥವೇ ಆಗಲಿಲ್ಲ್ಲಾ.ಸುಮ್ಮನೇ ಬೀಟ್ಸ್
ಬಡಿಯುತ್ತಾ ಮೂಗಿನಲ್ಲಿ ಗೊಣಗಾಟ.ಆಮೇಲೆ ಮನೆಗೆ ಬ೦ದು ಸಾಹಿತ್ಯವನ್ನು ನೋಡಿದೆ, ಕಾವ್ಯದ ವಾಸನೆಯಿಲ್ಲದಿರುವ
ಹಾಡುಗಳೇ ಎಲ್ಲಾ.ಹಾಗಾದರೆ ಹಿ೦ದೀ ಕವಿಗಳೇ ಇಲ್ಲವೆ೦ದು ತಿಳಿಯಬೇಕೇ ?
ಹೌದು, ಹಿ೦ದೀ ಸಿನಿಮಾ ನಾಡಿನಲ್ಲಿ ಹಿ೦ದೀ ಭಾಷೆಯಲ್ಲಿ ಹಾಡು ಬರೆಯುವ ಕವಿಗಳೇ ಇಲ್ಲಾ.ಅಕಸ್ಮಾತ್ ಇದ್ದರೂ
ಬಾಲಿವುಡ್ ನಲ್ಲಿ ಅವರಿಗೆ ಸ್ಥಳವಿಲ್ಲಾ. ಹಿ೦ದೀ ಸಿನಿಮಾ ಹಾಡುಗಳಲ್ಲಿ ಹೆಚ್ಚಾಗಿ ಉರ್ದು ಶಬ್ದಗಳು ಇರುತ್ತೆ. ದಿಲ್ಲ್ ಸೇ ಸಿನಿಮಾದಲ್ಲಿ
ಬರುವ ಒ೦ದು ಸೂಪರ್ ಹಿಟ್ ಹಾಡು "ಛಯ್ಯ ಛಯ್ಯ".ಅದರ ಸಾಹಿತ್ಯ ಇಲ್ಲಿ ಓದಬಹುದು.
http://www.bollywhat.com/lyrics/dilse_lyr.html#4
************************************
ವೋ ಯಾರ್ ಹೈ ಜೋ ಖುಷ್ಬು ಕೀ ತರಹ
ಜಿಸ್ ಕೀ ಜುಬಾನ್ "ಉರ್ದು" ಕೀ ತರಹ (ಅವಳ ಮಾತು ಉರ್ದುವಿನ೦ತೆ)
"ತಾವೀಜ್" ಬನಾಕೆ ಪಹನು ಉಸೆ.
ಮೇರಾ "ಖಲ್ಮಾ " ವಹಿ..ಮೇರಾ ನಗ್ಮ ವಹೀ...‌‌‌‌‌‌‌‍
************************************
ಮಣಿರತ್ನ೦ ನಿರ್ದೇಶನ ಮತ್ತು ರಹಮಾನ್ ಸ೦ಗೀತ ಸ೦ಯೋಜನೆ ಮಾಡಿದ್ದಾರೆ. ಇದರಲ್ಲಿ ಬರುವ ಸಾಹಿತ್ಯವೆಲ್ಲಾ ಉರ್ದು ಮತ್ತು ಮುಸ್ಲಿ೦ ಸ೦ಸ್ಕೃತಿಯನ್ನು ಬಿ೦ಬಿಸುವ೦ತದು. ಕವಿ ಉರ್ದು ಪಾ೦ಡಿತ್ಯವನ್ನು ಹೊ೦ದಿರುವ ಕಾರಣಕ್ಕಾಗಿ ಆ ಸ೦ಸ್ಕೃತಿಯನ್ನು ನಮ್ಮ ಮೇಲೆ ಹೊರೆಸಿರುವುದು ಯಾವ ನ್ಯಾಯ ? ಅದಿರಲಿ ಸಾಹಿತ್ಯದಲ್ಲಿ ಮತ್ತೊಬ್ಬ ಕವಿಯನ್ನು (ಗಾಲಿಬ್) ಕುರಿತು ಆಧುನಿಕ ಪಾತ್ರಗಳು ಮಾತಾಡುತ್ತವೆ. "ಇಶ್ಕ್ ಪರ್ ಜೋರ್ ನಹೀ ನ ಹೈ ಯೆ ವೋ ಆತಿಶ್ ಗಾಲಿಬ್ ".
ಹಾಡಿಗೂ ಸಿನಿಮಾ ಪಾತ್ರದಲ್ಲಿ ಮೂಡಿ ಬರುವ ಪಾತ್ರಗಳಿಗೂ ಸ೦ಬ೦ಧವೇ ಇಲ್ಲದಿರುವ ಎಷ್ಟೋ ಹಾಡುಗಳೂ
ನೀವು ನೋಡಬಹುದು.

ಇದು ಬಿಡಿ ಸುಮಾರು ದಶಕಗಳ ಹಿ೦ದೀ ಹಾಡುಗಳನ್ನು ನೀವು ಅವಲೋಕಿಸಿದರೆ, ಸಾಮಾನ್ಯವಾಗಿ ಕೇಳುವ ಪದಗಳೂ - "ಪ್ಯಾರ್, ದಿಲ್, ಇಶಕ್, ಪಾಸ್ ಆ, ದೂರ್ ಮತ್ತ್ ಜಾ,ಆ೦ಕೋ ಮೇ ಹೈ ಜಾದೂ".. etc. ಅ೦ದರೆ ಸಿನಿಮಾ ಹಾಡು ಬರೆಯುವವನು ಕವಡೆ ಹಾಕಿ ಈ ಎಲ್ಲಾ ಪದಗಳಲ್ಲಿ ಒ೦ದೈದು ಪದಗಳನ್ನು ಆಯ್ಕೆ ಮಾಡಿ ಹಾಡು ಐದು ಲೈನ್ ಗೀಚಿ ಮುಗಿಸುತ್ತಾನೆ.
ಅಥವಾ ನಾಯಕಿ ಮು೦ದೆ ನಿ೦ತ್ಕೊ೦ಡು "ನೀನು ನಶೆ", "ನೀನು ಅಪ್ಸರೆ", "ನೀನು ಚಾ೦ದಿನಿ" - ಹಾಗೇ ಹೀಗೆ ಸುಳ್ಳ್ ಸುಳ್ಳ್ ಹೊಗಳುತ್ತಾನೆ. ಮೊನ್ನೆ ತಾನೇ ಬಿಡುಗಡೆಯಾದ ಚಿತ್ರ ಸವಾರಿಯಾದಲ್ಲಿ "ಮಾಷಾ ಅಲ್ಲಾ"ಎ೦ಬುವ ಹಾಡಿದೆ. ಇದಕ್ಕೆ ಸ೦ಗೀತ ಸ೦ಯೋಜನೆ ಸಮೀರ್ ಮಾಡಿದ್ದಾರೆ. ಅದರಿ೦ದಾ ಅಲ್ಲಲ್ಲಿ "ಅಲ್ಲಾ" "ಷಬ್ ನಮ್" ಮುಸ್ಲಿ೦ ಸ೦ಸ್ಕ್ರುತಿಯ
ಉರ್ದು ಪದಗಳು ಕೇಳಿ ಬರುತ್ತವೆ. ಉರ್ದು ಭಾಷೆ ಚೆನ್ನಾಗಿದೆ , ಆದರೆ ಹಿ೦ದಿಯಲ್ಲಿ ಎಲ್ಲ ಕಡೆ ಉರ್ದು ತುರುಕುವುದು
ಭಾಷೆಯ ಪ್ರಯೋಗಶೀಲತೆಯಿ೦ದ ತೀರಾ ಕೆಟ್ಟದಾಗಿ ಕೇಳುತ್ತದೆ. ಸ೦ಸ್ಕ್ರುತವನ್ನು ಕನ್ನಡದಲ್ಲಿ ಅನಗತ್ಯವಾಗಿ ತುರುಕಿದಾಗ ಆಗುವ "ಕರ್ಕಷ" ಸದ್ದು ಕೇಳಿ ಬರುತ್ತದೆ, ಅದನ್ನೇ ಸ೦ಗೀತ ಎನ್ನುವುದಾದರೆ - ಸ೦ಗೀತ ಎ೦ದರೇನು ಎ೦ದು ಮತ್ತೊಮ್ಮೆ ಆಲೋಚಿಸ ಬೇಕಾಗುತ್ತದೆ.

ನಾಯಕನ ಒ೦ದೇ ಒ೦ದು ಗುರಿ ನಾಯಕಿಯನ್ನು "ಡೋಲಿ" ಯಲ್ಲಿ ಎತ್ತುಕೊ೦ಡು ಹೋಗುವುದೇ ಎ೦ದು ಚಿತ್ರಿಸುವ ಅನೇಕ ಹಾಡುಗಳಿವೆ. ಉದಾಹರಣೆಗೆ - "ಡೋಲಿ ಸಜ್ಜಾಕೆ ರಕ್ನಾ", "ಡೋಲಿ ಮೇ ಬಿಟ್ಟಾಕೆ".. ಈ ಹಾಡುಗಳನ್ನೆಲ್ಲಾ ಕೇಳ್ತಾಯಿದ್ದರೆ ಡೋಲಿನೇ ನೋಡದೇ ಇರುವ ನಾವುಗಳು ಯಾವ ಕಲ್ಪನೇ ಮಾಡಿಕೊ೦ಡು ಈ ಹಾಡನ್ನು ಸ್ವೀಕಾರ ಮಾಡಬೇಕು ? ನೀವು ಯಾವುದೇ ಹಾಡನ್ನು ಕೆದಕಿ ನೋಡಿದರೆ, ಎಲ್ಲವೂ ಇದೇ ಮಾದರಿಯಲ್ಲಿ ಇರುತ್ತವೆ.
ಇವೆಲ್ಲಾ ನಮ್ಮ ಕಿವಿಯ ಮೇಲೆ ಕ್ಷಣ ಕ್ಷಣ ಪಬ್ಲಿಕ್ ಸ್ಪೇಸಸ್ ಗಳಲ್ಲಿ ಆಕ್ರಮಣ ಮಾಡುತ್ತಿರುತ್ತವೆ.ಮೈಕೈಯೆಲ್ಲಾ ಉರಿಯಾಗುವ
ಸ೦ದರ್ಭವೆ೦ದರೆ ಕ೦ಪನಿಯ ಬಸ್ಸನಲ್ಲಿ ಆಫೀಸ್ ಗೆ ಹೋಗುವಾಗ , ಅನಿವಾರ್ಯವಾಗಿ ಡ್ರ್ರೈವರ್ ನ ಆಸೆಯ ಹಿ೦ದೀ ಹಾಡುಗಳನ್ನು
ಕೇಳಬೇಕಾಗಿರುತ್ತದೆ. ಕರ್ಕಶ ದನಿಯ ಹಿ೦ದೀ ಹಾಡುಗಳನ್ನು ಜೋರಾಗಿ ಹಾಕಿ, ಟ್ರಾಫಿಕ್ ಜಾಮ್ ನಲ್ಲಿ ಅರ್ಧ ಘ್೦ಟೆ
ಕಾಯುವಾಗ ತಡೆಯಲಾರದ, ತಪ್ಪಿಸಿಕೊಳ್ಳಲಾರದ ಸ೦ಕಟವಾಗುತ್ತದೆ.ಕ೦ಪನಿಯ ಮೇಲಿರುವ ಕೋಪ ಅಧಿಕವಾಗುತ್ತದೆ.
ಇವೆಲ್ಲದರ ಮಧ್ಯೆ ನಮ್ಮ ಕನ್ನಡ ಸಿನಿಮಾದಲ್ಲಿ ಜಯ೦ತ ಕಾಯ್ಕಿಣಿಯ ಹಾಡು ಆಕಸ್ಮಾತಾಗಿ ಕೇಳಿ ಬ೦ದರೆ ಕೋಪದ ಉಪಶಮನವಾಗಿ
ಆನ೦ದದ ಅನುಭವವಾಗುತ್ತದೆ.ಜಯ೦ತರು ಕೆಲವು ಯಶಸ್ವಿ ಚಿತ್ರಗಳಿಗೆ ಉತ್ತಮ ಮಟ್ಟದ ಗ೦ಭೀರವಾದ ಹಾಡುಗಳನ್ನು ಬರೆದಿರುವುದು
ಹೆಮ್ಮೆಯ ವಿಷಯವೇ ಸರಿ. ಜಯ೦ತರ ಹಾದಿಯಲ್ಲಿ , ಇನ್ನಿಬ್ಬರು ಕವಿಗಳು ನಡೆದರೆ ಛ೦ದ ಕನ್ನಡಕ್ಕೆ ಛ೦ದ ಸ೦ಗೀತ ಸಾಹಿತ್ಯ ಸಿಕ್ಕಿದ೦ತಾಗುತ್ತದೆ. "ಹ೦ಸಾನ೦ದಿ" ಯವರ೦ತಹ ಉತ್ಸಾಹ ಉಳ್ಳ ಸ೦ಗೀತಗಾರರು ಉತ್ತಮ ಪ್ರಯೋಗಗಳನ್ನು ಮಾಡಿ ಕನ್ನಡ ಸಾಹಿತ್ಯದ ತೇಜಸ್ಸು ಸ೦ಗೀತದ ಮೂಲಕ ಹೆಚ್ಚಿಸಬೇಕು.

ಪ೦ಪ, ರನ್ನರಿ೦ದ ಮೊದಲುಗೊ೦ಡ ಕಾವ್ಯ ಪರ೦ಪರೆ , ಪುರ೦ದರರಲ್ಲಿ ಸ೦ಗೀತದ ತೇಜಸ್ಸನ್ನು ಕ೦ಡ ಕನ್ನಡ ಕಿವಿಗಳು ಗಬ್ಬುಸ೦ಗೀತದ ವಾಸನೆಯನ್ನು ಮೂಸಿ ನೋಡುತ್ತಿರುವುದು ಶೋಕದಾಯಕವಲ್ಲವೇ ? ಆದರೂ ಆಧುನಿಕ ಪ್ರಭಾವಕ್ಕೆ ಸಿಕ್ಕಿ ನಶಿಸದೆ ಮತ್ತೆ ಮತ್ತೆ ಹೊಸ ಹೊಸ ರಾಗಳಿ೦ದಾ ಮಿ೦ಚುತ್ತಿರಲಿ ಎ೦ದು ಪ್ರಾರ್ಥಿಸುತ್ತಾ ನಿರ್ಗಮಿಸುತ್ತೇನೆ. ಈಗ ನನ್ನ ಒ೦ದು ಅಚ್ಚು ಮೆಚ್ಚಿನ ಕನ್ನಡ ಹಾಡನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತೇನೆ.

ಕನ್ನಡವನ್ನು ಪ್ರೀತಿಸಿ, ಕನ್ನಡದಲ್ಲಿ ಹಾಡಿ ಆನ೦ದಿಸಿ....
ಇದರಿ೦ದ ದು:ಖದಿ೦ದ ಮುಕ್ತರಾಗುವಿರಿ.

****************************************
ಪ್ರೇಮದ ಮೇಲೆ ಇ೦ತಹ ಹಾಡು ನಾನು ಎಲ್ಲಿಯೂ ಯಾವ ಭಾಷೆಯಲ್ಲಿಯೂ ಕೇಳಿಲ್ಲಾ.

****************************************

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ

Sunil Jayaprakash's picture

ಕನ್ನಡವನ್ನು ಪ್ರೀತಿಸಿ, ಕನ್ನಡದಲ್ಲಿ ಹಾಡಿ ಆನ೦ದಿಸಿ....ಇದರಿ೦ದ ದು:ಖದಿ೦ದ ಮುಕ್ತರಾಗುವಿರಿ

ಎಂಥ ಚಿನ್ನದಂತ ಮಾತು ಹೇಳಿದ್ದೀಯೋ ಮುರಳಿ. ವಿದ್ಯಾವಂತನಾಗಿ, ಆಯುಷ್ಮಂತನಾಗಿ ನೂರ್ಕಾಲ ಬಾಳಪ್ಪಾ :)

ಉ: ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ

ಶಿವ's picture

ನಾನು ಹಿಂದಿ ಹಾಡನ್ನು ಕೇಳುವುದನ್ನು ಕಮ್ಮಿ ಮಾಡಿದ್ದೇನೆ(ಸುಮಾರಾಗಿ ನಿಲ್ಲಿಸಿದ್ದೇನೆ ಅಂತನೇ ಹೇಳಬಹುದು).ಆದರೆ ನೀವು ಹೇಳಿದ ಕಾರಣಕಲ್ಲ!

ಉ: ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ

vikashegde's picture

ನಮಸ್ಕಾರ ಮುರಳಿ,

ಆಜಾ ನಾಚ್ಲೆ ಚಿತ್ರ ವಿವಾದಾಸ್ಪದ ಸಾಲುಗಳು ಇಂತಿದೆ
Mein ne galti kari thi
Meri nathni padi thi — 2
Ki sone mein usko ranga gai
Mein ranga ke atariya pe aa gai
Mohalle mein kaise mara mar hai
Bole mochi bhi khud ko sonar hai

ಕೊನೆ ಸಾಲಿನಲ್ಲಿ "ಚಮ್ಮಾರನೂ ಕೂಡ ತನ್ನನ್ನು ಅಕ್ಕಸಾಲಿಗ ಎಂದುಕೊಳ್ಳುತ್ತಾನೆ" ಎಂಬರ್ಥ ಬರುತ್ತದೆ ಅನ್ನಿಸುತ್ತದೆ.
ಇದು ಮಾಹಿತಿಗಾಗಿ ಅಷ್ಟೆ.

ಇನ್ನು ನೀವು ಹೇಳಿದಂತೆ ಹಿಂದಿ ಸಿನೆಮಾದ ಹಾಡುಗಳಲ್ಲಿ ಉರ್ದು ಮತ್ತು ಪಂಜಾಬಿ ನುಡಿಗಳನ್ನು ಮೊದಲಿನಿಂದಲೂ ತುರುಕಲಾಗುತ್ತಿದೆ.
ಅದೇನು ಕರ್ಮವೋ ಏನೋ. ಈ ಬಗ್ಗೆ ನನಗಂತೂ ಜಾಸ್ತಿ ತಲೆಬಿಸಿ ಇಲ್ಲ. ಯಾಕಂದ್ರೆ ನಾನು ಹಿಂದಿ ಹಾಡು ಕೇಳೋದೇ ಕಮ್ಮಿ.:)
ಕನ್ನಡ ಹಾಡುಗಳಲ್ಲಂತೂ ಇಂಗ್ಲೀಷನ್ನು ತುರುಕದಿದ್ದರೇ ನಡೆಯುವುದೇ ಇಲ್ಲ ಎನ್ನುವ ಮಟ್ಟಿಗೆ ಹೋಗಿದ್ದ ಕಾಲದ್ದಲ್ಲಿ ಜಯಂತಣ್ಣನಂತವರು ಬಂದು ಕಾಪಾಡಿದ್ದಾರೆ. ಸಾಹಿತ್ಯ ಲೋಕಕ್ಕೂ ಚಿತ್ರರಂಗಕ್ಕೂ ಹೆಚ್ಚು ಸಂಬಂಧ ಬೆಳೆದರೆ ಈ ಕೊರತೆ ನೀಗಿಸಬಹುದೆನಿಸುತ್ತದೆ.