ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

December 5, 2007 - 2:20pm — ವೈಭವ

ನಾನು ಇತ್ತೀಚಿಗೆ ತಿರುಳ್ಗನ್ನಡ ನಾಡು(ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು) ಮತ್ತು ಬೇಂದ್ರೆ ನಾಡು(ಧಾರವಾಡ)ಗಳಲ್ಲಿ ಸುತ್ತಾಡಿದಾಗ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಎರಡು ವಿಶ್ಯಗಳು ಇವು
ಈ ಕಪ್ಪೆ ಅರಬಟ್ಟ ಯಾರು? (ಬಾದಾಮಿಯಲ್ಲಿ ಕಪ್ಪೆ ಅರಬಟ್ಟನ ಶಾಸನ ಇದೆ)
ಅರವಟ್ಟಿಗೆ ಅಂದ್ರೆ ಏನು? ( ಧಾರವಾಡದ ಸುಬಾಸ್ ರೋಡಿನಲ್ಲಿ, ಪೊಲೀಸ್ ಟಾಣೆ ಎದುರು ಈ ಅರವಟ್ಟಿಗೆ ಇದೆ).

ಇವೆರಡನ್ನು ಇಲ್ಲಿ ಚನ್ನಾಗಿ ಬಿಡಿಸಿ ಹೇಳಲಾಗಿದೆ(ಬರೆದಿರುವವರು: ಶಿಕಾರಿಪುರ ಕೆ. ಹರಿಹರೇಶ್ವರ,ಸರಸ್ವತೀಪುರಂ, ಮೈಸೂರು)
http://thatskannada.oneindia.in/literature/hari/040204badami_shasana.html

ಮುಂದೆ ನನ್ನ ತಿರುಳ್ಗನ್ನಡ ನಾಡಿನ ಬೆಟ್ಟಿಯ ಬಗ್ಗೆ ಹೆಚ್ಚು ಬರೆಯುವೆ. ಎದುರು ನೋಡಿ

‹ "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು? 'ನಾಟ್ಯ ಮಯೂರಿ' ›
  • ಸಾಹಿತ್ಯ, ಭಾಷೆ
~.~
  • Login or register to post comments
  • 442 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 5, 2007 - 2:28pm — ವೈಭವ

ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

ವೈಭವ's picture

Ka. aṟa(ಅರ), aṟu virtue, charity, alms, law, dharma, Yama.

http://dsal.uchicago.edu/cgi-bin/philologic/getobject.pl?c.0:1:314.burro...

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 5, 2007 - 3:08pm — mahesha

ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

mahesha's picture

aṟa = ಅಱ

ಅರ = ಚೂಪು ಮಾಡಲು ಬಳಸುವ ಕೈದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 5, 2007 - 7:08pm — olnswamy

ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

olnswamy's picture

--

ಅರವಟ್ಟಿಗೆ: ಅಱ ಅಂದರೆ ಧರ್ಮ. ಈಗ ಅರವಟ್ಟಿಗೆ ಅನ್ನುವ ಪದವೂ ಕಾಣೆಯಾಗಿದೆ. ಅದರ ಅರ್ಥ ಧರ್ಮದ ಕಟ್ಟಿಗೆ. ಬಿಸಿಲಲ್ಲಿ ಬಳಲಿ ಬಂದವರಿಗೆ ನೀರು, ತಣ್ಣನೆ ಮಜ್ಜಿಗೆ, ಪಾನಕ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಿ ದಣಿವಾರಿಸುತ್ತಿದ್ದ ತಾಣ.
ಅರಭಟ್ಟ ಚಾಲುಕ್ಯರ ಕಾಲದವನು, ಬಹುಶಃ ಒಬ್ಬ ಮಂತ್ರಿ. ಅವನ ಪ್ರಸ್ತಾಪವಿರುವ ಶಾಸನ ಕನ್ನಡದಲ್ಲಿ ಪ್ರಸಿದ್ದ. ಅದರ ಪದ್ಯದ ಸಾಲುಗಳು ಯಥಾವತ್ ಈಗ ಹೇಳಲಾರೆ, ಅದರ ಸಾರಾಂಶ ಹೀಗೆ: ಕೆರಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ಜನರಿಗೆ ಒಳ್ಳೆಯದು ಮಾಡು ಎಂದು ಅರಭಟ್ಟನ ತಾಯಿ ಹಾಲು ಕುಡಿಸುತ್ತಾ ಅವನಿಗೆ ಹೇಳಿಕೊಟ್ಟಳು. ಅವನು 'ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ' ಒಳ್ಳೆಯವರಿಗೆ ಒಳ್ಳೆಯವನಾಗಿ ಎಲ್ಲರನ್ನೂ ಬಾಧಿಸುವ ಕಲಿಯನ್ನೂ ಸೋಲಿಸಿದವನಾಗಿ, ಮಾಧವನೇ ಇವನು ಎಂಬಂತೆ ಪ್ರಸಿದ್ಧನಾದ ಅನ್ನುತ್ತದೆ ಶಾನಸ.
ಕನ್ನಡದ ಮೊದಲ ಶಾನಸ ಹಲ್ಮಿಡಿ ಶಾಸನದಷ್ಟೇ ಪ್ರಸಿದ್ಧವಾದದ್ದು ಇದು.
ಧಾರವಾಡದಲ್ಲಿ ಅರವಟ್ಟಿಗೆ ಎಂಬ ಬೋರ್ಡು ಇನ್ನೂ ಇದ್ದರೆ ಅಲ್ಲಿನ ಜನ ಸುಮಾರು ಸಾವಿರ ವರ್ಷಗಳ ಕನ್ನಡಪದವನ್ನು ಇನ್ನೂ ಕಾಪಾಡಿಕೊಂಡಿದ್ದಾರೆ ಅಂತ ಸಂತೋಷಪಡೋಣ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 5, 2007 - 7:29pm — savithru

ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

savithru's picture

>>>ಅವನು 'ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ'

ಸ್ವಾಮಿಯವ್ರೆ ತಿಳಿಸಿದ್ದಕ್ಕೆ ಧನ್ಯವಾದಗಳು.

ಆದ್ರೆ ಸ್ವಲ್ಪ ತಿದ್ದು ಬೇಕಿದೆ.

ಸಾಧೂನ್ಗೆ ಸಾಧು, ಮಾದೂರ್ಯಂಗೆ ಮಾದೂರ್ಯಂ,
ಬಾದಿಪ್ಪ ಕಾಲಿಗೆ , ಕಲಿಯುಗ ವಿಪರೀತನ್,
ಮಾಧವನೀತನ್ ಪೆರನಲ್ಲ.

ನಾನು ತುಂಬಾ ಹಿಂದೆ ಎಲ್ಲೂ ಕೇಳಿದ್ದು.
ಇಲ್ಲಿ ಮಾದೂರ್ಯ ಅಂದ್ರೆ ಮಹಾ ದೂರ್ಯ ( ದೂರ್ತ) ಅಂತ ಕಾಣುತ್ತೆ.

ತನ್ನ ಹೆಸರು ಮಾಧವ, ಅತ್ವ ತನ್ನನ್ನು ತಾನು ಮಾಧವ( ವಿಷ್ಣು ) ಅಂತ ಕರೆದುಕೊಂಡಿದ್ದಾನೋ ತಿಳಿದವರು ಹೇಳಬೇಕು.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 5, 2007 - 7:35pm — savithru

ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

savithru's picture

ಬಾದಿಪ್ಪ ಕಾಲಿಗೆ == ಬಾದಿಪ್ಪ ಕಲಿಗೆ

ಎಲ್ಲೂ == ಎಲ್ಲೋ

ಅಂದಹಾಗೆ ನಾನು ದಟ್ಸ್ ಕನ್ನಡ ದಲ್ಲಿ ಇದು ಬಂದಿರುವುದು ಮುಂಚೆ ಓದಿರಲಿಲ್ಲ. ಹಾಗಾಗಿ ರಿಪ್ಲೈ ಮಾಡಿದೆ. ಅಲ್ಲಿ ಸ್ವಲ್ಪ ವಿವರವಾಗಿಯೇ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 5, 2007 - 10:05pm — mahesha

ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

mahesha's picture

ತಮಿಳಲ್ಲಿ ಈ ಅಱ ಇನ್ನೂ ಬಳಕೆಯಲ್ಲಿದೆ? ಎಂದು ಕೇಳಿದ್ದೀನಿ...

ಹಾಗೇ ತಿರುಕ್ಕುಱಳ್ ಅಲ್ಲಿ (ಮೂರಲ್ಲಿ) ಒಂದು ಪಾಲು ಈ ’ಅಱ’ದ ಬಗ್ಗೇ ಇದೆಯಂತೆ!

http://www.britannica.com/eb/article-9100030/Tirukkural

An all-inclusive ethical guide, the Tirukkural has as its foremost moral imperatives the avoidance of killing and the avoidance of falsehood. It also commends to the reader a feeling of compassion for all individuals, regardless of caste or creed. Its 133 sections of 10 couplets each are divided into three books: aram (virtue), porul (government and society), and kamam (love).

http://nvkashraf.myweb.io/kurkan/KanCONT.htm

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
  • ಶಂಖ ವಾದ್ಯ :)
  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
  • ಐರ್ಲ್ಯಾಂಡಿನಲ್ಲಿ 'ಮುಂಗಾರು ಮಳೆ' ಸುರಿಯಲಿದೆ !!
  • ಶಂಖನಾದ - ಭಾಗ ಎರಡು
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಬ್ಬಿ, ಅರ್ಬಿ
  • ಪೊಳೆ, ಪೊೞೆ, ಹೊಳೆ, ಹೊೞೆ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator