Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಾಸ್ಯ

ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

January 28, 2008 - 6:05pm — agilenag

ಹೌದು, ಅವರು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು. ಅವರಿಂದ ಬಂದ ಈ ನುಡಿಮುತ್ತುಗಳು ನೊಂದ ಜಿವದ ಬೆಂದ ಮಾತುಗಳು. ಇದನ್ನು ಅರಿಯುವಷ್ಟು ನಮ್ಮ ಕನ್ನಡಿಗರಿನ್ನೂ ಬುದ್ಧಿಮತ್ತೆಯನ್ನು ಪಡೆದಿಲ್ಲ. ಅದಕ್ಕಾಗಿಯೇ ಕರ್ನಾಟಕ ಕೇರಳ ಮತ್ತು ತಮಿಳುನಾಡಿನ ಮಧ್ಯದಲ್ಲಿ ಸಿಕ್ಕಿಕೊಂಡು, ಅಡಕೆಯಲ್ಲಿ ಸಿಕ್ಕ ಕತ್ತರಿಯಂತೆ, ಅಲ್ಲಲ್ಲ, ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತೆ ವಿಲಿ ವಿಲಿ ಒದ್ದಾಡುತ್ತಾ, ಮೇಲಿಂದ ಆಂದ್ರದ ಭಾರವನ್ನೂ ಹೊರುತ್ತಾ ತೊಳಲಾಡುತ್ತಿದೆ. ಇಲ್ಲಿ ಹುಟ್ಟಿದ ಮಹಾಪುರುಷರು ನೊಂದಾಗ ಮೇಲಿನಂತೆ ನುಡಿದರೆ ತಪ್ಪೇನು? ಕುಂಬ್ಳೆ ಮೂತಿಯನ್ನು ಕುಂಬಳಕಾಯಿಯನ್ನಾಗಿ ಮಾಡುವ ಅವಶ್ಯಕತೆ ಇಲ್ಲವೇಇಲ್ಲ. ಏಕೆಂದರೆ:
ಅವರು ಪ್ರಧಾನ ಮಂತ್ರಿಯಾಗುವ ಮುಂಚೆ ಮುಖ್ಯ ಮಂತ್ರಿಯಾಗಿದ್ದವರು. ಹಲವಾರು ಉತ್ತಮ ಕೆಲಸಗಳನ್ನು ಮಾಡಿದವರು. ಅವರ ಶ್ರಮಕ್ಕೆ ಅವರ ಆಸ್ತಿ ಬೆಳೆದಿರುವುದೇ ನಿದರ್ಶನ. ನಂತರ ಪ್ರಧಾನಿಯಾದರು. ಕರ್ನಾಟಕಕ್ಕೆ ಏನೇನೋ ಮಾಡುತ್ತೇನೆಂದು ರೈಲು ಬಿಟ್ಟರು. ಅದು ಇನ್ನೂ ಕರ್ನಾಟಕಕ್ಕೆ ತಲಪದಿದ್ದರೆ ಅದು ಅವರ ತಪ್ಪೆ? ಅವರ ನಂತರ ಬಂದ ಎನ್.ಡಿ.ಎ ಹಾಗು ಕಾಂಗ್ರೆಸ್ ಪಕ್ಷಗಳೇ ಹೊಣೆ. ಅವರು ಅಂದುಕೊಂಡಿದ್ದೆಲ್ಲಾ ಆಗಿದ್ದರೆ ಕರ್ನಾಟಕದ ಪರಿಸ್ಥಿತಿ ಹೇಗಿರುತ್ತಿತ್ತು, ಕ್ಷಣಕಾಲ ಯೋಚಿಸಿ. ಅದನ್ನು ಯೋಚಿಸಿಯೇ ಅವರು ನೊಂದು ನುಡಿದದ್ದು, ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎಂದು. ಅವರು ಮುಸ್ಲಿಂ ಪಂಥದಲ್ಲಿ ಹುಟ್ಟುವ ಆಸೆಯನ್ನೂ ಒಮ್ಮೆ ವ್ಯಕ್ತ ಪಡಿಸಿದ್ದರು. ಆದರೆ ಹಾಗೆ ಹುಟ್ಟಿದ್ದರೆ ಆ ಮತದಲ್ಲಿ ಆಗುತ್ತಿದ್ದ ಅಭಿವೃದ್ಧಿಕಾರ್ಯಗಳನ್ನು ಊಹಿಸಿಯೇ ಅವರು ನೊಂದು ನುಡಿದಿರುವುದು ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎಂದು.
ಇತ್ತೀಚೆಗೆ ತಮ್ಮನ್ನು ಯಾರೂ ಕ್ಯಾರೆ ಎನ್ನುವುದಿಲ್ಲವೆಂದು, ಬೇರೆ ಅಪಾತ್ರರಿಗೆ ಮಣೆ ಹಾಕಲಾಗುತ್ತಿದೆ ಎಂದು ನೊಂದು ನುಡಿದಿದ್ದಾರೆ. ಕಣ್ಣೀರು ಸುರಿಸಿದ್ದಾರೆ. ಕರ್ನಾಟಕ ರಾಜ್ಯದ ಮಕ್ಕಳ ಉದ್ದಾರಕ್ಕಾಗಿ ಎಂಥಾ ತ್ಯಾಗವನ್ನೂ ಮಾಡಲು ಹಿಂಜರಿಯಲಿಲ್ಲ. ಸ್ವಂತ ಮಗನನ್ನೇ ಎದುರು ಹಾಕಿಕೊಂಡರು, ಮುಖ್ಯ ಮಂತ್ರಿಯಾಗಿ ಕಷ್ಟಗಳನ್ನು ಅನುಭವಿಸುವಂತೆ ಮಾಡಿದರು. ಹಿರಿ ಮಗನಿಗೆ ಹಿರಿ ಹಿರಿ ಹಿಗ್ಗುವ ಅವಕಾಶವಿರುವ ಖಾತೆಗಳನ್ನು ಕೊಡಿಸಿ ಕಷ್ಟ ಅನುಭವಿಸುವಂತೆ ಮಾಡಿದರು. ಆದರೆ ನಮ್ಮವರಿಗೆ ಅದರ ಅರಿವೇ ಇಲ್ಲ, ಯಾಕೆಂದರೆ ಇಲ್ಲಿನ ಹೆಚ್ಚಿನವರಿಗೆ ಅರಿವೇ (ಬಟ್ಟೆ) ಇಲ್ಲ, ಇನ್ನು ರೋಟಿ ಮತ್ತು ಮಕಾನ್ ಎಲ್ಲಿಂದ ಬರಬೇಕು, ಬುದ್ಧಿ ಹೇಗೆ ಬೆಳೆಯಬೇಕು. ಸತ್ಪಾತ್ರರನ್ನು ಹೇಗೆ ಗುರುತಿಸಬೇಕು? ಆದ್ದರಿಂದಲೇ ಕಳಕಳಿಯ ಕೊರಗು "ನಾನು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು" ಎಂದು.
ಕನ್ನಡಿಗರು ಇನ್ನಾದರೂ ಅರ್ಥಮಾಡಿಕೊಂಡು ಹತ್ತಿರದಲ್ಲಿಯೇ ಸುಳಿಯುತ್ತಿರುವ ಚುನಾವಣೆಯಲ್ಲಿ ಉತ್ತರಿಸುವರೇ? ಇಲ್ಲಾ ಸ್ವಾಮಿ, ನಾವಿರೋದೇ ಹೀಗೆ.

‹ ಹಾಸ್ಯ ಕೇವಲ ಉಪ್ಪಿನ ಕಾಯೇ? ಅಭಾವ ›
  • ಹಾಸ್ಯ
Ornamental seperator
  • Login or register to post comments
  • 242 hits
  • Email this forum
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
  • ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ....
  • ಪತ್ರಿಕೆಯ ಸುಡೋಕು ಸ್ಥಳ
  • ತಪ್ಪು ಯಾರದ್ದು?
  • ಕಲಾಂ --ಸಲಾಂ
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator