ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ವ್ಯಂಗಚಿತ್ರ, ಚಿತ್ರಕಲೆ

ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

February 6, 2008 - 10:35pm — Sunil Jayaprakash

ಉತ್ಪ್ರೇಕ್ಷೆಯಲ್ಲ. ಹೊಟ್ಟೆ ಉರಿಯತ್ತೆ ಕಣ್ರೀ. ಒಂದು ಕಲಾದೇಗುಲವನ್ನು "ಊರಾಚೆಯ ಬಚ್ಚಲುಮನೆಯನ್ನಾಗಿ" ಮಾಡುವ ಹೀನಪ್ರವೃತ್ತಿಗೆ ಒಂದು ವಿಕೃತ ಸೆಲ್ಯೂಟ್.

ಈ ಪಾಪೆಗಳಲ್ಲಿರುವ ಟೈಲುಗಳು ಕಕ್ಕಸುಗುಂಡಿಯನ್ನು ನೆನಪಿಸಿದರೆ ದಯವಿಟ್ಟು ನನ್ನನ್ನು ಬಯ್ಯಬೇಡಿ.

(ಪಾಪೆಗಳನ್ನು ದೊಡ್ಡದಾಗಿ ನೋಡಲು, ಅವುಗಳ ಮೇಲೆ ಚಿಟುಕಿ)

ಕಳೆದ ವರ್ಷ ಇದೇ ಹೊತ್ತಿನಲ್ಲಿ ಕರ್ನಾಟಕದ ದೇವಸ್ಥಾನಗಳ ತಂಜಾವೂರೀಕರಣವಾಗುತ್ತಿರುವುದನ್ನು ಇಸ್ಮಾಯಿಲ್ ಅವರು ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿ ಎನ್ನುವ ಎಳೆಯಲ್ಲಿ ವಿವರಿಸಿದ್ದರು. ಈಗ್ಗೆ ಎರಡು ವಾರದ ಹಿಂದೆ ಮುರುಡೇಶ್ವಕ್ಕೆ ಹೋದಾಗ ನಿಜಕ್ಕೂ "ಮುರುಡೇಶ್ವರಕ್ಕೆ" ಬಂದೆನೇ ಅಥವಾ "ಕಕ್ಕಸುಗುಂಡಿ" ಹೊಕ್ಕೆನೇ ತಿಳಿಯದಾಯಿತು.

ಹಾಗೆಯೇ, ಕರ್ನಾಟಕದ ಹೊಯ್ಸಳ ಶೈಲಿಯ ಕಲೆಯನ್ನು ತಂಜಾವೂರು ಶೈಲಿ ನುಂಗಿ ನೀರು ಕುಡಿಯುತ್ತಿರುವ ದೃಶ್ಯ.

‹ ನಾವಿರೋದು ಹೀಗೇ...
  • ವ್ಯಂಗಚಿತ್ರ, ಚಿತ್ರಕಲೆ
~.~
  • Login or register to post comments
  • 505 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 6, 2008 - 11:50pm — Yamini

ಉ: ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

Yamini's picture

ದೇವಸ್ಥಾನಗಳ ಸ್ವರೂಪ ಹೀಗೆ ಬದಲಾಗುತ್ತಿರುವುದರ ಹಿಂದೆ ಭಕ್ತಿಯ ಆಧುನಿಕ ಸ್ವರೂಪವಿದೆ. ಈ 'ಭಕ್ತಿ'ಯನ್ನು ಭಕ್ತಿಯೆಂದೇ ಕರೆಯಬಹುದೇ ಎಂಬುದರ ಬಗ್ಗೆಯೂ ನನಗೆ ಅನುಮಾನವಿದೆ. ನೀವು ಮುರುಡೇಶ್ವರದ ಉದಾಹರಣೆಯನ್ನು ತೆಗೆದುಕೊಂಡಿದ್ದೀರಿ. ಮುರುಡೇಶ್ವರದ ದೇವಸ್ಥಾನ ಪ್ರಖ್ಯಾತವಾಗುವ ಮೊದಲೇ ಈ ಪ್ರಕ್ರಿಯೆ ಇಡೀ ಕರಾವಳಿಯಲ್ಲಿ ಆರಂಭವಾಗಿತ್ತು. ನಮ್ಮ ಭೂತದ ಗುಡಿಗಳ್ಯಾವೂ ಈಗ ಗುಡಿಗಳಾಗಿ ಉಳಿದಿಲ್ಲ. ದೇವಸ್ಥಾನಗಳ ಜೀರ್ಣೋದ್ಧಾರದ ನಂತರ ನಡೆಯುವ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶ ಕಾರ್ಯಕ್ರಮವೊಂದನ್ನು ನೋಡಿದರೆ ನಮ್ಮ ಭಕ್ತಿಯ ಸ್ವರೂಪ ಅರ್ಥವಾಗಿಬಿಡುತ್ತದೆ. ಈ ಕಾರ್ಯಕ್ರಮದ ಅತಿಥಿಗಳಿಂದ ಆರಂಭಿಸಿ ಅದರ ವೇದಿಕೆಯ ತನಕ ಎಲ್ಲವೂ ಹಣವಂತ ಭಕ್ತರಿಂದ ತುಂಬಿರುತ್ತದೆ. ಈ ಹಣವಂತರಿಗೆ ಭಕ್ತಿ ಬಂದದ್ದು ಭಯದಿಂದ. ಅಂದರೆ ತಾವು ಗಳಿಸಿದ ಹಾದಿಯ ಕುರಿತ ಭಯ, ಗಳಿಸಿದ್ದನ್ನು ಉಳಿಸಿಕೊಳ್ಳುವ ಭಯಗಳಿಂದ ತುಂಬಿದ ಭಕ್ತಿ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೊಡುವ ಭಾರೀ ಮೊತ್ತಗಳ ಹಿಂದೆ ಕೆಲಸ ಮಾಡುವುದೂ ಈ ಮನಸ್ಥಿತಿಯೇ?

ದುಡ್ಡು ಕೊಡುವವರ ಮನಸ್ಥಿತಿ ಹೇಗಿದ್ದರೂ ಅದನ್ನು ಬಳಸುವವರು ಸರಿಯಾಗಿದ್ದರೆ ಪರಿಸ್ಥಿತಿ ಇಷ್ಟೊಂದು ಕೆಡುತ್ತಿರಲಿಲ್ಲ. ಬಳಸುವವರಿಗೆ ನಮ್ಮ ವಾಸ್ತುಶಿಲ್ಪದ ಒರಿಜಿನಾಲಿಟಿಗಿಂತ ನವೀಕರಣ ಕಣ್ಣಿಗೆ ಬೀಳಬೇಕೆಂಬ ಆಸೆ ಇರುತ್ತದೆ. ಹಳೆಯ ದೇವಾಲಯವನ್ನು ಹಳೆಯ ಸ್ವರೂಪದಲ್ಲೇ ಉಳಿಸುವುದಾದರೆ ಜೀರ್ಣೋದ್ಧಾರ ಮಾಡುವುದಾದರೂ ಯಾಕೆ ಎಂದು ಬಹಿರಂಗವಾಗಿ ಕೇಳಿದವರೂ ನಮ್ಮೂರಿನಲ್ಲಿ ಇದ್ದಾರೆ. ಈ ಮನಸ್ಥಿತಿಯನ್ನು ಬದಲಾಯಿಸುವುದು ಹೇಗೆ?

-ಯಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 12:21am — ಸಂಗನಗೌಡ

ಉ: ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

ಸಂಗನಗೌಡ's picture

ಬದಲಾಯಿಸೋದು ಹ್ಯಾಗೆ ಅಂದ್ರಾ ಏನಿಲ್ಲ ಸಿಂಪಲ್, ಚಾನ್ಸ್ ಸಿಕ್ಕಾಗೆಲ್ಲ ಅದರ ಬಗ್ಗೆ ಬರೀರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 3:04pm — ರಾಮಕುಮಾರ್

ಉ: ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

ರಾಮಕುಮಾರ್'s picture

ನೀವು ಭೂತದ ಗುಡಿಯ ಬಗ್ಗೆ ಬರೆದಿದ್ದೀರಿ..ನನಗಂತೂ ಅವುಗಳಿಗೆ ಒದಗಿರುವ ಗತಿಯನ್ನ ನೆನೆದರೆ ವ್ಯಥೆಯಾಗುತ್ತೆ.ಈಗಲೂ ಮಲೆನಾಡಿನ ಅಥವಾ ಕರಾವಳಿಯ ಸಣ್ಣ ಪಟ್ಟಣವೊಂದರ ಮಧ್ಯದಲ್ಲಿ ಒಂದು ದಟ್ಟ ಕಾಡಿನ ತೆರದಲಿ ಮರಗಳ ಗುಂಪು ಇದ್ದಲ್ಲಿ ಅದೊಂದು ಬೂತದ ಬನವೋ , ನಾಗನ ಬನವೋ ಎಂದು ಊಹೆ ಮಾಡಲು ಅಡ್ಡಿಯಿಲ್ಲ(ಮೇಲಾಗಿ ಮಲೆನಾಡಿನಲ್ಲೂ ಈಗೀಗ ಬೂರುಗ, ತಾರೆ, ಬೋಗಿ ಜಾತಿಯ ಭೀಮಗಾತ್ರದ ಮಹಾವೃಕ್ಷಗಳು ಹೆಚ್ಚಾಗಿ ಉಳಿದಿರುವುದು ನಾಗನ ಬನ, ಚೌಡಿ ಬನಗಳಲ್ಲಿ ಮಾತ್ರ )
ಈಗೀಗ ಭಕ್ತರ ಆಧುನೀಕರಣದ ಗೀಳಿಗೆ ಬಲಿಯಾಗಿ ಇಲ್ಲೆಲ್ಲ ಕಾಂಕ್ರೀಟ್ ಕಟ್ಟಡದ ದೇವಸ್ಥಾನ ಮೇಲೆದ್ದು ಅಲ್ಲಿದ್ದ ಗಿಡಮರಗಳೆಲ್ಲ ನಾಮಾವಶೇಷವಾಗುತ್ತಿವೆ.ನಿಜದ ಅರ್ಥದಲ್ಲಿ ಹಾವುಗಳ ಆವಾಸ ಸ್ಥಾನವಾಗಿದ್ದ ನಾಗಬನಗಳು ಬಟಾಬಯಲಾಗಿವೆ.
ಈ ಭಕ್ತರಿಗೆಲ್ಲ ಭೂತರಾಯ ಸದ್ಬುದ್ಧಿಯನ್ನ ಕೊಡಲೆಂದು ಹಾರೈಸುತ್ತೇನೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2008 - 12:43am — uniquesupri

ಉ: ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

uniquesupri's picture

ದೇವಸ್ಥಾನಗಳೂ ಈಗ ವ್ಯಾಪಾರಿ ಸಂಸ್ಥೆಗಳಾಗುತ್ತಿವೆ ಕಾರ್ಪೋರೇಟ್ ಸಂಸ್ಕೃತಿಯನ್ನು ಮೈಗೂಡಿದಿಕೊಳ್ಳುವಲ್ಲಿ ದಾಪುಗಾಲು ಹಾಕುತ್ತಿವೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಮೇಶ್ವರಕ್ಕೆ ಹೋದ್ರೂ
  • ಭರತೇಶ ವೈಭವದಲ್ಲಿ ಬೊಂಬೆಯಾಟ - ಕಲ್ಪು ೫
  • ತಾಯಿ.
  • ಅಬಲೆಯೇ ಮಹಿಳೆ???
  • ನಗೆಹನಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಡತಿ-ಎಂದರೆ ಜೋಕು ಯಾಕೆ ?
  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ರೇಖಾ
    ಉ: ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
    July 6, 2008 - 11:03pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 11:01pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 10:59pm
  • Sunil Jayaprakash
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 10:35pm
  • Sunil Jayaprakash
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 10:29pm
  • Sunil Jayaprakash
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 10:27pm
  • omshivaprakash
    ಉ: ವೈದ್ಯನಾರಾಯಣಕಥೆ
    July 6, 2008 - 9:54pm
  • kalpana
    ಉ: ವೈದ್ಯನಾರಾಯಣಕಥೆ
    July 6, 2008 - 9:30pm
  • kalpana
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 9:24pm
  • karaddishivaraj
    ಉ: ವೈದ್ಯನಾರಾಯಣಕಥೆ
    July 6, 2008 - 9:06pm
ಇನ್ನಷ್ಟು


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator