Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಆಡುಗನ್ನಡ ವ್ಯಾಕರಣ - ’ಉ’ ಕೊನೆ

March 11, 2008 - 12:49pm — mahesha

ಇದರ ಕುಱಿತು ಬರೀಬೇಕಿಂದಿದ್ದೆ.. ಇವೊತ್ತು ಹಾಕಿದ್ದೀನಿ.....

ನಮ್‌ ಬರವಣಿಗೇ ಕನ್ನಡಕ್ಕೂ, ಮಾತಿನ ಕನ್ನಡಕ್ಕೂ ಬಲು ಬೇರೆತನವಿದೆ..

ಇಂತವನ್ನು ಪಟ್ಟಿ ಮಾಡಬೇಕು...

೧) ’ಉ’ ಕೊನೆ......
ಬರವಣಿಗೇಲಿ ’ಉ’ ಇಂದ ಕೊನೆಗೊಳ್ಳೊವು, ಸಾಲಿನ ನುಡಿವೆ ಬಂದರೆ, ಅವು ಹಾಗೆ ಆಗಲ್ಲ..

ಮಾದರಿ:

ಬ: ನೀರು ಬೇಕು ( ಬರಹ )
ಮಾ: ನೀರ್‍ ಬೇಕು ( ಮಾತು )

ಬ : ಬೇಕಾ ನೀರು
ಮಾ : ಬೇಕಾ ನೀರು

ಬ: ಅದು ಬಂತು
ಮಾ : ಅದ್ ಬಂತು

ಬ : ಬಂತು ಅದು.
ಮಾ : ಬಂತ್ ಅದು.

ಹೀಗೆ ನಾವ್ ’ಉ’ ಇಂದ ಸಾಮಾನ್ಯ ಬರೀ ಸಾಲಿನ ಕೊನೇಲಿ ಹೇಳ್ತೀವಿ.. ಹೀಗಿ ’ಉ’ಇಂದ ಕೊನೆ ಕನ್ನಡದಲ್ಲಿ ’full stop, comma' ತೆರ ಕೆಲಸ ಮಾಡ್ತದೆ.

ಹೀಗೆ ’ಅ’ ಕೂಡ ಹಲವು ಕಡೆ

ಮಾದರಿ :
ಬ : ನಮ್ಮ ಮನೆ
ಮಾ : ನಮ್ ಮನೆ

ಬ : ನನ್ನ ಕೈ
ಮಾ : ನನ್ ಕೈ/ನಂಗೈ

ಬ: ನಾವು ಕನ್ನಡಿಗರು
ಮಾ : ನಾವ್ ಕನ್ನಡಿಗರು

ಬ: ಕನ್ನಡಿಗರು‍ ನಾವು
ಮಾ: ಕನ್ನಡಿಗರ್‍ ನಾವು

ನೀವೇನ್ ಹೇಳ್ತೀರಿ?

‹ ವ್ಯಾಕರಣ : ತದ್ಧಿತ ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು? ›
  • ವ್ಯಾಕರಣ
Ornamental seperator
  • Login or register to post comments
  • 375 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 11, 2008 - 12:50pm — mahesha

ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ

mahesha's picture

ತಿದ್ದು
’ಸಾಲಿನ ನುಡಿವೆ ಬಂದರೆ, ಅವು ಹಾಗೆ ಆಗಲ್ಲ’ = ’ಸಾಲಿನ ನಡುವೆ ಬಂದರೆ, ಅವು ಉ ಇಂದ ಕೊನೆಯಾಗಲ್ಲ’

  • Login or register to post comments
  • link
  • Email this ಪ್ರತಿಕ್ರಿಯೆ
March 12, 2008 - 10:53am — Sunil Jayaprakash

ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ

Sunil Jayaprakash's picture

ಮಹೇಶ, ಒಳ್ಳೆಯ ವಿಷಯವನ್ನು ಮುಂದಿಟ್ಟಿದ್ದೀಯಾ. ಕನ್ನಡದ ಬಗ್ಗೆ ಇರುವ ಅಪಪ್ರಚಾರಗಳಲ್ಲಿ ' "ಉ" ಸೇರಿಸಿದರೆ ಕನ್ನಡ ಆಗತ್ತೆ ಎಂಬುದೂ ಒಂದು' ಅಂತ ನನ್ನ ಅನಿಸಿಕೆ. "ಉ" ಸೇರಿಸುವುದು ಬಿಡುವುದು ಪಡೆನುಡಿಗಳಿಗೆ ಅನ್ವಯವಾಗದೆ ಕನ್ನಡದ ನಾಮಪದಗಳಿಗೂ ಅನ್ವಯಿಸುತ್ತದೆ ಎಂಬುದು ನನ್ನ ಅನಿಸಿಕೆ.

ಮೇಲಿನ ಉದಾಹರಣೆಗಳಲ್ಲಿ ಕನ್ನಡ ಪದಗಳ ಪಟ್ಟಿಮಾಡಿದ್ದೀಯಾ. ಇದೇ ರೀತಿ ಪಡೆನುಡಿಗಳ ಬಗ್ಗೆಯೂ ಸ್ವಲ್ಪ ಬರಿ.

ಈಗ ಇಂಗ್ಲೀಷಿನ, ಟೇಬಲ್, ಚೇರ್, ಸೋಪ್ ಇವುಗಳನ್ನು ಮಾತಿನಲ್ಲಿ ಬಳಸುವಾಗಲೂ ಕೂಡ ನಾವು "ಟೇಬಲು", "ಚೇರು", "ಸೋಪು" ಅಂತ ಬಳಸಲ್ಲ, ಅಲ್ವಾ. ಕೆಳಗಿನ ಉದಾಹರಣೆಗಳೆಲ್ಲವೂ ಮಾತಿನ ರೂಪದವು.

೧.೧ ಟೇಬಲ್ ಎಲ್ಲಿ ? ಇಲ್ಲಿ ಪಡೆನುಡಿಗೆ 'ಉ' ಸೇರಿಸಲ್ಲ.
೧.೨ ಇದು ನಾನ್ ಮಾಡಿಸಿಕೊಟ್ಟಿದ್ ಟೇಬಲ್ಲು ? ಇಲ್ಲಿ ಪಡೆನುಡಿಗೆ 'ಉ' ಸೇರಿಸಿದ್ದೇವೆ.

೨.೧ ಚೇರ್ ತೊಗೊಂಡ್ ಬಾ - ಇಲ್ಲಿ ಪಡೆನುಡಿಗೆ 'ಉ' ಸೇರಿಸಲ್ಲ.
೨.೨ ಇದು ಅವನ ಚೇರು - ಇಲ್ಲಿ ಪಡೆನುಡಿಗೆ 'ಉ' ಸೇರಿಸಿದ್ದೇವೆ.

ಹೀಗಿರುವಾಗ, ಯಾವುದೇ ಒಂದು ನಾಮಪದ ವಾಕ್ಯದ ಕೊನೆಯಲ್ಲಿ ಬರುವುದಾದರೇ ಮಾತ್ರವೇ ನಾವು "ಉ" ಬಳಸುತ್ತೀವೆಯೇ ? ಎಂಬುದಕ್ಕೆ ಉತ್ತರ ಕಂಡುಹಿಡಿದುಕೊಳ್ಳಬೇಕು. ಚರ್ಚೆ ಮುಂದೆ ಸಾಗಲಿ.

  • Login or register to post comments
  • link
  • Email this ಪ್ರತಿಕ್ರಿಯೆ
March 12, 2008 - 1:35pm — mahesha

ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ

mahesha's picture

"ಹೀಗಿರುವಾಗ, ಯಾವುದೇ ಒಂದು ನಾಮಪದ ವಾಕ್ಯದ ಕೊನೆಯಲ್ಲಿ ಬರುವುದಾದರೇ ಮಾತ್ರವೇ ನಾವು "ಉ" ಬಳಸುತ್ತೀವೆಯೇ ? ಎಂಬುದಕ್ಕೆ ಉತ್ತರ ಕಂಡುಹಿಡಿದುಕೊಳ್ಳಬೇಕು. ಚರ್ಚೆ ಮುಂದೆ ಸಾಗಲಿ.'

ಭಲಾ!!

ಹೊಸಕನ್ನಡದಲ್ ಹಲವ್ ಕ್ರಿಯಾಪದ/ಕ್ರಿಯಾರೂಪಗಳ್ ಅರೆವ್ಯಂಜನದಿಂದ ಕೊನೆಯಾಗ್ತವೋ.. ( ಬಂದಾನ್, ಹೋದಾನ್, ಬರೊನ್/ಬರುವನ್, ಬಂದಾಳ್, ಬಂದಳ್.. )

ಹೞಗನ್ನಡದಲ್ ಇದ್ ಹಾಗೆ ಇಲ್ಲು ಇದೆ ( ನಂಗೆ ಅನ್ನಿಸ್ತದೆ )

ನಾನ್ ಮುಂದಿಟ್ಟುರುವ ಸಂಗತಿ.. ಕನ್ನಡದ ನುಡಿ-ಒಳ-ಮಾಟದಲ್ಲೇ, ಅಂದ್ರೆ ಸಾಲ್-ರಚನೆ ಮಾಡಿದಾಗಲೇ ಪದಗಳಿಗೆ ’ಉ’ ಸೇರಿಸಿ, ಸೇರಿಸದೇ ನಾವ್ punctuation/ಬರಹ ಗುರುತುಗಳನ್ ತೋರಿಸ್ತೀವಿ/ಹೇಳ್ತೀವಿ..

ಮಾದರಿ:

ಅವನಾ ಬಲ್ ಗಾಟಿ ಹುಡುಗ = ಅವನಾ!? ಬಲ್ ಗಾಟಿ ಹುಡುಗ. ( ಇದನ್ ಕುರುಡಾಗಿ ಇಂಗ್ಲೀಸ್ಗೆ ತಂದ್ರೆ,,, he is a very tough guy ಅಂತ )
ನಾನ್ ಬಂದ್ ಮಲಗಿ ಪೇಟೆಗೆ ಹೋಗ್ ವ/ಬಂದೆ = ನಾನು ಬಂದು, ಮಲಗಿ, ಪೇಟಿಗೆ ಹೋಗಿ ಬಂದೆನು.

ಅಂದ್ರೆ, ಹಲವ್ ಸರತಿ ಕನ್ನಡದಾಗೆ punctuation ಗುರುತುಗಳ್ ಇರ್ದಿದ್ರೂ ನಡೇತದೆ. ನಾವ್ ಪದಗಳ್ ರಚನೆ/ಒಳವು ಅದರ ಕೊನೆ ನೋಡಿಕೊಂಡ್ ಎಲ್ಲಿ comma, ಎಲ್ಲಿ full stop ಎಂದು ಹಲವ್ ಸರತಿ ಪತ್ತೆ ಹಚ್‌-ಬೋದು.

ಇವುಗಳ ಬಗ್ಗೆ ಒಸಿ ಆರಯ್ ಹೆಚ್-ನಡೇಬೇಕು

  • Login or register to post comments
  • link
  • Email this ಪ್ರತಿಕ್ರಿಯೆ
March 12, 2008 - 6:10pm — ಸಂಗನಗೌಡ

ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ

ಸಂಗನಗೌಡ's picture

ಮಹೇಸ್ ... ನಮ್ ಬಡಗಣ ಕರ್ನಾಡಿನ್ಯಾಗ್ ನಾವ್.. ’ಉ’ಯಿಂದ ಕೊನೆ ಮಾಡೂದs ಇಲ್.
ನೀವ್ ಕೊಟ್ಟಿರೋ ಮಾದರಿಗಳನ್ನs ತುಗೊಂಡ್ರ.. ಅವ್ ಹಿಂಗ್ ಆಗ್ತಾವ್...

ಬ: ನೀರು ಬೇಕು
ಮಾ: ನೀರ್ ಬೇಕ್

ಬ: ಬೇಕಾ ನೀರು
ಮಾ: ಬೇಕನ್ ನೀರ್ (ಬೇಕನ್ = ಬೇಕೇನು)

ಬ: ಅದು ಬಂತು
ಮಾ: ಆದ್ ಬತ್

ಬ: ಬಂತು ಅದು
ಮಾ: ಬತ್ ಆದ್

ನಮ್ ಮನಿ
ನನ್ ಕೈ
ನಾವ್ ಕನ್ನಾಡಿಗ್ರ್
ಕನ್ನಾಡಿಗ್ರ್ ನಾವ್

’ಉ’ಯಿಂದ ಕೊನಿ ಮಾಡಿದ್ರುಪ್ಲೆ ಕನ್ನಡ ಆಗಿ ಬಿಡ್ತೈತಿ ಅನ್ನುದ್ ಯಾಕೋ ಸರಿ ಅನ್ಸುದಿಲ್...

  • Login or register to post comments
  • link
  • Email this ಪ್ರತಿಕ್ರಿಯೆ
March 13, 2008 - 8:45am — mahesha

ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ

mahesha's picture

ಹುಂ...

ಒಂದ್ ಸಂಗತಿ ಇದೆ ಇಲ್ಲಿ ಬಡಗುಗನ್ನಡದ ಬಗ್ಗೆ... ಅದನ್ ಬೇರೆಯಾಗೇ ತಗೊಳ್ಳುಮ..( ’ಕನ್ನಡ ನುಡಿ ನಡೆದು ಬಂದ ದಾರಿ’ ಈ ಹೊತ್ತಗೆಯಲ್ ಇದೆ. ನೋಡಿ ಬರೇತೀನಿ )

ನೀವೂ ಕೂಡ ಒಂದ್ ಬಗೆಯ ಉ ಇಂದಲೇ ಕೊನೆ ಮಾಡೋದು. ಆ ’ಉ’ ತೆಂಕುಗನ್ನಡಿಗರ ಉಗಿಂತ ತುಸು ಬೇರೆ..!! ಆ ಹೊತ್ತೆಗೆಯಲ್ಲಿದೆ. ಬಡಗುಗನ್ನಡಿರು ಎರಡು ’ಅ’ಗಳನ್ ಉಲಿತಾರ. ಕತ್ತಿ(ಕತ್ತೆ) ಮತ್ತು ಕತ್ತಿ/ಕತ್ತಿ ಈ ಎರಡ್ ಒರೆಗಳನ್ ನೀವ್ ಉಲಿದಾಗ ಕ ಅಲ್ಲಿರೊ ’ಅ’ ಬೇರೆ ಬೇರೆ...

ನಿಮ್ accent ಅಲ್ಲಿ ಹಲ-ನಿಬ್ಬರ/ವಿಶೇಶತೆಗಳ್ ಇವೆ... ಅದನ್ ನೀವ್ ಸರಿಯಾಗಿ ಗುರುತ್ ಮಾಡ್-ಬೇಕು.!

ತೆಂಕುಗನ್ನಡಿಗರ accent ಅಲ್ಲಿ ನಿಮ್ accent ಅಶ್ಟ್ ಹೆಚ್-ಸೊರ/vowelಗಳಿಲ್ಲ...!!

ಸಂಗನ...

ಸಂಗತಿ ಹಿಂಗಪ್ಪ...

ಸಾಮಾನ್ಯ ದ್ರಾವಿಡನುಡಿಗಾರರ್‍ ಮಾತಾಡೊವಾಗ ಮಾತಿನ ಕೊನೆಯನ್ನು ಒಂದು ಸೊರ/vowel( ತಮಿಳೂ ಕೂಡ, ಅವರೂ ಒಂದ್ ಬೇರೆ ಬಗೆಯ ಉ ಉಲಿತಾರ ) ಇಂದ ಇಲ್ವೇ ಅಂ/ಅನುಸ್ವರದಿಂದ ಮಾಡ್ತಾರೆ. ತೆಲುಗಲ್ಲಂತೂ ಇದ್ ಇನ್ನೋ ಹೆಚ್ಚಂತೆ.. ಅದಕ್ಕೆ ಅದು Italian of east.

ನನಗೆ ತಿಳಿದಂತೆ ಹೆಚ್ ಕನ್ನಡದೋರ್‍ ಕೂಡ ಮಾತಿನ ಕೊನೆ ಸೊರದಿಂದಲೇ ಮಾಡ್ತಾರೆ...

ಎಲ್ಲ ಕಡೆ ಉ-ಇಂದ ಕೊನೆ ಮಾಡಿದ್ರೆ ಕನ್ನಡ ಅಲ್ಲ ಅಂತ ತೋರೋದೇ ಈ ಚರ್ಚೆಯ ಗುರಿ, ಸಂಗನ...!

ನನ್ನಿ.. !

  • Login or register to post comments
  • link
  • Email this ಪ್ರತಿಕ್ರಿಯೆ
March 13, 2008 - 5:13pm — ಸಂಗನಗೌಡ

ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ

ಸಂಗನಗೌಡ's picture

ಬಳಾ ಚಾಂಗ್... ಒಪ್ಪಿದೆ... Smiling

  • Login or register to post comments
  • link
  • Email this ಪ್ರತಿಕ್ರಿಯೆ
March 13, 2008 - 8:40pm — ವೈಭವ

ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ

ವೈಭವ's picture

ಹೌದ್ ಹೌದ್ ಮಯೇಸ,
ಎಲ್ಲ ಕಡೆ 'ಉ' ಹಾಕದ್ರೆ ಕನ್ನಡ ಆಗಲ್ಲ.

ಶಂಕರಬಟ್ರ 'ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹುದು" ಹೊತ್ತಿಗೆಯಲ್ಲಿ ಹೇಳಿರೊ ಹಾಗೆ ಹಳೆಗನ್ನಡ(ಅಲ್ಲ ಹಿರಿಗನ್ನಡ)ದಲ್ಲಿ ಸೊರಗಳಿಂದ ಕೊನೆಗಳ್ಳುವ ಪದಗಳೇ ಇರಲಿಲ್ಲ ಅಂದಿದಾರೆ. ಅದಕ್ಕೆ ಹಳೆಗನ್ನಡದಲ್ಲಿ ಬರೀ ಆದೇಶ ಸೇರಿಕೆ ಆಗೋದು. ಬಿಟ್ಟು ಹೋಗುವ(ಲೋಪ), ಹೊಸದಾಗಿ ಬರುವ(ಆಗಮ) ಸೇರಿಕೆ ಹಿರಿಗನ್ನಡದಲ್ಲಿ ಇಲ್ಲ ಅಲ್ವ?

ನಮ್ಮ ಆಡುಮಾತು(ಅದ್ರಲ್ಲೂ ಹಳ್ಳಿಗಳ ಆಡುಮಾತು) ಇನ್ನು ಹೆಚ್ಚು ಹಿರಿಗನ್ನಡಕ್ಕೆ ಹತ್ತಿರವಿದೆ.

-----
ಕನ್ನಡದ ನೋಂಪಿಗೆ ನಾ ಮುಡಿಪು
ನೋಂಪು= ವ್ರತ

  • Login or register to post comments
  • link
  • Email this ಪ್ರತಿಕ್ರಿಯೆ
March 14, 2008 - 7:25am — mahesha

ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ

mahesha's picture

ಹವುದು... ನೀವ್ ಹೇಳೋದ್ ಸರಿ....

ಆದ್ರೆ ನಾನ್ ಹೇಳ್ತಾ ಇರೋದೂ, ಪದಗಳ ಕೊನೆಯ ಕುರಿತಲ್ಲ, ಸಾಲ್ಗಳ ಕೊನೆಯ ಬಗ್ಗೆ.

ನಾವ್ ಸಾಲು/ವಾಕ್ಯವನ್ನು ಸೊರದಿಂದಲೇ ಕೊನೆಮಾಡೋದು..( ಕನ್ನಡದಾಗೆ ೦ ಅನುಸ್ವರದಿಂದ ಕೊನೆಯಾಗೋದ್ ಬಲು ಕಡಮೆ ಆಗೋದಿದೆ ಅಲ್ವ)

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು
  • ಕನ್ನಡದಲ್ಲಿ ಒರ್ಕುಟು ಬೇಕಾ?
  • ಕರ್ನಾಟಕ ನೀರಿಗೆ ದುಡ್ಗು ಕೊಡಬೇಕಂತೆ!!!
  • ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?
  • ನಾವು ಕನ್ನಡಿಗರು ಯಾಕೆ ವಿಲನ್ ಆಗುತ್ತಿವಿ ಪ್ರತಿಬಾರಿ ??
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator