ಯಾರ ಸಾಹಿತ್ಯ
ನಾನು ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯವನ್ನು ಓದಲು ಶುರು ಮಾಡಿದ್ದೇನೆ. ಸ್ವಲ್ಪ ಭೈರಪ್ಪನವರು, ಬೀಚಿ, ಶಿವರಾಮ ಕಾರಂತರನ್ನು ಓದಿದ್ದೇನೆ. ನನಗೆ ಇತ್ತೀಚಿನ ಸಾಹಿತಿಗಳ ಬಗ್ಗೆ ಸಾಕಷ್ಟು ಅರಿವಿಲ್ಲದ ಕಾರಣ, ಇಲ್ಲಿರುವ ನವಸಾಹಿತ್ಯಾಭಿಮಾನಿಗಳಿಂದ ಹೊಸ ಸಾಹಿತಿಗಳ, ಹಾಗೂ ಸಾಹಿತ್ಯದ ಬಗ್ಗೆ ತಿಳಿಸಬೇಕಾಗಿ ಕೇಳುತ್ತಿದ್ದೇನೆ. ನನಗೆ ಕೆಲವು ಹೊಸ ಉತ್ತಮ ಪುಸ್ತಕಗಳ ಬಗ್ಗೆ ಮಾಹಿತಿ ಕೊಟ್ಟರೆ ಸಾಕು. ಕೊಂಡು ಓದುತ್ತೇನೆ.

- Login or register to post comments
- 654 hits
- Email this forum




RSS:
ಉ: ಯಾರ ಸಾಹಿತ್ಯ
ತೇಜಸ್ವಿ ಅವರ ಪುಸ್ತಕಗಳು
ತೂಫಾನ್ ಮೇಲ್ - ಜಯಂತ ಕಾಯ್ಕಿಣಿ.
ಬಣ್ಣದ ಕಾಲು - -----"------
ಕಾಯ್ಕಿಣಿ ಕಥೆಗಳು. -----"------
ಮತ್ತೊಬ್ಬನ ಸಂಸಾರ - ವಿವೇಕ ಶಾನಭಾಗ
ಒಂದು ಬದಿಯ ಕಡಲು --------"-------
ರಾಘವೇಂದ್ರ ಖಾಸನೀಸರ ಸಮಗ್ರ ಕಥೆಗಳು
ನಮ್ಮಮ್ಮ ಅಂದ್ರೆ ನನಗಿಷ್ಟ- ವಸುಧೇಂದ್ರ
ಮನಿಷೆ -----"------
ಯುಗಾದಿ ------"-----
ಚೇಳು ------’-------
ಕೋತಿಗಳು ಸಾರ್ ಕೋತಿಗಳು ----"----
ನೇಮಿಚಂದ್ರರ ಕಥೆಗಳು - ನೇಮಿಚಂದ್ರ
ಜೋಗಿ ಕಥೆಗಳು - ಗಿರೀಶ್ ರಾವ್
ಪುಟ್ಟ ಪಾದದ ಗುರುತು - ಸುನಂದ ಪ್ರಕಾಶ ಕಡಮೆ.
ಉ: ಯಾರ ಸಾಹಿತ್ಯ
ನಿಮ್ಮ ಸಲಹೆಗಳಿಗೆ ವಂದನೆಗಳು.
ಉ: ಯಾರ ಸಾಹಿತ್ಯ
ನನ್ನ ಮೊದಲ ಕಾದಂಬರಿ ಸಂಸ್ಕಾರ!
ಆಮೇಲೆ ಗೃಹಭಂಗ
ಶಿವರಾಮ ಕಾರಂತರ ’ಚೋಮನ ದುಡಿ’ ಎಲ್ಲದಕ್ಕಿಂತ ಅಚ್ಚುಮೆಚ್ಚು.!
ಉ: ಯಾರ ಸಾಹಿತ್ಯ
ನಾನು ಇದುವರೆಗೂ ಓದಿದ್ದು.
ಭೈರಪ್ಪ -
ದಾಟು, ಗೃಹಭಂಗ, ಪರ್ವ, ಆವರಣ
ಶಿವರಾಮ ಕಾರಂತ -
ಮೂಕಜ್ಜಿಯ ಕನಸುಗಳು, ಮೈ ಮನಗಳ ಸುಳಿಯಲ್ಲಿ, ಕೇವಲ ಮನುಶ್ಯರು
ಬೀಚಿ-
ಆರಿದ ಚಹಾ, ಸರಸ್ವತಿ ಸಂಹಾರ, ಆಟೊ
ತೇಜಸ್ವಿ-
ಕಿರಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ
ಉ: ಯಾರ ಸಾಹಿತ್ಯ
ಕಾರಂತರು ಬರೆದ "ಬೆಟ್ಟದ ಜೀವ" ಪುಸ್ತಕದ ಬಗ್ಗೆ ಯಾರೂ ಬರೆದಂತಿಲ್ಲ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಯಾರ ಸಾಹಿತ್ಯ
ಬೆಟ್ಟದ ಜೀವ ಚನ್ನಾಗಿದೆ..ಚಿಕ್ಕ ಚೊಕ್ಕ ಕಾದಂಬರಿ..
ಉ: ಯಾರ ಸಾಹಿತ್ಯ
ಭೈರಪ್ಪ ಅವರ ನಿರಾಕರಣ ಓದಿ...
ನನಗೆ ಅದನ್ನ ಓದಿ ಮೂರುದಿನ ಅನ್ನ ಸೇರಲಿಲ್ಲ.... ಎಶ್ಟು ಹಿಂಸೆ ಆಗ್ತಿತ್ತು ಒಳಗೆ ಅಂದ್ರೆ.. ಯಪ್ಪ..!!
.. ಕೊನೆಗೆ ಯಾಕಾದ್ರೂ ಓದಿದೆ ಅನ್ನಿಸಿತು..
’ಸಾರ್ಥ’ ಮತ್ತೊಂದು ಒಳ್ಳೆಯ ಕಾದಂಬರಿ.
ಉ: ಯಾರ ಸಾಹಿತ್ಯ
ನನ್ನ ಅನಿಸಿಕೆ: ಬಿ ಜಿ ಎಲ್ ಸ್ವಾಮಿಯವರ ಪುಸ್ತಕಗಳು (ಹಸುರು ಹೊನ್ನು, ದೌರ್ಗಂಧಿಕಾಪಹರಣ, ಮೈಸೂರು ಡೈರಿ, ಅಮೇರಿಕದಲ್ಲಿ ನಾನು, ತಮಿಳು ತಲೆಗಳ ನಡುವೆ, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ, ಕಾಲೇಜು ರಂಗ ಮುಂತಾದವು) ಹಾಗೂ ಪೂರ್ಣ ಚಂದ್ರ ತೇಜಸ್ವಿಯವರ ಪುಸ್ತಕಗಳು (ಪರಿಸರದ ಕಥೆ, ಕರ್ವಾಲೋ, ಅಬಚೂರಿನ ಪೋಸ್ಟ್ ಆಫೀಸು ಮುಂತಾದವು) ಇತ್ತೀಚೆಗಷ್ಟೆ ಓದಲು ಪ್ರಾರಂಭಿಸಿದವರಿಗೆ ಒಳ್ಳೆಯ ಓದು. ತುಂಬಾ ಸರಳ ಭಾಷೆಯಲ್ಲಿವೆ.
ಬಹುಶಃ ಕಾರಂತರ ಪುಸ್ತಕಗಳು ಈ ಪುಸ್ತಕಗಳನ್ನು ಓದಿದ ನಂತರ ಓದುವುದು ಉತ್ತಮ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಯಾರ ಸಾಹಿತ್ಯ
Sorry, writting in English.........
Read "Purushothhama" of Yashavanth Chittal.
"Awadheswari of Shankara Mokasi Punekar.
The best books in Kannada.
ಉ: ಯಾರ ಸಾಹಿತ್ಯ
ನಮಸ್ಕಾರ, ಈಗ ಕನ್ನಡದಲ್ಲಿ ಬರೆಯ ಬಹುದು, ಇನ್ನುಮುಂದೆ ಕನ್ನಡದಲ್ಲೆ ಬರೆವೆ.
ಉ: ಯಾರ ಸಾಹಿತ್ಯ
ಶಂಕರ ಮೊಕಾಶಿ ಪುಣೇಕರರ ’ಗಂಗವ್ವ ಗಂಗಾಮಾಯಿ’ ಓದಿ. ಬಹಳ ಚನ್ನಾಗಿದೆ.
ಮಲೆನಾಡಿನ ಕಥಾವಸ್ತು / ಭಾಷೆಗಾಗಿ ತೇಜಸ್ವಿ ಬರೆದ ಪರಿಸರದ ಕಥಗಳು , ಅಣ್ಣನ ನೆನಪುಗಳು , ಮಾಯಾಲೋಕ, ಕುವೆಂಪು ಬರೆದ ಕಾನೂರು ಹೆಗ್ಗಡಿತಿ
ಅರೆಮಲೆನಾಡು - ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ,
ಬಯಲು ಸೀಮೆ / ಉತ್ತರ ಕರ್ನಾಟಕ - ಕಂಬಾರರ ಸಿಂಗಾರವ್ವ ಮತ್ತು ಅರಮನೆ, ರಾವಬಹದ್ದೂರರ ಗ್ರಾಮಾಯಣ
ಕರಾವಳಿ - ಕಾರಂತರ ಮರಳಿ ಮಣ್ಣಿಗೆ
ಹಾಸನದ ಕಡೆಯ ಹಳ್ಳಿ ಜೀವನ - ಗೊರೂರರ ನಮ್ಮ ಊರ ರಸಿಕರು ಮತ್ತು ಅವರ ಇನ್ನೂ ಅನೇಕ ಸಂಕಲನಗಳು
ಇತ್ಯಾದಿ ಇತ್ಯಾದಿ ಇತ್ಯಾದಿ
ಉ: ಯಾರ ಸಾಹಿತ್ಯ
ಕಾರಂತರ ಅಳಿದ ಮೇಲೆ, ಸ್ವಪ್ನದ ಹೊಳೆ, ಭೈರಪ್ಪನವರ ಮತದಾನ, ವಂಶವೃಕ್ಷ, ಗ್ರಹಣ
ತ ರಾ ಸು ರವರ ದುರ್ಗಾಸ್ತಮಾನ ನನಗೆ ಇಷ್ಟವಾದವುಗಳಲ್ಲಿ ಕೆಲವು
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಯಾರ ಸಾಹಿತ್ಯ
ಇಷ್ಟೊಂದು ಮಾಹಿತಿ ನೀಡಿದ್ದಕ್ಕಾಗಿ ಅಭಿನಂದನೆಗಳು.