ಬುದ್ದ
ಇತಿಹಾಸದಲ್ಲಿ ಬರುವ ಗೌತಮ ಬುದ್ದ ಮತ್ತು ಪುರಾಣಗಳಲ್ಲಿ ಬರಿವ ದಶಾವತಾರದ ಬುದ್ದ ಬೇರೆ ಎಂದು , ಒಬ್ಬ ಸ್ನೇಹಿತರು (ದೇವರಲ್ಲಿ ತುಂಬಾ ನಂಬಿಕೆಯಿಟ್ಟವರು ಮತ್ತು ಪುರಾಣಗಳನ್ನು ಓದಿ ಕೊಂಡವರು) ಹೇಳುತ್ತಿದ್ದರು, ಆದರೆ ವಿವರಗಳನ್ನು ಕೇಳಿದರೆ, ಹೇಳಲು ನಿರಾಕರಿಸಿದರು.
ಬಲ್ಲವರು ಇದರ ಬಗ್ಗೆ ಸಂಪದಿಗರಿಗೆ ತಿಳಿಸ ಬೇಕೆಂದು ಕೋರುತ್ತೇನೆ.
ನಮಸ್ಕಾರಗಳೊಂದಿಗೆ........

- Login or register to post comments
- 464 hits
- Email this forum




RSS:
ಉ: ಬುದ್ದ
ವೈದಿಕ ಧರ್ಮವನ್ನು ಕಟುವಾಗಿ ಟೀಕಿಸಿದ ಬುದ್ಧನನ್ನೇ ಹತ್ತನೆಯ ಅವತಾರವಾಗಿಸಿದ್ದರ ಬಗ್ಗೆ ನಾನು ನನ್ನ ಬ್ಲಾಗಿನಲ್ಲಿ ಒಮ್ಮೆ ಬರೆದಿದ್ದೆ (http://uniquesupri.wordpress.com/2008/01/26/%e0%b2%a6%e0%b3%87%e0%b2%b5%...) .
ಅಲ್ಲಿ ಪ್ರತಿಕ್ರಿಯಿಸಿದ್ದ ನೀಲಾಂಜನರು ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನವೊಂದರ ಲಿಂಕು ಕೊಟ್ಟಿದ್ದರು ( http://thatskannada.oneindia.in/nri/article/210905buddha.html )
ಇವು ಚರ್ಚೆಗೆ ಸಹಾಯಕವಾಗಬಹುದು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಬುದ್ದ
ದಟ್ಸಕನ್ನಡದ ಲಿಂಕು ಕೆಲಸಗೈಯುತ್ತಿಲ್ಲ, ಯುನೀಕಸುಪ್ರಿ, ಸ್ವಲ್ಪ ಅತ್ತ ಕಡೆ ನೋಡಿ.
ಉ: ಬುದ್ದ
ತೆಗೆದು ಹಾಕಿದ್ದಾರೆ ಅನ್ನಿಸುತ್ತದೆ ಆ ಲೇಖನವನ್ನು... ನೋಡುತ್ತೇನೆ ನಾನು ಅದರ ಸ್ಕ್ರೀನ್ ಕ್ಲಿಪ್ಪಿಂಗ್ ತೆಗೆದುಕೊಂಡಿರಬೇಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಬುದ್ದ
ಹತ್ತವತಾರದ ಬುದ್ಧ ಬೇರೆ, ಬುದ್ದ ದಮ್ಮದ ಗವ್ತಮ ಬುದ್ದ ಬೇರೆ..
ಬುದ್ದ ದಮ್ಮದ ಗವ್ತಮ ಬುದ್ದನ ಬಗ್ಗೆ ನಮಗೆ ಗೊತ್ತು. ಸ್ಕೋಲಲ್ಲಿ ಓದಿರ್ತೀವಿ..
ಆದ್ರೆ ಹತ್ತವತಾರದ ಬುದ್ದ... ನಾನು ಓದಿದ ಒಂದು ಶ್ಲೋಕಗಳಂತೆ
ಒಬ್ಬ ಮಬ್ಬಿಗ/ನಿಶಾಚರ/ರಕ್ಕಸ ಇದ್ದ. ಅವನ ಹೆಂಡ್ರು ಸಿಕ್ಕಾಪಟ್ಟೆ ಗರತಿ/ಹದಿಬದೆ/ಪತಿವ್ರತೆ. ಅವಳಿಗೆ ಒಂದು ವರ ಇತ್ತು. ಅವಳು ಗರತಿಯಾಗಿ ರೋ ತನಕ ಅವನ ಗಂಡನ್ನ ಯಾರು ಕೊಲ್ಲತಾರರು ಅಂತ.
ಅದಕ್ಕೆ ಶ್ರೀಮನ್ ಮಹಾವಿಶ್ಣು ಚಲುವಾಂತ ಚನ್ನಿಗನಂತೆ ರೂಪ ತಾಳಿ, ಪೂರ ಬೆತ್ತಲೆಯಂಗೆ ಆಕೆಯ ಮುಂದೆ ಹೋಗಿ ನಿಲ್ತಾನಂತೆ. ಅವನ ಚೆಲುವು, ಮಯ್ಮಾಟ, ಕಟ್ಟು, ಕಟ್ಸು
, ಬಯ್ಸೆಪ್ಸು
ಮುಂತಾದವುಗಳನ್ನ ನೋಡಿ ಈಕೆ ಅವನ ಮೇಲೆ ಮನಸೋಲ್ತಾಳಂತೆ, ಅವನ್ನ ಕೂಡ ಬೇಟಬಯಸ್ತಾಳಂತೆ. ಆ ಬರ್ದಿಲರು/ದೇವತೆಗಳು ಆ ಮಬ್ಬಿಗನಂನು ಸಾಯ್ತಾರಂತೆ..
ಎಂತಾ ಪ್ಲಾನ್ ಅಲ್ವ!!
=====================================
ಮಾಯ್ಸ!
ಉ: ಬುದ್ದ
"ನಾನು ಓದಿದ ಒಂದು ಶ್ಲೋಕಗಳಂತೆ" ಇಲ್ಲಿ ಶ್ಲೋಕಗಳ ಮಾರ್/ಬದಲು ಸ್ತೋತ್ರ ಅಂತ ಬರೇಬೇಕಿತ್ತು...
ಈ ಸಿಂಗಾಪುರ ಬಾನೋಡವೀಡದಲ್ಲೀಗ ಮುಂಜಾನೆ ಎರಡುಗಂಟೆ ತುಸು ಮಂಪರು.! ಮನ್ನಿಸ್ರಿ.
====================================
ಮಾಯ್ಸ!
ಉ: ಬುದ್ದ
ಮಹೇಶ, ನನಗೂ ನೆನಪಾಗ್ತಾಯಿದೆ, ಪುರಂದರ ದಾಸರ ಪದದಲ್ಲಿ..."ಉಟ್ಟಿದ್ದ ಬಟ್ಟೆಯ ಬಿಸುಟಿದನೇ...." ಎಂಬ ಮಾತು ಬರುತ್ತದೆ... ಇದು ಬಹುಶ.. ಅದೇ ಇರ್ಬೇಕು.