ವ್ಯಾಕರಣದೋಷ
ಸಾಮಾನ್ಯವಾಗಿ ಪ್ರಜಾವಾಣಿ, ಕನ್ನಡಪ್ರಭ ಇತ್ಯಾದಿ ಹಾಗೂ ದೂರದರ್ಶನ ವಾಹಿನಿಗಳಾದ ಕಸ್ತೂರಿ, ಉದಯ, ಈಟಿವಿ ಮಾಡುವ ಸಾಮಾನ್ಯ ತಪ್ಪುಗಳು
ಜನಾರ್ಧನ ತಪ್ಪು ಜನಾರ್ದನ ಸರಿ
ಕೂಲಂಕುಷ ತಪ್ಪು ಕೂಲಂಕಷ ಸರಿ
ಸೃಷ್ಠಿ, ದೃಷ್ಠಿ ತಪ್ಪು ಸೃಷ್ಟಿ, ದೃಷ್ಟಿ ಸರಿ
ಉಪಹಾರ ತಪ್ಪು ಉಪಾಹಾರ ಸರಿ
ಇನ್ನು ಇತ್ಯಾದಿ ಇತ್ಯಾದಿ ತಪ್ಪುಗಳು.

- Login or register to post comments
- 553 hits
- Email this forum




RSS:
ಉ: ವ್ಯಾಕರಣದೋಷ
ಇವೆಲ್ಲ ತಪ್ಪುಗಳಾಗುವುದು ಕನ್ನಡದಲ್ಲಿ ಬಲವಂತವಾಗಿ ಮಹಾಪ್ರಾಣವಿಟ್ಟುಕೊಂಡಿರುವುದರಿಂದ. ಮತ್ತು ಈ ತಪ್ಪುಗಳು ಬರಹದಲ್ಲಿ ಮಾತ್ರ. ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ, ಉಲಿಯುವಿಕೆಯಲ್ಲಿ ಅಲ್ಪಪ್ರಾಣವೇ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ವ್ಯಾಕರಣದೋಷ
ವಯ್ಬವ ಅವರಿಗೆ ದನಿ ಸೇರಿಸುತ್ತಾ
ಕನ್ನಡದಲ್ಲಿ ಮಹಾಪ್ರಾಣಗಳಿಲ್ಲ..... ಋ ಇಲ್ಲ. ಷ ಇಲ್ಲ
ದಯವಿಟ್ಟು ಶಂಕರ ಬಟ್ಟರ ಹೊತ್ತಗೆಗಳನ್ನು ಓದಿ!
=====================================
ಮಾಯ್ಸ!
ಉ: ವ್ಯಾಕರಣದೋಷ
ಹೌದು ಸ್ವಾಮಿ,
ಆದರೆ ಅದನ್ನು ಕನ್ನಡದ ತನ್ನತನಕ್ಕೆ ಒಗ್ಗಿಸಿಕೊಂಡಾಗ ಮಾತ್ರ. ಈ ಸ್ವಾಮಿ ಎಂದು ನಿಮ್ಮನ್ನು ಸಂಬೋಧಿಸಿದ್ದನ್ನು ಸಂಪೂರ್ಣ ಕನ್ನಡಕ್ಕೆ ಒಗ್ಗಿಸಿಕೊಂಡದ್ದೆ ಆದರೆ ಆಗ ನಾನು ’ಹೌದು ಸಾವಿ’ ಎನ್ನಬೇಕಾಗುತ್ತದೆ. ಕೇಶಿರಾಜನ ಶಬ್ದಮಣಿದರ್ಪಣದ ಅಪಭ್ರಂಶಪ್ರಕರಣ ಪದ್ಯ ೨೭೭ನ್ನು ಗಮನಿಸಿ.
ಉ: ವ್ಯಾಕರಣದೋಷ
"ಅದನ್ನು ಕನ್ನಡದ ತನ್ನತನಕ್ಕೆ ಒಗ್ಗಿಸಿಕೊಂಡಾಗ" ಅದೇ ಬೇಕಾಗಿ ಇರೋದು...
ಶಂಕರ ಬಟ್ಟರ ಹೊತ್ತಗೆ!
=====================================
ಮಾಯ್ಸ!