ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

May 28, 2008 - 10:21pm — ವೈಭವ

ಈಚೆಗೆ 'ಸುದಾ'ವಾರದೋಲೆಯಲ್ಲಿ 'ಹೆಣ್ಹೆತ್ತ'(ಣ್ ಕ್ಕೆ ಹ ಒತ್ತು) ಪದ ನೋಡ್ದೆ. ಇದು ತಪ್ಪು ಬರಹ.
ನಾವು ಉಲಿಯುವಾಗ 'ಹೆಣ್ಣೆತ್ತ'(ಣ ಗೆ ಣ ಒತ್ತು) ಅಂತನೇ ಉಲಿಯಿವುದು.

ಹಾಗೆಯೆ,
 ಬೊಮ್ಮನಳ್ಳಿ,  ಹೆಸರಿಟ್ಟು,  ಬಂದ್ವೋಗು(ಬಂದೋಗು),  ಸಿಮ್ಮ  ಅಂತನೇ ಉಲಿಯುವುದು. ಇವೇ ಸರಿಯಾದ ಬರಹ ರೂಪಗಳು

ಕಟ್ಟಳೆ:
ಹೊಸಗನ್ನಡದಲ್ಲಿ ಯಾವಾಗಲೂ ಎರಡೂ ಪದಗಳ 'ಕೂಡಿಕೆ' ಆದಾಗ, ಎರಡನೆ ಪದದ ಮೊದಲಕ್ಕರ 'ಹ' ಇದ್ದರೆ ಅದು ಕೂಡಿಕೆ ಆದ ಮೇಲೆ ಇರುವುದಿಲ್ಲ.
ಒಮ್ಮೆ  ಹ->ವ ಆದರೆ ಹಲವು ಕಡೆ 'ಹ' ಬಿದ್ದು ಹೋಗುತ್ತದೆ(ಲೋಪವಾಗುತ್ತದೆ).

ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹೇಳಿ

‹ ಛಂದಸ್ಸು ಪ್ರಾಸ ಬೇಡವೇ? Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 708 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 28, 2008 - 10:46pm — hamsanandi

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

hamsanandi's picture

ವೈಭವರೆ,

ನಾನು ಮಾತಾಡುವಾಗ, ಹೆಣ್ಹೆತ್ತವರು, ಬಂದ್‍ಹೋದವರು (ಅಥವಾ ಬಂಧೋದವರು), ಬೊಮ್ಮನಹಳ್ಳಿ, ಸಿಂಹ ಅಂತಲೇ ಹೇಳ್ತೀನಿ. ಹಾಗಾಗಿ, ಈ ಬರವಣಿಗೆಯಲ್ಲಿ ನನಗೆ ತಪ್ಪು ಕಾಣಲಿಲ್ಲ. ಅದು ನಮ್ಮ ರೂಢಿಯ ಮೇಲೆ ಹೋಗುತ್ತೆ - ಅಲ್ಲವೇ? Smiling

ಇವುಗಳಲ್ಲಿ ಬೊಮ್ಮನಹಳ್ಳಿ ಅನ್ನೋದು ಕೂಡಿಕೆ ಪದವೂ ಅಲ್ಲ (ಹೆಣ್ಣು+ಹೆತ್ತವರು ಇಲ್ಲಿ ಆಗುವಂತೆ ಉಕಾರ ಲೋಪವಾಗಿಲ್ಲ , ಗಮನಿಸಿ). ಬೊಮ್ಮನಳ್ಳಿ ಅಂತ ಹೇಳಿದ್ರೇನೂ ತಪ್ಪಿಲ್ಲ, ಹಾಗೇ ಬೊಮ್ಮನಹಳ್ಳಿ ಅಂತ ಹೇಳಿದ್ರೆ, ಬರೆದರೆ ಕೂಡಾ ತಪ್ಪಿಲ್ಲ ಅನ್ನೋದು ನನ್ನ ಭಾವನೆ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 8:41am — mahesha

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

mahesha's picture

ನೀವು ಹೇಳೋದು ಸರಿ...

ಬಿಟ್ಟೋಯ್ತು, ಬಿಸ್ಸಾಕು, ಬಿಟ್ಟಾಕು, ಎತ್ತಾಕು, ಹೊಟ್ಟೋಗು(ಹೊರಟು ಹೋಗು)..

ನಡುವೆ ಬರುವ ’ಹ’ ಅಂತೂ ಹಲಮಂದಿ ಬಿಟ್ಟಾಕ್ತಾರೆ Smiling

ಬಂದು ಹೋಗು => ಬಂದೋಗು. ಬಂದ್ವೋಗು ಎಂದು ಕೇಳಿಲ್ಲ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 10:50pm — kannadakanda

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

kannadakanda's picture

ಈ ’ಹ’ ಬಿದ್ದು ಹೋಗುವುದು ಕೇವಲ ತೆಂಕನ್ನುಡಿಗರಲ್ಲಿ ಮಾತ್ರ ಕಾಣುವ ವಿಶೇಷ. ಅದಱಲ್ಲೂ ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಕೊಡಗು, ಬೆಂಗಳೂರು, ತುಮಕೂರು ಈ ಜಿಲ್ಲೆಗಳ ಕಲಿಯದ ಹಳ್ಳಿಗರ ಮಾತುಗಳಲ್ಲಿ ಕಾಣಬರುತ್ತದೆ. ಇದನ್ನು ಸಾರ್ವತ್ರೀಕರಿಸಲಾಗದು. ನೋಡಿ ರನ್ನ ಹೇೞಿದ ಮುದುವೊೞಳ್ ಮುದು+ಪೊೞಲ್->ಮುದು+ಹೊೞಲ್-> ಮುದು+ಹೊಳಲ್ ಆಗಿ ಮುಧೋಳವಾಗಿಬಿಟ್ಟಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 11:05pm — kannadakanda

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

kannadakanda's picture

ಈ ’ಹ’ ಬಿದ್ದುಹೋಗುವುದು ಬಱಿ ತೆಂಕನ್ನುಡಿಗರಲ್ಲಿ ಮಾತ್ರ ಅದಱಲ್ಲೂ ಚಿಕ್ಕಮಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು, ರಾಮನಗರಂ, ಬೆಂಗಳೂರು, ಮೈಸೂರು, ತುಮಕೂರು ಮತ್ತು ಕೊಡಗು ಈ ಜಿಲ್ಲೆಗಳ ಕಲಿಯದ ಹಳ್ಳಿಗರ ಬಾಯಲ್ಲಿ ಮಾತ್ರ. ಆದರೆ ರನ್ನನ ಊರಾದ ಮುದುವೊೞಲು ಬಡಗನ್ನುಡಿಗರಲ್ಲಿ ಮುಧೋಳ. ಯಾಕೆಂದರೆ ಅವರಲ್ಲಿ ’ಹ’ ಇದೆ. ಈ ಮುದುವೊೞಲು-> ಮುದು+ಪೊೞಲು-> ಮುದು+ಹೊೞಲು -> ಮುದು+ಹೊಳಲು-> ಮುಧೋಳ.ಆದ್ದಱಿಂದ ’ಹ’ ಬಿದ್ದುಹೋಗುವುದನ್ನು ಸಾರ್ವತ್ರೀಕರಿಸಲಾಗುವುದಿಲ್ಲ. ಹೆಚ್ಚಿನ ಜನರಲ್ಲಿ ’ಹ’ ಇದೆ. ಬಡಗನ್ನುಡಿಗರಲ್ಲಿ ಮತ್ತು ನಡುಗನ್ನುಡಿಗರ ಒಟ್ಟು ಸಂಖ್ಯೆ ತೆಂಕನ್ನುಡಿಗರ ಸಂಖ್ಯೆಗಿಂತ ಹೆಚ್ಚು. ಮತ್ತು ಎಲ್ಲಾ ವಿದ್ಯಾವಂತ ಕನ್ನುಡಿಗರಿಗೆ ’ಹ’ ಗೊತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 9:33pm — ವೈಭವ

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

ವೈಭವ's picture

ಕನ್ನಡಕಂದರೆ,
ನಿಮ್ಮ ಎಣಿಕೆ ತಪ್ಪಾಗಿದೆ ಅಂತ ನನ್ನ ಎಣಿಕೆ. Smiling

ನಾವು, ಅಂದರೆ ಕಲಿತ ತೆಂಕುಗನ್ನಡಿಗರಿಗೆ 'ಹ' ಗೊತ್ತು. ಆದರೆ ಇಂದಿಗೂ ನಮ್ಮ ಆಡುಮಾತಿನಲ್ಲಿ 'ಹ' ಬಿಟ್ಟೋಗಿರುತ್ತದೆ(ಬಿಟ್ ಹೋಗಿರುತ್ತದೆ ಅಲ್ಲ).

ಹಾಗೆಯೆ, ಬಡಗುಗನ್ನಡ ನಾಡಿನಲ್ಲಿ ಕೂಡ ಹಳ್ಳಿಗಳ ಕಡೆ 'ಹ' ಬಿದ್ದು ಹೋಗಿದೆ. ಯಾಕಂದರೆ ಅವರು ಕೂಡ 'ಬರಾಕತ್ಯಾನ' ಅಂತಾರೆ ವೊರತು 'ಬರ್ಹಾಕ ಹತ್ಯಾನ' ಅನ್ನಲ್ಲ. ನೀವು ಹೇಳಿದ ಹಾಗೆ 'ಮುಧೋಳ'ದಲ್ಲಿ 'ಹ' ಇದ್ದರೆ 'ಬೆಟ್ಟಿ' ಯಲ್ಲೂ ಕೂಡ ಹ ಇರಬೇಕಿತ್ತಲ್ಲವ. ಬಡಗುಗನ್ನಡಿಗರು ಕೂಡ 'ಬೆಟ್ಟಿ' ಅನ್ತಾರೆ ವೊರತು 'ಭೇಟಿ' ಅಂತ ಹೆಚ್ಚು ಮಂದಿ ಹೇಳಲ್ಲ. ಅಲ್ವ?

ಸಂಗನ, ಈ ಕಡೆ ವಸಿ ನೋಡಪ್ಪ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 9:47am — kannadakanda

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

kannadakanda's picture

ನೀವು ಹೇೞುವುದು ಸರಿ. ಆದರೆ ಶಿವಮೊಗ್ಗ, ಧಾರವಾಡ, ಹಾಗೆ ಬಡಗಿಗೆ ಹೋದಂತೆ ಬಡನುಡಿಗಳ ಪ್ರಭಾವದಿಂದ ಬಡಗನ್ನುಡಿಗರಿಗೆ ತೆಂಕನ್ನುಡಿಗರಿಗೆ ಕಷ್ಟ್ವವಾಗುವಷ್ಟು ’ಹ್’ ಕಷ್ಟ್ವವಲ್ಲ. ಚಿಕ್ಕಮಗಳೂರು, ಹಾಸನದ ಕನ್ನಡಿಗರು ’ಹಾಸನ’ ’ಹಕ್ಕಿ’ ಎನ್ನಲು, ’ಆಸನ’, ’ಅಕ್ಕಿ’ ಎನ್ನುತ್ತಾರೆ. ಅದಕ್ಕೆ ಇದನ್ನು ಹೇೞಿದ್ದು. ಆದರೆ ತೀರಾ ಹಳ್ಳಿಗರಾದ ಬಡಗನ್ನುಡಿಗರಿಗೆ ’ಹ’ ಅಪರಿಚಿತವಲ್ಲ. ಅವರದನ್ನು ಸರಾಗವಾಗೇ ಉಚ್ಚರಿಸುತ್ತಾರೆ. ನೀವು ಹೇೞುವ ಭೆಟ್ಟಿಯದು ’ಹ’ ಕ್ಕಿಂತ ಭಿನ್ನವಾದ ಮಹಾಪ್ರಾಣ. ’ಹ’ ಕಂಠದಿಂದಲ್ಲೆ ಹೊಱಡಬೇಕಾದ ಮಹಾಪ್ರಾಣ. ಉೞಿದ ಮಹಾಪ್ರಾಣಗಳಲ್ಲಿ ಕೊನೆಯಲ್ಲಿ ಸ್ವಲ್ಪ ಉಸಿರನ್ನು ಬಿಡಬೇಕಾಗುತ್ತದೆ. ಇದು ಎಲ್ಲಾ ಕನ್ನಡಿಗರಿಗೂ ಗೊತ್ತಿರದ ಮಹಾಪ್ರಾಣ. ಮಾನ್ಯ ಮಹೇಶ್‍ರವರು ಇದಕ್ಕೇನನ್ನುತ್ತಾರೋ ಕೇಳೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 9:50am — kannadakanda

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

kannadakanda's picture

ನಾನು ತಿಳಿದಂತೆ ಬರುತ್ತಿದ್ದಾನೆ ಎಂಬುದಕ್ಕೆ ಅವರು ಹೇೞೋದು ಬರಾಕ ಹತ್ಯಾನೆ. ಮಾತನಾಡುವ ವೇಗದಲ್ಲಿ ’ಹ್’ ಗೊತ್ತಾಗದಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 9:48am — kannadakanda

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

kannadakanda's picture

ನೀವು ಹೇೞುವುದು ಸರಿ. ಆದರೆ ಶಿವಮೊಗ್ಗ, ಧಾರವಾಡ, ಹಾಗೆ ಬಡಗಿಗೆ ಹೋದಂತೆ ಬಡನುಡಿಗಳ ಪ್ರಭಾವದಿಂದ ಬಡಗನ್ನುಡಿಗರಿಗೆ ತೆಂಕನ್ನುಡಿಗರಿಗೆ ಕಷ್ಟ್ವವಾಗುವಷ್ಟು ’ಹ್’ ಕಷ್ಟ್ವವಲ್ಲ. ಚಿಕ್ಕಮಗಳೂರು, ಹಾಸನದ ಕನ್ನಡಿಗರು ’ಹಾಸನ’ ’ಹಕ್ಕಿ’ ಎನ್ನಲು, ’ಆಸನ’, ’ಅಕ್ಕಿ’ ಎನ್ನುತ್ತಾರೆ. ಅದಕ್ಕೆ ಇದನ್ನು ಹೇೞಿದ್ದು. ಆದರೆ ತೀರಾ ಹಳ್ಳಿಗರಾದ ಬಡಗನ್ನುಡಿಗರಿಗೆ ’ಹ’ ಅಪರಿಚಿತವಲ್ಲ. ಅವರದನ್ನು ಸರಾಗವಾಗೇ ಉಚ್ಚರಿಸುತ್ತಾರೆ. ನೀವು ಹೇೞುವ ಭೆಟ್ಟಿಯದು ’ಹ’ ಕ್ಕಿಂತ ಭಿನ್ನವಾದ ಮಹಾಪ್ರಾಣ. ’ಹ’ ಕಂಠದಿಂದಲ್ಲೆ ಹೊಱಡಬೇಕಾದ ಮಹಾಪ್ರಾಣ. ಉೞಿದ ಮಹಾಪ್ರಾಣಗಳಲ್ಲಿ ಕೊನೆಯಲ್ಲಿ ಸ್ವಲ್ಪ ಉಸಿರನ್ನು ಬಿಡಬೇಕಾಗುತ್ತದೆ. ಇದು ಎಲ್ಲಾ ಕನ್ನಡಿಗರಿಗೂ ಗೊತ್ತಿರದ ಮಹಾಪ್ರಾಣ. ಮಾನ್ಯ ಮಹೇಶ್‍ರವರು ಇದಕ್ಕೇನನ್ನುತ್ತಾರೋ ಕೇಳೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 11:22am — kannadakanda

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

kannadakanda's picture

ಹೆಸಱುಹಿಟ್ಟು=ಹೆಸರ್ವಿಟ್ಟು=ಹೆಸರ್ಬಿಟ್ಟು
ಬೊಮ್ಮನಹಳ್ಳಿ=ಬೊಮ್ಮನವಳ್ಳಿ(ಹೊನ್ನ+(ಪ)ಹಳ್ಳಿ=ಹೊನ್ನವಳ್ಳಿ ಇದ್ದ ಹಾಗೆ ಕಿಸು+(ಪೊ)ಹೊೞಲು=ಕಿಸುವೊೞಲು ಅಥವಾ ಕುಲ+(ಪೆ)ಹೆಣ್ಣು=ಕುಲವೆಣ್ಣು ಇದ್ದ ಹಾಗೆ)
ಹೆಣ್+(ಪೆ)ಹೆತ್ತ=ಹೆಣ್ಬೆತ್ತ=ಹೆಂಬೆತ್ತ(ಕಣ್+ಪ(ಹ)ನಿ=ಕಂಬನಿ) ಹಾಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 11:23am — kannadakanda

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

kannadakanda's picture

ಸಿಂಹ=ಸಿಮ್ಮ(ಸರಿ) ಆದರೆ ನೀವು ಹೇೞಿದಂತೆ ಸಿಮ್ಹ ತಪ್ಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 6:56pm — ವೈಭವ

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

ವೈಭವ's picture

ನೀವು ಹೇಳುತ್ತಿರುವುದು ಸರಿ. ಆದರೆ ಆಡುಮಾತಿನಲ್ಲಿ ಅದು ಬೊಮ್ನಳ್ಳಿ ಮೇಣ್ ಬೊಮ್ಮನಳ್ಳಿಯೇ ಹೊರತು ಬೊಮ್ಮನವಳ್ಳಿಯಲ್ಲ. ಯಾಕೆ ಅಂತ ಗೊತ್ತಿಲ್ಲ.

ನೀವು ಹೇಳಿದ ಹಾಗೆ ಮಳ+ಪಳ್ಳಿ = ಮಳವಳ್ಳಿ
ಹೆಂಬೆತ್ತ ಸರಿ ಆದರೆ ಆಡುಮಾತಿನಲ್ಲಿರುವುದು ಹೆಣ್ಣೆತ್ತವರು ಅಂತಾನೆ. ನೀವು ಹಳ್ಳಿಯವರ ಮಾತನ್ನ(ಮೇಣ್ ಬೇರೆ ನುಡಿಗಳ ಸೋಂಕಿಲ್ಲದವರ) ಮಾತುಗಳನ್ನ ಗಮನಿಸಿ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 6:59pm — ವೈಭವ

ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

ವೈಭವ's picture

ನಮ್ಮ ಮಂಡ್ಯ, ಮಯ್ಸೂರು, ಚಾ.ನಗರ ಕಡೆಗಳಲ್ಲಿ ಹಿಟ್ಟು => ಇಟ್ಟು. (ಹ ಕಾರ ಬಿದ್ದು ಹೋಗಿದೆ)
ಹಾಗಾಗಿ, ಹೆಸರ+ಇಟ್ಟು = ಹೆಸರಿಟ್ಟು. ಇದೇ ಸರಿ ಮತ್ತು ಆಡುಮಾತಿನಲ್ಲಿ ಕೂಡ ಇದೆ.

ನೀವು ಹೇಳುತ್ತಿರುವುದು ಹಳೆಗನ್ನಡದ ವ್ಯಾಕರಣದ ಮಟ್ಟಿಗೆ ಸರಿ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಬೇಗರಣ ಕಟ್ಟಳೆಗಳು
  • ಕೂಡಕ್ಕರ(ಸಂಯುಕ್ತಾಕ್ಷರ) = ಸೊರಕೂಡು ಮತ್ತು ವೆಂಜನಕೂಡು
  • ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..
  • ಇ-ಮೇಲ್ ಬಗ್ಗೆ
  • ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
ಇನ್ನಷ್ಟು


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator