ಈಶ ಯಾರು?
ಈಶ ಈಶ್ವರಾನೆ?
ಅಥವ
ಈಶ ವಿಷ್ಣುವೆ?
ಈ ಹಾಡಿನಲ್ಲಿ " ಈಶ ನಿನ್ನ ಚರಣಾ ಭಜನೆ ಆಸೆಯಿಂಡ ಮಾಡುವೆ "
ಕೃಷ್ಣನ್ನನ್ನು ಉದ್ದೇಶಿಸಿ ಹೇಳಿದ್ದಾರೆ

- Login or register to post comments
- 783 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಈಶ ಈಶ್ವರಾನೆ?
ಅಥವ
ಈಶ ವಿಷ್ಣುವೆ?
ಈ ಹಾಡಿನಲ್ಲಿ " ಈಶ ನಿನ್ನ ಚರಣಾ ಭಜನೆ ಆಸೆಯಿಂಡ ಮಾಡುವೆ "
ಕೃಷ್ಣನ್ನನ್ನು ಉದ್ದೇಶಿಸಿ ಹೇಳಿದ್ದಾರೆ




ಉ: ಈಶ ಯಾರು?
ಯಾರು ಐಶ್ವರ್ಯದಾತನೋ ಅವನೇ ಈಶ್ವರ! ...
ಈಶ್ವರ ಅಂದ್ರೆ ಶಿವ ಅಂತ ಜನಪ್ರಿಯ ನಂಬಿಕೆ.
ಅಲ್ಲದೆ ಈಶ ಅಂದ್ರೆ ಒಡೆಯ / ನಾತ ಅನ್ನೋ ಅರ್ಥ ಬರುತ್ತೆ. ನನ್ನ ಪರಿಸರದಲ್ಲಿ ಈಶ ಅಂದ್ರೆ ಶಿವ.
ಅದು ಸಂಸ್ಕೃತಿ ಮೇಲೆ ದೆಪೆಂದ್ ಆಗಿರುತ್ತೆ.
ಕೃಷ್ಣ ಅಂದ್ರೂ ಸರೀನೆ....
ಸವಿತೃ
ಉ: ಈಶ ಯಾರು?
ನಾತ ಅಲ್ಲ.. ನಾಥ ಅಂತ ಸರಿಪಡಿಸಿಕೊಳ್ಳಿ!
ಸವಿತೃ
ಉ: ಈಶ ಯಾರು?
ಕ್ಷಮಿಸಿ, ಸವಿತೃ. ನಿಮ್ಮ ಪ್ರತಿಕ್ರಿಯೆ ನೋಡದೆ ನನ್ನದನ್ನು ಸೇರಿಸಿದೆ. ನಿಮ್ಮ ಮಾತನ್ನು ಒಪ್ಪುತ್ತೇನೆ.
ಪ್ರಭು ಮೂರ್ತಿ
ಉ: ಈಶ ಯಾರು?
ರೂಪಾ ಅವರೆ, ಈ ಎಳೆಯನ್ನು ಗಮನಿಸಿ, ಈಶ ಮತ್ತು ಈಷ ಇವೆರಡರ ವ್ಯತ್ಯಾಸವೇನು ?
ಉ: ಈಶ ಯಾರು?
ಸಾಮಾನ್ಯವಾಗಿ ಮಾಡುವ (ಕೇಶವ, ನಾರಾಯಣ, ಮಾಧವ, ಗೋವಿಂದ,...,ಹರಿ, ಕೃಷ್ಣ ಎಂಬ) ೨೪ ನಾಮಗಳ ಸ್ಮರಣೆಗಾಗಿ ಕನಕದಾಸರು ಮಾಡಿರುವ ೨೪ ಚರಣಗಳ ಪದ ಇದು. ಇಲ್ಲಿ ಯಾರಿಗೆ ಈ ೨೪ ಹೆಸರುಗಳು ಅನ್ವಯಿಸುತ್ತವೆಯೊ, ಅವನೇ ಈಶ ನಾಮವಾಚ್ಯನೂ ಆಗಿದ್ದಾನೆ
ಪ್ರಭು ಮೂರ್ತಿ
ಉ: ಈಶ ಯಾರು?
ಪ್ರಭು ಅವರೆ,
ಹೌದೇ? ಇದರಲ್ಲಿ ಇಪ್ಪತ್ತನಾಕು ಚರಣಗಳಿವೆಯೇ? ಸಾಹಿತ್ಯ ಇದ್ದರೆ ಹಾಕುತ್ತೀರಾ?
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಈಶ ಯಾರು?
ಹಿಂದೆ ವಿಚಿತ್ರಾನ್ನದಲ್ಲಿ ಈ ಹಾಡಿನ ಬಗ್ಗೆ ಬರೆದಿದ್ದರು. ಸಾಹಿತ್ಯವೂ ಇತ್ತು.
ಲಿಂಕ್ ಯಾಕೋ ಕೆಲಸ ಮಾಡ್ತಿಲ್ಲ http://thatskannada.oneindia.in/column/vichitranna/280904sankhyashastra....
ಉ: ಈಶ ಯಾರು?
೨೪ ಸಂಖ್ಯೆಯ ಬಗ್ಗೆ ವಿಚಿತ್ರಾನ್ನ ಸಂಚಿಕೆ:
http://thatskannada.oneindia.in/column/vichitranna/2004/280904sankhyasha...
ಉ: ಈಶ ಯಾರು?
ನಿಜವಾಗಲೂ ಇದರಲ್ಲಿ ೨೬ ನುಡಿಗಳು ಇವೆ. ಕೊನೆಯ ಎರಡನ್ನು ಫಲಶ್ರುತಿ ಎಂದುಕೊಳ್ಳಬಹುದು.
ಗೂಗಲ್ ಮಾಡಿದೆ. ಇದು ಸಿಕ್ತು.
http://www.geocities.com/harshala_rajesh/keshavanamameaning.htm
ಪ್ರಭು
ಉ: ಈಶ ಯಾರು?
ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।। 1 ।।
ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।। 2 ।।
ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ । ಬಿಡಿಸು ಮಾಧವಾ ।। 3 ।।
ಹಿಂದನೇಕ ಯೋನಿಗಳಲಿ । ಬಂದು ಬಂದು ನೊಂದೆನಯ್ಯ । ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ ।। 4 ।।
ಭ್ರಷ್ಟನೆನಿಸಬೇಡ ಕೃಷ್ಣ । ಇಷ್ಟು ಮಾತ್ರ ಬೇಡಿಕೊಂಬೆ । ಶಿಷ್ಟರೊಡನೆ ಇಟ್ಟು ಕಷ್ಟ । ಬಿಡಿಸು ವಿಷ್ಣುವೆ ।। 5 ।।
ಮದನನಯ್ಯ ನಿನ್ನ ಮಹಿಮೆ । ವದನದಲ್ಲಿ ನುಡಿಯುವಂತೆ । ಹೃದಯದೊಳಗೆ ಹುದುಗಿಸಯ್ಯ ಮಧುಸೂದನ ।। 6 ।।
ಕವಿದುಕೊಂಡು ಇರುವ ಪಾಪ । ಸವೆದು ಪೋಗುವಂತೆ ಮಾಡಿ । ಜವನ ಬಾಧೆಯನ್ನು ಬಿಡಿಸೋ । ಶ್ರೀ ತ್ರಿವಿಕ್ರಮ ।। 7 ।।
ಕಾಮಜನಕ ನಿನ್ನ ನಾಮ । ಪ್ರೇಮದಿಂದ ಪಾಡುವಂಥ । ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ।। 8 ।।
ಮೊದಲು ನಿನ್ನ ಪಾದಪೂಜೆ । ಒದಗುವಂತೆ ಮಾಡೊ ಎನ್ನ । ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ।। 9 ।।
ಹುಸಿಯನಾಡಿ ಹೊಟ್ಟೆ ಹೊರೆವ । ವಿಷಯದಲ್ಲಿ ರಸಿಕನೆಂದು । ಹುಸಿಗೆ ಹಾಕದಿರೊ ಎನ್ನ ಹೃಷಿಕೇಶನೆ ।। 10 ।।
ಬಿದ್ದು ಭವದನೇಕ ಜನುಮ । ಬದ್ಧನಾಗಿ ಕಲುಷದಿಂದ । ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ ।। 11 ।।
ಕಾಮಕ್ರೋಧ ಬಿಡಿಸಿ ನಿನ್ನ । ನಾಮ ಜಿಹ್ವೆಯಾಳಗೆ ನುಡಿಸೊ । ಶ್ರೀಮಹಾನುಭಾವನಾದ ದಾಮೋದರ ।। 12 ।।
ಪಂಕಜಾಕ್ಷ ನೀನು ಎನ್ನ । ಮಂಕುಬುದ್ಧಿಯನ್ನು ಬಿಡಿಸಿ । ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ।। 13 ।।
ಏಸು ಜನ್ಮ ಬಂದರೇನು । ದಾಸನಲ್ಲವೇನು ನಾನು । ಘಾಸಿ ಮಾಡದಿರು ಇನ್ನು ವಾಸುದೇವನೆ ।। 14 ।।
ಬುದ್ಧಿಶೂನ್ಯನಾಗಿ ಎನ್ನ । ಬದ್ಧಕಾಯ ಕುಹಕಮನವ । ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ।। 15।।
ಜನನಿ ಜನಕ ನೀನೆ ಎಂದು । ನೆನೆವೆನಯ್ಯ ದೀನಬಂಧು । ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ।। 16 ।।
ಹರುಷದಿಂದ ನಿನ್ನ ನಾಮ । ಸ್ಮರಿಸುವಂತೆ ಮಾಡು ನೇಮ । ಇರಿಸು ಚರಣದಲಿ ಪ್ರೇಮ ಪುರುಷೋತ್ತಮ ।। 17 ।।
ಸಾಧುಸಂಗ ಕೊಟ್ಟು ನಿನ್ನ । ಪಾದಭಜನೆ ಇತ್ತು ಎನ್ನ । ಭೇದ ಮಾಡಿ ನೋಡದಿರು ಹೇ ಅಧೋಕ್ಷಜ ।। 18 ।।
ಚಾರು ಚರಣ ತೋರಿ ಎನಗೆ । ಪಾರುಗಾಣಿಸಯ್ಯ ಕೊನೆಗೆ । ಭಾರ ಹಾಕಿರುವೆ ನಿನಗೆ ನರಸಿಂಹನೆ ।। 19 ।।
ಸಂಚಿತಾದಿ ಪಾಪಗಳು । ಕಿಂಚಿತಾದಿ ಪೀಡೆಗಳು । ಮುಂಚಿತಾಗೆ ಕಳೆಯಬೇಕೊ ಸ್ವಾಮಿ ಅಚ್ಯುತ ।। 20 ।।
ಜ್ಞಾನ ಭಕುತಿ ಕೊಟ್ಟು ನಿನ್ನ । ಧ್ಯಾನದಲ್ಲಿ ಇಟ್ಟು ಸದಾ । ಹೀನಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ ।। 21 ।।
ಜಪತಪಾನುಷ್ಠಾನವಿಲ್ಲ । ಕುಪಥಗಾಮಿಯಾದ ಎನ್ನ । ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೆ ।। 22 ।।
ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ । ಇರಿಸೋ ಭಕ್ತರೊಳು ಪರಮ ಪುರುಷ ಶ್ರೀಹರೇ ।। 23 ।।
ಪುಟ್ಟಿಸಲೇ ಬೇಡ ಇನ್ನು । ಪುಟ್ಟಿಸಿದಕೆ ಪಾಲಿಸಿನ್ನು । ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ।। 24 ।।