ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

June 2, 2008 - 5:52pm — shreedevikalasad

ಪುಟ್ಟ ಪುಟ್ಟ ಕಿಟಕಿಗಳ ದೊಡ್ಡ ದೊಡ್ಡ ಕಟ್ಟಡಗಳು. ಪಕ್ಕದಲ್ಲಿ ನಾವೂ ಇದ್ದೇವೆ ಎನ್ನುತ್ತ ಅಲ್ಲಲ್ಲಿ, ಆಗೊಮ್ಮೆ ಈಗೊಮ್ಮೆ ಕೈಬೀಸುವ ಮರಗಳು... ಎಷ್ಟು ಏಣಿ ಜೋಡಿಸಿದರೂ ನಿಲುಕದ ಬಯಲಲ್ಲಿ ಇಲಿಯ ಮೇಲೆ ಆನೆ ಸವಾರಿ(?!) ಅದ ನೋಡುತ್ತಿವೆ ಎರಡು ಪುಟ್ಟ ಪುಟ್ಟ ಗುಬ್ಬಚ್ಚಿಗಳು ಅಲ್ಲಲ್ಲಾ ಕಾಗೆಗಳೇನೋ.... ಹಾರುವ ಕುದುರೆಗೆ ಅಡ್ಡಗಾಲು ಹಾಕುವ ಹುನ್ನಾರದಲ್ಲಿ ಮಾರ್ಜಾಲರಾಯ.! ಇದೆಲ್ಲ ನೋಡಿ ಹೌಹಾರಿದ ಆಕೆಯ ಕಾಲಲ್ಲಿ ಪುಟ್ಟ ಮೊಲವೊಂದು ಕಚಗುಳಿ ಇಡುತ್ತಿದೆ. ಗಂಭೀರವಾಗಿ ನೋಡುತ್ತಿದ್ದಾನೆ ಒಬ್ಬ ಅಜ್ಜ, ಮುಖ ಮಾತ್ರ ತೋರಿಸುತ್ತ. ಛೆ. ಆದರೆ ಈ ಆಟವೆಲ್ಲ, ಚೆಂದದ ನೋಟವೆಲ್ಲ ಕೆಲ ಕಾಲವಷ್ಟೇ. ಕೆಲವೇ ಕೆಲವು ನಿಮಿಷ. ಅದೆಲ್ಲಿಂದಲೋ ಅಡರುತ್ತದೆ ಕಪ್ಪು. ಬಿಕ್ಕುತ್ತದೆ ಈ ಎಲ್ಲ ಪರಿವಾರ....ಬಿಕ್ಕಳಿಕೆ ಹನಿಯಾಗಿ, ಹನಿ ಹಳ್ಳವಾಗಿ, ಹಳ್ಳ ನದಿಯಾಗಿ, ನದಿ ಸಾಗರವಾಗಿ ಮತ್ತೆ ಮೂಡುತ್ತವೆ ಅದೇ ಗುಬ್ಬಚ್ಚಿ, ಕಾಗೆ, ಇಲಿ, ಆನೆ, ಆಕೆ, ಅಜ್ಜ, ಮೊಲ ಏನೆಲ್ಲ...ಈ ಮೋಡದ ಮೋಡಿ ಸವಿಯುವ ಅವಕಾಶ ನಿಮಗೆ ಸಿಕ್ಕಿತ್ತೋ?

‹ ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ. ಮುಖವಾಡ ›
  • ಅರಳಿ ಕಟ್ಟೆ
~.~
  • Login or register to post comments
  • 564 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 8:13pm — roopablrao

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

roopablrao's picture

ಹೌದು ಶ್ರೀದೇವಿಯವರೇ
ಒಳ್ಳೆ ಆಲೋಚನೆ
ನಾನು ಈ ಮೋಡಗಳ ನಡುವಲ್ಲಿ
ಕಾಂಗರೂ , ಅಳುತ್ತಿರುವ ಹೆಣ್ಣು, ಬಿಲ್ಲು ಬಾಣ ಹಿಡಿದ ರಾಮ, ಬೆಟ್ಟ ಗುಡ್ಡ ಇವುಗಳನ್ನೆಲ್ಲ ಕಂಡು ಅಚ್ಚರಿ ಪಟ್ಟಿದ್ದೇನೆ
ಒಮ್ಮೆಯಂತೂ ರಾಘವೇಂದ್ರರ್ ಆಕೃತಿ ಕಂಡು ಬಂದು ಧನ್ಯಳಾಗಿದ್ದ್ದೆ.
ಏನೆ ಆಗಲಿ ಇದು ಪ್ರಕೃತಿಯ ನಿಜ ವಿಸ್ಮಯ
ಯಾವ ಕಲಾವಿದ ಯಾವ ಕುಂಚದಿಂದ ಬರೆದ ಕಲೆಯೋ ಇದು? ಅನ್ನಿಸುತ್ತದೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:13pm — shreedevikalasad

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ರೂಪಾ ಅವರೆ,
ನಿಜ. ವಿಧಾತನಿಗಿಂತ ದೊಟ್ಟ ಕಲಾವಿದನಿಲ್ಲ. ಮನಸ್ಸನ್ನು ನಿರಾಳವಾಗಿಸಿಕೊಂಡು ಆಗಾಗ ಯೋಚಿಸಿದಾಗ ಸೃಷ್ಟಿಯ ವೈಚಿತ್ರ ಅರಿವಿಗೆ ಬರುವುದುಂಟು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:20pm — uniquesupri

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

uniquesupri's picture

ನನ್ನ ಪ್ರಕಾರ ಕಲೆಯಿರುವುದು ನೋಡುವ ಕಣ್ಣುಗಳಲ್ಲಿ, ಕೇಳುವ ಕಿವಿಯಲ್ಲಿ, ಅನುಭಾವಿಯಲ್ಲೇ ಹೊರತು ಹೊರಗಲ್ಲ... ಕುರುಡನಿಗೆ, ಮತಿಹೀನನಿಗೆ ನಿಮ್ಮ ಯಾವ ದೇವನ ಸೃಷ್ಟಿಯೂ ವಿಚಿತ್ರವಾಗಿ ಕಾಣದು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:21pm — roopablrao

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

roopablrao's picture

ಸುಪ್ರೀತ್
ಅದೂ ದೇವನ ಸೃಷ್ಟಿಯ ವೈಚಿತ್ರ ಅಲ್ಲವೇ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:31pm — uniquesupri

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

uniquesupri's picture

ಹಾಗೆ ಆಲೋಚಿಸುವುದೂ ಎಂಥಾ ವಿಚಿತ್ರ ಅಲ್ಲವೇ? ಆ ದೇವನೂ ಹುಟ್ಟುವುದೂ ನಮ್ಮ ಇಂಥಾ ದೃಷ್ಟಿಕೋನದಲ್ಲೇ... ವಿಚಿತ್ರ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:34pm — shreedevikalasad

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಹೌದು ಸುಪ್ರೀತ್ ಅವರೆ, ನೂರಕ್ಕೆ ನೂರರಷ್ಟು ನಿಮ್ಮ ಮಾತು ನಿಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:28pm — shreedevikalasad

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಇಲ್ಲಿ ನಾನು ವಿಧಾತ ಎಂದರೆ ಪ್ರಕೃತಿ ಎಂದು ಅಥೈಸಿಕೊಂಡಿದ್ದೇನೆ. ವಿಧಾತ ಎಂದರೆ ಬ್ರಹ್ಮ, ಸೃಷ್ಟಿಕರ್ತ ಅಂತೆಲ್ಲ ಅರ್ಥ ಇದೆ ನಿಜ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:34pm — uniquesupri

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

uniquesupri's picture

ಪದಗಳು ಬದಲಾದರೂ ನಮ್ಮ ದೃಷ್ಟಿಕೋನದಲ್ಲಿ ಹುಟ್ಟುವ ಆ ಒಂದು ಭಾವ ಎಲ್ಲಿ ಹೋಗಲು ಸಾಧ್ಯ? ಅದಕ್ಕೇ ಇಷ್ಟು ಕಾಲ ಕಳೆದರೂ ಮನುಷ್ಯನೊಂದಿಗೇ ದೇವರು ಬದುಕಿಕೊಂಡಿರುವುದು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:35pm — shreedevikalasad

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಭಾವಕ್ಕೂ ಭಕ್ತಿಗೂ ಹತ್ತಿರದ ನಂಟಿದ್ದರೂ ಅಷ್ಠೇ ಸೂಕ್ಷ್ಮ ವ್ಯತ್ಯಾಸವೂ ಇದೆ ಅಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 9:50pm — uniquesupri

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

uniquesupri's picture

ಮೋಡಗಳ ಕನ್ನಡಿಯಲ್ಲಿ ಪ್ರತಿಬಿಂಬವಾಗುವುದು ನಮ್ಮ ಮನಸ್ಸೇ, ನಮ್ಮ ಕಲ್ಪನೆಗಳೇ, ನಮ್ಮ ತಿಳುವಳಿಕೆಯೇ?

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 11:13am — roopablrao

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

roopablrao's picture

ನಮ್ಮ ಕಲ್ಪನೆಯೆ ಅಂತನ್ನಿಸುತ್ತೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:25pm — shreedevikalasad

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಸುಪ್ರೀತ್ ಅವರೆ,
ನಮ್ಮ ನೋಟ.
ಆ ನೋಟಕ್ಕೆ ಎಳೆ ಜೋಡಿಸುವ ಮನಸ್ಸು,
ಆ ಮನಸ್ಸಿಗೆ ‘ಕೋನ’ ರೂಪಿಸುವ ದೃಷ್ಟಿ.
ಅಂದರೆ ನಮ್ಮ ದೃಷ್ಟಿಕೋನ.
ಈ ದೃಷ್ಟಿಕೋನವೇ ಆ ಮೋಡದ ಕನ್ನಡಿಯಲ್ಲಿ ಮೂಡುವುದಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:27pm — roopablrao

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

roopablrao's picture

ಮತ್ತೆ ಎಳೆ
ಧಾರವಾಡದವರೆಲ್ಲಾ ಎಳೆಯ ಹಿಂದೆ ಬಿದ್ದ ಹಾಗಿದೆ Smiling

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:33pm — shreedevikalasad

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಅಲ್ಲಲ್ಲಿ ತುಂಡಾಗಿರುವ ಎಳೆಗಳನ್ನು ಜೋಡಿಸುವ ‘ಸಂಪದ’ದ ಪ್ರಯತ್ನದ ಮುಂದೆ ಧಾರವಾಡದ ಎಳೆ ಯಾವ ಲೆಕ್ಕ ಹೇಳ್ರಿ ರೂಪಕ್ಕ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮಗೆ ಇವರು ಸಿಕ್ಕರೆ ನನಗೆ ಹೇಳಿ...
  • ಅರಿವು
  • ಹಾಗೆ ಸುಮ್ಮನೆ
  • ಗುಡುಗು ಸಿಡಿಲಿನ ಮಳೆ ಹಿಡಿದ ಬೆಂಗಳೂರು
  • ಅಳಿಲು
Syndicate content

ಲೇಖಕರು

shreedevikalasad's picture

ಪೂರ್ಣ ಹೆಸರು
ಶ್ರೀದೇವಿ ಕಳಸದ

ಪರಿಚಯ

ಸಂತೆಯಾಗುತ್ತಿರುವ ಪತ್ರಿಕೋದ್ಯಮದಲ್ಲಿ ಸೂಕ್ಷ್ಮತೆಯ ನಾದದ ಎಳೆ ಹಿಡಿಯಲು ಯತ್ನಿಸುತ್ತಿರುವವಳು. ಓದಿದ್ದು ಧಾರವಾಡ ಹಾಗೂ ಬೆಂಗಳೂರು. ಸದ್ಯ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಕೆಲಸ. ಈ ನಾದದ ಎಳೆ ಎಲ್ಲಿಗೆ ತಲುಪಿಸುತ್ತದೋ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಶಂಖದಿಂದ ಬಂದರೆ ತೀರ್ಥ..."
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ನರಸಿಂಹ ಸಾಲಿಗ್ರಾಮ
  • ಮುಸುಱ್/ಮುಸುಱು
  • ಈಗಿನಂತೆ 4 ಸದಸ್ಯರು ಮತ್ತು 781 ಅತಿಥಿಗಳು ಆನ್ಲೈನ್ ಇರುವರು.
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
  • JAYADEV
    ಉ: ನೀರವತೆ!
    September 5, 2008 - 1:50pm
  • hpn
    ಉ: ನೀರವತೆ!
    September 5, 2008 - 1:31pm
  • JAYADEV
    ಉ: ನೀರವತೆ!
    September 5, 2008 - 1:25pm
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator