ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

June 2, 2008 - 5:57pm — hpn

ಖವಾಸಿಯವರು ಒಂದು ಸಾರಿ ಮನೆಗೆ ಬಂದಿದ್ದಾಗ ಈ ಹಾಡು ಕೇಳಿದ್ದೀರಾ ಎಂದಿದ್ದರು. ಯೂಟ್ಯೂಬಿನಲ್ಲಿ ಹುಡುಕಿ ಪ್ಲೇ ಮಾಡಿದ್ದೆ. ಈಗ ನಿತ್ಯ ಈ ಹಾಡು ಕೇಳುತ್ತಿರುತ್ತೇನೆ (ಕರಿಹೈದರ ಕೃಪೆಯಿಂದ) - ಪಿ ಬಿ ಎಸ್ ಅವರ ಧ್ವನಿಯಲ್ಲಿದೆ.


ದೀನ ನಾ ಬಂದಿರುವೆ
ಬಾಗಿಲಲಿ ನಿಂದಿರುವೆ
ಜ್ಞಾನಭಿಕ್ಷೆಯ ನೀಡಿ
ದಯೆತೋರಿ ಗುರುವೆ ||

ಕೃಷ್ಣನಾಲಯದಾಚೆ
ನಿಂತ ಕನಕನ ರೀತಿ
ಕಾದಿರುವೆ ಕಾತುರದೆ
[...] ಕೇಳಿಸದೆ ಗುರುವೆ
ಎನ್ನ ಮೊರೆ ಕೇಳಿಸದೆ. . . . . . . . ಗುರುವೆ (ವಂದನೆ: ರಮೇಶ್)

ದ್ರೋಣರಾ ಬಳಿ ಬಂದ
ಏಕಲವ್ಯನ ತೆರೆದೆ
ಗುರು ನಿಮ್ಮ ಕೃಪೆ ಬಯಸಿ
ನಾ ಬಂದೆ ತಂದೆ

ನಿಮ್ಮ ಪಾದದ ಬಳಿಯೆ
ಎನಗೆ ಆಶ್ರಯ ನೀಡಿ
ಸಂಗೀತ ಸುಧೆ ಹರಿಸಿ
ಸಲಹಿರೆನ್ನನು ಗುರುವೆ

(ಮೇಲೆ ಬರೆದಿದ್ದರಲ್ಲಿ ಸ್ವಲ್ಪ ತಪ್ಪುಗಳಿರಬಹುದು)

‹ ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು" ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ ›
  • ಸಿನಿಮಾ
~.~
  • Login or register to post comments
  • 404 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 10:43pm — uniquesupri

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

uniquesupri's picture

ಹರಿಯವರೇ ಇದು ಯಾವ ಸಿನೆಮಾದ ಹಾಡು ಎಂಬುದು ಗೊತ್ತೇ? ತಿಳಿಸಿದ್ದರೆ ಚೆನ್ನಿತ್ತು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 10:55pm — hamsanandi

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

hamsanandi's picture

ಇದು ಸಂಧ್ಯಾರಾಗ ಚಿತ್ರದ್ದು ( ೧೯೬೦/೬೧ರದ್ದಿರಬಹುದು)

ಕನ್ನಡದಲ್ಲಿ ಬಂದ ಕೆಲವೇ ಸಂಗೀತ ಪ್ರಧಾನ ಚಿತ್ರಗಳಲ್ಲಿ ಇದು ಒಂದು.
ಅನಕೃ ಅವರ ಕಾದಂಬರಿ ಆಧಾರಿತವಾದ ಈ ಚಿತ್ರದಲ್ಲಿ ಭೀಮಸೇನ ಜೋಶಿ ಮತ್ತೆ ಬಾಲಮುರಳಿಕೃಷ್ಣ ಇಬ್ಬರೂ ಹಾಡಿರುವುದು (ಒಂದು ಹಾಡನ್ನು ಇಬ್ಬರೂ ಒಟ್ಟಿಗೆ ಹಾಡಿರುವುದು) ಒಂದು ವಿಶೇಷ.

ಈ ಚಿತ್ರದ ಇನ್ನು ಕೆಲವು ಹಾಡುಗಳನ್ನು ಇಲ್ಲಿ ನೋಡಿ/ಕೇಳಬಹುದು.

http://www.youtube.com/results?search_query=Sandhyaraga&search_type=

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 11:47pm — rameshbalaganchi

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

rameshbalaganchi's picture

ಕೃಷ್ಣನಾಲಯದಾಚೆ
ನಿಂತ ಕನಕನ ರೀತಿ
ಕಾದಿರುವೆ ಕಾತುರದೆ
ಎನ್ನ ಮೊರೆ ಕೇಳಿಸದೆ. . . . . . . . ಗುರುವೆ

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 9:56am — Khavi

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

Khavi's picture

ಜರ್ಮನಿಯಲ್ಲಿರೋವಾಗ ಈ ಹಾಡನ್ನು ಕೇಳದೆ ಇದ್ದ ದಿನವಿರಲಿಲ್ಲ..
ಪೂರ್ತಿಯಾಗಿ ನನ್ನ ಮನ್ನಸ್ಸನ್ನ ಆವರಿಸಿಬಿಡುತ್ತೆ ...

"ಏಕಲವ್ಯನ ತೆರೆದೆ"
"ಏಕಲವ್ಯನ ತೆರದಿ" ಅಂತ ಆಗಬೇಕಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 10:05am — ವೈಭವ

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

ವೈಭವ's picture

ಈ ಹಾಡಿನ ರಾಗವೇ ಹಾಗಿದೆ ಅನ್ಸುತ್ತೆ. ಇದರ ರಾಗ ಮತ್ತು ಅನಿಸು ಚೆನ್ನಾಗಿ ತೊಡರ್ಚಿ ಕೇಳುವವರತ್ತ ಸೆಳೆಯುತ್ತದೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 10:18am — roopablrao

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

roopablrao's picture

ಗುರುವಿನ ಬಳಿ ಸಂಗೀತ ಪಾಠಕ್ಕಾಗಿ ಬೇಡಿಕೊಳ್ಳುವ ದೃಶ್ಯ ಅದು ಬಹ
ಈಗಿನ ಕಾಲಕ್ಕೆ
ಹುಡುಗಾ ನಾ ಬಂದಿರುವೆ
ಫೀಸನ್ನ ಕಟ್ಟಿರುವೆ
ಕ್ಲಾಸ್ ತಗಂಡು ಮನೆಗೆ ಕಳ್ಸೊ ಸಾರ್
ಅಂತ ಕಿರುಚೋ ಕಾಲ

ಅಂದಿನ ಆ ಭಯ ಭಕ್ತಿ ಈಗಿನ ಹುಡುಗ ಹುಡುಗಿಯರಿಗೆ (ನಮಗೂ ಇರಲಿಲ್ಲ ಬಿಡಿ Smiling) ಎಲ್ಲಿದೆ?
ಗುರುವಿನಾ ಪಾದ ದೊರಕುವ ತನಕ ದೊರೆಯದೆನಗೆ ಮುಕುತಿ ಎನ್ನುವ ಕಾಲ ಅದು
ಗುರುವಿನ ಜೀವ ಹಿಂಡುವ ತನಕ ದೊರೆಯದೆನಗೆ ಸದ್ಗತಿ ಎನ್ನುವ ಕಾಲ ಇದು

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 10:50am — uniquesupri

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

uniquesupri's picture

ಮೇಡಂ,
ಇಂದಿನ ಹುಡುಗರ ಬಗ್ಗೆ ಹೀಗೆ ಲಘುವಾಗಿ ಮಾತನಾಡಬೇಡಿ... ಅಂಥಾ ಗುರುಗಳು ಈಗ ಇದ್ದಾರಾ ಎನ್ನುವುದನ್ನೂ ಗಮನಿಸಿ. ಯಾವ ಕಾಲದಲ್ಲೂ ಗುರುವಿನ ಗುಲಾಮರಾಗುವಂತ ವಿದ್ಯಾರ್ಥಿಗಳಿರಲಿಲ್ಲ. ಕೆಲವರು ಇದ್ದರೂ ಎಲ್ಲರೂ ಹಾಗಿರುತ್ತಿರಲಿಲ್ಲ. ಹಾಗಾಗಿಯೇ ಅನುಭಾವಿಗಳು ಅದನ್ನು ಒಂದು ಆದರ್ಶವನ್ನಾಗಿ ಇಟ್ಟದ್ದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದದ್ದು. ಎಂದಿಗೂ ಉಸರಾಟವಾಗಲೀ, ಊಟ, ತಿಂಡಿ ತಿನ್ನುವುದಾಗಲೀ ಆದರ್ಶವಾಗದು ಯಾಕೆಂದರೆ ಅದು ಸಹಜವಾದದ್ದು.
ಇಂದಿಗೂ ನಮ್ಮ ಕ್ಲಾಸುಗಳಲ್ಲಿ ಬಂದು ನೋಡಿ, ಪರಮ ದರಿದ್ರ ಟೀಚರುಗಳನ್ನೂ ದೇವರುಗಳು ಅಂತ ಕಾಣುವ ಒಂದಿಬ್ಬರು ಹುಡುಗರಾದರೂ ಸಿಕ್ಕುತ್ತಾರೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 11:00am — roopablrao

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

roopablrao's picture

ಸುಪ್ರೀತ್
ಇದು ನಾನು ಸ್ವತಹ ನನ್ನ ಕಾಲೇಜಿನಲ್ಲಿ ನಡೆಸಿದ ಗಲಾಟೆ ಇದು
ನಮ್ಮ ಕಾಲೇಜಿನ ಮೇಡಮ್ ಒಬ್ಬರು ಸರಿಯಾಗಿ ಪಾಠ ಮಾಡಲಿಲ್ಲವಾದಾಗ " ಇನ್ನು ಮೇಲೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳದಿದ್ದರೆ ನಾವೆಲ್ಲ ಕ್ಲಾಸಲ್ಲಿ ಇರೋದಿಲ್ಲ. ಯೋಚನೆ ಮಾಡಿ ಪಾಠ ಮಾಡಿ " ಅಂತ ಧಮಕಿ ಹಾಕಿದ್ದೆ
ನಮ್ಮ ಹುಡುಗರು ಆ ಮೇಡಮ್ ಮೇಲೆ ಪೇಪರ್ ರಾಕೆಟ್ ಮಾಡಿ ಎಸೆಯುತ್ತಿದ್ದರು. ಅವರಿಗೆ ಕಣ್ಣು ಹೊಡೆಯುತಿದ್ದರು.
ಹೇಳಿ ಇಂತಹ ಹುಡುಗ ಹುಡುಗಿಯರೇ ಈಗ ಎಲ್ಲೆಡೆ ಕಾಣುತ್ತಾರೆ ಅಲ್ಲವಾ

exceptions cannot be examples ಅಲ್ಲವಾ?

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 11:54am — uniquesupri

ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

uniquesupri's picture

Examples cannot make generalizations...
ರಾಕೆಟ್ ಎಸೆಯುವ ಹುಡುಗರೇ ಕೆಲವು ಲೆಕ್ಚರರ್‌ಗಳಿಗಾಗಿ ಏನೇನೆಲ್ಲಾ ರಿಸ್ಕು ತೆಗೆದುಕೊಳ್ಳುವುದು ನಮ್ಮ ಕಣ್ಣಿಗೆ ಕಾಣದು. ಕೇವಲ ವಿನಯ ಧೂರ್ತರ ಲಕ್ಷಣ. ಲೆಕ್ಚರರ್‌ಗಳನ್ನು ಪ್ರೀತಿಸುವವರು ಎಷ್ಟೋ ಮಂದಿ ನನ್ನ ಫ್ರೆಂಡ್ ಸರ್ಕಲ್ಲಿನಲ್ಲಿದ್ದಾರೆ. ಆದರೆ ಅಂಥ ಲೆಕ್ಚರರ್‌ಗಳ ಕೊರತೆ ಇದೆ ಅಷ್ಟೇ.
ಅಷ್ಟಕ್ಕೂ ‘ಗುರು’ ಹಾಗೂ ಉಪಾಧ್ಯಾಯರ ನಡುವೆ ತುಂಬಾ ವ್ಯತ್ಯಾಸ ಇದೆ ಬಿಡಿ... ಹಾಗೆಯೇ ವಿದ್ಯೆಗೂ ಶಿಕ್ಷಣಕ್ಕೂ...

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏ ಆರ್‍ ರೆಹಮಾನ್ ಹಾಡಿರುವ ಕನ್ನಡ ಹಾಡು - ಗಬ್ಬಾಗಿದೆ.
  • 'ಮುಕ್ತ' ಹಾಡಿನ ಹಿಂದೆ...
  • ಇಂಚರ
  • ಗಾಳಿಪಟ
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator