ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

June 11, 2008 - 8:44am — mahesha

ಚರ್ಚೆ ಮಾಡಿ! Smiling

‹ ಮುಕ್ತ ಸಂವಾದಗಳ ಅವಶ್ಯಕತೆ ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ ›
  • ರಾಜಕೀಯ
~.~
  • Login or register to post comments
  • 579 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 11, 2008 - 9:49am — gururajkodkani

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

gururajkodkani's picture

ಗುಱುಱಾಜ
www.kannadaguru.blogspot.com

ಮಾಯ್ಸಣ್ಣ ,

ನನಗೇನೋ ಈ ಗಲಾಟೆಗಳು ರಾಜಕೀಯ ಪ್ರೇರಿತ ಎನಿಸುತ್ತದೆ.ಕೆಲವು ರಾಜಕೀಯ ಪಕ್ಷಗಳು ಚುನಾವಣಾ ಫಲಿತಾ೦ಶಗಳಿ೦ದ ಭ್ರಮನಿರಸನಕ್ಕೊಳಗಾಗಿ ಈ ರೀತಿ ಕುಯುಕ್ತಿ ಮಾಡಿದ್ದಾರೆನಿಸುತ್ತದೆ. ರಾಜ್ಯದಲ್ಲಿ ಪಕ್ಷವೊ೦ದು ಅಧಿಕಾರಕ್ಕೆ ಬ೦ದು ಇನ್ನೂ ೧೫ ದಿನಗಳೂ ಕೂಡಾ ಆಗಿಲ್ಲ.ಅದಕ್ಕೂ ಮೊದಲು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿತ್ತಲ್ಲ? ಆಗೆಲ್ಲ ಈ ಗಲಾಟೆ ಮಾಡುತ್ತಿದ್ದವರು ಏನೂ ಮಾಡುತ್ತಿದ್ದರು..? ಒಬ್ಬ ವ್ಯಕ್ತಿಯ ಜೀವ ಹೋಗಿರುವುದು ದು೦ರ೦ತವೇ .ಆದರೆ ಪೋಲಿಸರೂ ಸುಮ್ಮನೆ ಗು೦ಡು ಹಾರಿಸಿಲ್ಲ ಎಲ್ಲೆಡೆ ರೈತರು(?) ಬಸ್ಸುಗಳಿಗೆ ಟೈರುಗಳಿಗೆ ಬೆ೦ಕಿ ಹಚ್ಚಿದ್ದಾರೆ,ಪರಿಸ್ಥಿತಿ ಕೈ ಮೀರಿ ಹೋಗುವ೦ತೆ ಮಾಡಿದ್ದಾರೆ.ಆಗ ಮಾತ್ರ ಪೋಲಿಸರು ಗು೦ಡು ಹಾರಿಸಿದ್ದು.ಥಟ್ಟನೇ ನಮ್ಮ ವಿರೋದ ಪಕ್ಷದ ನಾಯಕರು ಕೂಗಾಡಲು ಶುರು ಮಾಡಿದ್ದಾರೆ. ರಸಗೊಬ್ಬರದ ಕೊರತೆ ಒ೦ದು ಸಮಸ್ಯೆ .ವಿರೋಧ ಪಕ್ಷದ ರೈತ ಪರ ನಾಯಕರು ರೈತರನ್ನು ಶಾ೦ತಿಯಿ೦ದರು ಹೇಳಿ ತಾವೇ ಖುದ್ದಾಗಿ ಸರ್ಕಾರದ ಜೋತೆ ಮಾತಾಡಬಹುದಲ್ಲವೇ..?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 10:06am — roshan_netla

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

roshan_netla's picture

ಇದು ಸರಕಾರದ ವೈಪಲ್ಯತೆ ಅಂತಾನೆ ಹೇಳ ಬಹುದು, ಯಾಕೆಂದರೆ ಗಲಾಟೆ ಶುರು ಆಗಿದ್ರು ಇವರು ಗಳು ಅಸ್ಟೇನು ಅದರಬಗ್ಗೆ ತಲೆ ಕೆಡಿಸ್ಕೋಳಿಲ್ಲ. ಈಗ ಪಿತೂರಿ ಮಣ್ಣು ಅಂದ್ರೆ ಹೇಗೆ? ಪಿತೂರಿ ಮಾಡಬಹುದು ಅನ್ನೊ ಜ್ಞನ ಬೇಡ ಇವರಿಗೆ..ರಸಗೊಬ್ಬರ ವಿತರಣೆಗೆ ಯೇನು ಕಾರ್ಯಕ್ರಮ ಹಾಕೊಂಡಿದ್ದಾರೆ ಅಂತ ತಿಳಿಸ ಬೇಕಿತ್ತು ಹಾಗು ಇವರು ಒಂದು ಸಮೀತಿ ಮಾಡಿ ಅದರ ವ್ಯವಹಾರ ನೊಡೊಕೆ ಬಿಡ್ಬೇಕಿತ್ತು, ರೈತರ ಹತ್ತಿರ ಮಾತಾಡೊದು ಬಿಟ್ಟು ಬೆಂಗಳೊರನಲ್ಲಿ ಇದ್ದ ದೇವಸ್ತಾನಗಳಿಗೆ ಬಲಿ ಬರೊದು ಯಾಕೆ?..ಈ ಗಲಾಟೆ ಯಲ್ಲಿ ಪಿತುರಿ ಇರಬಹುದು ಇಲ್ಲದೇ ಇರಬಹುದು ಆದರೆ ಇದನ್ನು ವ್ಯವಹರಿಸುವಲ್ಲಿ ಸರಕಾರ ಹಾಗು ಅದಿಕಾರಿಗಳು ಸೊತಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 10:14am — mahesha

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

mahesha's picture

ಅನಿಸಿಕೆ ಹೇಳಿದವರಿಗೆ, ಹೇಳುವವರಿಗೆ ನನ್ನಿ...

ನನ್ನ ಅನಿಸಿಕೆ ಇಶ್ಟೇ...

ಯಾವುದೇ ಸರಕಾರ ಒಂದು ಮೂಲ ಸವಲತ್ತಿಗಾಗಿ ಹೋರಾಟ ಮಾಡುವವರನ್ನು ಗುಂಡಿಕ್ಕಿ ಸಾಯಿಸೋದು ಕೂಳರಲ್ಲಿ ಕೂಳತನ...
’ರಯಿತರಿಗೆ ಬಿತ್ತ, ಗೊಬ್ಬರ ಮೂಲ ಸವಲತ್ತು...’

ಮುಂದೆ ಹೀಗೆ ಮೂಲ ಸವಲತ್ತಿಗೆ ಹೋರಾಟ ಮಾಡುವವರು ಗುಂಡಿಗೆ ಬಲಿಯಾಗ್ತಾ ಹೋದರೆ, ಜನದನಿ ಅದುಮಿ ಹೋತಂತೆ ಅಲ್ಲವೇ!

ಬಸ್ಸು ಸುಡೋದು, ಕಲ್ಲು ಹೊಡೆಯೋದು ಇದು ಜಗತ್ತಿನ ಬೇರೆ ದೇಶಗಳಲ್ಲು ಚಳುವಳಿ, ಹೋರಾಟದ ಹೊತ್ತು ನಡೆಯುವ ಸಂಗತಿ... ಕೇಳದ ಕಿವುಡನಿಗೆ ಮುಟ್ಟಿ ತಿಳಿಸಬೇಕು.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 11:09am — gururajkodkani

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

gururajkodkani's picture

ಗುಱುಱಾಜ
www.kannadaguru.blogspot.com

ನಿಜ ಮಾಯ್ಸಣ್ಣ

ಮೂಲಭೂತ ಸೌಕರ್ಯಗಳನ್ನು ಕೇಳಿದವರನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ. ಆದರೆ ಯಾರೂ ಯಾರನ್ನು ಕೊಲ್ಲಬೇಕೆ೦ದು ಗು೦ಡು ಹಾರಿಸಿರುವುದಿಲ್ಲ.ಹೇಗೆ ಚಳುವಳಿಗಳಲ್ಲಿ ಗಲಾಟೆಗಳು ಸಹಜವೋ ಹಾಗೆ ಗೋಲಿಬಾರ್ ಗಳು ,ಕರ್ಫ್ಯೂಗಳೂ ಸಹಜವೇ
ರಾಜ್ಯಕ್ಕೆ ೧೧೦ ಲಕ್ಷ ಟನ್ ರಸಗೊಬ್ಬರ ಬೇಕಿದೆ. ಈಗಾಗಲೇ ಸರ್ಕಾರ ೧೨೨.something ಲಕ್ಷ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಆದರೆ ವಿತರಣೆಯಲ್ಲಿ ವಿಳಂಬವಾಗಿದಿಯೇ ಹೊರತು, ಬೇರೆ ಏನು ಅಲ್ಲ. ರೈತರ ಸ್ವಲ್ಪ ಸಹಕರಿಸಬೇಕು. ಇದೇ ತಿಂಗಳ 30ರೊಳಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆಯನ್ನು ಮಾಡುತ್ತೇವೆ ಎಂದು ಸಚಿವ ಎಸ್. ಎ. ರವೀಂದ್ರನಾಥ್ ಹೇಳಿದ್ದ ಮೇಲೂ ಗಲಾಟೆಯನ್ನು ತೀವ್ರಗೊಳಿಸುವ ಅವಶ್ಯಕತೆ ಇತ್ತೇ..?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 11:13am — mahesha

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

mahesha's picture

ಸಾರ್‍.. ಮಳೆ ಕಾಯಬೇಕಲ್ಲ Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 11:17am — vikashegde

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

vikashegde's picture

ಮೊದಮೊದಲು ನಿಜವಾದ ರೈತರು ಹೋರಾಟ ಮಾಡುತ್ತಿದ್ದರು. ನಂತರ ಫೀಲ್ಡಿಗಿಳಿದದ್ದು ರಾಜಕೀಯದ ಪುಂಡಪೋಕರಿಗಳು.
ಅಲ್ಲಿ ನೆಡೆದ ಗಲಾಟೆ ಸಂಪೂರ್ಣ ಜೆ.ಡಿ.ಎಸ್ ಕೃಪಾಪೋಷಿತ. ಬಿ.ಜೆ.ಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು.
ರೈತರು ಅಂಗಡಿಗಳಿಗೆ, ಬಸ್ಸುಗಳಿಗೆ ಬೆಂಕಿ ಹಚ್ಚುವಷ್ಟು ಕೆಟ್ಟವರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 11:54am — roopablrao

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

roopablrao's picture

ಎಲ್ಲಾ ರಾಜಕೀಯಾದಾಟ
ಬಿ ಜೆ ಪಿ ಅಧಿಕಾರಕ್ಕೆ ಬಂದಾಗಲೇ ಇದರ ಸಂಚು ನಡೆದಿರಬೇಕು
ಒಟ್ಟಿನಲ್ಲಿ ಆಡಳಿತ ರೂಡಾ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು
ಈ ಗಲಭೆ ಕೂಡ ಯಾರೋ ಪುಢಾರಿ ಪ್ರೇರಿತ ಇರಬೇಕು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 12:02pm — madhava_hs

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

madhava_hs's picture

ರಾಜಕೀಯ ಪ್ರೇರಿತ ಗಲಭೆಯಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ರಸಗೊಬ್ಬರ ಪೂರೈಕೆಯನ್ನು ಸಮರ್ಪಕಗೊಳಿಸುವ ಆತುರತೆ, ಮುತ್ಸದ್ದಿತನ ಸರ್ಕಾರ ತೋರುತ್ತಿಲ್ಲ ಎಂಬುದೂ ನಿಜ. ಇದು ಸರ್ಕಾರದ ಅನನುಭವವನ್ನೂ ತೋರುತ್ತದೆ. ಈ ಅನನಭವ ಕ್ಷಮ್ಯವಾದರೂ ಇನ್ನಾದರೂ ಸರ್ಕಾರ ತರಾತುರಿಯಲ್ಲಿ ಕೆಲಸಮಾಡಲಾರಂಭಿಸಬೇಕು. ಮೈಸೂರಿನಲ್ಲಿ ೩೫೦೦ ಟನ್ ರಸಗೊಬ್ಬರವನ್ನು ೩ ದಿನದಿಂದ ರೈಲಿನಿಂದಲೇ ಇಳಿಸಿಲ್ಲವಂತೆ. ಏಕೆಂದರೆ ಅಲ್ಲಿ ಆಗಲೇ ಲಾರಿ ಮಾಲೀಕರು ಪರಿಸ್ಠಿತಿಯ ಲಾಭ ಪಡೆದುಕೊಂಡು ಲಾರಿಬಾಡಿಗೆ ಹೆಚ್ಚು ಮಾಡುವಂತೆ ಮುಷ್ಕರ ಮಾಡುತ್ತಿದ್ದಾರಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 12:03pm — gururajkodkani

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

gururajkodkani's picture

ಗುಱುಱಾಜ
www.kannadaguru.blogspot.com

ನಿಜ ಮಾಯ್ಸಣ್ಣ
ಮಳೆ ಕಾಯುವುದಿಲ್ಲ.ಆದರೆಮು೦ಗಾರು ಇ೦ಥಹ ಸಮಯದಲ್ಲೇ ಶುರುವಾಗುತ್ತದೆ,ಇ೦ಥಹ ಸಮಯದಲ್ಲೇ ಕೊನೆಗೊಳ್ಳುತ್ತದೆ ಎ೦ಬುದು ಜನಸಾಮಾನ್ಯರಿಗಿ೦ತ ,ರಾಜಕಾರಣಿಗಳಿಗಿ೦ತ ನಮ್ಮ ರೈತರಿಗೆ ಗೊತ್ತಿರುತ್ತದೆ.ತೀರಾ ಮು೦ಗಾರು ಕುತ್ತಿಗೆಗೆ ಬರುವವರೆಗೂ ಸುಮ್ಮನಿದ್ದು ಮಳೆ ಇ೦ದೋ ನಾಳೆ ಇರುವಾಗ ಬಸ್ಸುಗಳಿಗೆ ಬೆ೦ಕಿ ಹಚ್ಚಿದರೆ ಹೇಗೆ,..? ವಿಕಾಸ ಅವರು ಹೇಳಿದ್ದ೦ತೆ ಮೊದಮೊದಲು ರೈತರೇ ಪ್ರತಿಭಟನೆಗಿಳಿದರು,ನ೦ತರ ರಾಜಕೀಯ ಪ್ರವೇಶಿಸಿತು. ಈ ರಾಜಕೀಯದಾಟಕ್ಕೆ ಬಲಿಯಾದವನು ಮಾತ್ರ ನಮ್ಮ ರೈತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 1:18pm — mahesha

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

mahesha's picture

ಇದೆಲ್ಲ ಸರಿ.... ರಾಜಕೀಯವನ್ನ ಪಕ್ಕಕ್ಕೆ ಇಡಣ..

ಆದರೆ ’ಮೂಲ ಸವಲತ್ತಿಗೆ’ ನಡೆಯುವ ಹೋರಾಟಕ್ಕೆ ಇಂತಹ ಕೂಳ ಅಂಕೆಯೇ?

ಇವೊತ್ತು ಎದರು ಪಾರ್ಟಿಯವರು ಆಳ್ವಿಕೆಯ ಪಾರ್ಟಿಗೆ ಕುಂದು-ತರಲು ಹೀಗೆ ಮಾಡಿದರು, ಎಂದಿರಿ, ನಾಳೆ ಇನ್ನೊಂದು ಪಾರ್ಟಿ ಆಳ್ವಿಕೆಗೆ ಬಂದಾಗ ಅವರೂ ಹೀಗೆ ಎದುರು ಪಾರ್ಟಿಯವರ ಸಂಚು ಅನ್ನುವರು..

ಹೀಗೇ ಆದರೆ, ನಂಮ ನಾಡಲ್ಲಿ ದಿಟವಾಗಲೂ ಯಾವುದಕ್ಕೂ ಮಂದಿ ಹೋರಾಟ ಮಾಡೋ ಹಾಗೇ ಇಲ್ಲ... ಹೋರಾಟ ಮಾಡುವವರಿಗೆ ಗುಂಡಿಕ್ಕಿ ಇದು ಇದುರು ಪಾರ್ಟಿಯ ಒಳಸಂಚು, ಪುಂಡರನ್ನು ಹತ್ತಿಕ್ಕಿದ್ದೀವಿ ಎಂದು ಎಲ್ಲ ಸರಕಾರಗಳು ಬೀಗಬಹುದು.

ಆದರೆ ದಿಟವಾಗಲೂ ಇಂದು ರಯಿತರಿಗೆ ಬಿತ್ತ, ಗೊಬ್ಬರದ ಕೊರತೆ ಇಲ್ಲವೇ ಇಲ್ಲವೋ.. ಅಲ್ಲಿ ಸೇರಿಸ ಸಾವಿರ-ಸಾವಿರ ರಯಿತರಲ್ಲಿ ಒಬ್ಬನೂ ತನ್ನ ದಿಟ-ತೊಂದರೆಯಿಂದ ಬಂದಿರಲೇ ಇಲ್ಲವೋ!

ಹಾಸನ ಆಯಿತು, ಬಳಿಕ ಹುಬ್ಬಳ್ಳಿ ದಾರವಾಡ, ಆಮೇಲೆ ಹಾವೇರಿ-ಬೆಳಗಾವಿ.. !!

ನನ್ನ ಹದರಿಕೆ ದಿಟವೇ

"ಇಂನು ಮಂದೂ ಕೂಡ ಯಾವುದೇ ಹೋರಾಟ, ಬೇಡಿಕೆ, ಚಳುವಳಿಗಳನ್ನು ಆಳ್ವಕೆ ಪ್ರತಿಪಕ್ಷದ ಕಿತಾಪತಿ, ಅಲ್ಲಿ ನಿಂತವರೆಲ್ಲ ಪುಂಡರೆಂದು ಗುಂಡಿಕ್ಕಿ ಈ ಮಂತ್ರವಂನೇ ಜಪಿಸಬಹುದು.!!"

"ರಾಜಕಾರಣಿಗಳಿಗಿ೦ತ ನಮ್ಮ ರೈತರಿಗೆ ಗೊತ್ತಿರುತ್ತದೆ"
ಹಾಗಾದರೆ ಕ್ರಶಿ ಇಲಾಕೆ ಅನ್ನೋ ಇಲಾಕೆ ಯಾಕೆ ಬೇಕು? ಈ ಮಾತು ಸಲ್ಲದು! ರಯಿತರಿಗೆ ತಿಳಿದಿದುದಕ್ಕೆ ಅವರು ಗೊಬ್ಬರ ಬಿತ್ತ ಕೊಳ್ಳಲು ಬಂದುದಲ್ಲವೇ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 1:37pm — vikashegde

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

vikashegde's picture

ರಾಜಕೀಯ ಪಕ್ಕಕ್ಕೆ ಯಾಕೆ ಇಡಬೇಕು? ಇಲ್ಲಿ ಕಾರಣ ಪರಿಣಾಮಗಳಿಗೆಲ್ಲ ರಾಜಕೀಯವೆ ಮುಖ್ಯ.

ನಿಜವಾದ ರೈತರ್ಯಾರೂ ಬೆಂಕಿ ಹಚ್ಚುವುದು, ಹಿಂಸಿಗಿಳಿಯುವುದು ಮಾಡುವುದಿಲ್ಲ. ಅವರಿಗೆ ಬೇರೆಯವರ ಕಷ್ಟದ ಅರಿವಿರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 1:46pm — roopablrao

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

roopablrao's picture

ಒಳ್ಳೇಯ ಉತ್ತರ ವಿಕಾಸ್
"ನಿಜವಾದ ರೈತರ್ಯಾರೂ ಬೆಂಕಿ ಹಚ್ಚುವುದು, ಹಿಂಸಿಗಿಳಿಯುವುದು ಮಾಡುವುದಿಲ್ಲ. ಅವರಿಗೆ ಬೇರೆಯವರ ಕಷ್ಟದ ಅರಿವಿರುತ್ತದೆ. "

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 12:38pm — kannadakanda

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

kannadakanda's picture

ಆದರೆ ಸರ್ಕಾರವೆ ಭಾಜಪದವರ ಕೈಯಲ್ಲೇ ಇರುವುದಱಿಂದ ಕಾನೂನಿನ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿ ಈ ಗೋಲಿಬಾರ್‍ ಮಾಡದೆ ನಿಯಂತ್ರಿಸಬಹುದಿತ್ತಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 12:45pm — vikashegde

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

vikashegde's picture

ಪರಿಸ್ಥಿತಿ ಕೈಮೀರಿದಾಗ ಲಾಟಿ ಚಾರ್ಚು, ಗೋಲಿ ಬಾರು ಎಲ್ಲಾ ಮಾಡಬೇಕಾಗುತ್ತದೆ. ಅದು ಕೂಡ ಕಾನೂನು ಸುವ್ಯವಸ್ಥೆ ಕಾಪಾಡಲು ಸಂವಿಧಾನವೇ ಕೊಟ್ಟಿರುವ ಮಾರ್ಗ.
ಹಾಗೆ ಮಾಡದಿದ್ದರೆ ರಾಜಕೀಯ ಕೃಪಾಪೋಷಿತ ಪುಂಡರು ಇಡೀ ಹಾವೇರಿಗೇ ಬೆಂಕಿ ಹಚ್ಚುತ್ತಿದ್ದರು. ಆವಾಗಲೂ ಹೀಗೆ ವಿರೋಧಿಗಳು ಸರ್ಕಾರವನ್ನೇ ದೂಷಿಸುತ್ತಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 1:23pm — vikashegde

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

vikashegde's picture

http://thatskannada.oneindia.in/2008/06/11/yaddyurappa-regret-over-haver...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 2:04pm — gururajkodkani

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

gururajkodkani's picture

ಗುಱುಱಾಜ
www.kannadaguru.blogspot.com

ನಿಜ ವಿಕಾಸ್ ಹೆಗಡೆಯವರ ಮಾತಿಗೆ ನನ್ನ ಸಹಮತಿ ಇದೆ.ಗೋಲಿಬಾರ್ ಕರ್ಫ್ಯೂಗಳಾಗುವುದು ಕೈ ಮೀರಿದ ಪರಿಸ್ಥಿತಿಗಳಲ್ಲೇ .ತೀರಾ ಅನಿವಾರ್ಯವಾಗದ ಹೊರತು ಪೋಲಿಸರು ಗು೦ಡು ಹಾರಿಸುವುದಿಲ್ಲ.ಒ೦ದ೦ತೂ ನಿಜ,ರಸಗೊಬ್ಬರದ೦ತಹ ಮೂಲಭೂತ ಅವಶ್ಯಕತೆಯನ್ನೂ ಕೂಡಾ ರಾಜಕಾರಣಿಗಳು ತಮ್ಮ ಆಟಕ್ಕಾಗಿ ಬಳಸಿಕೊಳ್ಳುತ್ತಿರುವುದು ದೊಡ್ಡ ದುರ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 5:56pm — ಸಂಗನಗೌಡ

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

ಸಂಗನಗೌಡ's picture

ಯಾವುದೇ ಸಮಸ್ಸೆ ಮೇಲ್ ನೋಟಕ್ಕೆ ಕಾಣುವಸ್ಟು ಸರಳವಾಗಿರುವದಿಲ್ಲ.. ಯೆಡೆಯೂರಪ್ಪ ಹೇಳಿಕೆಯಲ್ಲಿ(http://thatskannada.oneindia.in/2008/06/11/yaddyurappa-regret-over-haver...) ಒಂದು ಮಾತಿದೆ ನೋಡಿ,

"ಕಳೆದ ವರ್ಷ ರಸಗೊಬ್ಬರ ದಾಸ್ತುನು 53 ಸಾವಿರ ಟನ್ ಇತ್ತು. ಆದರೆ ಈ ವರ್ಷ ಬರೀ ಮೂರು ಸಾವಿರ ಟನ್ ಮಾತ್ರ ದಾಸ್ತಾನಿದೆ. ಈ ಲೋಪಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದ ಅವರು, ರಸಗೊಬ್ಬರ ಕೊರತೆ ಎದುರಿಸುತ್ತಿರುದನ್ನು ಮನಗಂಡು ಜೂ .2ಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಮನವಿ ಮಾಡಿಕೊಳ್ಳಲಾಗಿದೆ."

ರಸಗೊಬ್ಬರ ದಾಸ್ತಾನು, ೫೩ ಸಾವಿರ ಟನ್ ಇದ್ದದ್ದು ಬರೀ ಈ ವರುಸ ೩ ಸಾವಿರ ಟನ್?? ಮೇಲಿನ ಅಂಕಿಸಂಕೆ ನೋಡಿದರೆ, ಎದುರು ಪಾರ್‍ಟಿಗಳವರು ಸುಮ್ಮಸುಮ್ಮನೆ ಗಲಾಟೆ ಮಾಡಿಸಿದರು ಅಂದು ಬಿಡಲಾಗದು/...
ಗೊಬ್ಬರದ ಕೊರತೆ ಕಂಡು ಬಂದಿದೆ.. ಅದಕ್ಕೇ ಗಲಾಟೆ ಆಗಿದೆ.. ಅದಕ್ಕೆ ಗೋಲಿಬಾರ್ ಮಾಡೋಂತಾದ್ದೇನಿತ್ತು???

ರೈತರು ಅಂತವರಲ್ಲ, ಇಂತವರಲ್ಲ ಅಂತ ಯಾಕೆ ಅಂದುಕೋತೀರ...??? ತೀರ ಹತಾಶರಾದ ರೈತರು ಬಸ್ ಸುಟ್ಟರೂ .. ಅವರ ನೋವಿನ ಆಳ ತಿಳಿದು ಸರಕಾರ ಕೂಡಲೇ ಸಂಬಾಳಿಸಬೇಕಾಗುತ್ತದೆ.. ಸಾಂತ್ವನ ಹೇಳಿ.. ಆ ಹೊತ್ತಿಗೆ ಕೂಡಲೆ ಏನಾದರು action ತುಗೋಬೇಕು.. ಬಿಟ್ಟು ಗೋಲಿಬಾರ್ ಮಾಡಿದ್ದು,.. ತಪ್ಪು....

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 6:01am — ahankari

ಉ: ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು...

ahankari's picture

ಹತಾಶೆಗಳ್ಳುವ ಹಕ್ಕು ಪೊಲೀಸರಿಗೂ ಇದೆ ತಾನೆ ? ಸಾವಿರಾರು ೈತರು ಕಲ್ಲು ತೂರಿಕೊಂಡು , ಜನ ಸಾಮಾನ್ಯರಿಗೆ ತೊಂದರೆ ಉಂಟು ಮಾಡಿದರೆ ಪೊಲಿಸರೇನು ಮಾಡಬೇಕು. ಪೊಲಿಸರು ಎಲ್ಲರಂತೆ ಮನುಷ್ಯರೇ , ಕಲ್ಲು ಹೊಡೆದರೆ ಅವರಿಗೂ ನೋವಾಗುತ್ತೆ, ಇತರ ಜನಸಾಮಾನ್ಯರನ್ನು ಕಾಪಾಡುವುದು , ಅವರ ಕರ್ತವ್ಯ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಾಯ
  • ರಾಜಕೀಯ
  • ಅವಳ ವಿದ್ಯಾಭ್ಯಾಸವೇನು . ಗೊಂದಲ ಬಿಡಿಸಿ
  • ಕವಿತೆ: ಪೋಲೆಂಡ್: ಯುಗದ ಮಕ್ಕಳು
  • Exit poll ಎಂಬ trilling ಶೋ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 6:37am
  • Chamaraj
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 6:31am
  • Chamaraj
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 6:25am
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
  • manjunath s reddy
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 1:31am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 8, 2008 - 1:29am
ಇನ್ನಷ್ಟು


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator