ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಎಣ್ಮಯ ಎಂದರೆ ಯಾರು

June 13, 2008 - 10:16am — roopablrao

ನೆನ್ನೆ ಚಂದನದಲ್ಲಿ ಥಟ್ಟಂತ ಹೇಳಿ ಕಾರ್ಯಕ್ರಮ ಬರುತ್ತಿತು
ಅಲ್ಲಿ ಒಂದು
ಎಣ್ಮಯ ಎಂಬ ಮಾತಿತ್ತು
ನಂತರ ನಿರೂಪಕರು
ಎಣ್ಮಯ ಎಂದರೆ
ಶಿವನ ಹೆಸರು
ಎಂಟು ಮೈಯ್ಯುಳ್ಳವನು ಎಂದು ವಿವರಿಸಿದರು
ಶಿವನಿಗೆ ಎಂಟು ಮೈ ಎಂಬ ಕಲ್ಪನೆಯೇ ನನ್ಗೆ ಹೊಸದು

ತಿಳಿದವರು ಹಿನ್ನೆಲೆ ವಿವರಿಸುವಿರಾ

‹ ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ ಕನ್ನಡ ಪದಗಳ ಬಳಕೆಯಲ್ಲಿನ ಮುಜುಗರವನ್ನು ಮೀರೋದು ಹೇಗೆ ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 178 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 21, 2008 - 10:44am — mahesha

ಉ: ಎಣ್ಮಯ ಎಂದರೆ ಯಾರು

mahesha's picture

ಎಣ್ + ಮಯ್ಯ( ಮಯ್‌ಯವನು )= ಎಣ್ಮಯ್ಯ.

ಎಣ್ ಇದು ಎಂಟು ಎಂದು ಹೇಳಲಿರುವ ಮುನ್ನೊಟ್ಟು/prefix

ಎಣ್ + ಪರು = ಎಣ್ಬರು ( ಎಂಟು ಜನ)
ಎಣ್ + ದಿಸೆ => ಎಣ್ದಿಸೆ ( ಎಂಟು ದಿಕ್ಕುಗಳು )

ಎಣ್ಮಯ್ಯ = ಎಂಟು ಮಯ್ಯಿಗಳನ್ನು ಹೊಂದಿರುವವನು = ಶಿವ

ಇನ್ನು ಶಿವ ಎಂಟು ಮಯ್ಯಿಗಳ ಬಗ್ಗೆ ತಿಳಿಯಲು ನಾವು ’ಅಬಿಜ್ನಾನ ಶಾಕುಂತಲ’ ಎಂಬ ಕಾಳಿದಾಸ ಸಂಸ್ಕ್ರುತ ನಾಟಕದ ನಾಂದಿ( ಸುರುವಿನ ಹಾಡು)ಅನ್ನು ಆರಯಬೇಕು.
ಅಲ್ಲಿ ಈ ಎಂಟು ಮಯ್ಯಿಗಳ ಸಂಗತಿ ಬರುವುದು.

ನನ್ನ ಒಂದು ಸಿಕ್ಕಾಪಟ್ಟೆ ಹಳೆಯ ಬ್ಲಾಗಲ್ಲಿ ನೋಡಿ.
http://mahesh-bogadi.blogspot.com/2006/04/blog-post_11.html

ಅಭಿಜ್ಞಾನ ಶಾಕುಂತಲ ನಾಟಕದ ನಾಂದಿ

ಯಾ ಸೃಷ್ಟಿಃ ಸ್ರಷ್ಟುರಾದ್ಯಾ ವಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ
ಯೇ ದ್ವೇ ಕಾಲಂ ವಿಧತ್ತಃ ಶ್ರುತಿವಿಷಯಗುಣಾ ಯಾ ಸ್ಧಿತಾ ವ್ಯಾಪ್ಯ ವಿಶ್ವಂ|
ಯಾಂ ಆಹುಃ ಸರ್ವಬೀಜಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವಂತಃ
ಪ್ರತ್ಯಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ||

೧)
ಯಾ = ಯಾವ
ಸೃಷ್ಟಿಃ = ಸೃಷ್ಡಿಯು
ಸ್ರಷ್ಟುಃ = ಸೃಷ್ಟಿಕರ್ತನಿಂದ
ಆದ್ಯಾ = ಮೊದಲನೆಯದು, ಆದಿಯದು

ಮೊದಲ ಸೃಷ್ಟಿಯು ನೀರೆಂದು ನಂಬಿಕೆ.

೨)
ವಹತಿ = ಒಯ್ಯುವುದು
ವಿಧಿಹುತಂ = ಯಜ್ಞಯಾಗಾದಿಗಳಲ್ಲಿ ಆಹುತಿಮಾಡಿದ್ದನ್ನು
ಯಾ = ಯಾವುದು
ಹವಿಃ = ಹವಿಸ್ಸು
ಚ = ಮತ್ತು
ಆಹುತಿಯನ್ನು ಒಯ್ಯುವುದು ಅಗ್ನಿ(ಬೆಂಕಿ)

೩)
ಹೋತ್ರಿ = ಯಜ್ಞವನ್ನು ಮಾಡಿಸುವವನು.

೪)೫)
ಯೇ = ಯಾವೆರಡು,
ದ್ವೇ = ಎರಡು
ಕಾಲಂ = ಕಾಲವನ್ನು
ವಿಧತ್ತಃ = ವಿಭಾಗಿಸಿತು.

ಕಾಲವನ್ನು ಎರಡುಭಾಗವಾಗಿ(ಹಗಲು, ಇರುಳು) ವಿಭಾಗಿಸುವುವು ಸೂರ್ಯ, ಚಂದ್ರ.

೬)
ಶ್ರುತಿವಿಷಯಗುಣಾ = ಶಬ್ದಕ್ಕೆ ಕಾರಣವಾದ ಗುಣ
ಯಾ = ಯಾವುದು
ಸ್ಧಿತಾ = ನೆಲೆಸಿರುವುದು
ವ್ಯಾಪ್ಯ = ಆವರಿಸಿ
ವಿಶ್ವಂ = ಜಗತ್ತನ್ನು, ಎಲ್ಲ ದಿಕ್ಕುಗಳಿಂದ

ಶಬ್ದಕ್ಕೆ ಕಾರಣವಾದದ್ದು ಆಕಾಶ.

೭)
ಯಾಂ = ಯಾರನ್ನು, ಯಾವಳನ್ನು
ಆಹುಃ = ಹೇಳುವರು
ಸರ್ವಬೀಜಪ್ರಕೃತಿಃ = ಎಲ್ಲ ಬೀಜಗಳಿಗೆ ಪ್ರಕೃತಿ, ಎಲ್ಲಿ ಜೀವಿಗಳ ಬೀಜಗಳು ಸಂಭವಿಸುವುವು
ಇತಿ = ಎಂದು

ಎಲ್ಲ ಬೀಜಗಳ ಮೊಳಕೆಗೆ ಕಾಣವಾದದ್ದು ಭೂಮಿ(ನೆಲ).

೮)
ಯಯಾ = ಯಾರಿಂದ, ಯಾವಳಿಂದ
ಪ್ರಾಣಿನಃ = ಪ್ರಾಣಿಗಳು, ಉಸಿರಾಡುವೆಲ್ಲ ಜೀವಿಗಳು, ಗಾಳಿಯಿಂದ ಬದುಕುವ ಜೀವಿಗಳು
ಪ್ರಾಣವಂತಃ = ಪ್ರಾಣವುಳ್ಳವಾಗಿವೆ, ಉಸಿರಾಡುತ್ತಿವೆ

ಉಸಿರಾಟಕ್ಕೆ ಕಾರಣ ಗಾಳಿ.

ಪ್ರತ್ಯಕ್ಷಾಭಿಃ = ಪ್ರತ್ಯಕ್ಷವಾದ, ಇಂದ್ರಿಯಗಳಿಂದ ಗ್ರಾಹ್ಯವಾದ
ಪ್ರಪನ್ನಃ = ಹೊಂದಿರುವವನು
ತನುಭಿಃ = ದೇಹಗಳಿಂದ, ಮೈಗಳಿಂದ,
ಅವತು = ರಕ್ಷಿಸಲಿ, ಕಾಪಾಡಲಿ
ವಃ = ಅವನು, ಆತ
ತಾಭಿಃ = ಅವುಗಳಿಂದ
ಅಷ್ಟಾಭಿಃ = ಎಂಟುಗಳಿಂದ
ಈಶಃ = ಶಿವನು, ಈಶ್ವರನು, ಒಡೆಯನು

ಸಮಗ್ರಾರ್ಥ:

(ಶಿವ)ಈಶ್ವರನಿಗೆ ಒಟ್ಟು ಎಂಟು ಮೈಗಳಿವೆ. ಅವು
೧)ಜಗತ್ತಿನಲ್ಲಿ ಮೊದಲಿಗೆ ಸೃಷ್ಟಿಯಾದ ನೀರು,
೨)ಹವಿಸ್ಸನ್ನು ಒಯ್ಯುವ ಅಗ್ನಿ
೩)ಯಜ್ಞವನ್ನು ಮಾಡಿಸುವವನು,(ಹೋತ್ರಿ)
೪)ಕಾಲವನ್ನು ಹಗಲು, ಇರುಳೆಂದು ಬೇರೆ ಮಾಡುವ ನೇಸರ,
೫)ಮತ್ತು ತಿಂಗಳು(ಚಂದ್ರ).
೬)ಶಬ್ದಕ್ಕೆ ಕಾರಣವಾದ ಆಕಾಶ(ಆಗಸ)
೭)ಎಲ್ಲ ಜೀವಿಗಳು ಹುಟ್ಟಿ, ಬೆಳೆಯಲು ಮೂಲಕಾರಣವಾದ ಭೂಮಿ(ನೆಲ).
೮)ಎಲ್ಲ ಪ್ರಾಣಿಗಳು ಉಸಿರಾಡಲು ಬೇಕಾದ ಗಾಳಿ.

ಈ ಎಂಟು ಮೈಗಳಿಂದ, ಶಿವನು ನಮ್ಮನ್ನು ಕಾಪಾಡಲಿ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2008 - 2:40pm — ವೈಭವ

ಉ: ಎಣ್ಮಯ ಎಂದರೆ ಯಾರು

ವೈಭವ's picture

ಸಕ್ಕತ್,
ಹಿಂದೊಮ್ಮೆ 'ಮಹಾಕಾಯ' ಎನ್ನುವುದನ್ನ ನಾನು ದೊಡ್ಡಮಯ್ಯ ಅಂತ ಕನ್ನಡಯ್ಸಿದ್ದೆ.

ಎಣ್ಮಯ(ಯ್ಯ)ನ ಮಗ ದೊಡ್ಡಮಯ್ಯ Smiling
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2008 - 9:42pm — Sunil Jayaprakash

ಉ: ಎಣ್ಮಯ ಎಂದರೆ ಯಾರು

Sunil Jayaprakash's picture

ಮಹೇಶನ ವಿವರಣೆ ತುಂಬಾ ಚೆನ್ನಾಗಿದೆ. ಅದಕ್ಕಾಗಿ ನನ್ನಿಗಳು.

ಹಾಗೆಯೇ, ನಂನ ಮತ್ತೊಬ್ಬ ಪಿರೆಂಡಿನ ಊರಲ್ಲಿ, 'ಹ'-'ಅ'ಗೂ 'ಹೆ'-'ಎ'-'ಯೆ'ಗೂ ಯತ್ವಾಸ ಇಲ್ವಂತೆ. ಗುಟ್ಟಾಗಿ ಹೇಳಿದ, ಎಣ್ಮಯ - ಹೆಣ್ಮಯ - ಪ್ರಕೃತಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
  • ಪಲ್ಲವಿಸು ವಸಂತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಶತಾವಧಾನಿ ಆರ್. ಗಣೇಶ್ ರವರ ಅಷ್ಟಾವಧಾವ
  • 'ಶಿವನುಟ್ಟ ಸೀರೆ'
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • pallavi.dharwad
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 6:32am
  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
ಇನ್ನಷ್ಟು


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator