ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಮಂಜುಗುಣಿಪುರವಾಸ ಯಾರು?

June 14, 2008 - 12:04am — hamsanandi

ವಾದಿರಾಜರ ಒಂದು ದೇವರನಾಮದಲ್ಲಿ ಹೀಗೆ ಬರುತ್ತೆ:

ಮನ್ನಿಸೋ  ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ

ಇಲ್ಲಿ ಶ್ರೀ ವೆಂಕಟೇಶನು ಮಂಜುಗುಣಿಪುರವಾಸನಾದ ಇನ್ನಾರೋ ದೇವರಿಂದಲೂ (ಶಿವನಿರಬಹುದು ಅನ್ನುವುದು ನನ್ನ ಊಹೆ ಸ್ತುತಿಸಲ್ಪಟ್ಟವನು ಎಂದು ವರ್ಣಿಸಲಾಗಿದೆ.

ಈ ಮಂಜುಗುಣಿಪುರ ಎಲ್ಲಿದೆ? ಅಥವಾ ಇನ್ನಾವುದೋ ಊರಿಗೆ ಇರುವ ಎರಡನೇ ಹೆಸರೇ ಇದು? 

ಅರಿತವರು ದಯವಿಟ್ಟು ತಿಳಿಸಿ.

-ಹಂಸಾನಂದಿ

‹ ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? ಹೊಸ ಪದರಚನೆಗೆ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 470 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 14, 2008 - 1:19am — keshav

ಉ: ಮಂಜುಗುಣಿಪುರವಾಸ ಯಾರು?

keshav's picture

ಮಂಜುಗುಣಿ ಶಿರ್ಸಿಯಿಂದ ೩೦ ಕಿ ಮಿ ಇರಬಹುದು. ಅಲ್ಲೊಂದು ಪುರಾತನ ವೆಂಕಟೇಶನ ದೇವಸ್ಥಾನವಿದೆ. ವಾದಿರಾಜರ ಸೋದೆ ಅಲ್ಲಿಂದ ತುಂಬ ದೂರವೇನಿಲ್ಲ.
ಕೇಶವ
Visit my blog:
http://kannada-nudi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 2:26am — hamsanandi

ಉ: ಮಂಜುಗುಣಿಪುರವಾಸ ಯಾರು?

hamsanandi's picture

ಕೇಶವ ಅವರೆ,

ನಿಮ್ಮ ಉತ್ತರಕ್ಕೆ ಧನ್ಯವಾದಗಳು.

ಹಾಗಾದರೆ, ಮಂಜುಗುಣಿಪುರವಾಸ ಸನ್ನುತ ಅನ್ನುವುದನ್ನು ಅರ್ಥೈಸುವುದು ಸ್ವಲ್ಪ ತೊಡಕೇ ಆಗುತ್ತೆ. (ಏಕೆಂದರೆ, ವೆಂಕಟೇಶನೇ ವೆಂಕಟೇಶನಿಗೆ ನಮಿಸುವದು ಸರಿಯಿಲ್ಲವಲ್ಲ?). ನಾನು ಕೊಟ್ಟ ಸಾಲಿನಲ್ಲಿದ್ದ ಸನ್ನುತ ಅನ್ನುವ ಪದ ತಪ್ಪಿತ್ತೋ ಏನೋ...

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 10:03am — kannadakanda

ಉ: ಮಂಜುಗುಣಿಪುರವಾಸ ಯಾರು?

kannadakanda's picture

ಇದನ್ನು ಬರೆದವರು ವಾದಿರಾಜರೋ ಅಥವಾ ಇನ್ನಾರೊ ಕವಿಯಿರಬಹುದು. ಅವರು ಮಂಜುಗುಣಿಯಲ್ಲಿ ವಾಸಮಾದಿಕೊಂಡಾಗ ಅಲ್ಲಿನ ವೆಂಕಟೇಶನನ್ನು ಸ್ತುತಿಸಿರಬಾರದೇಕೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 12:23pm — aniljoshi

ಉ: ಮಂಜುಗುಣಿಪುರವಾಸ ಯಾರು?

aniljoshi's picture

ಹಂಸಾನಂದಿಗಳೇ,
ವಾದಿರಾಜರು ಸನ್ನುತ ಅಂದರೆ, ಶ್ಲಾಘ್ಯನಾದವನೇ ಅಂತ ಬಳಸಿರಬಹುದೇ?‌ ಆಗ ವೇಂಕಟೇಶ ಮಂಜುಗುಣಿಪುರವಾಸನೆ, ಸನ್ನುತನೆ, ಸದ್ಗುಣಪೂರ್ಣ, ಸುಪ್ರಸನ್ನ, ಹಯವದನ ಮನ್ನಿಸೋ ಅಂತಾಗುತ್ತದಲ್ಲವೆ?

ಅನಿಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 15, 2008 - 11:40pm — kannadakanda

ಉ: ಮಂಜುಗುಣಿಪುರವಾಸ ಯಾರು?

kannadakanda's picture

ಮನ್ನಿಸೋ ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ

ಇಲ್ಲಿ ಶ್ರೀವೆಂಕಟೇಶ ಮಂಜುಗುಣಿಪುರವಾಸಸನ್ನುತ ಎಂದಿದ್ದರೆ ಮಂಜುಗುಣಿಪುರವಾಸಿಯಾದ ವಾದಿರಾಜರಿಂದ ಚೆನ್ನಾಗಿ ಸ್ತುತಿಸಲ್ಪಟ್ಟ ಎಂದು ಅರ್ಥೈಸಬಹುದು. ಅಥವಾ ಮಂಜುಗುಣಿಪುರವಾಸ ಸನ್ನುತ ಎಂದು ಬಿಡಿಬಿಡಿಯಾಗಿದ್ದರೆ ಅನಿಲ್‍ ಹೇೞುವಂತೆ ಮಂಜುಗುಣಿಪುರವಾಸಿಯಾದ ಶ್ರೀವೆಂಕಟೇಶ (ಎಲ್ಲರಿಂದ) ಚೆನ್ನಾಗಿ ಸ್ತುತ್ಯನಾದ ಸದ್ಗುಣಗಳಿಂದ ಕೂಡಿದ ಸುಪ್ರಸಾದವನ್ನು ತೋಱುವ ಹಯವದನ ಮನ್ನಿಸೋ ಎಂದು ಅರ್ಥೈಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 11:28am — kannadakanda

ಉ: ಮಂಜುಗುಣಿಪುರವಾಸ ಯಾರು?

kannadakanda's picture

"ಮನ್ನಿಸೋ ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ"
ಇದು ನಿಜಕ್ಕೂ ವಾದಿರಾಜರವರೆ ಮಂಜುಗುಣಿಯಲ್ಲಿ ವಾಸವಾಗಿದ್ದು ಆಗ ಬರೆದದ್ದೆಂಬುದಱಲ್ಲಿ ಸಂಶಯವೇ ಇಲ್ಲ. ಅವರ ಎಲ್ಲಾ ಕೀರ್ತನೆಗಳು ಅವರ ಇಷ್ಟ ದೇವರಾದ ಹಯಗ್ರೀವನ (ವಿಷ್ಣುವಿನ ಒಂದು ರೂಪ) "ಹಯವದನ" ಎಂಬ ಅಂಕಿತದಲ್ಲಿ ಪೂರ್ಣವಾಗುತ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿ|| ರಾಶಿ (ಡಾ| ಎಂ ಶಿವರಾಂ) ಜನ್ಮ ಶತಾಬ್ದಿ ಸಮಾರೋಪ ಸಮಾರಂಭ
  • ಪ್ರೇಮದ ಓಲೆ
  • ವೀಚುಕೊಂಡ ಎಲ್ಲಿದೆ?
  • ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ
  • "ಕಾವೇರಿ - ಒಂದು ಚಿಮ್ಮು ಒಂದು ಹೊರಳು" ಪುಸ್ತಕ ಬಿಡುಗಡೆ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:16am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:13am
  • hamsanandi
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 5:33am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 11, 2008 - 1:48am
ಇನ್ನಷ್ಟು


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator