ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!

June 16, 2008 - 12:40pm — mahesha

ಇಲ್ಲಿ ಕೆಲವರು ’ಇದಂನು’ ’ಹೀಗೆ’ ಉಲಿಯಬೋದು, ಹಾಗೆ ಉಲಿಯಬೇಕು, ಅಂತೆಲ್ಲ ಹೇಳ್ತಾ ಇದ್ದಾರೆ.. ಇಲ್ಲಿ ’ಬಹುದು/ಬೇಕು’ವಿನ ಗೊಡವೆ ಏಳೋದೇ ಇಲ್ಲ.

ಆದರೆ ನಾವು ಬರೆದಂತೇ ಉಲಿಯಬೇಕು ಅಂನೋ ಮಾತು ಸರಿಯಲ್ಲ, ಜೊತೆಗೆ ಬರೆದುದನಂನೆಲ್ಲ ೧೦೦% ತಿಳಿಯಾಗಿ ಸ್ಪಶ್ಟವಾಗಿ ಉಲಿಯಲು ೯೯.೯೯೯೯೯೯೯% ಮಂದಿಗೆ ಆಗುವುದೂ ಇಲ್ಲ ( ಶಂಕರಬಟ್ಟರ ಮಾತಲ್ಲಿ ಹೇಳೋದಾದರೆ, ಕೆಲವರು ತಾವು ಸಕ್ಕತ್ತಾಗಿ ಉಲೀತೀವಿ ಎಂದು ಅಂದುಕೊಂಡರೂ ಅವರ ನಾಲಗೆ ಉಲಿಯಲಾರದು.. ಎಂತ ದೊಡ್ಡ ಬಾಶಾಪಂಡಿತನೂ ’ಬಂದಳು’ ಅನ್ನು ಒಂದು ಸರತಿಯಾದು ’ಬಂದ್ಲು’ ಎಂದೇ ಎಂದಿರ್ತಾನೆ, ಸ್ವಲ್ಪವನ್ನು ಸೊಲ್ವ ಎಂದು ಹೇಳೇ ಹೇಳಿರ್ತಾನೆ )

ಸಂಗತಿ ಹೀಗಿರುವಾಗ...

ಬರವಣಿಗೆ ಸಂಗತಿಯ ಹುರುಳು, ತಿರುಳು ಹೇಳಿದರೆ ಸಾಕು ಹೊರತು, ಅದು ನಂಮ ಉಲಿಕೆ/pronunciation ಅಂನೂ ಹೇಳಬೇಕಾಗಿಲ್ಲ, ಅದು ನಂಮ ಉಲಿಕೆಯಂನು ಒಂದು ಕಟ್ಟುಪಾಡಿಗೆ ಸಿಕ್ಕಿಸಬೇಕಾಗಿಲ್ಲ.

ಮಾದರಿ:
"ವಿಶೇಷವಾಗಿ ಒಂದು ಪ್ರಶ್ನೆಗೆ ಹಲವಾರು ಉತ್ತರಗಳಿರಬಹುದು"
"ವಿಶೇಶವಾಗಿ ಒಂದ್ ಪ್ರೆಶ್ಣೆಗೆ ಹಲವಾರ್‍ ಉತ್ರಗಳಿರ್ಬೋದು"
"ವಿಸೇಸವಾಗಿ ಒಂದ್ ಪಸ್ನೆಗೆ ಹಲವಾರ್‍ ಉತ್ರಗೊಳಿಬೋದು"

ಕಂನಡದಲ್ಲಿ ದಿನದಿನ ಜಂಬಾರ ನಡೆಸುವವರಿಗೆ, ಮೇಲಿನ ಮೂರು ಸಾಲುಗಳು ಸಂಗತಿ ಏನೆಂದು ಹೇಳೇ ಹೇಳಿವೆ.. ಈ ಮೂರು ಸಾಲಲ್ಲಿ ಯಾವುದೇ ಒಂದನ್ನು ಬಂದು ಒಬ್ಬರು ನಂಮ ಬಳಿ ಉಲಿದರೂ, ಸಂಗತಿ ಏನೆಂದು ತಿಳಿಯುವುದು....

ಆದರೆ...
ನಂಮ ಉಲಿಕೆಯನ್ನು ನಿರ್ದರಿಸುವಂತದ್ದು/ತೀರ್ಮಾನಿಸುವಂತದ್ದು/ಇಂತೇ ಎಂದು ಹೇಳುವಂತದ್ದು ನಮ್ಮ ಬುಡಕಟ್ಟಿನ ಉಲಿಕೆಯ ಬಗೆ/Ethical phonology. ಕಂನಡಕ್ಕೆ ಕಂನಡ ಬುಡಕಟ್ಟಿನ/ಜನಾಂಗದ ಉಲಿಕೆಬಗೆ, ತಮಿಳಿಗೆ ಅವರದ್ದು..

ತಂಮ ಉಲಿಕೆಬಗೆಯಲ್ಲಿ ಇಲ್ಲದ ಸದ್ದುಗಳಂನು ಆ ಬುಡಕಟ್ಟಿನ ಮಂದಿ ಉಲಿಯದಿದ್ದರೆ ಅದು ಯಾವ ತಪ್ಪು ಕೂಡ ಅಲ್ಲ... ಆದರೆ ಒಂದು ಬುಡಕಟ್ಟಿನ ಉಲಿಕೆಬಗೆಯಲ್ಲಿ ಇಲ್ಲದ ಸದ್ದುಗಳಂನು ಉಲಿಸುವುದು/ಪಾಠ ಹೇಳಿ ಉಲಿಸುವದು, ಸಹಜವಲ್ಲದ, ಹೇರಿಕೆಯ, ಮತ್ತು ಗೋಜಲಿನ ಸಂಗತಿ. ಮತ್ತು ಅದು ಪೂರ್ತಿ ಮಾಡಲಾರದ್ದು ಕೂಡ.

ಇಂದು ನಂಮ ಕಲಿಕೆಯ ಪದ್ದತಿಯಲ್ಲಿ ಇದೇ ತಪ್ಪು ಇರುವುದು.

ಒಬ್ಬ ಹುಟ್ಟುಗಂನಡಿಗ, ತಾಯ್ನುಡಿಕಂನಡಿಗ, ಕಂನಡ ಬಿಟ್ಟು ಬೇಱೆ ನುಡಿಯ ಗಾಳಿಯೂ ಸೊಂಕದಾತ ಎಂದೂ ೧೦೦% ಸರಿಯಾದ ಕಂನಡವಂನೇ ಮಾತಾಡುವುದು.. ಆದರೆ ನಂಮ ಕಲಿಕೆ ಅಂತಹ ಕಂನಡವಂನು ಅಶಿಶ್ಟ ಮತ್ತು ತಪ್ಪು ಎಂದು ಕರೆಯುವುದು.. ಇದು ಸರಿಯಲ್ಲ.!!

ನಂನಿ!

‹ ಕನ್ನಡ ವ್ಯಾಕರಣ ಚೆಕರ್ ಪದದ ಮೂಲ ›
  • ವ್ಯಾಕರಣ
~.~
  • Login or register to post comments
  • 247 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 16, 2008 - 4:06pm — vikashegde

ಉ: ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!

vikashegde's picture

ಮತ್ತದೇ ರಾಗ, ಮತ್ತದೇ ಹಾಡು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 17, 2008 - 12:41pm — mahesha

ಉ: ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!

mahesha's picture

ಕನ್ನಡಿಗರ ಉಲಿಕೆ ಬಗ್ಗೆ ತಿಳಿಯಲು ಶಂಕರ ಬಟ್ಟರ ’ಕನ್ನಡ ನುಡಿ ನಡೆದು ಬಂದ ದಾರಿ’ ಓದಿರಿ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 17, 2008 - 12:44pm — vikashegde

ಉ: ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!

vikashegde's picture

ಸರಿ.. ನೆರವಾಯಿತು.. ಅರಿವಾಯಿತು ನಿಮ್ಮಿಂದ.
ನಂನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
  • ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
  • ಕಂನಡ ಸಂಗಗಳು ಯಾಕೆ ಇಷ್ಟೊಂದು?
  • ಕನ್ನಡದಲ್ಲಿ ಞ ಮತ್ತು ಙ
  • ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator