ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ನಮ್ಮೆ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವಾಗ ಗುಲ್ಬರ್ಗ,ಬಿಜಾಪುರ,ಬೀದರ್,ಶಿವಮೊಗ್ಗ ಈ ಎಲ್ಲ ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳ ಅವಶ್ಯಕತೆ ಇದಯೆ?
ನನಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ, ದಯವಿಟ್ಟು ಆ ಸ್ಥಳಗಳಲ್ಲಿ ಈ ವಿಮಾನ ನಿಲ್ದಾಣದ ಯೋಜನೆಯ ಪ್ರಾಮುಖ್ಯತೆ ಎಷ್ಟಿದೆ ಅಂತ ತಿಳಿಸಿ.

- Login or register to post comments
- 269 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ಒಂದು ರೀತಿಯಲ್ಲಿ ಬೇಕು, ಅಭಿವೃದ್ಧಿಯಾಗಬೇಕಿದೆ, ಆದರೆ ಇರುವ ರೋಡುಗಳು ಸರಿ ಮಾಡದೆ, ಮೂಲ ಸೌಕರ್ಯಗಳನ್ನು ಉತ್ತಮಪಡಿಸದೇ ವಿಮಾನ ನಿಲ್ದಾಣಕ್ಕೇ ನೇರ ಕೈ ಹಾಕಿದರೆ ಹೊರಬರುವುದು ಪ್ರಶ್ನೆಗಳೇ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
ಸರ್ಕಾರದವರು ನಮಗೆ ಕೊಡಲು ಬಯಸಿರುವ ಉಡುಗೊರೆ ಎಂದ್ರೆ "ಹೊಟ್ಟೆಗೆ ಹಿಟ್ಟು ಇಲ್ಲದೆ ಹೋದ್ರೂನು ಜುಟ್ಟಿಗೆ ಮಲ್ಲಿಗೆ ಹೂ" ಮುಡಿಸುತ್ತೇವೆ ಎಂಬ ಭರವಸೆ
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ನನ್ನ ಪ್ರಕಾರ ಈಗ ಕರ್ನಾಟಕದಲ್ಲಿ ಇರುವಂತಹ ಏರ್ಪೋರ್ಟ್ ಗಳ ಸಂಖ್ಯೆ ಸುಮಾರು ೧೧ ಇದೆ. ಇವೆಲ್ಲವು ಬೆಳಗಾವಿ, ಬಳ್ಳಾರಿ,ಬಿದರ್,ಹಾಸನ,ಹುಬ್ಬಳ್ಳಿ,ಮಂಗಳೊರು, ಮೈಸೊರು , ಬೆಂಗಳೊರು ಮತ್ತು ಯಲಹಂಕದಲ್ಲಿ ಇವೆ. ಅಂದರೆ ಇದರ ಅರ್ಥ ಕರ್ನಾಟಕದಲ್ಲಿ ಏರ್ಪೋರ್ಟ್ ಗಳು ಅಗತ್ಯಕಿಂತ ಹೆಚ್ಚೇ ಇವೆ.
ಈ ಸರ್ಕಾರದ ಯೋಜನೆಗಳೆಲ್ಲ ಈ ಕುತಂತ್ರಿ ಮಂತ್ರಿಗಳು ಮಾಡುತಿರುವ ಪಿತೋರಿ. ಅವರು ತಮ್ಮ ತಮ್ಮ ಊರಿಗೆ ಸರ್ರನೆ ಹೋಗಿ ಬರಲು ಯೋಜನೆಯ ರೊಪದಲ್ಲಿ ಅಯೋಗ್ಯ ರೀತಿಯಲ್ಲಿ ವರ್ತಿಸುತಿದ್ದಾರೆ. ಇದಕ್ಕೆ ನಾವು (ಕರ್ನಾಟಕದ ಜನತೆ) ಅವಕಾಶ ಕೊಡಬಾರದು. :x
ಈಗಿನ ತೈಲೊತ್ಪನ್ನಗಳ ಬೆಲೆ ಹೆಚ್ಚುತಿರುವ ದೃಶ್ಟಿಯಿಂದ ಕರ್ನಾಟಕದಲ್ಲಿ ಮತ್ತೊಂದು ಏರ್ಪೋರ್ಟ್ ಬೇಕಾಗಿಯೇ ಇಲ್ಲ.ಅದೊ ಅಲ್ಲದೆ ಪ್ರತಿಯೊಂದು ಜಿಲ್ಲೆ, ತಾಲೊಕಿನಲ್ಲಿ ಏರ್ಪೋರ್ಟ್ ಇಟ್ಟು ದೇಶ ನಡೆಸುವಷ್ಟು ಭಾರತ ಮುಂದುವರೆದಿಲ್ಲ (ಭಾರತೀಯರು ಮುಂದುವರೆಸಿಲ್ಲ ಎನ್ನಬಹುದು).
ಊರಿಗೊಂದು ಏರ್ಪೋರ್ಟ್ ಇಟ್ಟು ಪ್ರಕೃತಿಯ ಸಂಪನ್ಮೊಲವಾದ ಇಂದನವನ್ನು ಹೀಗೆ ವ್ಯೇಯ ಮಾಡುತ್ತಿದ್ದರೆ ಭಾರತಕ್ಕೆ ಮುಂದಿನ ೭ ವರ್ಷದಲ್ಲಿ ಇಂಧನವೇ ಸಿಗದಂತಾಗುತ್ತದೆ.
ಈಗಾಗಲೆ ವಿರ್ಜಿನ್ ಏರ್ವೇಸ್ ನಂತಹ ಕಂಪನಿಗಳು ತೈಲೊತ್ಪನ್ನಗಳ ಬೆಲೆ ಹೆಚ್ಚಳಿಕೆಯಿಂದ ಮತ್ತು ಪರಿಸರದ ಮೇಲಾಗುತಿರುವ ಹತ್ಯಾಚಾರದ ಹಿತದೃಶ್ಟಿಯಿಂದ ತಮ್ಮ ಸೇವೆಯ ವಿಸ್ತೀರ್ಣವನ್ನು ಅರ್ಧದಷ್ಟು ಇಳಿಸಿವೆ. ಎಷ್ಟೋ ವಿಮಾನಗಳನ್ನು ಗ್ಯಾರೇಜಿನಲ್ಲಿ ಇಟ್ಟು ಬೀಗ ಜಡಿದಿದ್ದಾರೆ.
"ಸುಂದರ ಜೀವನ ನಮದಾಗಿಸಲು ಪ್ರಕೃತಿಯನ್ನು ಕೊಲ್ಲ ಬೇಕೆ...!!"
-ಯುವಪ್ರೇಮಿ
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ವಂದನೆಗಳು. ನನಗೂ ಹಾಗೆ ಅನ್ನಿಸಿತು, ಆದ್ರೆ ಆಂತರಿಕ ಕಾರಣಗಳು ಗೊತ್ತಿರಲ್ಲಿಲ್ಲ. ಈಗ ಗೊತ್ತಾಯ್ತು ಅಂತ ಕಾರಣಗಳೆ ಇಲ್ಲ ಎಂದು.
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ಸರಕಾರ ಸಕ್ಕತ್ ಜಾಣತನ ಮಾಡಿದೆ...
ಸರಿಯಾಗಿ ರಸ್ತೆಗೆ ಟಾರ್ ಹಾಕಲು ಆಗಲ್ಲ.. ನಮ್ಮ ರಾಜ್ಯದ ರಸ್ತೆಗಳೋ ಕೆಟ್ಟದಾಗಿದೆ.. ಅದಕ್ಕೆ ಈ ಉಪಾಯ...
ಬೆಂಗಳೂರಿಂದ ಮಯಿಸೂರಿಗೆ ಪ್ಲೇನಲ್ಲಿ ಎಲ್ಲರೂ ಹೋದರೆ ಯಾವ ’ನೈಸ್’ ಪಜೀತಿ ಇಲ್ಲ !
=====================================
ಮಾಯ್ಸ!
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ನೊಡೋಣ ಅವ್ರ ಉಪಾಯ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ ಅಂತ
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ಯಾಕೆ ಕೊಡೋದಿಲ್ಲ..!
ಕೆಟ್ಟ ಕೆಲಸಗಳು ಸದಾ ತಂತಾನೆ ಕೊಡಿಬರುತ್ತದೆ...! ಒಳ್ಳೆ ಕೆಲಸಕ್ಕೆ ಮಾತ್ರವೆ ನೊರೆಂಟು ವಿಘ್ನಗಳು..!
-ಯುವಪ್ರೇಮಿ
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ರೋಡು ಮಾಡ್ಸಿ, ಅದು ಆ ಸರ್ಕಾರ ಬೀಳೋಕಿಂತ ಮುಂಚೇನೇ, ಮೂರ್-ಸಲ ಕಿತ್ತೋಗಿ, ಎರಡ್-ಸಲ ತೇಪೆ ಹಾಕಿ, ಎತ್ತಿನ ಗಾಡಿ ಹೋಗೋಕೂ ಲಾಯಕ್ಕಿಲ್ದಂಗಾಗಿ, ಜನ್ರ ಹತ್ರ ಕೆಟ್ಟ(?) impression ಬೀಳ್ಸಕೊಳೋದಕಿಂತ....., ಏರ್-ಪೋರ್ಟ್ ಕಟ್ಸಿ, ಅವ್ರವ್ರಿಗೆ ಬೇಕಾದ(?) ಹೆಸ್ರಿಟು, ’ನೋಡ್ರಪ್ಪಾ ನಾವು ಹದಿಕಾರದಾಗ ಇದ್ದಾಗ ಇಮಾನ ನಿಲ್ದಾಣಾ ಮಾಡಿದ್ವಿ, ನೀವೇನ್ ಕಿಸಿದಿದ್ರ್ಯಪಾ..’ಅಂತ ಎಲಕ್ಷನ್ ಟೈಮಲ್ಲಿ ಕಿಸ್ಕಳಾಕ ಇರ್ಲಿ ಅಂತ ಸರ್ಕಾರದೋರ ಇಂತ prestigous(?) ಯೋಜ್ನೆಗಳ್ನ ಮಾಡದು ಅಮ್ತ ನನ್ನ ಅನಿಸಿಕೆ.....
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ಹಾಗದ್ರೆ ಮುಂದಿನ ಮೊರು-ನಾಲ್ಕು ಚುನಾವಣೆ ಮುಗಿಯುವಷ್ಟರಲ್ಲಿ ಗಲ್ಲಿ ಗಲ್ಲಿಗೊಂದು ಏರ್ಪೋರ್ಟ್ ಮಾಡಿದ್ರು ಮಾಡಬಹುದು.....!
-ಯುವಪ್ರೇಮಿ
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ತುಂಬ ಚೆನ್ನಾಗಿ ಅರಿತಿದ್ದೀರಿ ನಮ್ಮ ರಾಜಕೀಯವನ್ನು
ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?
ಒಳ್ಳೆ ಪ್ರಶ್ನೆ ! ಈಗ ಬೆ೦ಗಳೂರಲ್ಲಿ ಹೊಸ ವಿಮಾನ ನಿಲ್ದಾಣ ಮಾಡಿದ ನ೦ತರ .. ಅವೆನ್ಯೂ ರೋಡ್ ದೊಡ್ಡದು ಮಾಡ್ತಾರ೦ತೆ..
ಯಾಕ೦ದರೆ ಸೀದಾ ಎರ್ ಪೊರ್ಟ್ಗೆ ಲಿ೦ಕ್ ಸಿಗಲಿ ಅ೦ತಾ . ಆದರೆ ಈಗ ಇ೦ದಿರಾನಗರದಲ್ಲಿ ಎರ್ ಪೊರ್ಟ್ಗೆ ಹೋಗೋದಕ್ಕೆ ಅ೦ತಾ
ಒ೦ದು Fly over ಕಟ್ಟಿದರು , ಆದರೆ ವಿಮಾನ ನಿಲ್ದಾಣ ಶಿಪ್ಟ್ ಆದ ಮೇಲೆ ಅಲ್ಲಿ ಅಷ್ಟು ಟ್ರಾಪಿಕ್ ಇಲ್ಲಾ.
ಹಿ೦ಗೆ ಸರ್ಕಾರ ಕೆಲ್ಸಾ ಮಾಡೊದು ನಮ್ಮ ಸರ್ಕಾರ.