ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?

ಸಹೃದಯಿ ಕನ್ನಡಿಗರಿಗೆ ನಮಸ್ಕಾರಗಳು. ನಾನು ಕೆಲವು ತಿಂಗಳುಗಳಿಂದ ಮಾಸ್ತಿ ಅವರು ಬರೆದ 'ಬಿಜ್ಜಳ ರಾಯ ಚರಿತೆ' (ಇದು ಒಂದು ಪ್ರಬಂಧಗಳ ಆಕರ) ಅನ್ನುವಂತಹ ಪುಸ್ತಕವನ್ನು ಹುಡುಕುತ್ತಿದ್ದೇನೆ. ಮೈಸೂರು ಹಾಗು ಮಂಗಳೂರು ವಿಶ್ವವಿದ್ಯಾಗಳ ಗ್ರಂಥಾಲಯಗಳಿಗೆ ಈ-ಮೇಲ್ ಸಹ ಕಳುಹಿಸಿದೆ ಆದರೆ ಅವರಿಂದ ಉತ್ತರ ಬರಲೇ ಇಲ್ಲ. ಅಂಕಿತ ಪುಸ್ತಕಕ್ಕೆ ಹೋಗಿ ವಿಚಾರಿಸಿದೆ ಆದರೆ ಅವರ ಪ್ರಕಾರ ಮಾಸ್ತಿ ಅವರು ಆ ಹೆಸರಿನ ಪುಸ್ತಕ ಬರೆದಿಲ್ಲ ಆದರೆ 'ಚನ್ನ ಬಸವ ನಾಯಕ' ಅನ್ನುವಂತಹ ಒಂದು ಪ್ರಬಂಧ ಬರೆದಿದ್ದಾರೆ ಎಂದರು. ದಯವಿಟ್ಟು ಇದರ ಬಗ್ಗೆ ಯಾರಲ್ಲಾದರೂ ಮಾಹಿತಿ ಇದ್ದರೆ ತಿಳಿಸಿ.

ವಿಶ್ವಾಸದಿಂದ,
ಚಲಪತಿ ರಾವ ಸಾನವಾಸಪುರ. (ನೇಸರ)

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?

hamsanandi's picture

ಚೆನ್ನಬಸವನಾಯಕ ಅನ್ನುವುದು ಮಾಸ್ತಿಯವರ ಒಂದು ಪ್ರಸಿದ್ಧ ಕಾದಂಬರಿ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wor...