ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿರೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ
ಕುವೆಂಪು "ದೋಣಿ ಸಾಗಲಿ" ಕವನವನ್ನು ಕುಕ್ಕರಹಳ್ಳಿಯ ಕೆರೆಯ ಮೇಲೆ ದೋಣಿವಿಹಾರದಲ್ಲಿದ್ದಾಗ ಬರೆದರಂತೆ. ಅದು ನಿಜವಾದರೆ ಈ ನೋಟ ಕಂಡೇ ಆ ಸಾಲುಗಳು ಬರೆದಿರಬೇಕು.
ಪ್ರತಿಕ್ರಿಯೆಗಳು
ದೋಣಿ ಸಾಗಲಿ ...
ಉ: ದೋಣಿ ಸಾಗಲಿ ...