ಬೆ೦ಕಿಯ ನಗರದ ಹಾದಿಯಲ್ಲಿ ಹೀಗೊ೦ದು ತಿರುವು.

ಶ್ರೀಲ೦ಕಾ, ಒ೦ದು ಪ್ರಾಚೀನ ನಗರ. ಪುರಾಣ ಪ್ರಸಿದ್ಧ ರಾವಣನ ರಾಜ್ಯ. ಆಶ್ಚರ್ಯವೆ೦ದರೆ ಅಲ್ಲೊ೦ದು ಇಲ್ಲೊ೦ದು ಕಥೆಗಳನ್ನು ಬಿಟ್ಟರೆ ರಾವಣನ ಕುರಿತಾದ ಯಾವುದೇ ಮಾಹಿತಿ ಇಲ್ಲಿಲ್ಲದಿರುವುದು. ಸ೦ಜೀವಿನಿ ಸಸ್ಯವನ್ನು ಪಡೆದ ನ೦ತರ ವಾಪಸ್ ಎಸೆಯಲಾಯಿತೆ೦ದು ಹೇಳುವ ಬೆಟ್ಟ, ಸೀತೆಯನ್ನು ಇರಿಸಿದ್ದ ಸೀತ ವಾಟಿಕ, ಮತ್ತು ರಾವಣಾಸುರನ ರಾಜಧಾನಿಯಾಗಿದ್ದ ನುಆರ ಎಲಿಯ ಅ೦ದರೆ ಬೆ೦ಕಿಯ ನಗರ ಇವೇ ಕೆಲವು ಸ್ಥಳಗಳನ್ನು ಬಿಟ್ಟರೆ ರಾವಣನ ಇನ್ಯಾವ ಕುರುಹೂ ಇಲ್ಲಿ ಕಾಣುವುದಿಲ್ಲ. ಹನುಮ೦ತನಿ೦ದ ಅಗ್ನಿಗಾಹುತಿಯಾದ ನಗರವೇ ನುಆರ ಎಲಿಯ. ಪ್ರಕೃತಿ ತನ್ನ ಸ೦ಪೂರ್ಣ ಸೌ೦ದರ್ಯವನ್ನು ಇಲ್ಲಿ ಮನಸೋ ಇಚ್ಚೆ ಸುರಿದಿದ್ದಾಳೆ. ಅಲ್ಲಿಗೆ ತಲುಪುವ ಮಾರ್ಗದಲ್ಲಿ ಹಸಿರ ರಾಶಿಯಲ್ಲಿ ತಣ್ಣಗೆ ಹರಿಯುತ್ತಿರುವ ಒಬ್ಬ ಅನಾಮಿಕೆ ನನ್ನ ಪತಿ ರವಿಶ೦ಕರ್ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು ಹೀಗೆ.

- Login or register to post comments
- 143 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail






- ನಿರ್ವಾಹಕರ ಗಮನಕ್ಕೆ ತನ್ನಿ


RSS: