ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?

ತಿರುಕರ ವಾಕ್ಯಗಳು :
ಧರೆಯು ನಿಂತಿದೆ ಪ್ರೇಮದಾಧಾರದೆ
ಪ್ರೇಮವೆಂಬುದೇ ಜಗದ ಮೂಲ ಮಂತ್ರ
ಪ್ರೇಮವೇ ತಾನೀಶ ಪಾಪಸೋಂಕದಕಿಲ್ಲ
ಪ್ರೇಮಒಂದಿಹುದಾಗಿ ತಿರೆಯ ಅಸ್ತಿತ್ವ
ಈ ವಿಶ್ವ ಸುಸ್ಥಿತಿಯಲ್ಲಿ ನಿಂತಿರುವುದು ಧನಕನಕವಸ್ತುಗಳಿಂದಲ್ಲ ; ವಿಶುದ್ಧ ಪ್ರೇಮದಿಂದ. ಮಾನವನಂತಹ ಸುಸಂಸ್ಕೃತನಷ್ಟೇ ಅಲ್ಲ, ಪಶು ಪಕ್ಷಿಗಳಲ್ಲೂ ಈ ಪ್ರೇಮವೇ ವಿಜೃಂಭಿಸಿದೆಯಲ್ಲಾ !

- Login or register to post comments
- 506 hits
- Email this image





RSS:
ಪ್ರತಿಕ್ರಿಯೆಗಳು
Re: ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?
ಮಲ್ಲಾಡಿಹಳ್ಳಿ ತಿರುಕರ ಪ್ರೇಮ ವಾಕ್ಯ ಮತ್ತೊಮ್ಮೆ ಕಿವಿಯಲ್ಲಿ ಗುನಿಸಿದಂತಾಯಿತು. ೧೯೮೬ ರಲ್ಲಿ ಯೋಗ ಶಿಬಿರದಲ್ಲಿ ಭಾಗವಹಿಸಿದಾಗ ಅವರ ಸಂಪರ್ಕ ಭಾಗ್ಯ ಪ್ರವಚನ ಸುಯೋಗ ಸಿಕ್ಕಿತ್ತು. ನಂತರ ಸಹ ಕಾರ್ಯನಿಮಿತ್ತ ಮೂರ್ನಾಕು ಸಾರಿ ಪಯಣಿಸಿದ್ದೆ. ನೆನೆಯುವ ಸುಮನಸ್ಕ ಜನರಿಂದಾಗಿ ತಿರುಕರು ಸದಾ ನಮ್ಮೊಂದಿಗಿದ್ದ ಭಾವನೆ ನನ್ನದು ನಿಮ್ಮದು ಸಹ ಹಾಗೆ ಅಂದ್ಕೋತಿನಿ...
Re: ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?
ಕಾದೇಶಮ್ಮಿಯವರಿಗೆ,
ನೀವು ಅವರ ಜೊತೆಗೆ ಬೆರೆತು, ೧೯೮೬ ರರ ಯೊಗಶಿಬಿರದಲ್ಲಿ ಪಾಲ್ಗೊಂಡಿದ್ದರ ಸವಿ ಸ್ಮೃತಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು. ಇಲ್ಲಿ ನಿಮ್ಮಂದಿಗೆ ಒಂದೋ ಎರಡೋ ವಿಷಯಗಳನ್ನು ತಿಳಿಸುವ ಆಸೆ.
ಅವರ [ ಶ್ರೀಗಳ ] ಶಿಬಿರ, ಹಾಗೂ ಆಸರೆಯಲ್ಲಿ ಯೋಗಶಿಕ್ಷಣ ಪಡೆದ ಪ್ರಭೃತಿಗಳ ಸಂಖ್ಯೆಗೆ ಕೊನೆಯಿಲ್ಲ. ಅವರಲ್ಲಿ ಅನೇಕರು, ಈಗ, ಮತ್ತು ಬಹಳ ಸಮಯದಿಂದಲೂ ಆಸಕ್ತರಿಗೆ, ಯೋಗವನ್ನು ಹೇಳಿಕೊಟ್ಟು ಧನವಂತರಾಗಿದ್ದಾರೆ. ಕೀರ್ತಿಗೆ ಪಾತ್ರರಾಗಿದ್ದಾರೆ. ಆದರೆ ಅವರೆಲ್ಲಾ ಮಾಡುವ ಒಂದು ಅಪರಾಧವೆಂದರೆ, ತಮ್ಮ ಇಂಟರ್ ನೆಟ್ ಸೈಟುಗಳಲ್ಲಿ "ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು "ಎಂದು ಆರಂಭಿಸಿ, ಬರೀ ತಮ್ಮ ಕಾರ್ಯಕ್ಷೇತ್ರದ ಬಗ್ಗೆ ಹೇಳಿಕೊಂಡು, ಜನರಿಗೆ ಯೋಗವನ್ನು ಮಾರುತ್ತಾರೆ ! ನಾನು ಹೇಳಿದ್ದು ಸರಿಯೋ ಹೇಗೆ; ನೀವೂ ಪ್ರಯತ್ನಿಸಿ ನೋಡಿ.
”ಶ್ರೀ ’ಗಳ ಬಗ್ಗೆಯಾಗಲಿ, ಅವರು ಹೇಗೆ ಮಲ್ಲಾಡಿಹಳ್ಳಿಯಲ್ಲಿ ತಮ್ಮ ಅಂತಿಮ ದಿನಗಳನ್ನು ಕಳೆದರು ಅನ್ನುವ ಬಗ್ಗೆ ಸ್ವಲ್ಪವೂ ಕಾಳಜಿ ತೋರಿಸಿಲ್ಲ. ಅಂತಹವರನ್ನು ನಾನು ಭಕ್ತರೆಂದು ಹೇಗೆ ಪರಿಗಣಿಸಲಿ ?
ಇದು ನನ್ನಂತಹ ಹಲವರಿಗೆ ಬೇಸರ ತರುವ ಸಂಗತಿ.
Re: "ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ"?
ವೆಂಕಟೇಶರೆ, ಮಲ್ಲಾಡಿಹಳ್ಳಿ ತಿರುಕರ ಅಂತಿಮ ದಿನಗಳ ಬಗ್ಗೆ ಸಾಧ್ಯವಾದಾಗ ಒಮ್ಮೆ ಬರೆದು ಹಂಚಿಕೊಳ್ಳುುತ್ತೀರ? ಅವರ ಬಗ್ಗೆ ತಿಳಿಯದ ಹಲವರಿಗೆ ಅವರ ಪರಿಚಯವಾಗುವುದು.
Re: "ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ"?
ಹರಿಯವರಿಗೆ,
ನಮಸ್ಕಾರಗಳು. ನೀವು ತಿಳಿದಂತೆ ಅವರ ಅಂತಿಮ ದಿನಗಳಲ್ಲಿ ನಿಜವಾಗಿಯೂ ಅವರು ಸಮಾಧಾನ ಚಿತ್ತರಾಗಿರಲಿಲ್ಲ, ಅನ್ನುವುದು ಅವರ ನಿಕಟ ವರ್ತಿಗಳ ಅಭಿಪ್ರಾಯ. ಅದು ಅನೇಕ ಮಗ್ಗಲುಗಳನ್ನು ಹೊಂದಿದೆ. ಖಂಡಿತ ಅದರ ಬಗ್ಗೆ ನಾನು ನನ್ನ ಅನಿಸಿಕೆಗಳನ್ನು ನಿಮ್ಮಂತಹ ಆಸಕ್ತರ ಬಳಿ ಹಂಚಿಕೊಳ್ಳುತ್ತೇನೆ - ಹರಿಯವರೆ.
ಧನ್ಯವಾದಗಳು.
ತಿರುಕರು ಅಂತ ಹೆಚ್ಚಾಗಿ ಕರಯುವುದು ನಮಗೆ ಸರಿಬರುವುದಿಲ್ಲ. ತಿರುಕ ಎನ್ನುವುದು ಅವರ ಕಾವ್ಯನಾಮ ಅಷ್ಟೆ. ಅವರು ಪೂಜ್ಯ ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು.