ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚಿತ್ರ ಪುಟಗಳು › ವ್ಯಂಗಚಿತ್ರಗಳು

ಆರ್. ಕೆ. ಲಕ್ಷ್ಮಣ್ ರ 'ವ್ಯಂಗ್ಯಚಿತ್ರಾಂಕಣ' ಈಗ ಸಪ್ಪೆಯಾಗಿದೆ !

April 2, 2007 - 7:01am — venkatesh
ಆರ್. ಕೆ. ಲಕ್ಷ್ಮಣ್ ರ  'ವ್ಯಂಗ್ಯಚಿತ್ರಾಂಕಣ'  ಈಗ  ಸಪ್ಪೆಯಾಗಿದೆ !

ನಾನೊಬ್ಬ ಲಕ್ಷ್ಮಣ್ ರ " ಫ್ಯಾನ್ " ಎಂದರೆ ಅಡ್ಡಿಯಿಲ್ಲ. ಏಕೆಂದರೆ ಬಹುಶಃ ೪೦ ವರ್ಷದ ನನ್ನ ಮುಂಬೈ ಜೀವನದಲ್ಲಿ ಅವರ ವ್ಯಂಗ್ಯ ಚಿತ್ರಾಂಕಣ ಮಾಡಿರುವ ಮೋಡಿ ಅನನ್ಯ ! ಅದೇನೋ ಅವರ ರೇಖೆಗಳು ನಮ್ಮನ್ನು ದಿಗ್ಭ್ರಮೆ ಮಾಡಿ ಹೊಟ್ಟೆ ಹುಣ್ಣು ಮಾಡುವುದಲ್ಲದೆ, ಒಂದು ವೈಚಾರಿಕ ಪ್ರೌವೃತ್ತಿಯನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ. ಎಷ್ಟೋ ಜನರ ವ್ಯಂಗ್ಯ ಚಿತ್ರಗಳನ್ನು ನಾನು ನೋಡಿದ್ದೇನೆ. ಆದರೆ ಲಕ್ಷ್ಮಣ್ ಒಂದು ಮಹಾನ್ ಸಂಸ್ಥೆ ಎಂದು ನನ್ನ ಅನಿಸಿಕೆ !
ವಿಷಯಗಳನ್ನು ಅಭ್ಯಾಸಿಸಿ ಅದನ್ನು ರೇಖೆಯಲ್ಲಿ ಇಳಿಸುವ ಕಾರ್ಯ ಅದನ್ನು ನೋಡಿ ನಕ್ಕಷ್ಟು ಸುಲಭವಲ್ಲ.

ರೇಖಾಚಿತ್ರಗಳೆಂದರೆ, ಏನೊ ನಗಿಸುವ ಒಂದು ಪರಿಯೆಂದು ಕೆಲವರು ತಿಳಿದಿದ್ದಾರೆ. ನಿಜವಾಗಿಯೂ ಅದಲ್ಲ. ಒಂದು ಸಮಗ್ರ ವೃತ್ತಪತ್ರಿಕೆಯ ಎಲ್ಲಾ ಪುಟಗಳಲ್ಲಿ ಅಡಗಿರುವ ಪ್ರಮುಖ ವರದಿಸಾರವನ್ನು ಅದು ತನ್ನ ಚಿಕ್ಕ ಅಂಕಣದಲ್ಲಿ ಮನಮುಟ್ಟುವಂತೆ ವಿವರಿಸಬಲ್ಲದು. ನಮ್ಮನ್ನು ಆಲೋಚನೆಗೆ ಎಳೆದೊಯ್ಯಬಲ್ಲದು.

ಶಂಕರ್ಸ್ ವೀಕ್ಲಿ, ಲಕ್ಶ್ಮಣರಿಗೆ ಸ್ಪೂರ್ತಿನೀಡಿದ ಒಂದು ಪತ್ರಿಕೆ. ಆದರೆ ನಿಜವಾಗಿ ಅವರು ಪ್ರಭಾವಿತರಾದದ್ದು, ಬ್ರಿಟಿಷ ಚಿತ್ರಕಾರ, ’ಡೇವಿಡ್ ಲೊ” ಅವರ ಪೊಲಿಟಿಕಲ್ ವ್ಯಂಗ್ಯ ಚಿತ್ರಾಂಕಣದಿಂದ !
ಬಾಲ್ಯದಲ್ಲಿ ಅವರ ತಾಯಿ ಟೆನ್ನಿಸ್ ಆಡುತ್ತಿದ್ದರು - ಮಹರಾಣಿ ಕ್ಲಬ್ಬಿನಲಿ, ಅವರು ಮೈಸೂರಿನಲ್ಲಿದ್ದಾಗ. ಅದೂ ಅಂದಿನ ಮಹಾರಾಣಿಯವರ ಜೊತೆಗೆ ! ಮನೆಗೆ ಬರುವಾಗ "ಪಂಚ್ " ಪತ್ರಿಕೆಯನ್ನು ತರುತ್ತಿದ್ದರಂತೆ. ಅದು ಲಕ್ಷ್ಮಣ್ ರವರನ್ನು ಪ್ರೇರೇಪಿಸಿತೆಂದು ಅವರು ಒಂದು ಕಡೆ ಹೇಳಿಕೊಂಡಿದ್ದಾರೆ.

ಆದರೆ ಒಂದು ಮಾತು ಸತ್ಯ. ಹುಟ್ಟನಿಂದಲೇ ವ್ಯಂಗ್ಯ ಚಿತ್ರಕಲೆ ಅವರ ಬೆನ್ನಿಗೆ ಅಂಟಿಕೊಂಡಿತ್ತು !
ಈ ಮಾರ್ಚ್ ತಿಂಗಳಿನಲ್ಲಿ ಒಂದು ವಿಶಯ ನಡೆಯಿತು. ಸುಮಾರು ೫೫ ವರ್ಷಗಳಿಂದ Times of India ದ ಮೊದಲ ಪುಟದಲ್ಲಿ ಬರಬೇಕಿದ್ದ ಅವರ ಚಿತ್ರ, ೫ ನೇ ಪುಟಕ್ಕೆ ವರ್ಗಾಯಿಸಲ್ಪಟ್ಟಿತ್ತು. ಇದು ಆದದ್ದು ಒಂದು ದಿನ ಮಾತ್ರ ! ನನಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಮೇಲಾಗಿ ಈಗ ಅವರು ತಾವೇ ಬರೆಯದೆ ಯಾರನ್ನೊ ತರಪೇತಿಮಾಡುತ್ತಿರಬಹುದು.

ಲಕ್ಷ್ಮಣ ರೇಖೆ ನಮಗೇನು ಹೊಸದೇ ?

  • ವ್ಯಂಗಚಿತ್ರಗಳು
~.~
  • Login or register to post comments
  • 564 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 2, 2007 - 8:06am — ASHOKKUMAR

Re: ಆರ್. ಕೆ. ಲಕ್ಷ್ಮಣ್ ನಿವೃತ್ತಿ ಆಗುವುದು ಒಳಿತು

ASHOKKUMAR's picture

ಬೆಂಗಳೂರು ಆವೃತ್ತಿಯಲ್ಲಿ ಲಕ್ಷ್ಮಣ್ ಹಲವಾರು ಸಲ ಒಳಪುಟಕ್ಕೆ ಸರಿದಿದ್ದಾರೆ. ಅನಾರೋಗ್ಯ ಪೀಡಿತ ಲಕ್ಷ್ಮಣ್ ಹಿಂದಿನ ಮಟ್ಟದ ಕಾರ್ಟೂನ್ ಬರೆಯುತ್ತಿಲ್ಲ. ಆದರೆ ಖುರ್ಚಿಗೆ ಅಂಟಿಕೊಳ್ಳುವ ರಾಜಕಾರಣಿಗಳನ್ನು ಛೇಡಿಸುವ ಲಕ್ಷ್ಮಣ್ ಸ್ವತಃ ತಾನು ನಿವೃತ್ತಿ ನಿರ್ಧಾರ ತೆಗೆದುಕೊಂಡಿಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ವ್ಯಂಗ್ಯಚಿತ್ರ ಚೆನ್ನಾಗಿದೆ.
  • ಯಾರಿಗ್ಕೊಟ್ರೂ ಕೊಡ್ಬೊದು ನಿವೃತ್ತಿ ; ಆದ್ರೆ ಲಕ್ಷ್ಮಣ್ಗೆ, ಹೇಗ್ಸಾಧ್ಯ ಮಾರಾಯ !
  • ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
  • ಹೊಸ ವರ್ಷದ್ ಭಾಷಣ ಪಾಡಾಗೈತ್ರಿ ಸಾಹೇಬ್ರೆ ; ಎಣ್ಣಿ ಬೆಲೆ ಏರಿದೆ, ಫಂಡ್ಸೆ ಇಲ್ರಿ, ರಫ್ತ್ ಬಂದಾಗದೆ, ಹಣದುಬ್ಬರ ಐತ್ರಿ. ಅದ್ಕೆ ಅವೆಲ್ಲ ನಾನು ಬಿಟ್ಟೀನಿ.
  • ಕಾಗೆ- ಆರ್. ಕೆ. ಲಕ್ಷ್ಮಣರ ವ್ಯಂಗಚಿತ್ರಪ್ರದರ್ಶನದ ಪ್ರಮುಖ ಆಕರ್ಶಣೆಯಂತೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಉಪನ್ಯಾಸಕ ಹಾಯ್ಲ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator