ಸಿಂಬಿಯೋಸಿಸ್ ಪುಣೆ, ತನ್ನ ವಿಶ್ವಭವನದ ಪ್ರಾಂಗಣದಲ್ಲಿ ಕಾಮನ್ ಮ್ಯಾನ್ ನ ಪುತಳಿ ಅನಾವರಣ ಮಾಡಿ ಗೌರವಿಸಿತ್ತು.

*ಆರ್ ಕೆ. ಲಕ್ಷ್ಮಣರ 'Comman man' ನ ಕಂಚಿನ ವಿಗ್ರಹ, ಪುಣೆಯ 'Symbiosis Institute', ನ 'symbiosis Vishvabhavan building' ಮುಂಭಾಗದಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಎತ್ತರ ೮ ಅಡಿಗಳು. ಲಕ್ಷ್ಮಣ್ ಮತ್ತು ಕಮಲಾ ಲಕ್ಷ್ಮಣ್ ಇದನ್ನು ಸಮರ್ಥಿಸಿ ತಮ್ಮ ಅನುಮತಿಯನ್ನು ಕೊಟ್ಟರು. ಆಗಿನ ರಾಷ್ಟ್ರಪತಿಗಳಾಗಿದ್ದ ಡಾ. ಕೆ. ಆರ್. ನಾರಾಯಣನ್ ೧೯ ರ ಡಿಸೆಂಬರ್, ೨೦೦೧ ರಂದು ಇದನ್ನು ಒಂದು ದೊಡ್ಡ ಸಮಾರಂಭದಲ್ಲಿ ಅನಾವರಣ ಮಾಡಿದ್ದರು. ಸಿಂಬಿಯಾಸಿಸ್ ಸಂಸ್ಥೆಯ ಸಂಸ್ಥಾಪಕಾ ನಿರ್ದೇಶಕ, ಪದ್ಮಭೂಷಣ ವಿಜೇತ, ಮತ್ತು ಛಾನ್ಸಲರ್ , ಡಾ. ಎಸ್. ಬಿ. ಮುಜುಂದಾರ್, ಆರ್. ಕೆ. ಲಕ್ಷ್ಮಣರ ಫ್ಯಾನ್ ! ಅವರ್ಯಾಕೆ, ಲಕ್ಷ್ಮಣರ ಭಂಟರು ಎಲ್ಲೆಡೆ ಇದ್ದಾರೆ.
ಲಕ್ಷ್ಮಣರ ನಂಟು, ಸಿಂಬಿಯಾಸಿಸ್ ಸಂಸ್ಥೆಯಜೊತೆಗೆ ಸುಮಾರು ೧೯೮೫ ನಿಂದಲೇ ಇದೆ. ಅಲ್ಲಿ ಅವರು ಎಮಿರಿಟಸ್ ಪ್ರೊಫೆಸರ್ ಆಗಿ ಸೇವೆಸಲ್ಲಿಸುತ್ತಿದ್ದಾರೆ.
ಕನ್ನಡ ನೆಲದಲ್ಲಿ ಜನ್ಮಿಸಿದ, ಲಕ್ಷ್ಮಣ್ ಮತ್ತು ಅವರ "ಕಾಮನ್ ಮ್ಯಾನ್ " ವ್ಯಂಗ್ಯಾಂಕಣ, ಅದರ ಜೊತೆಗೆ ಸಂಬಂದಿಸಿದ ಕಾಮನ್ ಮ್ಯಾನ್ ನಂಟು, ದೇಶದ ಪ್ರತಿಷ್ಠೆಯ ಸಂಕೇತವಾಗಿರುವುದು ನಮಗೆ ಹೆಮ್ಮೆಯಲ್ಲವೇ ! ಇಂತಹ ಸಾಧನೆ ಅಪರೂಪವೆಂದು ಹೇಳಬೇಕು.
*ಕೃಪೆ : ಟೈಮ್ಸ್ ಆಫ್ ಇಂಡಿಯಾ ಮತ್ತು ನೆಟ್

- Login or register to post comments
- 699 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- "ಏರ್ ಡೆಕ್ಕನ್ " ತಮ್ಮ ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ ಆರಿಸಿದ್ದಾರೆ.
- ೧೯೪೮ ರ ಮುಂಬೈ ಮಾನ್ಸೂನ್ ಪರಿಸ್ಥಿತಿ !
- ಕಾಗೆ- ಆರ್. ಕೆ. ಲಕ್ಷ್ಮಣರ ವ್ಯಂಗಚಿತ್ರಪ್ರದರ್ಶನದ ಪ್ರಮುಖ ಆಕರ್ಶಣೆಯಂತೆ !
- ಹೊಸ ವರ್ಷದ್ ಭಾಷಣ ಪಾಡಾಗೈತ್ರಿ ಸಾಹೇಬ್ರೆ ; ಎಣ್ಣಿ ಬೆಲೆ ಏರಿದೆ, ಫಂಡ್ಸೆ ಇಲ್ರಿ, ರಫ್ತ್ ಬಂದಾಗದೆ, ಹಣದುಬ್ಬರ ಐತ್ರಿ. ಅದ್ಕೆ ಅವೆಲ್ಲ ನಾನು ಬಿಟ್ಟೀನಿ.
- ಯಾರಿಗ್ಕೊಟ್ರೂ ಕೊಡ್ಬೊದು ನಿವೃತ್ತಿ ; ಆದ್ರೆ ಲಕ್ಷ್ಮಣ್ಗೆ, ಹೇಗ್ಸಾಧ್ಯ ಮಾರಾಯ !


RSS: