ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಪ್ರವಾಸ ಕಥನ ಚಿತ್ರಗಳು

’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ.

April 19, 2007 - 1:57pm — venkatesh
  ’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ  ಶಿವಮಂದಿರದ ನೋಟ.

ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಇರುವ ಬಯಲು ಹಾಗೂ ದಟ್ಟ ಕಾಡಿನ ಅನುಭವ ಪ್ರವಾಸಿಗರಿಗೆ, " ಹೋರ್ಸ್ಲಿ" ಎಂಬ ಹಿಲ್ ರೆಸಾರ್ಟ್ಸ್ ಜಾಗದಲ್ಲಿ ಸಿಗುತ್ತದೆ. ಇದನ್ನು ಮುಟ್ಟಲು ನನ್ನ ಮಗ ಮತ್ತು ಅವನ ಗೆಳೆಯ ಬೈಕ್ ತೆಗೆದುಕೊಂಡು ಹೋಗಿದ್ದರಂತೆ. ಸುಮಾರು ೧೫೦ ಕಿ.ಮೀ ಇರಬಹುದೆಂದು ಅವನ ಅಂದಾಜು. ನ್ಯಾಷನಲ್ ಹೈವೇ [NH4 ] ನಲ್ಲಿ ಹೊಸಕೋಟೆ, ಚಿಂತಾಮಣಿ, [ಕೋಲಾರ ಜಿಲ್ಲೆ], ಮದನಪಲ್ಲಿ, ಅಂಗಲ್ಲು, ಮುಖಾಂತರ ಪ್ರಯಾಣಮಾಡಿದರೆ , ಹೋರ್ಸ್ಲಿ ಹಿಲ್ಸ್, ಸಿಕ್ಕುತ್ತದೆ. ಆಂಧ್ರದಲ್ಲಿ ಇರುವ ಎರಡೇ ಹಿಲ್ ರೆಸಾರ್ಟ್ಸ್ ಗಳಲ್ಲಿ ಇದು ಮುಖ್ಯವಾದದ್ದು. [APTDC ] ಯವರು ನಡೆಸುವ ’ಪುನಾಮಿ’ ಎಂಬ ರೆಸಾರ್ಟ್ಸ್ ಇದೆ. ಅಲ್ಲಿನ ರೇಟ್ಸ್ :೫೦೦ ರೂ/- ನಿಂದ, ೭೩೫/-, ೮೪೦ ರವರೆಗಿದೆ. ಈಜುಕೊಳಕ್ಕೆ ; ೨೫ ರೂ ಒಬ್ಬರಿಗೆ; ಒಂದು ಬಾಟಲ್ ಬೀರ್ ಗೆ : ೭೦ ರೂ. ಒಂದು ’ಜಿಮ್’ ಕೂಡಾ ಇದೆಯಂತೆ. ಕಾಡು, ಮಧ್ಯೆ ಹೊಲಗಳು, ಚಿಕ್ಕ ಚಿಕ್ಕ ನೀರಿನ ಝರಿಗಳು, ಇವುಗಳಮಧ್ಯೆ, ಬೆಟ್ಟ ಹತ್ತಿಕೊಂಡು ಹೋಗಬೇಕು. ಸ್ವಲ್ಪವೂ ಬಸ್, ಕಾರು,ಗಳ ಪಲ್ಯೂಶನ್ ಇಲ್ಲವೇ ಇಲ್ಲ. ಎಲ್ಲೆಡೆ ಶಾಂತಿ, ಪಕ್ಷಿಗಳ ಚಿಲಿ-ಪಿಲಿ ಶಬ್ದಗಳು, ಮರದ ಎಲೆಗಳ ಶಬ್ದ . ನಮಗೆ ಅಲ್ಲಿರುವಷ್ಟು ಸಮಯ, ಆನಂದ ಉಲ್ಲಾಸಗಳನ್ನು ಪಡೆಯುವ ತಾಣ ಇದು.

ಅಲ್ಲಿನ *ಶಿವಮಂದಿರಕ್ಕಿಂತ ಅದರ ಹೊರ ಅಂಗಳದಲ್ಲಿ ನೆಟ್ಟ ದೊಡ್ಡ ದೊಡ್ಡ ಕಲ್ಲು ಕಂಬಗಳ ದೃಷ್ಯ ಬಹಳ ಮುದಕೊಡುವಂತಹದು.

ಇಲ್ಲಿನ ನಮ್ಮ ಶಿವ ಮಂದಿರವನ್ನು ನೋಡಿದಾಗ ಯೂರೋಪಿನ ಗ್ರೀಸಿನ ಬಳಿ ಇರುವ ಪಾರ್ಥೆನಾನ್ - ಅತಿ ಪ್ರಾಚೀನ ದೇಗುಲವನ್ನು ನೋಡಿದ ಅನುಭವವಾಗುತ್ತದೆ.

ಅಥವಾ ಪಾರ್ಥೆನಾನ್ ನೋಡಿದಾಗ - ಹೋರ್ಸ್ಲಿಯಲ್ಲಿರುವ ನಮ್ಮ ಪ್ರಾಚೀನ ಶಿವ ಮಂದಿರವನ್ನು ನೋಡಿದ ಅನುಭವವಾಗುತ್ತದೆ ! ಅನ್ನಲು ಸಾದ್ಯವೆ. ಅಷ್ಟಕ್ಕೂ ನಮ್ಗೂ ಗ್ರೀಸಿನವರಿಗೂ ಯಾಕ್ ಪೈಪೋಟಿ.

*ನಮ್ಮ ಮನೆಯ ಫ್ಯಾಮಿಲಿ ಫೋಟೋ ಆಲ್ಬಮ್ ನಿಂದ.

  • ಪ್ರವಾಸ ಕಥನ ಚಿತ್ರಗಳು
~.~
  • Login or register to post comments
  • 870 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 22, 2007 - 8:26pm — muralihr

ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ.

muralihr's picture

ಫೋಟೋ ಚೆನ್ನಾಗಿದೆ.

ನಮ್ಮ ಜನ ಸಿಕ್ಕ ಸಿಕ್ಕ ಬೆಟ್ಟ ಗುಡ್ಡಗಳ ಮೇಲೆಲ್ಲಾ ಗುಡಿ ಕಟ್ತಾರಲ್ಲಾ..
ಅವರಿಗೆ ಎಷ್ಟು ಭಯವಿತ್ತು (ರಾಜಕೀಯ , ಯುದ್ಧ, )ಅ೦ತಾ ತಿಳಿಯುತ್ತೆ.
ಕಟ್ಟಿದ್ದು ಒಳ್ಳೆದಾಯ್ತು. ಅಕಸ್ಮಾತ್ ಕಟ್ಟಿಲ್ಲಾ ಅ೦ದರೆ ಈ ಬೆಟ್ಟಗಳೆಲ್ಲಾ ಗ್ರಾನೈಟ್ ವ್ಯಾಪಾರಿಗಳು ಕತ್ತರಿಸಿ
ಮನೆಗಳ ಬಾತ್ ರೂಮ ಗೋ ಅಥ್ವಾ ಅಡಿಗೆ ಮನೆಗೋ ಸಾಗಿಸಿಬಿದ್ಟಿದ್ದರು.ಅ೦ದರೆ ನಾವು ಕಲ್ಲನ್ನು ತಿನ್ನೋ
ಶಕ್ತಿ ಪಡೆದಿದ್ದೀವಿ.

ಗೀರ್ ಕಾಡಿನಲ್ಲಿ ಸಿಕ್ಕಾ ಪಟ್ಟೆ ದೇವಸ್ಥಾನಗಳಿದ್ದು , ಯಾತ್ರೆಗೆ ಭಕ್ತಾದಿಗಳೂ ಬ೦ದು ಹೋಗುವ ಪಯಣದಲ್ಲಿ
ಕಾಡು ಮತ್ತು ವನ್ಯ ಮೃಗಗಳು ನಾಶವಾಯ್ತ೦ತೆ.ಈಗ ಸಿ೦ಹಗಳೇ ಇಲ್ವ೦ತೆ.
ಇನ್ನು ಹಿಮಾಲಯವನ್ನೇ ನೋಡಿ ,ಅಷ್ಟು ಜನರು ತಮ್ಮ ಮೋಕ್ಷಕ್ಕಾಗಿ ಅಲ್ಲಿಗೆ ಪಯಣ ಬೆಳೆಸುತ್ತಾರೆ.
ಆದರೆ ಪರಿಸರದ ಪ್ರಜ್ನೆ ಚೂರು ಇಲ್ಲಾ. ಅಯ್ಯಪ್ನಪ ಭಕ್ತರು ಕೇರಳಾದ ಎಷ್ಟೋ ಎಕ್ಕರೆ ಕಾಡುಗಳನ್ನು
ನಾಶ ಮಾಡಿದ್ದಾರೆ.

ಹಾಗೇ ನೋಡಿದರೆ ದೇವರ ಭಕ್ತರು ದೇವರ ಸೃಷ್ಟಿಯ ಮೇಲೆ ತು೦ಬಾ ಅಪಚಾರವನ್ನು ಎಸಗಿದ್ದಾರೆ.
ದೇವರು ಮೇಲೆ ಭಕ್ತಿ ಬರುವ ಬದಲಿ ಜೀವಿಗಳ ಮೇಲೆ ದಯೆ ಪ್ರೇಮ ಬ೦ದಿದ್ದರೆ ಚೆನ್ನಾಗಿತ್ತು ಅಲ್ವೇನು ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2007 - 7:09pm — Rohith

ಉ:

Rohith's picture

ಮುರಳಿಯವರೆ,

ನೀವು ಹೇಳಿದ ಮತಿನಲ್ಲಿ ತುಂಬಾ ಸತ್ಯ ಇದೆ. ಆದ್ದರಿಂದಲೆ ಹಿಂದೂ ಧರ್ಮದಲ್ಲಿ ಎಲ್ಲಾ ಜೀವಗಳು ಮತ್ತು ವಸ್ತುಗಳಲ್ಲಿ ದೇವರನ್ನು ಕಾಣಬೇಕು ಎಂಬ ನಂಬಿಕೆ ಇರುವುದು, ಆದರೆ ಇತ್ತೀಚೆಗೆ ನಮ್ಮಲ್ಲಿ ಧರ್ಮದ ಅರಿವು ಕಡಿಮೆಯಾಗಿ ಹೀಗೆಲ್ಲಾ ಮಾಡುತ್ತಿದ್ದೇವೆ. Famous ದೇವರ ದರ್ಶನ ಮಾಡುವುದು ಮತ್ತು ಅವನ ಹೆಸರಿನಲ್ಲಿ ದಾನ ಧರ್ಮದ ನಾಟಕ ಇವಲ್ಲಾ ನಮ್ಮ ಬದುಕಿನಲ್ಲಿ ಹೊಕ್ಕುಹೊಗಿವೆ. ಪ್ರಕೃತಿ ಮತ್ತು ಪ್ರಾಣಿಗಳ ಮೇಲೆ ಪ್ರೇಮ ನಮ್ಮಲ್ಲಿ ದಿನ ದಿನಕ್ಕೂ ಕಡಿಮೆಯಾಗುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 10, 2007 - 11:43am — Sunil Jayaprakash

ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ.

Sunil Jayaprakash's picture

"ಹೋರ್ಸ್ಲಿ" ತಾಂವಿಗೆ ಹೇಗೆ ಹೋಗುವದು ಎಂದು ತಿಳಿಸಿಕೊಡಲು ಸಾಧ್ಯವೇ ? ಹೋಗಿ ಬರಬೇಕೆಂಬ ಹಂಬಲವಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 10, 2007 - 7:42pm — venkatesh

ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ.

venkatesh's picture

ಸುನಿಲರೆ,
ನಮಸ್ಕಾರ.

ಆಯ್ತು. ನಿಮಗೆ ಅದರ ವಿಳಾಸ ಕೊಡುತ್ತೇನೆ. ವಿಳಾಸ ನನ್ನ ಮಗನ ಹತ್ತಿರ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2007 - 8:33am — venkatesh

ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ.

venkatesh's picture

ಸುನಿಲರೆ,

ನಮಸ್ಕಾರ. ನಿನ್ನೆಯೇ ನಿಮಗೆ ಖಾಸಗಿಯಾಗಿ ವಿವರ ಕಳಿಸಿದ್ದೇನೆ. ಪಡೆಯಿರಿ [ನೋಡಿ]

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 11:01pm — shaamala

ಉ: ’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ.

shaamala's picture

shaamala

ಶ್ರೀ ವೆಂಕಟೇಶ್ ಅವರೇ,

ಉತ್ತಮವಾದ ದರ್ಶನೀಯ ಸ್ಥಳವನ್ನು ಪರಿಚಯಿಸಿದ್ದೀರಿ, ಧನ್ಯವಾದಗಳು. ನನಗೆ ಬೇಸರ ನೀಡಿದ ಒಂದು ವಿಷಯವೆಂದರೆ-ಅಲ್ಲಿಯೂ 'ಬೀರ್" ದೊರಕುವ ಏರ್ಪಾಡು. ಇಂತಹ ಪ್ರಶಾಂತ ವಾಥಾವರಣದಲ್ಲೂ ಮದ್ಯ ಮುಂತಾದ ಉತ್ತೇಜಕಗಳು ಬೇಕೆನ್ನುವವರಿಗೆ ಏನು ಹೇಳುವುದು?

ನಮಸ್ಕಾರ

ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 24, 2007 - 8:22am — DSVasantharam

ಉ: ’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ.

DSVasantharam's picture

ಈ ಜಾಗದ ಬಗ್ಗೆ ಪರಿಚಯ ಮಾಡಿ ಕೊಟ್ಟೀದ್ದಕ್ಕೆ ಧನ್ಯವಾದಗಳು. ವಿವರಗಳಿಗೆ http://www.tourisminap.com/tirupathidivision.htm
ನೇರವಾಗಿ ಬಸ್ಸ್ ಇದೆಯಂತೆ.
ಮುಂದಿನ ವರ್ಷ ಬೇಸಿಗೇ ರಜದಲ್ಲಿ ಹೋಗಬೇಕು ಅಂದುಕ್ಕೋಂಡಿದ್ದೆ ಆದರೇ ಈಗ ಇದು ಓಂದು ಕಮರ್ಶೀಯಲ್ ಜಾಗ ಆಗಿರುವ ಹಾಗೆ ಕಾಣಿಸುತ್ತೆ. ಬೇಸಿಗೆ ರಜ (ಜೂನ್ - ಜೂಲ್ಯೆ) ಯಲ್ಲೀ ಬೀಯರ್ ಚೆನ್ನಾಗೀರುತ್ತೆ!

ವಸಂತರಾಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಾಂಕಾಂಗಿನ ಹೋಟೆಲೊಂದರ ಒಳಭಾಗದ ದೃ‍ಷ್ಯ !
  • ಶೃಂಗೇರಿ ಬಳಿಯ ನದಿ, ತುಂಗೆಯ ಮೇಲಿನ ಪುಟಾಣಿ ಸೇತುವೆ.
  • ಈ ಗೇಟಿನ ಒಳಗೆ ಹೋಗಿ. ರಾಯರಮಠ ಸಿಗುತ್ತೆ !
  • ಹಿಂದಿನ ಕಾಲದ ಮುಂಬೈ ನ, ಬಟ್ಟೆ ಗಿರಣಿಯೊಂದರ ಒಳಭಾಗದ ದೃಷ್ಯ !
  • ಓಹ್ ...ಹವ ಹವಾಯ್...... ಹವ ಹವಾಯ್....[೨].. !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಬದಾಮಿ ಗುಹಾ ದೇವಸ್ಥಾನಗಳ ನೋಟ

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator