ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !

May 1, 2007 - 10:06am — venkatesh
ಸೂಳೆಕೆರೆ,  (ಶಾಂತಸಾಗರ)  ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು.   ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !

*
ಸೂಳೆಕೆರೆ, ಭಾರತದ ಅತಿದೊಡ್ಡಕೆರೆ. ಅಷ್ಟೇಕೆ ಏಶಿಯಾದ ಅತ್ಯಂತ ದೊಡ್ಡಕೆರೆಗಳಲ್ಲಿ ಎರಡನೆಯದು, ಸೂಳೆಕೆರೆ ಅಥವಾ ಶಾಂತ ಸಾಗರ. ೬೦ ಚದರ ಕಿ. ಮೀ. ವಿಸ್ತೀರ್ಣದ ಈ ಮಹಾಕೆರೆ, ಚಿತ್ರದುರ್ಗ, ಜಗಳೂರಿನ ಜಮೀನುಗಳಿಗೆ ನೀರಾವರಿಯ ಸೌಕರ್ಯ ಕಲ್ಪಿಸುವ ಒಂದು ಪ್ರಮುಖ ಸಾಧನವಾಗಿದೆ. ಇದು ಮಲೆನಾಡು ಮುಗಿದು ಬಯಲುನಾಡಿಗೆ ಪಾದಾರ್ಪಣೆ ಮಾಡುವ ಸ್ಥಳದಲ್ಲಿ ಇದೆ.

ಪಶ್ಚಿಮಘಟ್ಟಗಳಿಂದ ಹರಿದು ಬರುವ ನೀರು ತಗ್ಗಾದ ಬೆಟ್ಟದಡಿಯಲ್ಲಿ ನಿಲ್ಲುತ್ತದೆ. 'ಭದ್ರಾ ಛಾನಲ್' ನೀರೂ ಇಲ್ಲಿಗೆ ಸೇರುವುದಂತೆ. ವರ್ಷವಿಡೀ ನೀರು ಇಂಗದೆ ಹತ್ತಿರದ ಗ್ರಾಮಗಳಿಗೆ ಕುಡಿಯುವ ನೀರು, ವ್ಯವಸಾಯಕ್ಕೆ ಹೇಳಿಮಾಡಿಸಿದಂತೆ ಅನುಗ್ರಹ ನೀಡುತ್ತಿದ್ದ ಈ ಮಹಾಕೆರೆ ೩ ವರ್ಷಗಳಿಂದ ಸರ್ಕಾರದ ನಿರಾಸಕ್ತಿಯಿಂದ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ.( ನೀರಿನ ಮಟ್ಟ ಗಮನಾರ್ಹವಾಗಿ ತಗ್ಗಿದೆ ) ಈ ಸ್ಥಳದವರೇ ಆಗಿದ್ದ, ಹಿಂದಿನ ಮುಖ್ಯ ಮಂತ್ರಿ ಜೆ. ಎಚ್. ಪಾಟೀಲ್ , ಸ್ವಲ್ಪ ಹೆಚ್ಚಿಗೆ ನಿಗವಹಿಸಿದ್ದಿದ್ದರೆ, ಈ ಕಾರ್ಯ ಸುಗಮವಾಗುತ್ತಿತ್ತೋ ಏನೋ !

ಶಾಂತಸಾಗರದ ಚರಿತ್ರೆ ತುಂಬಾ ಆಕರ್ಷಕವಾಗಿದೆ. ಈ ಕೆರೆಯ ಹಿಂದಿನ ಹೆಸರು, ಸ್ವರ್ಗಾವತಿ. ಶಾಂತವ್ವ ಎಂಬುವರು ಈ ಸ್ಥಳದ ಸರದಾರನ ಮಗಳು . ಆಕೆಗೆ ರಾತ್ರಿ ಸಮಯಯಲ್ಲಿ ಹೊರಗೆ ಓಡಾಡುವ ಅಭ್ಯಾಸವಿತ್ತಂತೆ. [ ನಿಶಾಚರ ಸ್ವಭಾವ] ಒಮ್ಮೆ ಆಕೆಯ ತಂದೆ ಶಾಂತವ್ವ ಹೊರಗೆ ಹೋಗುತ್ತಿದ್ದಾಗ ಹಿಂಬಾಲಿಸಿ ತಾನೂ ಅವಳ ಹಿಂದೆ ಹೋದನಂತೆ. ಶಾಂತವ್ವ ಒಬ್ಬ ದೇವಮಾನವನನ್ನು ಭೇಟಿಮಾಡಿ ಅದೃಷ್ಯಳಾದದ್ದನ್ನು ಕಂಡು ಆತ ವಿಚಲಿತನಾದನಂತೆ. ತಕ್ಷಣ 'ಶಾಂತವ್ವ' ಎಂದು ಜೋರಾಗಿ ಚೀರಿ, ಮೂರ್ಛೆಹೋದನಂತೆ. ತಂದೆಯ ಮನಸ್ಸನ್ನು ಅರಿತ ಶಾಂತವ್ವ ಕಾಡಿನಲ್ಲೇ ಉಳಿದಳಂತೆ. ಅಲ್ಲಿಯೇ ಇದ್ದು ಒಂದು ಭವ್ಯವಾದ, ಅತಿ ದೊಡ್ಡ ಸಾಗರದಂತಹ ಕೆರೆ ನಿರ್ಮಿಸಿದಳೆಂದು ಸ್ಥಳ ಪುರಾಣಗಳು ಸಾರುತ್ತವೆ. ಲೋಕಾರೂಢಿಯಲ್ಲಿ ಜನ ಆ ಕೆರೆಯನ್ನು ಸೂಳೆಕೆರೆ ಯೆಂದು ಕರೆದರು. ಅದನ್ನು ಶಾಂತಸಾಗರವೆಂದೂ ಕರೆಯಲಾಯಿತು.

ಚಿತ್ರದುರ್ಗದಜನ, ನೀರಿನ ಬೇಗೆಯಿಂದ ಬೇಸತ್ತು ಬಹಳ ಸಂಕಟವನ್ನು ಅನುಭವಿಸುತ್ತಿದ್ದಾರೆ. ಕುಡಿಯುವನೀರಿನ ಪೂರೈಕೆಯನ್ನು ಗಮನದಲ್ಲಿಟ್ಟಿಕೊಂಡು, ಹಿಂದಿನ ಕರ್ನಾಟಕ ಸರ್ಕಾರ, ಸೂಳೆಕೆರೆಯ ನೀರನ್ನು ದೊಡ್ಡ ದೊಡ್ಡ ಪೈಪುಗಳ ಮೂಲಕ ಚಿತ್ರದುರ್ಗಕ್ಕೆ ಸಾಗಿಸಲು ವ್ಯವಸ್ಥೆ ಮಾಡಿತ್ತು. ಅದು ಇನ್ನು ಸರಿಯಾಗಿ ಕಾರ್ಯರೂಪಕ್ಕೆ ಬರಬೇಕು.

ಶಾಂತಸಾಗರವನ್ನು ಒಂದು ಪ್ರವಾಸಿ ತಾಣವನ್ನಾಗಿಯೂ ಮಾಡಬಹುದು. ಎರಡು ಬೆಟ್ಟಗಳ ಮಧ್ಯೆ 'ರೋಪ್ ವೇ' ಹಾಕಿಸಿದರೆ ಸಾಕು. ಹೆಚ್ಚು ನೀರು ನಿಲ್ಲಲು ಅವಕಾಶ ಮಾಡಿಕೊಡಬೇಕು. ಪ್ರವಾಸಿಕಗರಿಗೆ ಬೋಟಿನಲ್ಲಿ ಹೋಗಲು ಸೌಲಭ್ಯವನ್ನೂ ಕಲ್ಪಿಸಿ ಕೊಡಬಹುದು. ಬೇಕಾದಷ್ಟು ಕೆಲಸ ಮಾಡಬಹುದು. ಸರ್ಕಾರಕ್ಕೆ ಇಂತಹ ಜನಕಲ್ಯಾಣ ಕಾರ್ಯಕ್ರಮ ಮಾಡಲು ಪುರುಸೊತ್ತು ಬೇಕು. ರಾಜಕೀಯದ ಬಿರಿಸು ವಾತಾವರಣದಲ್ಲಿಯೂ ಸ್ವಲ್ಪ ಸಮಯ ವಿನಿಯೋಗಿಸಿ ಕರ್ನಾಟಕದ ಜನರ ಹಿತರಕ್ಷಣೆಗೆ ಗಮನ ಕೊಡುವುದು ಈಗ ನಮ್ಮ ಮುಂದಿರುವ ಪ್ರಮುಖ ಮುದ್ದೆಗಳಲ್ಲೊಂದು.

ಈಗಿನ ಸರ್ಕಾರಕ್ಕೆ ಚಿತ್ರದುರ್ಗದಂತಹ ಬೆಂಗಾಡಿಗೆ ನೀರಿನ ಪೂರೈಕೆ ಮಾಡುವ ಕೆಲಸ ಪರಮಾದ್ಯತೆಗಳಲ್ಲಿ ಒಂದು ಎಂದು ನಾವು ಮತ್ತೊಮ್ಮೆ ಮನವಿಮಾಡುತ್ತೇವೆ.

[ಚಿತ್ರದುರ್ಗದ ನಿವಾಸಿಗಳೆಲ್ಲಾ]

*ಇಲ್ಲಿ ನನಗೆ ಸಿಕ್ಕ, ಕೆರೆಯ ಚಿತ್ರ ಸುಮಾರು ಹಲವು ದಶಕಗಳ ಹಿಂದಿನದು. ಎಲ್ಲೂ ಪ್ರಸಕ್ತ ವರ್ಷದ ಚಿತ್ರ ದೊರೆಯಲಿಲ್ಲ. ಯಾರಾದರೂ ಅದನ್ನು ಒದಗಿಸಿದಲ್ಲಿ ನಾನು ಕೃತಜ್ಞ !

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 438 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ
  • ಕಾವೇರಿ
  • ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !
  • ಚಿತ್ರಾವತಿನದಿಗೆ ಅಡ್ಡಲಾಗಿ ಕಟ್ಟಲಾದ, ಪರಗೋಡು ಜಲಾಶಯ- ಈಗಿನ ಪ್ರಮುಖ ಆಕರ್ಶಣೆಗಳಲ್ಲೊಂದು !
  • ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ತಾವರೆಕೆರೆ ಬಳಿಯ ವೀರಗಲ್ಲುಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
ಇನ್ನಷ್ಟು


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator