ಚಿಕಾಗೋ ದಲ್ಲಿ "ವಸಂತ ಸಾಹಿತ್ಯೋತ್ಸವ" - ಹಾಸ್ಯಹೊನಲಿನ ಕಾರ್ಯಕ್ರಮ.

ಚಿಕಾಗೋ ದಲ್ಲಿ ಮೊನ್ನೆ ನಡೆದ "ವಸಂತ ಸಾಹಿತ್ಯೋತ್ಸವ" ವನ್ನು ನಮ್ಮ ಸಂಪದಿಗರೇ ಆದ, ಶ್ರೀವತ್ಸ ಜೋಷಿಯವರು " ದಟ್ಸ್ ಕನ್ನಡಕ್ಕೆ", ಸಮರ್ಥವಾಗಿ ವರದಿಮಾಡಿದ್ದರ ಮರು-ವರದಿ.
ನಗೆಗನ್ನಡಂ ಗೆಲ್ಗೆ, ಅಮೆರಿಕದ ಕನ್ನಡ ಸಾಹಿತ್ಯ ರಂಗವು ಇದೇ ಮೇ, ೧೯ ಮತ್ತು ೨೦ ರಂದು [ಶನಿವಾರ ರವಿವಾರ], ಶಿಕ್ಯಾಗೊ ನಗರದ 'ಅರೋರ ದೇಗುಲ'ದ ಭವ್ಯ ಸಭಾಂಗಣದಲ್ಲಿ, ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡ ಅಭಿಮಾನಿಗಳಿಂದ ನಡೆಸಿಕೊಟ್ಟ ಕಾರ್ಯಕ್ರಮಗಳು, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿ ಧನ್ಯತಾಭಾವಕ್ಕೆ ಎಡೆಮಾಡಿಕೊಟ್ಟವು !
ಕನ್ನಡ ಸಾಹಿತ್ಯ ರಂಗದ ಆಶ್ರಯದಲ್ಲಿ, ಮೂರನೇ ಸಮ್ಮೆಳನವೆಂಬ ಹೆಗ್ಗಳಿಕೆಗೆ ಪಾತ್ರವಾದ ಇದು, ಈ ಬಾರಿ ಹಾಸ್ಯರಸಕ್ಕೆ ಹೆಚ್ಚು ಒತ್ತು ಕೊಟ್ಟು, ಇಂದಿನ ಮಾನಸಿಕ ಒತ್ತಡದ ಜೀವನದಲ್ಲಿ ಅದರ ಆವಶ್ಯಕತೆಯನ್ನು ಬಿಚ್ಚಿ ಹೇಳಿದ್ದು ಶ್ಲಾಘನೀಯ.
೧. ಮೊದಲನೆಯ ಸಮ್ಮೇಳನ ೨೦೦೪ ರಲ್ಲಿ ಫಿಲಡೆಲ್ಫಿಯ ನಗರದಲ್ಲಿ ನಡೆಸಿದ್ದರು.
೨. ಎರಡನೆಯದು, ೨೦೦೫ ರಲ್ಲಿ ಲಾಸ್ ಎಂಜಲೀಸ್ ನಲ್ಲಿ,
೩. ಮೂರನೆಯದು, ಶಿಕ್ಯಾಗೊ ನಲ್ಲಿ, ಮೇ, ೧೯ ಮತ್ತು ೨೦,
೨೦೦೭ ರಲ್ಲಿ, ಈಗ ನಡೆದದ್ದು.
ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಅತಿಥಿಗಳಿಂದಲೇ ಅದರ ಯಶಸ್ಸನ್ನು ಸುಲಭವಾಗಿ ಮನಗಾಣಬಹುದು.
ಹಿರಿಯ ಖ್ಯಾತ ನಗೆ ಸಾಹಿತಿ, ಮಹಾರಥಿ, ಪ್ರೊ. ಅ. ರಾ. ಮಿತ್ರ. ಇವರು ಈ ಸಮ್ಮೇಳನದ ಅಧ್ಯಕ್ಷರು. ಇನ್ನೊಬ್ಬ ಅತಿರಥಿ, ಡಾ. ಶ್ರೀ. ರಾಘವೇಂದ್ರ ರಾಯರು. [ರಾರಾ] ಅತಿಥಿ ಉಪನ್ಯಾಸಕರು.
ಶಿಕ್ಯಾಗೊ ನಲ್ಲಿ ಹಮ್ಮಿಕೊಂಡ ರಸ ಕಾರ್ಯಕ್ರಮಗಳು ೩. ಪುಸ್ತಕಗಳ ವಿಮೋಚನಾ ಕಾರ್ಯ. ಸಾಹಿತ್ಯಗೋಷ್ಟಿ, ನಾಟಕ ಪ್ರದರ್ಶನ, ಪ್ರಸಿದ್ಧ ಸಾಹಿತಿ ಜೀ. ಎಸ್. ಎಸ್ ರವರಿಗೆ ಅಭಿನಂದನಾ ಸಲ್ಲಿಕೆ. ಡಾ. ಪೂರ್ಣಚಂದ್ರ ತೇಜಸ್ವಿಯವರಿಗೆ, ಭಾವಪೂರ್ಣ ಶ್ರದ್ಧಾಂಜಲಿ, ಕೊನೆಗೆ, ಊಟದ ನಂತರ, ವಿಚಾರ ಸಂಕಿರಣ.
೧. 'ನೆನೆಗನ್ನಡಂ ಗೆಲ್ಗೆ' ಪುಸ್ತಕದ [ಸಂಪಾದಕರು : ಡಾ. ಎಚ್. ಕೆ. ನಂಜುಂಡಸ್ವಾಮಿ, ಮತ್ತು ಎಚ್. ವೈ. ರಾಜಗೋಪಾಲ್ ] ವಿಮೋಚನೆ. ಈ ಕಾರ್ಯ ಕ್ರಮಕ್ಕೆ ಹೊಂದಿಕೊಂಡಂತೆ, ಅಮೆರಿಕನ್ನಡದ, 'ನಮ್ಮ ಬರಹಗಾರರು,' ಎಂಬ ಶೀರ್ಷಿಕೆಯಡಿಯಲ್ಲಿ, ಅಲ್ಲಿನ ಕವಿ ಪರಿಚಯ ಮಾಡಿಕೊಟ್ಟರು.
೨. 'ಕನ್ನಡದಮರ ಚೇತನ ಮಾಸ್ತಿ' ಪುಸ್ತಕವನ್ನು [ಸಂಪಾದಕರು ಶ್ರೀ. ನಾಗ ಐತಾಳ], ಅತಿಥಿ ಉಪನ್ಯಾಸಕ,
ಡಾ. ರಾಘವೇಂದ್ರ ರಾಯರು ಬಿಡುಗಡೆಮಾಡಿದರು.
೩. 'ತುಳಸೀವನ' ಪುಸ್ತಕ ಸಂಕಲನದ ಬಿಡುಗಡೆ. ತ್ರಿವೇಣಿ ಎಸ್. ರಾವ್, ತಮ್ಮ ಬರಹಗಳ
ಸಂಕಲನ 'ತುಳಸಿವನವನ್ನು, ಪ್ರೊ. ಅ. ರಾ. ಮಿತ್ರರ ಹಸ್ತದಿಂದ ಬಿಡುಗಡೆ ಮಾಡಲಾಯಿತು. ಇದು ೨ ನೆ
ದಿನಂದು ನೆರೆವೇರಿತು.
ಡಾ. ಜಿ. ಎಸ್. ಎಸ್, ರವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಮತ್ತೆ ಡಾ. ಪೂರ್ಣಚಂದ್ರ ತೇಜಸ್ವಿಯವರಿಗೆ, ಶ್ರದ್ಧಾಂಜಲಿ ಯನ್ನು ಕೋರಲಾಯಿತು.
ಅತಿಥಿ ಭಾಷಣಕಾರ, ಶ್ರೀ. ಡಾ. ರಾರಾ ರವರಿಂದ ವಿಚಾರ ಪೂರ್ಣ ಭಾಷಣ ವಿತ್ತು.
ಎರಡನೆಯ ದಿನ ಆಯೋಜಿಸಿದ್ದ, ಸಾಹಿತ್ಯಗೋಷ್ಟಿಯಲ್ಲಿ, ೧೦ ಕ್ಕಿಂತ ಹೆಚ್ಚು ಕವಿ-ಕವಯತ್ರಿಯರು ತಮ್ಮ ತಮ್ಮ ಕೃತಿವಾಚನ ಮಾಡಿ ಎಲ್ಲರನ್ನೂ ರಂಜಿಸಿದರು.
ಸಂವಾದ, ಕಾರ್ಯಕ್ರಮವನ್ನು, ಭೋಜನಾನಂತರ ಆಯೋಜಿಸಲಾಗಿತ್ತು. ಅದನ್ನು ವಲ್ಲೀಶಾಸ್ತ್ರಿಯವರು ನಡೆಸಿಕೊಟ್ಟರು.
"ಖರೋ ಖರ," ನಾಟಕದ ಪ್ರದರ್ಶನ- ಡಾ. ಚಂದ್ರಶೇಖರ ಕಂಬಾರ ವಿರಚಿತ ನಾಟಕವನ್ನು, ಅಲ್ಲಿನ ಸ್ಥಳೀಯ ತಂಡ, 'ಶಿಕರ,' ಆಡಿ ಎಲ್ಲರ ಮೆಚ್ಚುಗೆ ಗಳಿಸಿತು. ಇದು ಕೊನೆಯ ಕಾರ್ಯಕ್ರಮ. ಕಾರ್ಯಕ್ರಮಗಳೆಲ್ಲಾ ಎಲ್ಲರ ಪ್ರಶಂಸೆಗೆ ಪತ್ರವಾದವು. ದೂರದ ಅಮೆರಿಕಾ ದಲ್ಲಿದ್ದರೂ ತಮ್ಮ ನಾಡಿನ ನಡೆ ನುಡಿಯ ಬಗ್ಗೆ ಹಮ್ಮಿಕೊಂಡ ೨ ದಿನಗಳ ಅತ್ಯಪಯುಕ್ತ ಕಾರ್ಯಕ್ರಮಗಳು ಸರ್ವರಿಗೂ ಮುದನೀಡಿದವು.
ಎನೋ ಧನ್ಯತಾಭಾವ ಎಲ್ಲರ ಮುಖದಲ್ಲೂ ಎದ್ದು ಕಾಣುತ್ತಿತ್ತು.

- Login or register to post comments
- 548 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ



RSS: