ಗಾಂಧಿ ನೆನಪು -೧

ಗಾಂಧಿ ನೆನಪು : ೧
ಬೊಂಬಾಯಿನಲ್ಲಿ ಗಾಂಧೀಜಿಯವರನ್ನು, ಬಂಧಿಸಿ, ಕಾರಾಗೃಹದಲ್ಲಿ ಹಾಕಲಾಯಿತು. ಇದನ್ನು ವಿರೋಧಿಸಿ, ಪ್ರತಿಭಟಿಸಿದ ಜನಸ್ತೋಮ.
ಮಹಾತ್ಮಗಾಂಧಿಯವರು ನುಡಿದಂತೆ ನಡೆವ, ತಮ್ಮ ಪೂರ್ತಿಜೀವನವನ್ನು ಭಾರತದ ಸ್ವಾತಂತ್ರ್ಯ ಶಾಂತಿಸಮರದಲ್ಲಿ ತೊಡಗಿಸಿಕೊಂಡವರು. ದೇಶದ ಬಡರೈತರ, ಶೋಷಿತವರ್ಗಗಳ ಸಮುದಾಯಗಳ ಜನರನ್ನೂ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು, ತಮ್ಮ ಅಗಾಧ ಮುಂದಾಲೋಚನೆ, ಮುಂದಾಳತ್ವಗಳಿಂದ, ಬ್ರಿಟಿಷ್ ಸರ್ಕಾರಕ್ಕೆ ತಲೆನೋವಾಗಿದ್ದರು. ಕೊನೆಗೆ ೧೯೪೭ ರಲ್ಲಿ, ದೇಶದ ಜನರ ಸಹಕಾರದಿಂದ, ಫಿರಂಗಿಯವರ ರಾಜ್ಯಾಡಳಿತದ ಅಂತ್ಯಕ್ಕೆ, ನಾಂದಿಹಾಡಿದರು. ಶತಮಾನಗಳ ದಾಸ್ಯಕ್ಕೆ ವಿದಾಯಹೇಳಿ, ಭಾರತದ ಜನತೆ, ಸ್ವಚ್ಛಂದವಾಗಿ ಯೋಚಿಸಲು, ತಮ್ಮ ದೇಶದ ಅಧಿಕಾರವನ್ನು ತಾವೇ ನೋಡಿಕೊಳ್ಳಲು ಅನುವುಮಾಡಿಕೊಟ್ಟು, ಭಾರತದದಿಗಂತದಲ್ಲಿ ಲೀನವಾದರು !
ಬಾಪು ಚರಣಗಳಿಗೆ, ನಮ್ಮ ವಂದನೆಗಳು.
-ಸಂಗ್ರಹದಿಂದ.

- Login or register to post comments
- 1218 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: