ಹೋರಾಟ ಮುಗಿಯಿತು, ಗಾಂಧಿಯವರು, ದೇಶಕ್ಕೆ ಪ್ರಾಣಕೊಟ್ಟು, ಅಮರರಾದರು !

ಗಾಂಧಿ ನೆನಪು : ೫
ಸ್ವರಾಜ್ಯ ಸಿಗುವವರೆಗೂ ಭಾರತದಜನ ಅತ್ಯಂತ ಸಂಯಮದಿಂದ ನಡೆದುಕೊಂಡಿದ್ದರು. ಗಾಂಧೀಜಿಯವರಜೊತೆಗೆ ಸೊಂಟಕ್ಕೆ ಸೊಂಟಕೊಟ್ಟು, ಬ್ರಿಟಿಷರ ವಿರುದ್ಧ ಪ್ರತಿಭಟಿಸಿದ್ದರು. ಆದರೆ, ಸ್ವತಂತ್ರ್ಯಬಂದ ಕೆಲವೇ ತಿಂಗಳುಗಳಲ್ಲಿ ಅವರು ತೋರಿಸಿದ ಮುಖವಾಡವೇ ಬೇರೆಯದಾಗಿತ್ತು. ಇಲ್ಲಿ ದ್ವೆಷ, ಅಸೂಯೆ, ಅಸಮಧಾನ, ಅಪನಂಬಿಕೆ, ಅನಾದರ, ಅವಿಶ್ವಾಸಗಳ ಮಹಾಪೂರವೇ ಹರಿದುಬರುವಂತೆ ಭಾಸವಾಗುತ್ತಿತ್ತು. ಒಮ್ಮೆ ನಿಧಾನವಾಗಿ ಯೋಚಿಸಿದಾಗ, ಇದೇ ಜನರೇ ಈಗ ಹೀಗೆ ವರ್ತಿಸುತ್ತಿರುವುದು, ಎನ್ನುವಷ್ಟು ಅವರು ಬದಲಾಯಿಸಿದ್ದರು. ಎಲ್ಲರ ಮೇಲು ಅಪನಂಬಿಕೆ. ಶಾಂತಿ, ಸೌಹಾರ್ದತೆಗಳು ಕೇವಲ ಕಾಗದದ ತುಂಡಿನಮೇಲೆ ಇರುವಂತೆ ಭಾಸವಾಗುತ್ತಿತ್ತು. ಈಗ ಯಾರಿಗೂ ಗಾಂಧೀಜಿಯವರು ಬೇಡ. ಅವರ ತತ್ವಗಳೂ ಆಷ್ಟೆ.
ಮಹಾತ್ಮಾ ಗಾಂಧಿಯವರೂ ಇದನ್ನು, ಕಣ್ಣಾರೆಕಂಡರು. ಅವರ ಆಪ್ತ ಸ್ವಾತಂತ್ರ್ಯ ಚಳುವಳಿಯ ಹಿಂಬಾಲಕ, ಕೊಂಡವೆಂಕಪ್ಪಯ್ಯ, ಎಂಬ ೮೦ ವರ್ಷದ ಹಿರಿಯ ಕಾಂಗ್ರೆಸ್ ಕೆಲಸಗಾರ, ೧೯೦೦ ರಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದಿದ್ದ. ಆತ, ಗಾಂಧೀಜಿಯವರಿಗೆ ಪತ್ರಬರೆದು, ದೇಶದಲ್ಲಿ ಬೆಳೆಯುತ್ತಿರುವ, ಸಾಮಾಜಿಕ ವಲಯಗಳಲ್ಲಿನ ಅಸ್ಥಿರತೆಯನ್ನು ಕುರಿತು ಬರೆದ ಪತ್ರ, ಹೀಗಿದೆ.
" ಸ್ವತಂತ್ರ್ಯ ಸರ್ಕಾರ ಬಂದ ೫ ತಿಂಗಳಲ್ಲಿ ಭಾರತದೇಶದ ಜನ ಧೃತಿಗೆಟ್ಟಿದ್ದಾರೆ. ಲಂಚ, ರಿಷ್ವತ್ತುಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರಕ್ಕಿಂತ ಫಿರಂಗಿಯವರ ಸರ್ಕಾರವೇ ಚೆನ್ನಾಗಿತ್ತೇನೋ, ಎನ್ನುವ ಸಂಶಯ ಬರಹತ್ತಿದೆ. "ಏಕೆಂದರೆ ಶಿಸ್ತು, ವ್ಯವಸ್ಥೆ, ಮತ್ತು ಕಾರ್ಯತತ್ಪರತೆ, ಎಲ್ಲೋಮಾಯವಾದಂತಿದೆ," ಎನ್ನುತ್ತಿದ್ದಾರೆ ಜನರು. ಈ ಮಾತುಗಳು ಕೇವಲವೆಂಕಪ್ಪಯ್ಯನವರದಾಗಿರಲಿಲ್ಲ. ಬದಲಾಗಿ ಅದು, ಬದಲಾಗುತ್ತಿದ್ದ ಭಾರತದ ನಾಗರಿಕರೆಲ್ಲರ ಸಾಮೂಹಿಕ ಕೂಗಾಗಿತ್ತು.
ಹಿಂದೂ-ಮುಸಲ್ಮಾನರು ಆಣ್ಣ-ತಮ್ಮಂದಿರಂತೆ ಬಾಳಲಿ, ಎನ್ನುವ ಬಾಪುವಾಣಿಯನ್ನು ಯಾರೂಪಾಲಿಸುತ್ತಿಲ್ಲ. ಇದನ್ನೆಲ್ಲಾ ಬಾಪೂ ಗಮನಿಸುತ್ತಲೇ ಇದ್ದರು. ಅವರಿಗೆ ಏನನ್ನು ಹೇಳಲೂ ಸಾಧ್ಯವಾಗಲಿಲ್ಲ. ಇನ್ನು ಮುಂದೆ ಹೋರಾಟಮಾಡುವಷ್ಟು ದೇಹಧಾರಢ್ಯ, ಅವರಲ್ಲಿರಲಿಲ್ಲ. ೭೯ ವರ್ಷ ವಯಸ್ಸಾಗಿದ್ದ ಗಾಂಧಿಯವರು, ಜೀವನದ ಸಮರದಲ್ಲಿ ಸ್ವಲ್ಪ ಸೋತಂತೆ ಭಾಸಾವಾಗುತ್ತಿತ್ತು. ಮನೆಯಲ್ಲಿ ಮಕ್ಕಳಿಗೆ ಸರಿಯಾದ ವಿಧ್ಯಾಸವಿಲ್ಲದೆ ಅವರು ಪರಿತಪಿಸುತ್ತಿದ್ದರು. ಕಸ್ತುರ್ ಬಾ ಅವರನ್ನು ಅಗಲಿ, ಆಗಲೇ ೪ ವರ್ಷಗಳಾಗಿತ್ತು. ವಯಸ್ಸು ಅವರಮೇಲೆ ಮೋಡಿಮಾಡಿತ್ತು.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸನ್ನು ವಜಮಾಡಲು, ಅವರು ಪದೇ ಪದೇ ರಾಜಕೀಯ ಮುಖಂಡರಿಗೆಲ್ಲಾ, ಮನವಿಮಾಡಿಕೊಂಡರು. ಆದರೆ, ಮುಂದೆ ಸರ್ಕಾರದ ಆಡಳಿತದ ಚುಕ್ಕಾಣಿಯನ್ನು ಹಿಡಿದು ನಡೆಸಲು, ಕಾಂಗ್ರೆಸ್ಸಿನ ಪಾತ್ರವೇ ಬಿರುಸಾಗಿತ್ತು. ಅಷ್ಟರಲ್ಲೆ, ಅವರು ೧೯೪೮ ರಲ್ಲಿ ಆಗುಂತಕನೊಬ್ಬನ ಗುಂಡಿನೇಟಿಗೆ ಶಿಕಾರಿಯಾದರು. ದೀಪ ನಂದಿಹೋಯಿತು. ದೀಪದ ಆಕಡೆ ಕತ್ತಲಿರುವಂತೆ, ಮಹಾತ್ಮರ ೩೩ ವರ್ಷಗಳ ಒಡಾನಾಟದ ಪ್ರಭಾವದ ಕ್ಷಣಗಳು ತಮ್ಮ ಕಾಂತಿಯನ್ನು ಕಳೆದುಕೊಂಡಿದ್ದವು.
ಆದರೆ ಇವೆಲ್ಲದರ ಮಧ್ಯೆಯೂ ಆಶಾಕಿರಣ, ಅಂಧಕಾರದ ನಡುವೆ, ತೂರಿಬರುತ್ತಿತ್ತು. ಹೊಸ ದೇಶ, ಸ್ವಛ್ಛಂದ ವತಾವರಣ. ಒಳ್ಳೆಯದು ಕೆಟ್ಟದ್ದು ಮಾಡುವವರು ನಾವೇ, ನಮ್ಮ ಜನರೇ, ಎನ್ನುವ ಭಾವನೆ ಯುವಜನರನ್ನೂ, ದೇಶವಾಸಿಗಳನ್ನೂ, ಹುಚ್ಚೆಬ್ಬಿಸಿತ್ತು. ಹೊಸ ನಾಳೆಗಳು ತೆರೆಯುತ್ತಾ ಹೋಗುತ್ತಿದ್ದಂತೆ, ಹೊಸ ಹೊಸ ಪ್ರತಿಭೆಗಳು ಭಾರತದ ದಿಗಂತದಲ್ಲಿ, ಪ್ರಜ್ವಲಿಸಲಾರಂಭಿಸಿದವು.
೬೦ ಪ್ರಾಯೋಗಿಕ ವರ್ಷಗಳು ಉರುಳಿವೆ. ಹಳೆಯ ತಪ್ಪುಗಳನ್ನು ಮರೆತು, ಹೊಸದಾಗಿ ಕಾರ್ಯದಲ್ಲಿ ತೊಡಗೋಣ. ಇದರಲ್ಲಿ ತಪ್ಪಾದರೆ ಏನು ? ನಾವೇ, ನಮ್ಮವರಿಂದ ತಾನೇ ? ಸರಿಪಡಿಸಿಕೊಂಡು ಒಂದು ಭವ್ಯ ರಾಷ್ಟ್ರವನ್ನು ನಿರ್ಮಿಸೋಣ !
-ಸಂಗ್ರಹದಿಂದ.

- Login or register to post comments
- 597 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: