ಮುಂಬೈನ, ಮೈಸೂರ್ ಅಸೋಸಿಯೇಶನ್ ಸ್ವರ್ಣಗೌರಿ, ಹಾಗೂ ಮಹಾಗಣಪತಿಯ ವಿಸರ್ಜನೆ, ರವಿವಾರದಂದು, ವಿಜೃಂಭಣೆಯಿಂದ, ನೆರೆವೇರಿತು !
.preview.jpg)
ಶ್ರೀ ಸ್ವರ್ಣಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾಮಹೋತ್ಸವ. ಸರ್ವಜಿನ್ನಾಮ ಸಂವತ್ಸರದ ಶಾಲಿವಾಹನಶಕೆ ೧೯೨೯, ಭಾದ್ರಪದ ಮಾಸ ಶುಕ್ಲ ಚತುರ್ಥೀ, ಶುಕ್ರವಾರದ ದಿನ,( ೧೪-೦೯-೨೦೦೭) ವಿಜೃಂಭಣೆಯಿಂದ ಗೌರಿ ಮತ್ತು ಗಣೇಶನ ಉತ್ಸವವನ್ನು, ಮುಂಬೈನ, ಮೈಸೂರು ಅಸೋಸಿಯೇಶನ್ನಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ, ನಡೆಸಲಾಯಿತು.
ಕಾರ್ಯಕ್ರಮಗಳ ಸ್ಥೂಲ ಪರಿಚಯ :
೧. ೧೪, ನೆಯ ಶುಕ್ರವಾರ, ಸೆಪ್ಟೆಂಬರ್ ೨೦೦೭ ರಂದು, ಬೆಳಿಗ್ಯೆ, ಶ್ರೀ ಸ್ವರ್ಣಗೌರಿ ಪ್ರತಿಷ್ಥಾಪನಾಪೂಜೆಯನ್ನು,
ಮಾಡಲಾಯಿತು. ಅಂದಿನ ಸೇವಾರ್ಥಿಗಳು, ಶ್ರೀಮತಿ/ಶ್ರೀ ಸುಮಿತ್ರ ಚಂಪಕನಾಥ್, ಶ್ರೀ ಪಿ. ಎನ್
ರಾಮರಾವ್, ಶ್ರೀಮತಿ/ಶ್ರೀ ನಾರಾಯಣ ಜಾಗೀರ್ದಾರ್, [ದಿವಂಗತ] ಶ್ರೀ ನರಸಿಂಹಯ್ಯ, ಶ್ರೀಮತಿ.
ವಿಶಾಲಾಕ್ಷಿ ಎಸ್. ರಾವ್, ಶ್ರೀಮತಿ ವೆಂಕಟಲಕ್ಷ್ಮೀರಾವ್, (ದಿವಂಗತ), ಡಾ. ಕೆ. ಶಂಕರ್, (ದಿವಂಗತ),
ಶ್ರೀಮತಿ ಸೀತಮ್ಮ ರಾವ್.
೨. ಶನಿವಾರ, ೧೫-೦೯-೨೦೦೭ ರಂದು, ಶ್ರೀ ಮಹಾಗಣಪತಿ ಪ್ರತಿಷ್ಠಾಪನಾಪೂಜೆ ಮತ್ತು ಆರತಿ.
೩. ರವಿವಾರದಂದು, ೧೬-೦೯-೨೦೦೭ ಪೂಜೆ ಮತ್ತು ಮಹಾಮಂಗಳಾರತಿ ಬೆಳಿಗ್ಯೆ ೯ ಮತ್ತು ರಾತ್ರಿ ೯ ಗಂಟೆ.
೪. ಸೋಮವಾರ, ೧೭-೦೯-೨೦೦೭ ರಂದು, ಸಾಯಂಕಾಲ, ೭ ರಿಂದ ೯ ರವರೆಗೆ, ಕಿರಿಯ ಹಾಡುಗಾರರಿಗಾಗಿ
ಕರ್ನಾಟಕ ಸಂಗೀತದ ಸ್ಪರ್ಧೆ ಇತ್ತು.
೫. ಮಂಗಳವಾರ, ೧೮-೦೯-೨೦೦೭ ರಂದು, ಕಿರಿಯ ಹಾಡುಗಾರರಿಗಾಗಿ ಕರ್ನಾಟಕಶೈಲಿಯ ಸಂಗೀತಸ್ಪರ್ಧೆ
ಇತ್ತು.
೬. ೧೯-೦೯-೨೦೦೭, ಬುಧವಾರದಂದು, ಬೆಳಿಗ್ಯೆ ೯ ಗಂಟೆಗೆ, ಪೂಜೆ ಮತ್ತು ಮಹಾಮಂಗಳಾರತಿ.
೧೯-೦೯-೨೦೦೭, ಬುಧವಾರದಂದು, ಕುಮಾರಿ ನಳಿನಿ ದಿನೇಶ್, ಮತ್ತು ಸಂಗಡಿಗರಿಂದ ಕರ್ನಾಟಕಶೈಲಿಯ
ಸಂಗೀತದ ಹಾಡುಗಾರಿಕೆ.
೭. ೨೦-೦೯-೨೦೦೭, ಗುರುವಾರದಂದು, ಕುಮಾರಿ ವಿದ್ಯಾನಂದಿ ಐಯರ್, ರವರಿಂದ ಕರ್ನಾಟಕ
ಹಾಡುಗಾರಿಕೆ.
೮. ೨೧-೦೯-೨೦೦೭, ಶುಕ್ರವಾರದಂದು, ಸಾಯಂಕಾಲ, ೬-ರಿಂದ ೭ ಗಂಟೆಗೆ ಅರಿಶಿನ -ಕುಂಕುಮದ
ಕಾರ್ಯಕ್ರಮ, ಅಸೋಸಿಯೇಶನ್ ನ ಮಹಿಳಾಸದಸ್ಯೆಯರಿಂದ. ೭ ಗಂಟೆಯಿಂದ ೯ ರವರೆಗೆ, ಶ್ರೀಮತಿ
ವೀಣಾ ಶಾಸ್ತ್ರೀ ಮತ್ತು ವೃಂದದವರಿಂದ, ಕರ್ನಾಟಕಶೈಲಿಯ ಸಂಗೀತ ಕಛೇರಿ ಇತ್ತು.
೯. ೨೨-೦೯-೨೦೦೭, ಶನಿವಾರದಂದು, ಮಾಸ್ಟರ್ ಕೃಷ್ಣ ಪವನ್ ಕುಮಾರ್, ರವರಿಂದ, ಕರ್ನಾಟಕಶೈಲಿಯ
ಕೊಳಲುವಾದನವಿತ್ತು.
೧೦. ಭಾನುವಾರ, ೨೩-೦೯-೨೦೦೭ ರಂದು, "ಶಂಕರಮಠದ ವೈದಿಕರಿಂದ ವೇದಘೋಷ". ಕರ್ನಾಟಕ ಸಂಗೀತ
ಸ್ಪರ್ಧೆಯಲ್ಲಿ ವಿಜೇತರಿಗೆ, ಬಹುಮಾನ ವಿತರಣಾಸಮಾರಂಭ. ಬೆಳಿಗ್ಯೆ ೧೧ ಗಂಟೆಗೆ.
೧೨ ಗಂಟೆಗೆ, ಪೂಜೆ ಮತ್ತು ಮಹಾಮಂಗಳಾರತಿ. ಶ್ರೀ ಸ್ವರ್ಣಗೌರಿ ಮತ್ತು ಶ್ರೀ ಗಣಪತಿಯನ್ನು
ಮೆರವಣಿಗೆಯಲ್ಲಿ ದಾದರ್ ಬೀಚಿಗೆ ಮೆರವಣಿಗೆಯಲ್ಲಿ ಕರೆದೊಯ್ದು, ಸಮುದ್ರದಲ್ಲಿ ಮೂರ್ತಿ ವಿಸರ್ಜನೆ.
ಕೊನೆಯದಾಗಿ, ಇದಾದ ಕೆಲವೇ ನಿಮಿಷದಲ್ಲಿ ಪ್ರಸಾದವಿಯೋಗದ ಕಾರ್ಯಕ್ರಮದೊಂದಿಗೆ ಗಣಪತಿ
ಪೂಜಾಮಹೋತ್ಸವ ಸಂಪನ್ನವಾಯಿತು.
ಮೇಲೆ ತಿಳಿಸಿದ, ಶ್ರೀ ಸ್ವರ್ಣಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾಮಹೋತ್ಸವ ಕಾರ್ಯಕ್ರಮಗಳನ್ನು ನಿಯೋಜಿಸಿದವರು : ಡಾ. ಬಿ. ಆರ್. ಮಂಜುನಾಥ್, ಶ್ರೀ ಕೆ. ಮಂಜುನಾಥಯ್ಯ, ಶ್ರೀಮತಿ ಮತ್ತು ಶ್ರೀ ಕೆ. ಎನ್. ಶ್ರೀನಿವಾಸರಾವ್ ಮತ್ತು ಶ್ರೀಮತಿ ರಾಮಬಿಹಾರಿ, ಶ್ರೀ ಸಾಯಿಸಮರ್ಥ ವಿದ್ಯನ್ ಪ್ರಬೋಧಿನಿ.
ಎಲ್ಲಾ ಕಾರ್ಯಕ್ರಮಗಳೂ ಮುದ್ರಿಸಿ ಹಂಚಲಾಗಿರುವ ಕಾರ್ಯಕ್ರಮ-ವೇಳಾಪಟ್ಟಿಯ ಪ್ರಕಾರ ಇದ್ದವು. ರವಿವಾರ ಗಣಪತಿ ವಿಸರ್ಜನೆಯ ಸಮಯದಲ್ಲಿ, ನೂರಾರು ಜನ ಸದಸ್ಯರುಗಳೆಲ್ಲಾ ಬಂದು ಭಾಗವಹಿಸಿದ್ದರು. ವೀಣಾ ವೈನಿಕ, ಶ್ರೀ ಶಂಕಾನಾರಾಯಣರಾಯರು, ಮತ್ತು ಅನೇಕ ಹಳೆಯ ಸದಸ್ಯರು ಬಂದಿದ್ದರು. ಶ್ರೀ ಮಂಜುನಾಥ ದ್ವಯರು, ಬೆಂಗಳೂರಿನಲ್ಲಿ ನೆಲಸಿದಾಗ್ಯೂ, ಅಸೋಸಿಯೇಷನ್ ಮೇಲಿನ ಪ್ರೀತಿ-ವಿಶ್ವಾಸಗಳಿಂದಾಗಿ ಬಿಡುವುಮಾಡಿಕೊಂಡು ಸಮಾರಂಭದಲ್ಲಿ ಭಾಗವಹಿಸಿ, ಅದರ ಶೃಂಗಾರವನ್ನು ಹೆಚ್ಚಿಸಿದರು. ಮೈಸೂರ್ ಅಸೋಸಿಯೇಷನ್ ನ ಅಧ್ಯಕ್ಷರಾದ, ಶ್ರೀ ದೊರೈಸ್ವಾಮಿಯವರು, ಮತ್ತು ಅವರ ಧರ್ಮಪತ್ನಿಯವರು ಹಾಜರಿದ್ದು, ಎಲ್ಲ ಭಕ್ತರನ್ನೂ ಸ್ವಾಗತಿಸಿದರು. ಅಸೋಸಿಯೇಷನ್ ನ ಕಾರ್ಯಕಾರೀಸಮಿತಿಯ ಸದಸ್ಯರೆಲ್ಲಾ ಹಾಜರಿದ್ದು, ಸಮಾರಂಭದ ಯಶಸ್ಸಿಗೆ ಕಾರಣರಾದರು. ಶ್ರೀಮತಿ ಲಕ್ಷ್ಮೀಸೀತಾರಾಂ, ಶ್ರೀಮತಿ ಶ್ಯಾಮಲಮ್ಮ, ಭವಾನಿ, ಮಧು, ರಾಘವೇಂದ್ರ, ಜನಾರ್ಧನ, ಮಂಜು, ಶಾಂತೇಶ್ , ಶ್ರೀಧರ, ಉದಯ, ಮತ್ತು ಆಫೀಸಿನಲ್ಲಿ ಕೆಲಸಮಾಡುವ ತರುಣಿಯರು, ಪಾದರಸದಂತೆ ಓಡಾಡಿ, ಕಾರ್ಯಕ್ರಮವನ್ನು ಸಕ್ರಿಯಗೊಳಿಸುವಲ್ಲಿ ನೆರವಾದರು.
ಮಾಜಿ, ಕಾರ್ಯದರ್ಶಿ, ಶ್ರೀ. ಎಮ್. ಎ. ಎನ್. ಪ್ರಸಾದ್ ಮತ್ತು ಅವರ ಶ್ರೀಮತಿಯವರಾದ, ಭಾರತೀಪ್ರಸಾದರ ಅನುಪಸ್ಥಿತಿ, ಈ ಎಲ್ಲ ಅತ್ಯುತ್ತಮ ಏರ್ಪಾಟಿನ ಮಧ್ಯೆಯೂ ಎದ್ದು ಕಾಣುತ್ತಿತ್ತು.

- Login or register to post comments
- 460 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
- "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
- ನಾಟಕ ಅಕಾಡೆಮಿ ಪ್ರಶಸ್ತಿಗಳು
- 'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !
- ಮುಂಬೈ ನಗರದ ಕನ್ನಡನಾಟಕರಂಗದ ಕಲಾವಂತ ದಂಪತಿಗಳಿಗೆ, " ಅಭಿನಂದನಾಸಮಾರಂಭ." !


RSS: