ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

ಮುಂಬೈನ ಪ್ರತಿಷ್ಠಿತ ವಿ. ಜೆ. ಟಿ. ಐ- ಭಾರತದ ಪ್ರಪ್ರಥಮ "ಟೆ ಕ್ಸ್ ಟೈಲ್ಸ್ ಶಾಲೆ," ಪಾದಾರ್ಪಣೆ ಮಾಡಿದ್ದು ಇಲ್ಲೇ !

October 8, 2007 - 6:04am — venkatesh
ಮುಂಬೈನ ಪ್ರತಿಷ್ಠಿತ ವಿ. ಜೆ. ಟಿ. ಐ-  ಭಾರತದ ಪ್ರಪ್ರಥಮ "ಟೆ ಕ್ಸ್ ಟೈಲ್ಸ್  ಶಾಲೆ,"  ಪಾದಾರ್ಪಣೆ ಮಾಡಿದ್ದು  ಇಲ್ಲೇ  !

ಬೊಂಬಾಯಿನ ಹತ್ತಿಗಿರಣಿಗಳಲ್ಲಿ ಕೆಲಸಮಾಡಲು ಬೇಕಾದ ತಂತ್ರಜ್ಞಾನಗಳನ್ನು ಕೊಡಲೆಂದೇ ನಗರ ಹಿರಿಯನೇಕರು ಸುಮಾರು ೧೨೫ ವರ್ಷಗಳ ಹಿಂದೆಯೇ ರಾಷ್ಟ್ರದ ಪ್ರಪ್ರಥಮ ವೃತ್ತಿಶಿಕ್ಷಣ ಸಂಸ್ಥಾನವನ್ನು ಬೊಂಬಾಯಿನಲ್ಲಿ ಕಟ್ಟಿಬೆಳೆಸಿದರು. ಅದೇ ಅಂದಿನ, " ವಿಕ್ಟೋರಿಯ ಜ್ಯುಬಿಲಿ ಟೆಕ್ನಿಕಲ್ ಇನ್ಸ್ಟಿಟ್ಯೂಟ್ " ! ಶಿವಸೇನ, ಆಡಳಿತಕ್ಕೆ ಬಂದಾಗ, ತನ್ನ ಕಾರ್ಯಾವಧಿಯಲ್ಲಿ ಅದರ ಹೆಸರನ್ನು ವೀರಮಾತಾ ಜೀಜಾಬಾಯಿ ಟೆಕ್ನಿಕಲ್ ಇನ್ಸ್ಟಿಟ್ಯೂಟ್, " ಎಂದು ಬದಲಾಯಿಸಿತು.

ವಿ. ಜೆ. ಟಿ. ಐ ತನ್ನ ಹಳೆಯ-ರೂಪವನ್ನು ಬದಲಾಯಿಸಿಕೊಂಡು, ಹೊಸ ತಂತ್ರಜ್ಞಾನದ ಹಿಂದೆ ಬಿದ್ದಿದೆ. ಬದಲಾವಣೆ ಪ್ರಕೃತಿಯನಿಯಮವಲ್ಲವೇ ?

ಎಲ್ಲಿ ನೋಡಿದರೂ ಅಕ್ಕ-ಪಕ್ಕಗಳಲ್ಲಿ ಮಿಲ್ಗಳೇ ಮಿಲ್ಗಳು. ಸುಮಾರು ೭೦ ಕ್ಕಿಂತ ಹೆಚ್ಚು. ಆಮೇಲೆ ೭೦ ರ ದಶಕದಲ್ಲಿ ಸುಮಾರು ೫೮ ಗಿರಣಿಗಳಿದ್ದವು. ಕೆಲಸಗಾರರು ಸುಮಾರು, ೨.೫ ನಿಂದ ೩ ಲಕ್ಷ. ಬೊಂಬಾಯಿ- ಭಾರತದ ಮ್ಯಾಂಚೆಸ್ಟರ್ ಎಂದು ಹೆಸರುವಾಸಿಯಾಗಿದ್ದ ಮುಂಬೈ, ಇಂದು ಅದೆಲ್ಲಾ ಸುಳ್ಳೇನೋ ಅನ್ನುವಷ್ಟು ಬದಲಾಗಿದೆ. ಭಾರತದ ಪ್ರಪ್ರಥಮ ಹತ್ತಿ ಬಟ್ಟೆತಯಾರಿಸುವ ಗಿರಣಿ, ಮುಂಬೈ ನ ತಾರ್ದೇವ್ ನಲ್ಲಿ ೧೮೫೪ ರಲ್ಲಿ ರೂಪುಗೊಂಡಿತು. ನಂತರ ದಶಕಗಳಕಾಲ ಹತ್ತಿ -ಕಾರ್ಖಾನೆಗಳು ಹೆಚ್ಚುತ್ತಲೇ ಹೋದವು.

ಆದರೆ ಎಲ್ಲಕ್ಕೂ ಒಂದು ಅಂತ್ಯವಿದೆಯಲ್ಲ. ಅದನ್ನು ಆ ದೈವನಿಯಾಮಕನೇ ನಿರ್ಧರಿಸಿರಬಹುದೇ ? ಗಿರಣಿ ಕೆಲಸಗಾರರು, ಮತ್ತು ಮಿಲ್ ಮಾಲೀಕರ ಮಧ್ಯೆ ಇರುಸು-ಮುರಿಸಿ ಇದ್ದೇ ಇತ್ತು. ಮಾಲೀಕರಿಗೆ ಅತಿ ಕಡಿಮೆ ಕೂಲಿಕೊಟ್ಟು, ಅಪಾರಸಂಪತ್ತನ್ನು ದೋಚುವ ದುರಾಸೆಯಾದರೆ, ಕಮ್ಯುನಿಷ್ಟ್ ಯೂನಿಯನ್ ಗಳು ಬಲಾತ್ಕಾರ, ಹಾಗು ವಿಧ್ವಂಸಕ ಪ್ರವೃತ್ತಿಯಿಂದ ಹೆಚ್ಚಿಗೆ ಸಂಬಳ ಬೋನಸ್ ಗಿಟ್ಟಿಸುವ ಆಸೆಯನ್ನು ಹಮ್ಮಿಕೊಂಡಿದ್ದರು. ಕಾರ್ಮಿಕರ ಪರಿಶ್ರಮವೊಂದೇ ಮಾನದಂಡವಾಗಿದ್ದ ಕಾಲ ಅದು. ಅವರನ್ನು ಚೆನ್ನಾಗಿ ನೋಡಿಕೊಳ್ಳದೆ ಇದ್ದರೆ, ದಿವಾಳಿಯಾವುದು ಖಂಡಿತವೆನ್ನುವ ಮಾತೇ ಹೆಚ್ಚು ಪ್ರಚಲಿತವಾಗಿತ್ತು. ಆದರೆ ಕಾಲಬದಲಾದಂತೆ ತಂತ್ರಜ್ಞಾನ ಪ್ರಚಂಡ ವೇಗದಲ್ಲಿ ವಿಶ್ವದಾದ್ಯಂತ ಚಂಡಮಾರುತದಂತೆ ವ್ಯಾಪಿಸಿ, ಕೆಲಸಗಾರರ ಚಟುವಟಿಕೆಗಳನ್ನು ಕೊನೆಗೊಳಿಸಿತು. ಕೆಲವೇ ಯಂತ್ರಗಳು ಅತಿಚಿಕ್ಕ ಪರಿಸರದಲ್ಲಿ, ಕೆಲವೇ ಕುಷಲರಲ್ಲದ ವ್ಯಕ್ತಿಗಳಿಂದ, ಥಾನುಗಟ್ಟಲೆ ವಸ್ತ್ರದ ಉತ್ಪತ್ತಿಯಾಗುವಂತೆ ತಂತ್ರಜ್ಞಾನ ಎಲ್ಲೆಡೆ- ಭಾರತದಲ್ಲೂ ಆವರಿಸಿತು. ಟಾಟಾ ರಂತಹ ನಿಸ್ಪೃಹ ಉದ್ಯಮಿಗಳಿಗೂ ಹಲವು ಮಿಲ್ ಮಾಲೀಕರಿಗೂ ಕಾರ್ಮಿಕರ, ತರಲೆ-ತಾಪತ್ರಯಳು, ಸಮಸ್ಯೆಗಳು, ಮುಷ್ಕರದಿಂದಾಗುವ ಅಮಾಯಕ ಪರಿಸ್ಥಿಗಳಿಂದ ಬೇಸರವಾಗಿತ್ತು.

ಕೊನೆಗೂ ಒಂದು ದುರದೃಷ್ಟಗಳಿಗೆ, ೧೯೮೨ ರಲ್ಲಿ ಬಂದೇ ಬಿಟ್ಟಿತು. ಕಾಮ್ಗಾರ್ ಅಘಾಡಿ ನಾಯಕ, ಡಾ. ದತ್ತಸಾಮಂತರು, ತಮ್ಮ ಯೂನಿಯನ್ ನ ಕೆಲಸಗಾರರನ್ನು ಹುರಿದುಂಬಿಸಿ, ಅವರ ಬೇಡಿಕೆಗಳು ಈಡೇರುವವರೆಗೂ ಕೆಲ್ಸಕ್ಕೆ ಬರಬೇಡಿಯೆಂದು ಆದೇಶವಿತ್ತರು. ಮುಷ್ಕರ ಮುಂದುವರೆಯಿತು, ದಿನಗಳು , ತಿಂಗಳುಗಳು, ವರ್ಷಗಳು , ಉರುಳಿದವು. ಕಾರ್ಖಾನೆಗಳು ಬೊಂಬಾಯಿನಿಂದ ಎತ್ತಲ್ಪಟ್ಟು ಹೊರಗೆ ಹೋದವು. ಮಿಲ್ ಮಾಲೀಕರು ಕೆಲಸಗಾರರ ಮುಖ್ಯಸ್ಥರನ್ನು ಕಳ್ಳತನದಲ್ಲಿ ಒಲಿಸಿ, ತಮ್ಮ ಕಡೆಮಾಡಿಕೊಂಡರು. ಆಸ್ತಿಗಳನ್ನು ಮಾರಿದರು. ಮಾಲೀಕರು ಈ ಬಂಗಾರದ ಕ್ಷಣಗಳನ್ನು ತಮ್ಮ ಜೇಬಿಗೆ ಹಾಕಿಕೊಂಡರು !

ಪ್ರತಿಫಲ :

ಇದಾಗಿ, ೨೫ ವರ್ಷಗಳ ಮೇಲಾಗಿದೆ. ಎಲ್ಲೂ ಒಂದಾದರು ಹತ್ತಿಗಿರಣಿಯ ಹೊಗೆ ಕೊಳವೆ, ದೀಪಹಾಕಿಕೊಂಡು ಹುಡುಕಿದರೂ ಸಿಗದು. ಅದರ ಜಾಗದಲ್ಲಿ ಮಾಲ್ ಗಳು, ಸಿನಿಮಾಥಿಯೇಟರ್ಸ್ ಗಳು, ಈಜುಕೊಳಗಳು ಮನರಂಜನೆಯ ಪಾರ್ಕ್ಸ್ ಗಳು ಇತ್ಯಾದಿ ಇತ್ಯಾದಿ ಬೆಳೆದು, ಹತ್ತಿಗಿರಣಿಗಳು ಎಲ್ಲಿದ್ದವು ? ಎಂದು ಹುಬ್ಬೇರಿಸುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಕೆಲಸಗಾರರ ಜೀವನ ಮೂರಾಬಟ್ಟೆಯಾಗಿದೆ !

ಮುಂಬೈ ನ ಹತ್ತಿಬಟ್ಟೆಯ ಪ್ರಚಂಡ ರೋಚಕ ಕಥೆಯನ್ನು ತಿಳಿಯಲು, ನಾವು ಇತಿಹಾಸದ ಪುಟಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ !

  • ಜ್ಞಾನವಾಹಿನಿ ವರ್ಗದ ಚಿತ್ರಗಳು
~.~
  • Login or register to post comments
  • 443 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಾಂಧಿಯವರನ್ನು, ಮ್ಯಾಂಚೆಸ್ಟರ್ ನ ಹತ್ತಿ-ಗಿರಣಿ ಕೆಲಸಗಾರರು ಅಭಿನಂದಿಸುತ್ತಿರುವ ದೃಶ್ಯ
  • ಹಿಂದಿನ ಕಾಲದ ಮುಂಬೈ ನ, ಬಟ್ಟೆ ಗಿರಣಿಯೊಂದರ ಒಳಭಾಗದ ದೃಷ್ಯ !
  • CIRCOT, Mumbai - ಭಾರತದ ಹತ್ತಿಬೆಳೆಯ ಗುಣ ಮತ್ತು ಉತ್ಪನ್ನಗಳನ್ನು, ಅಭಿವೃದ್ಧಿಪಡಿಸಿ, ಗಮನಾರ್ಹಸೇವೆಸಲ್ಲಿಸುತ್ತಿರುವ ಸಂಸ್ಥೆ
  • *'ಜೆ,' ರವರ ಕನಸಿನ ಕೂಸು, ಏರ್ ಇಂಡಿಯದ, ವಿಮಾನ ಹಾರಾಟ : ಇಂದಿನಿಂದ, ಬೊಂಬಾಯಿನಿಂದ ಎಲ್ಲೂ ನಿಲ್ಲಿಸದೆ, ನೇರವಾಗಿ ನ್ಯೂಯಾರ್ಕಿಗೆ !
  • ರೇನ ಸಾಲ್ವೆ, ನಮ್ಮ ಮುಂಬೈ ಹುಡುಗಿ, ಅಪಘಾತದಲ್ಲಿ ಮೃತಳಾದಳು !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಒಂದು ಬದಿ ಕಡಲು

ಇತ್ತೀಚಿನ ಪ್ರತಿಕ್ರಿಯೆಗಳು

  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
  • muralihr
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:34pm
  • Jayalaxmi.Patil
    ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..
    July 4, 2008 - 9:58pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:35pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:31pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:15pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:12pm
ಇನ್ನಷ್ಟು


ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator