ಮುಂಬೈ ನಗರದ ಕನ್ನಡನಾಟಕರಂಗದ ಕಲಾವಂತ ದಂಪತಿಗಳಿಗೆ, " ಅಭಿನಂದನಾಸಮಾರಂಭ." !
ಮುಂಬೈಮಹಾನಗರದ, ಕನ್ನಡನಾಟಕರಂಗ ಕ್ಷೇತ್ರದಲ್ಲಿ, ಸುಮಾರು ೧೦೦ ನಾಟಕಗಳಲ್ಲಿ ಅಭಿನಯಿಸಿ, ತಾವೇ ಸುಮಾರು ೨೦ ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಇಲ್ಲವೇ ನಟಿಸಿ, ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ, " ಶ್ರೀ. ಬಾಲಕೃಷ್ಣ ನಿಡ್ವಣ್ಣಾಯ,"ರವರು, ತಮ್ಮ ಸರಳ- ವ್ಯಕ್ತಿತ್ವ, ಹಾಗೂ ಪ್ರತಿಭೆಯಿಂದ ಎಲ್ಲರ ಕಣ್ಮಣಿಯಾಗಿದ್ದಾರೆ.
ಅವರು ತಮ್ಮ ೭೦ ವರ್ಷಗಳ ಜೀವನದಲ್ಲಿ, ಸುಮಾರು ೬೦ ವರ್ಷ, ಕನ್ನಡ-ರಂಗಭೂಮಿಯನಾಟಕ ಕ್ಷೇತ್ರದಲ್ಲೇ, ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನೆನ್ನೆ ನಡೆದ ಸಮಾರಂಭದಲ್ಲಿ, ( ೨೦, ಅಕ್ಟೋಬರ್, ೨೦೦೭) ಅವರನ್ನೂ ಅವರ ಕಲಾವಂತ ಪತ್ನಿ, " ಶ್ರೀಮತಿ. ಸತ್ಯಭಾಮಾ ನಿಡ್ವಣ್ಣಾಯ,"ರವರನ್ನೂ " ಶ್ರೀಕಲಾನಿಲಯ ಸಂಸ್ಥೆ, " ಯ ವತಿಯಿಂದ ಗೌರವ ಸಲ್ಲಿಸಿ, ಅಭಿನಂದಿಸಿಲಾಯಿತು.
ಮೊದಲು, ದೇವರ ಸ್ತೋತ್ರದಿಂದ ಶುರುವಾದ ಕಾರ್ಯಕ್ರಮ, ( ಶ್ರೀಮತಿ. ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ವೃಂದದವರಿಂದ), ಅತ್ಯಂತ ಯಶಸ್ವಿಯಾಗಿ ನಡೆದು, ರಾತ್ರಿಯ ಸುಭೋಜನದಿಂದ ಅಂತ್ಯಗೊಂಡಿತು.
ಸಮಾರಂಭದಲ್ಲಿ ಡಾ. ಜಿ. ವಿ. ಕುಲಕರ್ಣಿ, ಡಾ. ಉಪಾಧ್ಯಾಯ, ಶ್ರೀ. ವಿಶ್ವೇಶ್ವರ ಭಟ್, ಶ್ರೀ. ಕೋರಿ, ಶ್ರೀಮತಿ. ರಾವ್, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಬಾಲಕೃಷ್ಣರು ಬರೆದ, ಎರಡು ನಾಟಕಗಳನ್ನು ಪ್ರಸ್ತುತಪಡಿಸಲಾಯಿತು. ಎನ್. ಕೆ. ಇ. ಎಸ್. ಶಾಲೆಯ ಬಾಲಕ-ಬಾಲಕಿಯರಿಂದ ನಟಿಸಲ್ಪಟ್ಟ ನಾಟಕ ಎಲ್ಲರ ಮನಸ್ಸನ್ನೂ ಸೂರೆಗೊಂಡಿತು.
ಬಾಲಕೃಷ್ಣ ದಂಪತಿಗಳ, ಸಾಧನೆಯನ್ನು ಕರ್ಣಾಟಕಸರ್ಕಾರ ಸರಿಯಾಗಿ ಇನ್ನೂ ಗುರುತಿಸಿಲ್ಲ, ಎನ್ನುವ ಮಾತು ಎಲ್ಲ ಕಲಾ-ರಸಿಕರ ಬಾಯಲ್ಲಿ ಕೇಳಿಬಂತು !
ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು. ಬಾಲಕೃಷ್ಣ ನಿಡ್ವಣ್ಣಾಯ, ಹಾಗೂ ಶ್ರೀಮತಿ. ಸತ್ಯಭಾಮಾ ನಿಡ್ವಣ್ಣಾಯರವರಿಗೆ, "ಸಂಪದೀಯರ," ಪರವಾಗಿ ನಮ್ಮಲ್ಲರ ಹಾರ್ದಿಕ ಶುಭಾಶಯಗಳು.

- Login or register to post comments
- 519 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಈ ದಂಪತಿಗಳು-ಮುಂಬೈಕನ್ನಡರಂಗಭೂಮಿಯ ಅಪೂರ್ವ ಕಲಾರತ್ನಗಳು !
- ಮುಂಬೈನ, ಮೈಸೂರ್ ಅಸೋಸಿಯೇಶನ್ ಸ್ವರ್ಣಗೌರಿ, ಹಾಗೂ ಮಹಾಗಣಪತಿಯ ವಿಸರ್ಜನೆ, ರವಿವಾರದಂದು, ವಿಜೃಂಭಣೆಯಿಂದ, ನೆರೆವೇರಿತು !
- " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
- 'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !
- ಮುಂಬೈ ನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !


RSS: