ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರೊ. ಶ್ರೀನಿವಾಸ ರಾಜು, ತೀರ್ಥಹಳ್ಳಿಯಲ್ಲಿ, ಅಸ್ತಂಗತರಾದರು !

ಬೆಂಗಳೂರು, ಡಿ.28:ಪ್ರೀತಿಯ ಮೇಷ್ಟ್ರು, ಕನ್ನಡ ನುಡಿಸೇವಕ ಪ್ರೊ.ಚಿ.ಶ್ರೀನಿವಾಸರಾಜು ಇನ್ನಿಲ್ಲ. ಅವರು ಶುಕ್ರವಾರ (ಡಿ.28) ಬೆಳಗ್ಗೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 65ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಬರುವ ಭಾನುವಾರ (ಡಿ. 30)ದಂದು ಕುಪ್ಪಳ್ಳಿಯಲ್ಲಿ ನಡೆಯಲಿರುವ, " ಕುವೆಂಪು ನಮನ, " ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಮಿತ್ತ ಮಲೆನಾಡು ಪ್ರವಾಸ ಕೈಗೊಂಡಿದ್ದ ರಾಜು ಮೇಷ್ಟ್ರು, ತೀರ್ಥಹಳ್ಳಿಯ ಹೋಟೆಲ್ ನಲ್ಲಿ ಗುರುವಾರ ಮೊಕ್ಕಾಂ ಮಾಡಿದ್ದರು. ಶುಕ್ರವಾರ ಬೆಳಗಾಗುತ್ತಲೇ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು.

ಪ್ರೊ. ಶ್ರೀ. ಶ್ರೀನಿವಾಸರಾಜು, ದಿವಂಗತ. ಪ್ರೊ. ಶ್ರೀ ಶಾಸ್ತ್ರಿ, ಪ್ರೊ. ಶ್ರೀ. ರಾಮಕೃಷ್ಣರಾವ್, ಡಾ. ರಾಘವೇಂದ್ರರಾವ್ ಮುಂತಾದವರೆಲ್ಲಾ ಸೇರಿ, ಕ್ರೈಸ್ಟ್ ಕಾಲೇಜ್ ಕನ್ನಡಸಂಘವನ್ನು ಹುಟ್ಟುಹಾಕಿ, ನೀರೆರದು, ಪೋಶಿಸಿ, ಕನ್ನಡದ ಪರಿಚಾರಿಕೆಯಕೆಲಸವನ್ನು ಸಮರ್ಥವಾಗಿ ನಡೆಸಿಕೊಂಡುಬಂದರು. ಇವರಲ್ಲಿ ರಾಜುರವರದು ಸದ್ದಿಲ್ಲದೆ, ನಡೆಸಿದ ಕನ್ನಡ ಸೇವೆ,, ನೆನೆಯುವಂತಹದು. ೧೦೦ ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಕ್ರೈಸ್ಟ್ ಕಾಲೆಜ್ ಕನ್ನಡ ಸಂಘ , ಪ್ರಕಟಿಸಿ, ತನ್ನದೇ ಆದ ಒಂದು ಸ್ಥಾನವನ್ನು ಗಳಿಸಿದೆ.

ಕರ್ನಾಟಕದ ಕನ್ನಡ ಪ್ರೇಮಿಸಮೂಹ, ಹಾಗೂ ಸಂಪದೀಯರೆಲ್ಲ ತಮ್ಮ ತುಂಬುಹೃದಯದಿಂದ ಮೃತರ ಆತ್ಮಕ್ಕೆ ಶಾಂತಿಕೋರುತ್ತಿದೆ. ಅಪಾರ ಬಂಧುವರ್ಗ ಮತ್ತು ಪತ್ನಿ, ಪುತ್ರರನ್ನು ಅಗಲಿದ ರಾಜುರವರ ಪರಿವಾರಕ್ಕೆ, ಈ ನಷ್ಟವನ್ನು ಸೈರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ.

-ಫೋಟೋ ಪ್ರಜಾವಾಣಿಯಿಂದ.

ಪ್ರೊ.  ಶ್ರೀನಿವಾಸ ರಾಜು,  ತೀರ್ಥಹಳ್ಳಿಯಲ್ಲಿ,  ಅಸ್ತಂಗತರಾದರು  !
No votes yet