ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

ರುದ್ರಾಕ್ಷಿ

January 25, 2008 - 11:51pm — ಗಣೇಶ
ರುದ್ರಾಕ್ಷಿ

ನೀಲಿ ಬಣ್ಣದ ನಯವಾದ ಈ ಕಾಯಿಯೇ ಒಣ,ಮುಳ್ಳುಮುಳ್ಳಾದ ರುದ್ರಾಕ್ಷಿ ಕಾಯಿ ಆಗುವುದು. ರುದ್ರ+ಅಕ್ಷಿ -ರುದ್ರ ಅಂದರೆ ಶಿವನ ರೌದ್ರ ಅವತಾರ,ಅಕ್ಷಿ ಅಂದರೆ ಕಣ್ಣು. ಶಿವನ ಶಾಂತ ನೀಲ ಕಣ್ಣುಗಳು ರುದ್ರನ ಕಣ್ಣುಗಳಂತೆ ಆಯಿತು ಎಂದರ್ಥವೋ ಏನೋ? ನಾವು ದಕ್ಷಿಣ ಭಾರತೀಯರು ರುದ್ರಾಕ್ಷಿ ಎಂದೂ ಉತ್ತರದವರು ರುದ್ರಾಕ್ಷ ಎಂದು ಕರೆಯುವರು. ಇದು ಹಿಮಾಲಯ ಪರ್ವತದ ಸಮೀಪ ಹೆಚ್ಚಾಗಿ ನೇಪಾಳದಲ್ಲಿ ಬೆಳೆಯುವುದು.
ರುದ್ರಾಕ್ಷಿಯಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖದವರೆಗೆ ಭೇದಗಳಿವೆ. ೧,೧೪,೨೧ ಮುಖದ ರುದ್ರಾಕ್ಷಿ ಅಪರೂಪ. ಅದರಲ್ಲೂ ಒಂದು ಮುಖದ ರುದ್ರಾಕ್ಷಿ ಅಪರೂಪದಲ್ಲಿ ಅಪರೂಪ. ಶಿವನ ತ್ರಿಶೂಲ,ಲಿಂಗ ಸರ್ಪದ ಚಿಹ್ನೆ ಹೊಂದಿರುವ ಏಕಮುಖ ರುದ್ರಾಕ್ಷಿ ಧರಿಸಿದರೆ ಪಂಚ ಮಹಾ ಪಾತಕಗಳಲ್ಲಿ ಒಂದಾದ ಬ್ರಾಹ್ಮಣನನ್ನು ಕೊಂದ ಪಾಪವೂ ನಿವಾರಣೆಯಾಗುವುದು.
ಎರಡು ಮುಖದ ರುದ್ರಾಕ್ಷಿ ಅರ್ಧನಾರೀಶ್ವರ-ಇದನ್ನು ಧರಿಸಿದವರು ಗೊತ್ತಿದ್ದೋ,ಗೊತ್ತಿಲ್ಲದೆಯೋ ಮಾಡಿದ ತಪ್ಪು ಕ್ಷಮಿಸಲ್ಪಡುವುದು.
ಶಿವನಿಗೂ ರುದ್ರಾಕ್ಷಿಗೂ ಏನು ಸಂಬಂಧ ಎಂಬುದಕ್ಕೆ ಪುರಾಣಗಳಲ್ಲಿ ಒಂದೆರಡು ಕತೆಗಳಿವೆ-
ದೇವೀ ಭಾಗವತ ಪುರಾಣದ ಪ್ರಕಾರ:- ತ್ರಿಪುರನೆಂಬ ರಾಕ್ಷಸ ರಾಜನೊಬ್ಬನಿದ್ದ.ಅವನು ದೇವತೆಗಳನ್ನು ಸೋಲಿಸಿದ.ದೇವತೆಗಳು ಶಿವನ ಮೊರೆ ಹೋದರು.ದೇವತೆಗಳಿಗಾಗಿ ಶಿವ ಎಷ್ಟು ಕಷ್ಟಪಡುತ್ತಾರೆಂದರೆ ೧೦೦೦ ದೇವತಾ ವರ್ಷಗಳವರೆಗೆ ಕಣ್ಣನ್ನು ತೆರೆದೇ ಇಟ್ಟಿದ್ದರು! ನಂತರ ಕಣ್ಣು ಮಿಟುಕಿಸಿದಾಗ ಶಿವನ ಕಣ್ಣಿಂದ ಉದುರಿದ ಕಣ್ಣೀರೆ ರುದ್ರಾಕ್ಷಿ ಗಿಡಗಳು.
ಶಿವ ಪುರಾಣದ ಪ್ರಕಾರ ಶಿವ ೧೦೦೦ ವರ್ಷ ತಪಗೈದ ಬಳಿಕ ಕಣ್ಣು ತೆರೆದಾಗ ಕಣ್ಣೀರ ಹನಿ ನೆಲಕ್ಕೆ ಬಿತ್ತು.ಶಿವನೇ ಹೇಳಿದ್ದರಿಂದ ಇದು ನಿಜವಿರಬಹುದು.
ಬ್ರಹಜ್ಜಬಾಲ ಉಪನಿಷದ್ ಪ್ರಕಾರ ರುದ್ರ ವಿಶ್ವನಾಶಕ್ಕೆ ಮೂರನೇ ಕಣ್ಣನ್ನು ತೆರೆದ. ನಂತರ ಮುಚ್ಚಿದಾಗ ಉದುರಿದ ಕಣ್ಣೀರಿನ ಹನಿಯೇ ರುದ್ರಾಕ್ಷಿ. ಅದು ಸರಿ,ವಿಶ್ವನಾಶವಾದಾಗ ರುದ್ರಾಕ್ಷಿ ಹೇಗೆ ಬೆಳೀತು ಕೇಳಬೇಡಿ.
ಇವೆಲ್ಲಕ್ಕಿಂತ ರುದ್ ಅಂದರೆ ಹಿಂದಿಯಲ್ಲಿ ಅಳು.ಅಂದರೆ ಕಣ್ಣೀರು ಇದೇ ಸರಿಯಾದ
ಅರ್ಥವಿರಬಹುದು.ಮರದ ಬುಡದಲ್ಲಿ ಬಿದ್ದ ಈ ಕಾಯಿಗಳು ಕಣ್ಣೀರ ಹನಿಗಳಂತೆ ಕಂಡಿರಬಹುದು. ತನ್ನ ಕಾಯನ್ನು ಧರಿಸಿ ಜನ ಏನೆಲ್ಲಾ ಅನ್ಯಾಯ ಮಾಡುತ್ತಾರೆ ಎಂದು ಮರ ರೋದಿಸಿರಬಹುದು.
ಇದರ ಬಟಾನಿಕಲ್ ಹೆಸರು:-Elaeocarpus sphaericus.
ಅಸ್ತಮಾ ರೋಗದಲ್ಲಿ ಇದನ್ನು ವೈದ್ಯರು ಔಷಧಿಯಾಗಿ ಉಪಯೋಗಿಸುವರಂತೆ.

ಸಂಗ್ರಹ-ಗಣೇಶ.

  • ಜ್ಞಾನವಾಹಿನಿ ವರ್ಗದ ಚಿತ್ರಗಳು
~.~
  • Login or register to post comments
  • 447 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ೦ಡೆನಾ ಶಿವನ ಸೌ೦ದರ್ಯವ
  • ಮಾಧ್ವರಿಗೆ ಶಿವ ಯಾಕೆ ದೂರ?
  • ಹೊಗೆನಕಲ್ ಜಲಪಾತ
  • ಜೋಗಿಗೆ ಮನೆಯೆಲ್ಲಿ ಮಠವೆಲ್ಲಿ ; ಕೂತಲ್ಲೇ ಶಿವನ ಧ್ಯಾನ !
  • ಮಹಾಶಿವರಾತ್ರಿ.....
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಹಿರೋಷಿಮ ಮತ್ತು ನಾಗಸಾಕಿ ಇಂದು !

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಪೊನ್
    July 24, 2008 - 9:30am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:20am
  • Sunil Jayaprakash
    ಉ: ಕುಮಾರವ್ಯಾಸ ಭಾರತ
    July 24, 2008 - 9:08am
  • Sunil Jayaprakash
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:04am
  • ಮನಹ್ಪಠಲ
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 8:22am
  • mahesha
    ಉ: ಕನ್ನಡದ ನುಡಿದಾಟಿ ಎಂತದು?
    July 24, 2008 - 8:20am
  • mahesha
    ಉ: ಕುಮಾರವ್ಯಾಸ ಭಾರತ
    July 24, 2008 - 8:19am
  • mahesha
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 8:17am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator