ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚಿತ್ರ ಪುಟಗಳು › ವಿಶೇಷ ಚಿತ್ರಪುಟಗಳು

'ಕರ್ಣಾಟಕ ಭಾಗವತ’ ದ ’ವಿಶ್ವಾರ್ಪಣಾ ಸಮಾರಂಭ,” ಮೈಸೂರು ನಗರದಲ್ಲಿ. ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ !

June 17, 2008 - 7:02pm — venkatesh
'ಕರ್ಣಾಟಕ ಭಾಗವತ’ ದ ’ವಿಶ್ವಾರ್ಪಣಾ ಸಮಾರಂಭ,”  ಮೈಸೂರು ನಗರದಲ್ಲಿ. ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ  !

ಈಗಾಗಲೇ ಅಮೆರಿಕದ ಹೂಸ್ಟನ್ ನಗರದಲ್ಲಿರುವ ಕನ್ನಡ ವೃಂದದವರ ಯುಗಾದಿ ಹಬ್ಬದ ಸಮಾರಂಭದ ಸಂದರ್ಭದಲ್ಲಿ (ಆದಿನ ”ಕನ್ನಡ ವೃಂದ’ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿತ್ತು) ಅಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ, ಎರಡು ಸಂಪುಟಗಳ ’ ಕರ್ಣಾಟಕ ಭಾಗವತ,’ ಗ್ರಂಥದಬಿಡುಗಡೆಯಾಗಿದೆ. ಈಗ ಭಾರತದ ಮೈಸೂರು, ಬೆಂಗಳೂರು, ಧಾರವಾಡ, ಶಿವಮೊಗ್ಗ ನಗರಗಳಲ್ಲೂ ಇದರ ವಿಶ್ವಾರ್ಪಣಾ ಸಮಾರಂಭವನ್ನು ಸಹೃದಯಿಗಳ, ಕಾವ್ಯಾರಾಧಕರ, ನಮ್ಮ ಪರಂಪರೆಯನ್ನು ಗೌರವಿಸುವ ಸಜ್ಜನರ ಸಮ್ಮುಖದಲ್ಲಿ ನೆರೆವೇರಿಸಲು ಏರ್ಪಾಡುಮಾಡಲಾಗಿದೆ. ಕನ್ನಡದ ಅಭಿಮಾನಿಗಳು ಈ ಸತ್ಕಾರ್ಯವನ್ನು ಗೌರವಿಸಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಲಾಭಹೊಂದಬೇಕೆಂಬುದೇ, ಇದರ ಸಂಪಾದಕ, ಲಿಪಿಕಾರ, ಸಂಶೋಧಕ, ಡಾ.’ಚಂದ್ರಾ’ ರವರ ಕಳಕಳಿಯ ವಿನಂತಿ. ಅವರು, ಈ ಕಾರ್ಯಕ್ಕಾಗಿಯೇ ದೂರದ ಅಮೆರಿಕೆಯಿಂದ ಭಾರತಕ್ಕೆ ಬಂದಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತಗಳನ್ನು ತೀವ್ರವಾಗಿ ಪ್ರೀತಿಸುವ, ಗೌರವಿಸುವ, ಹಾಗೂ ಅದಕ್ಕಾಗಿ ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಕೊಟ್ಟಿರುವ ಡಾ. ಚಂದ್ರಶೇಖರ್ ರವರನ್ನು ಎಷ್ಟು ಅಭಿನಂದಿಸಿದರೂ ಸಾಲದು. ಇದೇ ಭಾಷಾಭಿಮಾನ, ಮೌಲ್ಯಾಧಾರಿತ ಸಂಗತಿಗಳನ್ನು ಗುರುತಿಸುವ, ಅರಿಯುವ, ಪರಂಪರೆಯನ್ನು ಹೆಚ್ಚಿಸುವ ಕಾರ್ಯ, ಇಂದು ನಮಗೆ ಬೇಕಾದ ಅತಿ ಪ್ರಮುಖವಾದ ಸಂಗತಿಗಳಲ್ಲಿ ಒಂದು.

"ಕನ್ನಡ ಭಾಗವತ ಸಂಶೋಧನೆ ಮತ್ತು ಪ್ರಕಟಣಾ ಪ್ರತಿಷ್ಠಾನ ಅರ್ಪಿಸುವ ’ ಕರ್ಣಾಟಕ ಭಾಗವತ ಗ್ರಂಥದ ’ವಿಶ್ವಾರ್ಪಣಾ ಸಮಾರೋಹ’, ಮೊದಲನೆಯದಾಗಿ, ಮೈಸೂರು ನಗರದಲ್ಲಿ ನಡೆಯಲಿದೆ. ಕರ್ಣಾಟಕದ ನಾಲ್ಕು ಪ್ರಮುಖ ಸಾಂಸ್ಕೃತಿಕ ನಗರಗಳಲ್ಲಿ ಈ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿದೆ.

1. ಮೈಸೂರಿನಲ್ಲಿ ಮೊಟ್ಟಮೊದಲ ಸಮಾರಂಭ. 'ರಾಜೆಂದ್ರವಿಲಾಸ್ ಸಭಾಂಗಣ. (೨೭ ನೆಯ ಜೂನ್ ೨೦೦೮, ಶುಕ್ರವಾರ ಸಾಯಂಕಾಲ ೬ ಘಂಟೆಗೆ)

ಅಧ್ಯಕ್ಷರು : ಶ್ರೀ. ಶ್ರೀ. ಸುತ್ತೂರು ಶಿವರಾತ್ರೀಶ್ವರ ಸ್ವಾಮೀಜಿಯವರು.

ಪುಸ್ತಕವನ್ನು ಬಿಡುಗಡೆಮಾಡುವವರು : ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ, ಡಾ.ವಿವೇಕ್ ರೈ ರವರು.

ಪರಿಚಯ ಭಾಷಣ : ಡಾ. ಹೊಳಲ್ಕೆರೆ ಚಂದ್ರಶೇಖರ್ .

ಭಾಗವತ ಪುಸ್ತದ ಬಗ್ಗೆ : ಡಾ. ಕೆ. ವಿ. ವೆಂಕಟಾಚಲಶಾಸ್ತ್ರಿ

ಗ್ರಂಥದಿಂದ ವಾಚನಮಾಡುವವರು : ಶ್ರೀಮತಿ. ಡಾ.ಸುಕನ್ಯಾ ಪ್ರಭಾಕರ್.

2. ಬೆಂಗಳೂರಿನಲ್ಲಿನ ಕಾರ್ಯಕ್ರಮ : ಡಾ. ಎಚ್.ಎನ್.ಕಲಾಕ್ಷೇತ್ರ, ನ್ಯಾಷನಲ್ ಕಾಲೇಜ್, ಜಯನಗರ್,
(೦೬ ನೆಯ ಜುಲೈ, ೨೦೦೮ ರ ಬೆಳಿಗ್ಯೆ ೧೦ ಘಂಟೆಗೆ).

ಅಧ್ಯಕ್ಷರು : ಪ್ರೊ. ಜಿ. ವೆಂಕಟಸುಬ್ಬಯ್ಯನವರು

ಪುಸ್ತಕವನ್ನು ಬಿಡುಗಡೆಮಾಡುವವರು : ಶ್ರಿ. ಎ. ಆರ್. ಸೇತುರಾಮರಾವ್ ರವರು,

ಪರಿಚಯ : ಡಾ. ಹೊಳಲ್ಕೆರೆ ಚಂದ್ರಶೇಖರ್

ಭಾಗವತ ಪುಸ್ತದ ಬಗ್ಗೆ : ಡಾ ಎಚ್.ಎನ್.ಮುರುಳೀಧರ್.

ಗ್ರಂಥದಿಂದ ವಾಚನಮಾಡುವವರು : ಶ್ರೀ. ಎಮ್.ಆರ್.ಸತ್ಯನಾರಾರಾಯಣ

3. ಧಾರವಾಡ : (೧೧ ನೆಯ ಜುಲೈ, ೨೦೦೮)

ಡಾ. ಕಲಬುರ್ಗಿ ಮತ್ತು ಡಾ. ಚನ್ನವೀರ ಕಣವಿ ವಿಶೇಷ ಅತಿಥಿಗಳು.

೪. ಶಿವಮೊಗ್ಗೆ : (೧೯ನೆಯ ಜುಲೈ)

ಶಿವಮೊಗ್ಗೆಯಲ್ಲಿನ ಅತಿಥಿಗಳನ್ನು ಇನ್ನೂ ಕೊನೆಯದಾಗಿ ನಿರ್ಧರಿಸುವುದಿದೆ.

ಮೇಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಪೇಕ್ಷಿಸುವವರು ತಮ್ಮ ಮನೆಯ ವಿಳಾಸಗಳನ್ನು ಒದಗಿಸಿದರೆ, ಅವರವರ ಮನೆಗಳಿಗೆ ಆಹ್ವಾನಪತ್ರಿಕೆಗಳನ್ನು ಅಂಚೆಯಮುಖಾಂತರ ಕಳಿಸಲಾಗುವುದು.

ಸ್ನೇಹದಲ್ಲಿ,

ಚಂದ್ರ
(ಡಾ. ಎಚ್. ಆರ್. ಚಂದ್ರಶೇಖರ್)

ಇದರ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯನ್ನು ಅಪೇಕ್ಷಿಸುವವರು, ಕೆಳಗಿನ ವಿಳಾಸಕ್ಕೆ ಫೋನ್ ಮುಖಾಂತರ ಸಂಪರ್ಕಿಸಬಹುದು.

Prof. H. R. Ramakrishna Rao,
801, West of Kanakapura Road,
15th Cross, Jayanagar, 7th Block,
BengaLUru.

Phone : 080-26712450

,

  • ವಿಶೇಷ ಚಿತ್ರಪುಟಗಳು
~.~
  • Login or register to post comments
  • 328 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಕರ್ಣಾಟಕ ಭಾಗವತ’ ಗ್ರಂಥದ ಬಿಡುಗಡೆ ಸಮಾರಂಭ -ಮೊದಲು ಮೈಸೂರು, ಬೆಂಗಳೂರು, ಧಾರವಾಡ, ಕೊನೆಗೆ ಶಿವಮೊಗ್ಗೆಯಲ್ಲಿ !
  • ಮುಂಬೈ ನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !
  • "ಕರ್ಣಾಟಕ ಭಾಗವತ "- ಅಮೆರಿಕೆಯಲ್ಲಿ ಬಿಡುಗಡೆಯಾಗಿದೆ !
  • " ಸಂಶೋಧನೆ, ವಿದ್ವತ್ತು, ಸಂಪಾದನೆ, ಬೃಹತ್ ಅವತಾರವಾಗಿ ಕೃತಿರೂಪು ತಳೆದಿದೆ. ಇದು ಒಂದು ಶ್ಲಾಘನೀಯವಾದ ಸಂಗತಿ,"-ಡಾ. ಬಿ. ಎ. ವಿವೇಕ್ ರೈ !
  • ’ ಕರ್ಣಾಟಕ ಭಾಗವತ,” ಒಂದು ಅಪರೂಪದ ಕೃತಿ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಪ್ರತಿಭಕ್ಕ,  ಈಗ ನಮ್ಮ ಭಾರತದೇಶದ ರಾಷ್ಟ್ರಾಧ್ಯಕ್ಷೆ  !

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
  • Sunil Jayaprakash
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 12, 2008 - 9:53am
  • ASHOKKUMAR
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 12, 2008 - 9:25am
  • shaamala
    ಉ: ಹನ್ನೊಂದು ಅಡಿ ಎತ್ತರದ ತಂಬೂರಿ!
    October 12, 2008 - 8:53am
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator