ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಕನ್ನಡ-ತೆಲುಗು ಒಂದೇ ಲಿಪಿ

January 2, 2006 - 12:27pm — minajagi

ಕೆಳ ದಿನಗಳ ಹಿಂದೆ(೩-೪ ದಿನಗಳ ಹಿಂದೆ)ಡೆಕ್ಕನ್ ಹೆರಾಲ್ದ್ ನಲ್ಲಿ ಬಂದಿತ್ತು.
ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ಒಂದೆ ಲಿಪಿಯನ್ನು ಅಳವಡಿಸುವ ಪ್ರಯತ್ನ ನಡಿಯಲಿದೆ. ಣೀಟ್ ವಾರನ್ಗಲ್ ನವರು ಈ ದಿಸೆಯಲ್ಲಿ ಕೆಲಸ ಮಾಡಬಹುದು.
ಎರಡು ಭಾಷೆಗಳಿಗೆ ಒಂದೆ ಲಿಪಿ ಅಳವಡಿಸುವ ಬಗ್ಗೆ ಸಂಪದದವರು ಏನು ಹೇಳ ಬಯಸುತ್ತೀರಿ.

‹ ಹೊಸ ಕನ್ನಡ ಕೀಬೋರ್ಡ್ ಬಂತಂತೆ ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! ›
  • ಸುದ್ದಿ, ಸಮಾಚಾರ
~.~
  • Login or register to post comments
  • 1087 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 3, 2006 - 10:15am — Sunil Jayaprakash

ವಿನ್ ವಿನ್ ಓರಿಯೆಂಟೇಷನ್

Sunil Jayaprakash's picture

ಇದೊಂದು ಉತ್ತಮ ಹೆಜ್ಜೆ ಎನ್ನಬಹುದು. ಕನ್ನಡ ಹಾಗು ತೆಲುಗು ಮಿತ್ರರ ನಡುವೆ ಉತ್ತಮವಾದ ಬಾಂಧವ್ಯವಿದೆ. ಅನೇಕ ಕಡೆ ಕನ್ನಡ ಹಾಗು ತೆಲುಗರ ನಡುವೆ ಮದುವೆಗಳೇರ್ಪಡುತ್ತವೆ. ಅಂದರೆ ಕನ್ನಡಿಗರ ಮತ್ತು ತೆಲುಗರ ನಡುವೆ ಅಹಂ ಅಡ್ಡಬರುವುದಿಲ್ಲ ಎಂದಾಯಿತು. ಆದರೆ, ಇಂಥಹ ಸೂಕ್ಷ್ಮಗಳನ್ನ ಲಾಭಕ್ಕೆ ಬಳಸಿಕೊಳ್ಳುವ ಕ್ಷೇತ್ರವೊಂದಿದೆ. ಅದೇ ರಾಜಕಾರಣ. ರಾಜಕಾರಣದ ಬಗ್ಗೆ ಯಾರೂ ಅಸಹನೆ ವ್ಯಕ್ತಪಡಿಸಬೇಕಾಗಿಲ್ಲ. ಯಾವುದೇ ಕಾಲಘಟ್ಟದಲ್ಲಿ, ಯಾವುದೇ ಪ್ರಾಂತ್ಯದಲ್ಲಿ ರಾಜಕಾರಣ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ನನ್ನನ್ನೊಂದು ಭಯ ಕಾಡುತ್ತಿದೆ. ಆದೆಂದರೆ ಕನ್ನಡಕ್ಕಾಗಿ ಹೋರಾಡುವಾಗ ರಾಜಕೀಯ ಇಚ್ಛಾಶಕ್ತಿ ಸಣ್ಣದಾಗಿರುತ್ತದೆ. ಭಾಷೆಗಳ ವಿಷಯದಲ್ಲಿ ಕನ್ನಡದ ರಾಜಕಾರಣಿಗಳು ಮಂದಮತಿಗಳು ಎಂದರೆ ತಪ್ಪಾಗಲಾರದೇನೊ(ಪ್ರಶ್ನಾರ್ಥಕ). ಹೀಗಾಗಿ ಈ ಲಿಪಿಯ ವಿಷಯ ಬಂದಾಗ ಕನ್ನಡಕ್ಕೆ ಲಾಭಕ್ಕಿಂತ ನಷ್ಚವೇ ಹೆಚ್ಚಾಗಬಹುದು. ಇದು ವಿನ್ ವಿನ್ ಓರಿಯೆಂಟೇಷನ್ ಆಗುವ ಸಾಧ್ಯತೆ ಕಡಿಮೆ.
ಬೇರೆಯವರ ಅಭಿಪ್ರಾಯವೇನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2006 - 10:32pm — Sunil Jayaprakash

ಮತ್ತಷ್ಟು ಕಳವಳಗಳು,

Sunil Jayaprakash's picture

Sunil Jayaprakash wrote:
ಇದು ವಿನ್ ವಿನ್ ಓರಿಯೆಂಟೇಷನ್ ಆಗುವ ಸಾಧ್ಯತೆ ಕಡಿಮೆ.

ಉದಾಹರಣೆಗೆ ಇಂತಹ ಯೋಜನೆಯನ್ನು ಪ್ರಾಯೋಗಿಕವಾಗಿ ಕರ್ಣಾಟಾಂಧ್ರ ಗಡಿಪ್ರದೇಶದಲ್ಲಿ ಅನುಷ್ಠಾನಗೊಳಿಸಿದರು ಎಂದಿಟ್ಟುಕೊಳ್ಳಿ. ಆಗ ಏನಾದೀತು. ಕರ್ಣಾಟಾಂಧ್ರ ಲಿಪಿಯನ್ನು ಕವಿಗಳು, ಕಥೆಗಾರರು ಉಪಯೋಗಿಸಲಾರಂಭಿಸುತ್ತಾರೆ. ಅಕಸ್ಮಾತ್ ಇಂತಹ ಒಂದು ಕೃತಿ ಅತ್ಯುತ್ತಮವಾಗಿದ್ದು ಯಾವುದಾದರು ಪ್ರಶಸ್ತಿಗೆ ಅರ್ಹವಾದದ್ದು ಎಂದಿಟ್ಟುಕೊಳ್ಳೋಣ. ಆಗ ಆ ಕೃತಿಗೆ ಸರಿಯಾದ ಸ್ಥಾನಮಾನ ಸಿಗುತ್ತದೆಯೇ. ಏಕೆ ಈ ಪ್ರಶ್ನೆಯಂದರೆ, ಎಲ್ಲೋ ಓದಿದ ನೆನಪು, ದೇವನಾಗರಿ ಲಿಪಿಯಲ್ಲಿ ಬರೆದ ಕೊಂಕಣಿ ಕೃತಿಗಳನ್ನು ಮಾತ್ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪರಿಗಣಿಸಲಾಗುವುದಂತೆ. ಕನ್ನಡದಲ್ಲಿ ಬರೆದರೆ ಪರಿಗಣಿಸಲಾಗುವುದಿಲ್ಲ. ಈ ಸಂಗತಿ ಎಷ್ಟು ನಿಜ ಎಂದು ತಿಳಿದಿಲ್ಲ. ಇದೇ ಧಾಟಿಯಲ್ಲಿ ಆಂಧ್ರ ಸರಕಾರ ತೆಲುಗು ಲಿಪಿಯಲ್ಲಿದ್ದರೆ ಮಾತ್ರ ಪ್ರಶಸ್ತಿಗೆ ಅರ್ಹ ಎಂಬ ಸುತ್ತೋಲೆ ಹೊರಡಿಸಿದರೆ(ಇದು ಅಸಂಭವವೇನಲ್ಲ. ಸರಕಾರಗಳು ಏನು ಬೇಕಾದರೂ ಮಾಡಬಹುದು. ಇದು ಅನಾದಿಕಾಲದಿಂದಲೂ ನಡೆದುಬಂದಿದೆ) ಆಗ ಉತ್ಸಾಹಭರಿತರಾಗಿ ಲಿಪಿಯನ್ನು ಸ್ವಾಗತಿಸಿದ ಜನರ ಸ್ಥೈರ್ಯ ಏನಾಗಬಹುದು. ಆಗ ಅವರ ನೆರವಿಗೆ (???) ಉದಾರಿ ಕರ್ನಾಟಕದ ಜನತೆ (ಕರ್ನಾಟಕ ಉದಾರಿ ಎಂಬುದಕ್ಕೆ ಪುರಾವೆ. ಮಹಾರಾಷ್ಟ್ರ ಸರಕಾರ ಕೊಂಕಣಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡದಿದ್ದಾಗ, ಕೊಂಕಣಿ ಕಾರ್ಯಕ್ರಮಗಳನ್ನು ಕರ್ನಾಟಕ ಸರಕಾರ ಧಾರವಾಡದ ಬಾನುಲಿ ಕೇಂದ್ರದಿಂದ ಪ್ರಸಾರ ಮಾಡಿದರು ಎಂದು ಈಚೆಗೆ ಪತ್ರಿಕೆಯಲ್ಲಿ ಓದಿದ್ದೆ.) ಬರುತ್ತಾರೆಯೆಂದಿಟ್ಟು ಕೊಳ್ಳೋಣ. ಅವರಿಗೆ ಶೋಷಿತರ ಸ್ಧಾನಮಾನ ನೀಡಿ ಅನಾದಿಕಾಲದಿಂದ ಇವರನ್ನು ತುಳಿಯಲಾಗಿದೆ ಎಂಬ ನಾಮ ಅಂಟಿಸಿ, ಎಲ್ಲೆಲ್ಲೂ ಅವರಿಗೆ ಮೀಸಲಾತಿ ಕೊಡಬಹುದು. ಕಾಲೇಜು, ಕೃಪಾಂಕಗಳು, ಶುಲ್ಕ ಇವೆಲ್ಲ ಆಗ ಚರ್ಚೆಗೆ ಬರುತ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 1:53pm — ಮಹೇಶ ಭೋಗಾದಿ

ತೆಲುಗನ್ನು ಕರ್ನಾಟಕದಲ್ಲಿ ಎರಡನೆ ನುಡಿ

ಮಹೇಶ ಭೋಗಾದಿ's picture

ಆದರೆ ಸುದ್ದಿ ಪತ್ರಿಕೆಗಳು ಈ ಕೆಲಸವನ್ನು, ತೆಲುಗನ್ನು ಕರ್ನಾಟಕದಲ್ಲಿ ಎರಡನೆ ನುಡಿಯಾಗಿ ಮಾಡುವ ಯತ್ನವೆಂದು ಬಿಂಬಿಸಿದಂತೆ ಭಾಸವಾಯಿತು.

http://www.hindu.com/2004/12/27/stories/2004122702880500.htm

ಸಿರಿಗನ್ನಡ ಚಿರಗನ್ನಡ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 3, 2006 - 3:40pm — shreekant.mishrikoti

ಕನ್ನಡ -ತೆಲುಗು ಒಂದೇ ಲಿಪಿ

shreekant.mishrikoti's picture

೧. ಮೊದಲು ಎರಡು ಭಾಷೆಗಳು ಒಂದೇ ಲಿಪಿ ಹೊಂದಿದ್ದವು . ನಂತರ ಲಿಪಿಗಳು ಬೇರೆ ಬೇರೆ ಆದವು . ಏಕೆ ? ಮತ್ತು ಹೇಗೆ ? ಅಧ್ಯಯನ ಮಾಡಬೇಕು .

೨. ಹಿಂದೆ ಇಂಥ ಚರ್ಚೆ ಆಗಿರಬಹುದು . ಹಾಗಿದ್ದಲ್ಲಿ ಆ ಎಲ್ಲ ವಿವರ ಬಲ್ಲವರು ತಿಳಿಸಬೇಕು .

ಮತ್ತೆ ಮತ್ತೆ ಪ್ರಾರಂಭದಿಂದ ಪ್ರಾರಂಭಿಸುವದನ್ನು ತಪ್ಪಿಸಿ ಈ ಸಂಬಂಧದ ಇಲ್ಲಿಯವರೆಗಿನ ಮಾಹಿತಿ ಪಡೆದು ಅಲ್ಲಿಂದ ನಮ್ಮ ಚರ್ಚೆ ಮುಂದುವರಿಸಬೇಕು.

ಶ್ರೀಕಾಂತ ಮಿಶ್ರಿಕೋಟಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 3, 2006 - 4:17pm — hpn

ಒಂದೇ ಲಿಪಿ

hpn's picture

ಮೊದಲಾಗಿ, ಸಂಪದದಲ್ಲಿ ಕನ್ನಡ ಲಿಪಿ ಬಳಸಿ ಬರೆಯಿರಿ.

ನೀವು ಉದ್ದೇಶಿಸಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ.

ಕನ್ನಡ - ತೆಲುಗು ಭಾಷೆಗಳಿಗೆ ಒಂದೇ ಲಿಪಿ ಮಾಡಹೊರಟಿರುವವರಿಗೆ ನಾವು "ಮಾಡಬೇಡಿ" ಎಂದು ಹೇಳಲಾಗುವುದಿಲ್ಲ. ಅದು ಸರಿಯೋ, ತಪ್ಪೋ, progressiveಓ ಅಲ್ಲವೋ ಅದೂ ಕೂಡ ಕಾಲವೇ ತಿಳಿಸಬೇಕಾದ ಸಂಗತಿ. ನಮ್ಮ ಅಭಿಪ್ರಾಯಗಳನ್ನು ದಾಖಲು ಮಾಡಬಹುದಷ್ಟೇ ಆಗಬಹುದಾದ್ದರಿಂದ ನಿಮ್ಮೆಲ್ಲರೊಂದಿಗೆ ನನ್ನ ಅಭಿಪ್ರಾಯವನ್ನೂ ಸೇರಿಸುತ್ತೇನೆ.

ನಾವೀಗ ಬಳಸುತ್ತಿರುವ ಲಿಪಿಗಳು ಹೇಗೆ ಉಗಮವಾದುವೆಂಬ ಸಂಗತಿ ಇಲ್ಲಿ ಗಮನಿಸಬೇಕಾದ ಅಂಶ. ಕನ್ನಡ - ತೆಲುಗುಗೆ ಒಂದೇ ಲಿಪಿ ಬೇಕೆಂದರೆ ಹೊಸದೊಂದು ಲಿಪಿ ತಯಾರಿಸುವ ಅವಶ್ಯಕತೆ ಬಹುಶಃ ಇರದು. ಹಳೆಗನ್ನಡವನ್ನೇ ಬಳಸಬಹುದು. ಆದರೆ ಅದು ನಿಜವಾಗಲೂ ಬೇಕೆ? ಕಾಲಚಕ್ರದಲ್ಲಿ ಹಿಂದಕ್ಕೆ ತಿರುಗಿದಂತಾಗುತ್ತದೆ ಅಲ್ವೆ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2006 - 12:18am — ಶ್ಯಾಮ ಕಶ್ಯಪ

ಜನ ಒಂದಾಗಬೇಕು ನಿಜ...

ಶ್ಯಾಮ ಕಶ್ಯಪ's picture

ಜನ ಒಂದಾಗಬೇಕು ನಿಜ. ಆದರೆ ಭಾಷೆಗಳು ಬೇರೆಬೇರೆಯಾಗಿದ್ರೆ ಒಂದೇ ಲಿಪಿಯಿಂದ ಪ್ರಯೋಜನವಾದರೂ ಏನು? ಲಿಪಿ ಒಂದೇ ಆದ್ರೆ ಜನ ಒಂದಾಗೋಕ್ಕೆ ಹೇಗೆ ಸಾಧ್ಯ? ಸಾಂಕೇತಿಕವಾಗಿ ಬರೆಯುವ ಲಿಪಿಯಲ್ಲಿ homogenity ತಂದುಕೊಂಡು ಏನು ಸಾಧಿಸಬೇಕಾಗಿಲ್ಲ.ಇರುವ ಐಡೆಂಟಿಟಿ ಮತ್ತು ವೈವಿಧ್ಯತೆಯನ್ನು ಏಕೆ ಕಳೆದುಕೊಳ್ಳಬೇಕು?
"The first day of the conference will feature a seminar on trade, industry and commerce, the second day with a seminar on women and youth"
ಇವು ಈ ಲಿಪಿಯ ವಿಷಯಕ್ಕಿಂತ ಹೆಚ್ಚು ಅವಶ್ಯಕತೆಯ ವಿಷಯಗಳು ಅನ್ನಿಸುತ್ತದೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2006 - 9:01pm — raghushivram

lipigalu ondhagabaradhu

raghushivram's picture

nanna prakara ivaga yavasthiyalli idheyo adhe sthiyalli lipigalannu biduvudu sooktha.
namma bashe/lipi nammage doddadhu, hage telagu navara bashe/lipi avarige hechu priya, yake NIT avarige e tharahada yochane banto gothilla.
ondhu paksha eradu bashegu seri ondhe lipi thandharu jana eshtara mattige oppuvaru annuvudhu prashne.
NIT andhare National Institute of Technology allave?, nanna prakara allina vidhyarthigalu project maduva utsahadalli etarahadha prayathnakke chalene kottirabahudhu.
-Raghuram

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2006 - 12:04pm — ಮಹೇಶ ಭೋಗಾದಿ

ಒಳ್ಳೆಯ

ಮಹೇಶ ಭೋಗಾದಿ's picture

ಒಳ್ಳೆಯ ಪ್ರಯತ್ನ.

ಆದರೆ, ನನ್ನ ಅಭಿಪ್ರಾಯದಲ್ಲಿ ಕನ್ನಡದ ಈಗಿನ ಲಿಪಿ, ತೆಲುಗು ಲಿಪಿಗಿಂತ ಸುಂದರವಾಗಿ ಮತ್ತು ಚೊಕ್ಕಟವಾಗಿದೆ.

ಸಿರಿಗನ್ನಡ ಚಿರಗನ್ನಡ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 4, 2006 - 2:08am — sinchanabhat

ಏಕತೆಯನ್ನು ತರುವುದೇ!

sinchanabhat's picture

ನಾನು ಕನ್ನಡದವಳಾಗಿ ಅನ್ನುವುದಕಿಂತ ಭಾರತೀಯಳಾಗಿ ಹೇಳುವುದಾದರೆ,ಇಂದು ನಾವು ಅದೆಸ್ಟೋ ಕ್ಶೇತ್ರಗಳಲ್ಲಿ ಬದಲಾವಣೆ ಕಾಣಬೇಕಾಗಿದೆ,ಆದರೆ ತರಲು ಕೈಜೋಡಿಸುವವರಿಲ್ಲ.ಭಾಶೆ ಎಂಬುದು ಸಂದೇಶರವಾನೆಯನ್ನು ಸಲೀಸು ಮಾಡುವ ಮಾಧ್ಯಮ,ಅಂದರೆ ಅದು ನಮ್ಮ ಅನುಕೂಲ. ಬದಲಾವಣೆ ಎಲ್ಲಿ ಬೇಕೊ ಅಲ್ಲಿ ಬದಲಾವಣೆ ತರುವವರು ಯಾರೂ ಇಲ್ಲಾ!ಬೆಳಗಾವಿಯ ವಿಶಯದಲ್ಲಿ ಭಾಶೆಯನ್ನೇ ಕಾರಣವಾಗಿಸಿಕೊಂಡು ಅದೆಸ್ಟೋ ಹಿರಿಯರು(!) ಕಿರಿಯರು ಕಚ್ಹಾಡಿದ್ದಾರೆ.ನನಗೆ ಈ ಲಿಪಿ ಬದಲಾವಣೆ ಅದೇನು ಮಹತ್ತರವಾದದ್ದನ್ನು ಸಾದಿಸಬಹುದೆಂದು ತೊಚುತ್ತಿಲ್ಲಾ.ಅದೊಂದು ಏಕತೆಯತ್ತಪಯಣವಾದರೆ ಬದಲಾವಣೆಗೆ ಸ್ವಾಗತಿಸಬಹುದಲ್ಲವೆ? ಬದಲಾವಣೆ ಜಗದ ನಿಯಮ,ನಮಗೆ ಕಾಣುವ ಜಗತ್ತೆಂಬುದು ನಮ್ಮ ಕೈಯ್ಯಲ್ಲಿದೆ, ಒಳಿತು ಕೆಡುಕುಗಳನರಿತು ಪಯಣಿಸಬೇಕಸ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ
  • ಕರ್ನಾಟಕ ಅಥವಾ ಕನ್ನಡತನ (೧)
  • ಕನ್ನಡ ಅಂಕಿಗಳು ಮಾಡಿದ ಪಾಪವೇನು?
  • ತಾವರೆಕೆರೆ ಬಳಿಯ ವೀರಗಲ್ಲುಗಳು - ಶತಮಾನಗಳ ಹಿಂದಿನ ಕೆತ್ತನೆ, ಆಗಿನ ಕನ್ನಡ ಲಿಪಿ.
  • ಕನ್ನಡಿಗನಾಗಿ ಹೆಮ್ಮೆ...
Syndicate content

ಲೇಖಕರು

minajagi's picture

ಪರಿಚಯ

naanu kannada da bagge asakthi,hemme ulla samanya vyakthi Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:30pm
  • vikashegde
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 3:28pm
  • vikashegde
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:26pm
  • mahesha
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:25pm
  • mahesha
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:23pm
  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
ಇನ್ನಷ್ಟು


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator