ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › Sampada Blogs › ರಘುನಂದನ ರವರ ಬ್ಲಾಗ್

ನೀರಿನ ಮುಂದೆ ನಾವ್ಯಾರು?

March 24, 2006 - 12:45am — ರಘುನಂದನ

ನಮ್ಮೂರು ಹರಿಹರ. ಒಂದ್ಸಲ ಹೀಗಾಯ್ತು. "ಮನ್ಯಾಗಿದ್ರ ನಿಂದು ಪಿರಿಪಿರಿ ಜಾಸ್ತಿ, ಅದಕ್ಕs ನದೀಗೆ ಹೋಗಿ ಒಂದು ಸ್ವಲುಪು ಹೊತ್ತು ಈಜಾಡಿ ಬಾ ನಡಿ" ಎಂದು

ನಮ್ಮಮ್ಮ ಕಳಿಸಿದ್ರು. ನಾನು ಕೆಲವು ಸ್ನೇಹಿತರೊಡಗೂಡಿ ತುಂಗಭದ್ರೆಯಲ್ಲಿ ಈಜಲು ಹೋದೆ. ಪಶ್ಚಿಮದಿಂದ ಪೂರ್ವಕ್ಕೆ ಹರಿದು, ಮತ್ತೆ ಉತ್ತರ

ವಾಹಿನಿಯಾಗುವ ಜಾಗೆಯಲ್ಲಿ ನಾವು ಸಾಮಾನ್ಯವಾಗಿ ಈಜಾಡುವುದು ರೂಢಿಯಲ್ಲಿತ್ತು. ಮಧ್ಯ ಒಂದು ಮೊನಚಾದ ತುದಿಯ ಬಂಡೆಯೊಂದು ಎದ್ದು ನಿಂತಿತ್ತು.

ಇದಕ್ಕೆ "ಶಿವ್ರಾತ್ರಿಬಂಡಿ" (ಶಿವರಾತ್ರಿ ಬಂಡೆ) ಎಂಬ ಹೆಸರು. ನದಿಯ ಬೇರೆಡೆಗೆ ಹೋಲಿಸಿದಲ್ಲಿ ಆ ಜಾಗದ ವಿಸ್ತಾರ ಕಮ್ಮಿ ಹೀಗಾಗಿ ನೀರಿನ ಸೆಳೆತ ಜಾಸ್ತಿ. ಸ್ವಲ್ಪ

ಮುಂದೆ ಹೋದರೆ ಇದ್ದಕ್ಕಿದ್ದಂತೆ ನದಿಯ ಪಾತ್ರ ವಿಶಾಲವಾಗುತ್ತದೆ, ಅಲ್ಲಿ ನೀರಿನ ವೇಗವೇನೋ ಕಮ್ಮಿ ಆದರೆ ಆಳ ಹಾಗು ಒಳಪ್ರವಾಹ ಅತ್ಯಂತ

ಅಪಾಯಕಾರಿ. ನಾವೆಲ್ಲ ಏನು ಮಾಡ್ತಾ ಇದ್ವಿ ಅಂದ್ರೆ ನದಿಯ ಈ ದಂಡೆಯ ಮೇಲೆ ಬಟ್ಟೆಗಳನ್ನಿಟ್ಟು ನದಿಯಲ್ಲಿ ಧುಮುಕಿ, ನದಿಯ ಸೆಳೆತದೊಂದಿಗೇ ಇನ್ನೊಂದು

ದಡಕ್ಕೆ ಈಜಿಕೊಂಡು ಹೋಗುತ್ತಿದ್ದೆವು. ಹೀಗೆ ಮಾಡುವಾಗ ಅಡ್ಡಡ್ಡವಾಗಿಯೇ ನದಿಯನ್ನು ದಾಟಲಾಗದು, ಪ್ರಾರಂಭಿಸಬೇಕಾದ ದಡದಲ್ಲಿ ಸಾಕಷ್ಟು ಮೇಲ್ಭಾಗಕ್ಕೆ

ಬಂದು ನೀರಿನಲ್ಲಿ ಧುಮುಕಿ, ಓರೆಯಾದ ದಿಕ್ಕಿನಲ್ಲಿ (diagonal) ಈಜುತ್ತ ಹೊರಟರೆ ಇನ್ನೊಂದು ದಡದಲ್ಲಿ ನಾವು ಸೇರಬೇಕಾದ ಜಾಗಕ್ಕೆ ಬರಬಹುದಾಗಿತ್ತು.

ಅದೇ ರೀತಿ ವಾಪಸ್ಸಾಗುವಾಗ ಈ ದಂಡೆಯ ಸಾಕಷ್ಟು ಮೇಲ್ಭಾಗಕ್ಕೆ ಬಂದು ನೀರಿನಲ್ಲಿಳಿದು, ನಮ್ಮ ತಲೆ ಮುಳುಗುವವರೆಗೂ ನೀರಿನಲ್ಲಿ ನಡೆಯುತ್ತ ಬಂದು,

ಯಾವಾಗ ನೀರಿನ ಆಳ ಹೆಚ್ಚಾಗುತ್ತಿತ್ತೋ ಅಲ್ಲಿಂದ ಕರಾರುವಕ್ಕಾದ ಲೆಕ್ಕಾಚಾರದ ಮೇಲೆ ಈಜಲುತೊಡಗಿ ನಮ್ಮ ಜಾಗಕ್ಕೆ ಸೇರಿಕೊಳ್ಳಬೇಕಿತ್ತು. ಈ

ಪ್ರಾರಂಭದ ಜಾಗದ ಆಯ್ಕೆ ಅಥವಾ ಈಜುವ ಲಯವೇನಾದರೂ ಅಂದಾಜು ತಪ್ಪಿತೋ ಅಷ್ಟೇ ಗತಿ. ಶಿವ್ರಾತ್ರಿಬಂಡಿಗೆ ಮೈ ಕೈ ತಾಕಿಸಿಕೊಂಡು

ಗಂಭೀರಗಾಯಗಳನ್ನು ಮಾಡಿಕೊಳ್ಳುವುದೋ ಅಥವಾ ಆಳದ ಪ್ರದೇಶಕ್ಕೆ ಹೋಗಿ ಸಿಲುಕಿಕೊಂಡು ಶಿವನ ಪಾದ ಸೇರುವುದೋ ಆಗುತ್ತಿತ್ತು. ಚೆನ್ನಾಗಿ

ನುರಿತವರಾಗಿದ್ದರೆ ನೀರಿನಲ್ಲಿಯೇ ಮುಳುಗಿ ಸಾಕಷ್ಟು ದೂರವನ್ನು ಈಜಿಕೊಂಡು ಅದು ಹೇಗೋ ಹೊರಗೆ ಬಂದು ಬಿಡುತ್ತಿದ್ದರು. ಆದರೆ ಇದಕ್ಕೆ ಧೈರ್ಯ

ಮಾತ್ರವಲ್ಲಿ ಸಾಕಷ್ಟು ದೈಹಿಕಬಲವೂ ಬೇಕು. ಇರಲಿ. ನಮ್ಮಮ್ಮನ ಹತ್ತಿರ ಬಯ್ಯಿಸಿಕೊಂಡು ನಾನು ನದಿಗೆ ಬಂದೆನಷ್ಟೆ. ಎಲ್ಲರೂ ಮೊದಲು ಈಜಿಕೊಂಡು

ಆಚೆಯ ದಡಕ್ಕೆ ಹೋದೆವು. ನಂತರ ನಂಗ್ಯಾಕೋ ಬೇಗ ಹೋಗೋಣ ಎನ್ನಿಸಿತು. ನಾನೊಬ್ಬನೆ ವಾಪಸ್ಸು ಹೊರಟೆ. ಅಂದು ನದಿಯಲ್ಲಿ ನೀರಿನ ಪ್ರಮಾಣವೂ

ತುಸು ಹೆಚ್ಚಿತ್ತು, ನನಗದರ ಬಗ್ಗೆ ಹೆಚ್ಚು ಗಮನಿಸಲು ಆಗಲಿಲ್ಲ. ಸಾಕಷ್ಟು ರೂಢಿಯಾದ ಸ್ಥಳವಾದರೂ ದುರ್ದೈವದಿಂದ ನಾನು ಅಂದಾಜು ತಪ್ಪಿಯೇ ಬಿಟ್ಟೆ. ಇನ್ನೂ

ಹದಿನೈದು ಹೆಜ್ಜೆಯಾದರೂ ಇಟ್ಟಿಲ್ಲ, ಆಗಲೇ ನನ್ನ ಮೂಗಿನವರೆಗೆ ನೀರು ಬಂದು ಬಿಟ್ಟಿತು, ನಾನು ಅವಿವೇಕದಿಂದ ಈಜಲು ತೊಡಗಿದೆ. ಲಯ ಸಿಗುತ್ತಲೇ ಇಲ್ಲ!.

ನೋಡು ನೋಡುತ್ತಲೇ ನಾವು ಬಟ್ಟೆಯನ್ನಿಟ್ಟಿದ್ದ ಜಾಗವೂ ನನ್ನಿಂದ ದೂರವಾಯಿತು, ಎಡಗಡೆಗೆ ನೋಡುತ್ತಿದ್ದೇನೆ, ಶಿವ್ರಾತ್ರಿಬಂಡಿ ಕ್ಷಣಕ್ಷಣಕ್ಕೂ ಸಮೀಪಿಸುತ್ತಿದೆ.

...... (ಅರೆre ಯಾಕೋ ಕೈ ಸಿಕ್ಕಾಪಟ್ಟೆ ನೋಯ್ತಾ ಇದೆ, ಉಳಿದದ್ದನ್ನು ಟೈಮಾದಾಗ ಬರೀತಿನಿ)

  • ಅನುಭವ ಕಥನ
~.~
  • ರಘುನಂದನ ರವರ ಬ್ಲಾಗ್
  • Login or register to post comments
  • 989 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2006 - 8:59am — ಶ್ರೀನಿಧಿ

ಅಯ್ಯೋ

ಶ್ರೀನಿಧಿ's picture

ನಮ್ಮ ಸೀತಾರಾಂ ಥರ ಸ್ವಾರಸ್ಯಕರವಾದ ಜಾಗದಲ್ಲೇ ನಿಲ್ಲಿಸಿಬಿಟ್ಟರಲ್ಲಾ?? ನೀವು ಬಚಾವ್ ಆಗಿ ಬಂದಿದ್ದೀರಿ ಅಂತ ಊಹೆ ಮಾಡಿಕೊಂಡಿದ್ದೀನಿ. ಅಥವಾ ಶಿವನ ಪಾದದಲ್ಲೂ ಅಂತರ್ಜಾಲ ಸಂಪರ್ಕ ಇದೆಯಾ??

 

 

 

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 12:06pm — ಮಹೇಶ ಭೋಗಾದಿ

ಕೈನೋವು!!!

ಮಹೇಶ ಭೋಗಾದಿ's picture

ಅಯ್ಯೋ ಶಿವನೇ ಗತಿ...

ನಿಮ್ಮ ಕೈ ಈಗಲೆ ನೋಯಬೇಕೆ?
ಏನು ಸ್ವಾಮಿ ಈಜುಪಟು ಅಂತೀರ ಇಷ್ಟು ಬೇಗ ಕೈನೋಯಿತೆ?

ಇದು ಕಳ್ಳನೋವು:)

ಇರಲಿ....
ಕಥೆಯು ಬೇಗನೆ ಮುಂದುವರಲಿ, ಎಷ್ಟು ಹೊತ್ತು ಅಂಥ ನೀರಿನಲ್ಲಿ ಹಾಗೆ ಇರುತ್ತೀರ? Smiling !!

ನೀವು ಈಜಹೋಗಿದ್ದನ್ನು ಕೇಳಿ ನನಗೆ ಒಂದು ವಿಷಯ ನೆನಪಾಗುತ್ತಿದೆ..

ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾವೇರಿ ಮತ್ತು ಹೇಮವತಿಯರು ಹರಿದರು ಕೂಡ, ನಮ್ಮ ಮನೆಗಳಲ್ಲಿ ಹೆಚ್ಚು ಮಂದಿಗೆ ಈಜಲು ಬರದು. ಹಾಗು ನಮ್ಮನ್ನು ಈಜಗೊಡರು.

ಬರೀ ಈಜುಗೊಳದಲ್ಲಿ ಈಜಿದ್ದೆ ಆಯಿತು ನಮ್ಮ ಜಾಯಮಾನ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀರಿನ ಮುಂದೆ ನಾವ್ಯಾರು? - ಭಾಗ ಎರಡು
  • ಸಾವಿನ ಹತ್ತಿರ
  • ಶಿವಸಮುದ್ರಮ್ ಬಳಿಯ ಪ್ರಪಾತದಲ್ಲಿ ಭೋರ್ಗರೆಯುತ್ತಾ ಧುಮುಕುವ, ಕಾವೇರಿ ನದಿಯ ವಿಹಂಗಮ ನೋಟ !
  • ಬೇಸಿಗೆ
  • ಈ ವಜ್ರದ ಬೆಲೆ ಏನು?
Syndicate content

ಲೇಖಕರು

ರಘುನಂದನ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮಾತಾಡುವವರನ್ನು ಮಾತಾಡದವರನ್ನು ಬೈಯ್ಯುವ ಬುದ್ಧಿವಂತ ಮಾಧ್ಯಮ
  • ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
  • ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
  • ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ
  • ಚೆಲುವು ಇರುವುದೆಲ್ಲಿ?
  • ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
  • ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
  • ಗಾದೆಗಳು!!!
  • ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
  • ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gurubaliga
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 3, 2008 - 2:19pm
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 2:15pm
  • Rakesh Shetty
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 2:09pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 2:09pm
  • Rakesh Shetty
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 2:08pm
  • gurubaliga
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 2:07pm
  • Aravind M.S
    ಉ: ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.
    December 3, 2008 - 2:02pm
  • Rakesh Shetty
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 2:00pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:58pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:54pm
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 458 ಅತಿಥಿಗಳು ಆನ್ಲೈನ್ ಇರುವರು.


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator