ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › kanda ರವರ ಬ್ಲಾಗ್

ಇದು ಪದ್ಯವಲ್ಲ

December 19, 2005 - 11:11am — kanda

ಎಲ್ಲರೂ ನಿದ್ದೆ ಮಾಡುತ್ತಿದ್ದಾರೆ;
ಕೆಲವರು ಗೊರಕೆ ಹೊಡೆದರೆ,
ಕೆಲವರು ನಿಶ್ಯಬ್ದವಾಗಿ ಮಲಗಿದ್ದಾರೆ;
ಇನ್ನು ಹಲವರು ಎಚ್ಚರವಿದ್ರೂ ಕಣ್ಮುಚ್ಚಿದ್ದಾರೆ......
ನನಗೇಕೋ ನಿದ್ದೆ ಬರುತ್ತಿಲ್ಲ

ಬಸ್ಸು ಒಮ್ಮೆಲೇ ಗುಂಡಿಗೆ ಸಿಕ್ಕಿ ದಗ್ಗನೆ ಮೇಲೆ ಬಂದಾಗ
ನನ್ನೆದುರಿನವ ಕೂಗಿದನು ಆಗ
"ಬಸ್ಸಿನಾಗ ಜೀವ ಇರೋ ಮನುಷ್ಯರಿರೋದು; ಹೆಣಗಳಲ್ಲ"

ಚಾಲಕ ನಿಧಾನವಾಗಿ ಹೇಗೆ ಆ ಗುಂಡಿಯಿಂದ ಪಾರುಮಾಡಿದ ಎಂಬುದು
ಅವನಿಗೇನು ಗೊತ್ತು ಪಾಪ ಅವನು "ನಿದ್ದೆ ಮಾಡುತ್ತಿದ್ದ".

ಸಣ್ಣ ಪುಟ್ಟ ಗುಂಡಿಗಳಿಗೆ ಯಾರು ಅಲುಗಾಡುವುದೇ ಇಲ್ಲ
ದೊಡ್ಡ ಗುಂಡಿ ಬಂದ್ರೆ ಮಗ್ಗುಲಾಗಿ ಮಲಗಿದರೆಲ್ಲ;
ಈ ಹೆಣಗಳಿಗೂ ಜೀವವಿದೆ. ಆದರೆ ಮತಿಲ್ಲ ಕಥೆಯಿಲ್ಲ;

"ಹೆಣಗಳಿಗೂ ಜೀವಭಯ......" ಒಮ್ಮೆಲೆ ಕೂಗಿದರು ಎಲ್ಲ

ಒಬ್ಬ ಚಾಲಕನಿಗೆ ಬೈದ್ರೆ ಇನ್ನೊಬ್ಬ ರಸ್ತೆಗೆ
ಮತ್ತೊಬ್ಬ ರಾಜಕಾರಣಿಗೆ ಬೈದ್ರೆ, ಮಗದೊಬ್ಬ ಭಾರತ ದೇಶಕ್ಕೆ;

"೪೫ ಡಿಗ್ರೀ ವಾಲಿ ನಿಂತಿತ್ತು ಬಸ್ಸು.
ನೋಡುನೋಡುತ್ತಿದ್ದಂತೆ ಉರುಳಿ ಕಣಿವೆಗೆ ಬಿತ್ತು ಬಸ್ಸು"

ಸಣ್ಣಗುಂಡಿಗಳು ಬಂದಾಗಲೇ ಎಚ್ಚೆತ್ತಿದ್ದರೆ
ಸಣ್ಣ ಗುಂಡಿಗಳು ಬಂದಾಗಲೆ ಬೈದಿದ್ರೆ
ಸಣ್ಣಗುಂಡಿ ಆದಾಗಲೇ ಸರಿಪಡಿಸಿದ್ದರೆ
ಬರುತ್ತಿತ್ತಾ ಈ ಸಾವಿನ ಗುಂಡಿ

ಸಣ್ಣ ಗುಂಡಿಗಳೇ ಮುಂದೆ ದೊಡ್ಡ ಗುಂಡಿಗಳಾಗೋದು
ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳಗೋದು
ಸಣ್ಣ ತಪ್ಪಾದಾಗ ತೆಪ್ಪಗಿರಬೇಡಿ.
ಮುಂದೆ ಅದೇ ತಪ್ಪು ದೊಡ್ಡದಾದರೆ ಗೋಳಾಡಬೇಡಿ.

-ರವೀಶ್

  • ಕಾವ್ಯ ಮತ್ತು ಕವನ
~.~
  • kanda ರವರ ಬ್ಲಾಗ್
  • Login or register to post comments
  • 1095 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 19, 2005 - 2:07pm — Sunil Jayaprakash

ಹೌದು ಪದ್ಯವಲ್ಲ

Sunil Jayaprakash's picture

ಹೌದು ಪದ್ಯವಲ್ಲ. ಸರ್ವಕಾಲಿಕ ಎಚ್ಚರಿಕೆ. ಹಿಂದೆಂದಿಗಿಂತಲೂ ಪ್ರಸ್ತುತವಾಗಿರುವ ಎಚ್ಚರಿಕೆ. ಧನ್ಯವಾದಗಳು ರವೀಶ್, ಏಕೆಂದರೆ, ಈ ರೀತಿ ಬುದ್ದಿವಾದ ಹೇಳುವವರು ಇಲ್ಲದಿದ್ದಾಗ, ನಾವು ತಪ್ಪುಗಳನ್ನು ಜಾಸ್ತಿ ಮಾಡುತ್ತೇವೆ. ನೀವು ಈ ಎಚ್ಚರಿಕೆಯನ್ನು ಅಂತರ್ಜಾಲದಲ್ಲಿ ಹಾಕಿ, ನಮ್ಮನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದೀರ.

ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ  ಜೀವನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 21, 2005 - 11:37am — tvsrinivas41

ಕನ್ನಡಿ

tvsrinivas41's picture

ತುಂಬಾ ಚೆನ್ನಾಗಿ ನಿರೂಪಿಸಿದ್ದೀರ, ರವೀಶರೇ.

ಮೇಲ್ನೋಟಕ್ಕೆ ಬಸ್ ಪ್ರಯಾಣ, ಡ್ರೈವರ್‍ ಬಗ್ಗೆ ಬೈದಾಟಗಳಿದ್ದರೂ, ಜೀವನ ಮರ್ಮವನ್ನು ಕನ್ನಡಿಯಲ್ಲಿ ತೋರಿಸಿದ್ದೀರ. ಅಧ್ಯಾತ್ಮದ ಛಾಪಿದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏನು?, ಏಕೆ?, ಹೇಗೆ?
  • ಮಂಪರಿನಲ್ಲಿ ಘಾಟಿ
  • ಕತೆ ಹೇಳಿದ ಕತೆ
  • ಏಕಾಕ್ಷರೀ
Syndicate content

ಲೇಖಕರು

kanda's picture

ಪರಿಚಯ

I am one of those thousands who are worried about kannada's situation in karnataka. Intrusted in poetry,literature,drama,films,stories and many more.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ...
  • ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:48am
  • savithasr
    ಉ: ಪ್ರಶ್ನೆ 230308.....?
    August 22, 2008 - 8:31am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator