ಕವನಗಳು

ವಿಧ: ಕವನ
April 16, 2024
ಮುಡಿತುಂಬ ಮಲ್ಲಿಗೆಯ ಮುಡಿದಿರುವೆ ನೀ ಚೆಲುವೆ ಕುಡಿನೋಟ ನೀನೇಕೆ ಮರೆಸಿ ನಿಂತೆ ಬಡಿಗೆಯಲಿ ಒಂದೆರಡು ಬಡಿದು ಬಿಡು ಮನ ತಣಿಯೆ ಕಡೆಗಣಿಸಿ ತೆರಳದಿರು ನನ್ನ ಕಾಂತೆ   ಬಂಗಾರದೊಡವೆಯಲಿ ಶೃಂಗಾರಗೊಂಡಿರುವೆ ಸಂಗಾತಿ ನೀನೀಗ ಬಳಿಗೆ ಬಾರೆ ಸಿಂಗಾರಿ ನಿನ್ನಿಂದ ದಂಗಾಗಿ ಹೋಗಿರುವೆ ತಂಗಾಳಿಯಂದದಲಿ ಹಿತವ ತಾರೆ   ಕನಸೆಲ್ಲ ಕೈಗೂಡಿ ನನಸಾಗಿ ಬಂದಿರಲು ಮುನಿಸೇಕೆ ನನ್ನಲ್ಲಿ ಹೇಳು ಚೆಲುವೆ ಮನದೊಳಗೆ ಕುಳಿತಿರುವೆ ಕಣಕಣದಿ ಬೆರೆತಿರುವೆ ಮನದನ್ನೆ ತೊರೆ ಮೌನ ಜೊತೆಗೆ ಬೆರೆವೆ||   -ಪೆರ್ಮುಖ ಸುಬ್ರಹ್ಮಣ್ಯ…
ವಿಧ: ಕವನ
April 15, 2024
ಅವರೊಳಗೆ ನಡೆದಿದ್ದ ಆ ಒಂದು ಒಪ್ಪಂದ ಈತನಕ ಉಳಿದಿತ್ತು ಈರ್ವರಲಿ ಸಂಭಂದ ಅದು ಈಗ ಹಳತಾಯ್ತು, ಅನುಬಂಧ ಹಳಸಿತ್ತು ಬೇರ್ಪಡುವ ಕಾಲವದು ಬಳಿಗೆ ಬಂದಾಯ್ತು   ಒಲವಿದ್ದ ಆ ದಿನದೆ ಮೈಮರೆತು ಜೊತೆಯಾಗಿ ಉದರದಲಿ ಚಿಗುರೊಡೆದು ಒಂದಾದ ಫಲವಾಗಿ ಇಬ್ಬರಿಗು ಬೇಕಿಲ್ಲ,ಯಾರೀಗ ಹೊರಬೇಕು ಪಾಲನೆಯ ಹೊಣೆ ಹೊರಲು ಮನವಿರಲು ಬೇಕು   ದಾಹವನು ತೀರಿಸಲು ಬೇಕಿತ್ತು ಜೊತೆಯೊಂದು ಉತ್ಸಾಹ ಇಳಿದಾಗ ನಡುವಲ್ಲಿ ಬಿರುಕೊಂದು ಉತ್ತರಕೆ,ದಕ್ಷಿಣಕೆ ಮುಖಮಾಡಿ ನಿಂತಿರಲು ಹಡೆದಿರುವ ಕುಡಿಯಿರಲು ಯಾರೀಗ ದಿಕ್ಕು||   -ಪೆರ್ಮುಖ…
ವಿಧ: ಕವನ
April 14, 2024
ಸೌಂದರ್ಯವೆಂದೂ ಬಾಳಿಗೊಂದು ವರವು ಅನುಭವಿಸು ! * ಮತ್ತೆ ಮೌನದ ಜೊತೆಗಾರನ ಜೊತೆ ಸಾಗುತ್ತಿದ್ದೇನೆ * ತಪ್ಪುಗಳಲ್ಲೂ ಪ್ರಶಸ್ತಿ ಪತ್ರಗಳ ಪಡೆಯುತ್ತಾರೆ * ಎಷ್ಟೇ ಎತ್ತರ ಕ್ಕೆ ಏರಿ ದ ರೂ ಒಂದು ಸಮಯ ದ ಲ್ಲಿ ಕೆಳಗೆ ಜಾರ ಲೇ ಬೇಕು ! * ಮುಖ  ಕ್ಷೌರಕ್ಕೆ ಹಲವರು ಸೆಲೂನ್ ಗೆ ಹೋಗುತ್ತಾರೆ! ಕೃತಿ ಚೌರ್ಯಕ್ಕೆ ಮಸ್ತಕ ತೆರೆಯದೆ ಕೆಲವರು ಹಲವರ ಪುಸ್ತಕ ಹುಡುಕುತ್ತಾರೆ !! * ಭಾವನಾತ್ಮಕ ಸಂಬಂಧವು ನಮ್ಮ ನಡುವಿನ ಬುದ್ಧಿವಂತಿಕೆಯ ಮೆಟ್ಟಿಲುಗಳು ! * ಈಗಿನ ಸಾಹಿತ್ಯದ ಮಜಲುಗಳೇ ಹೀಗೆ ! ಹೇಗೆಂದರೆ ?…
ವಿಧ: ಕವನ
April 13, 2024
ಶಾಲೆಗೆ ಹೋಗುವ ಕಂದನೆ ಅರಿತುಕೊ ಸಿರಿತನ ಎನುವುದು ಆರೋಗ್ಯ ತಿನ್ನಲು ಕುಡಿಯಲು ಸಂಯಮವಿದ್ದರೆ ಬದುಕಲಿ ದೊರೆವುದು ಈ ಭಾಗ್ಯ   ರಸ್ತೆಯ ಬದಿಯಲಿ ಮಾರಲು ಇಡುವರು ಬಗೆಬಗೆ ಬಣ್ಣದ ತಿನಿಸುಗಳ ಮನವನು ಸೆಳೆಯುವ ತರದಲಿ ಇರುವುದು ಹಚ್ಚುತ ವಿಷಕರ ಬಣ್ಣಗಳ   ತಿನ್ನುವ ಬಯಕೆಯ ನುಡಿ ನೀ ನನ್ನಲಿ ಮಾಡುವೆ ನಾನೇ ಮನೆಯಲ್ಲಿ ಮನೆಯಲಿ ಮಾಡಿದ ಇಷ್ಟದ ತಿಂಡಿಯ  ತಿನ್ನುವ ನಾವು ಜೊತೆಯಲ್ಲಿ   ಹಸುವಿನ ಹಾಲನು ಕಾಯಿಸಿ ಕೊಡುವೆನು  ಕುಡಿಯಲು ಕೊಡುವೆನು ದಿನನಿತ್ಯ ಅಮ್ಮನು ನೀಡಿದ ತಿನಿಸದು ಉತ್ತಮ ಶಕ್ತಿಯ…
ವಿಧ: ಕವನ
April 12, 2024
ಚಂದಿರನೂರಿನ ಚಂದದ ತಾರೆಗೆ ಬಂದಿತೆ ಮನದಲಿ ಮುನಿಸು ನೊಂದಿಹ ತರವಿದೆ ಬಂಧವು ಕಳಚಿತೆ ಕುಂದಿತೆ ಒಲವಿನ ಕನಸು   ಕಂಪನು ಬೀರುವ ಕೆಂಪಿನ ಚುಕ್ಕಿಗೆ ಕಂಪನ ತರಿಸಿತೆ ಗಗನ ಸೊಂಪಿನ ಬಾನಲಿ ರಂಪವ ಮಾಡಿತೆ ತಂಪಿದು ಎನಿಸಿತೆ ತಾಣ   ಚೆಲುವಿನ ವದನದೆ ಗೆಲುವದು ಕಾಣದೆ ಕುಲವನು ತೊರೆಯುತ ಬಂತೆ? ಛಲದಲಿ ಬಿರಿದಿಹ ಚೆಲುವಿನ ಹೂವಿದು ಒಲವಲಿ ನೋಡುತ ನಿಂತೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
April 11, 2024
ಕರಿಯ ಮುಗಿಲು ಬಾನಿನಲ್ಲಿ ಹರಿದು ಬರುವ ಮಿಂಚಿನಲ್ಲಿ ಹರಿದು ಹೋಗುವಂತೆ ಕಿವಿಯು ಗುಡುಗಿನಾರ್ಭಟ ಸುರಿಯಲಿರುವ ಮಳೆಯ ನೆನೆದು ವಿರಹ ಬಾಧೆಯಲ್ಲಿ ನವಿಲು ಕರೆಯಲೆಂದು ಗೆಳತಿಯನ್ನು ಕಳೆಯೆ ಸಂಕಟ   ಗಿರಿಯ ಹತ್ತಿ ಬಂದ ನವಿಲು ಮುರಿದ ಮರದ ಕಾಂಡವೇರಿ ಬರದೆ ಹೋದ ಗೆಳತಿಯನ್ನು ಹುಡುಕತೊಡಗಿತು ಗಿರಿಯ ಸುತ್ತ ಹಸಿರು ವನವು ಕರೆದು ಕರೆದು ಗೆಳತಿ ಬರದೆ ಗಿರಿಯ ನವಿಲು ನೊಂದು ಮನದೆ ಸುತ್ತ ನೋಡಿತು   ಏರಿ ಬರುವ ಗೆಳತಿಯನ್ನು ದೂರದಲ್ಲಿ ಕಂಡ ನವಿಲು ಮೇರೆ ಮೀರಿ ಹರುಷವುಕ್ಕಿ ನೋಡ ತೊಡಗಿತು ದಾರಿಯೆಲ್ಲ…
ವಿಧ: ಕವನ
April 10, 2024
ಯುಗದೊಂದಿಗೆ ಜಗ ಕಂಡಿತು ಮನ ಮನವೂ ಅರಳಿತು/ ವನ ಸೊಬಗೊಳು ಕೆಂಪೇರಲು ಪಕ್ಷಿ ಸಂಕುಲ ಹಾಡಿತು//   ಪ್ರತಿವರುಷವು ಬೆಳಕಾಯಿತು ಸೌರಮಾನವು ಉದಿಸಿತು/ ಯುಗಾದಿಯು ಹೊಸ ಹುರುಪಲಿ ಜಗದ ತುಂಬಾ ನಡೆಯಿತು//   ಹೊಸಬಟ್ಟೆಯ ತೊಟ್ಟ ಜನರದು ಹೊಸ ಪಂಚಾಂಗವನಿಟ್ಟರು/ ಬೆಳೆದ ಬೆಳೆಗಳನೆಲ್ಲ ಇರಿಸುತ ದೇವ ಪೂಜೆಯ ಮಾಡುತ//   ವರುಷದಿಂದಿನ ತಪ್ಪನೆಲ್ಲವ ಮರೆತು ಹೊಸತನ ತುಳಿಯುತ/ ಗಂಧ ಚಂದನ ತಳಿರು ತೋರಣ ಬೇವು-ಬೆಲ್ಲವ ಮೆಲ್ಲುತ/   ಸಿಹಿ-ಕಹಿಯನು ಉಣ್ಣುತುಣ್ಣುತ ಸಮಾನ ದೃಷ್ಟಿಲಿ ನೋಡುತ/ ಕಾಲಮಾನದ ಆದಿ…
ವಿಧ: ಕವನ
April 09, 2024
ಯುಗಾದಿ ಬಂತಿದೋ ಯುಗಾದಿ ಯುಗದ ಆರಂಭವೆ ಯುಗಾದಿ॥   ಚೈತ್ರದ ಸುಂದರಿ ನೀ ಯುಗಾದಿ ಬೇವುಬೆಲ್ಲ ಸವಿಯ ಯುಗಾದಿ ಪಂಚಾಂಗ ಪೂಜೆಯ ಯುಗಾದಿ ನವ ಚಂದ್ರಮನ ಯುಗಾದಿ॥   ತಳಿರು ತೋರಣದ ಯುಗಾದಿ ಪ್ರಕೃತಿಯ ಚಿಗುರಿನ ಯುಗಾದಿ ಪಾಡ್ಯಮಿ ದಿನವೇ ಯುಗಾದಿ ಪಚ್ಚಡಿ ಸವಿಯುವ ಯುಗಾದಿ॥   ರಂಗಿನ ರಂಗೋಲೀ ಯುಗಾದಿ ಎಣ್ಣೇಯ ಸ್ನಾನದಾ ಯುಗಾದಿ ಹೊಸಬಟ್ಟೆ ಉಡುವ ಯುಗಾದಿ ಹೋಳಿಗೆ ಊಟದ ಯುಗಾದಿ॥   ನಲಿವಿನ ಹಬ್ಬವಿದು ಯುಗಾದಿ ದುಗುಡವ ಕಳೆಯುವ ಯುಗಾದಿ ವರುಣನ ಕರೆಯುವ ಯುಗಾದಿ ಒಳ್ಳೇಯ ಮಾತೀನ ಯುಗಾದಿ॥   ಬ್ರಹ್ಮಾಂಡ…
ವಿಧ: ಕವನ
April 08, 2024
ಕಡ್ಡಿಯಂಥ ಬಳ್ಳಿಯಲ್ಲಿ ಅಗಲದೆಲೆಯು  ಹಲವಿದೆ ನಡುವಿನಲ್ಲಿ ಖಾದ್ಯಕಾಗಿ ಕಾಯಿಯೊಂದು ಬಿಟ್ಟಿದೆ   ಬಳ್ಳಿಯಲ್ಲಿ ಹಾವಿನಂತೆ ಭೂಮಿ ತನಕ ಇಳಿಯದೆ ಸುತ್ತ ಸುತ್ತ ಸುತ್ತಿಕೊಂಡು ಸುರುಳಿಯಾಗಿ ನಿಂತಿದೆ   ಅಟ್ಟಿ ಇರಿಸಿದಂತೆ ಹೇಗೆ ಬೆಳೆದು ಬಂತು ಗಿಡದಲಿ ಇದನು ನೋಡಿ ಮನದಿ ಬಂತು ರುಚಿಯ ತಿನಿಸು ಚಕ್ಕುಲಿ   ಹಲವು ಸತ್ವ ಒಳಗೆ ಅವಿತ ದಿವ್ಯ ಕಾಯಿ ಪಡುವಲ ಒಂದು ಬಾರಿ ತಿಂದರದನು ಮರೆಯದಂಥ ರುಚಿಕರ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಶ್ರೀಯುತ ಮುರಳಿಯವರ ವಾಲ್ನಿಂದ) 
ವಿಧ: ಕವನ
April 07, 2024
ಹಿಂದೆ ಹೇಗೆ ಬದುಕಿದರೆಂದು ನಮಗೇಕೆ  ಪ್ರಿಯ ಗೆಳೆಯನೇ ಈ ದಿನದ ನಾಳೆಗಳ ಬಗೆಗೆ ಚಿಂತೆ ಚಾಯವಾಲನೊ ರೋಟಿ ತಿನ್ನುವವನೊ ಆಡಳಿತ ಚುಕ್ಕಾಣಿ ಹಿಡಿದಿಹನು ನೋಡು ಭದ್ರ ಆಡಳಿತ ಸಿಗುವಾಗ ನಮಗೇಕೆ ಚಿಂತೆ !   ದೇಶಕ್ಕೆ ಆಪತ್ತು ಬಂದಾಗ ಎದ್ದು ನಿಲ್ಲುತ ನಮ್ಮ ಕೊಡುಗೆಯೇನು ತಿಳಿಯುವ  ನಾವು ಬರಿದೆ ಕಾಲನು ಎಳೆಯದೆಲೆ  ಇಂದು ಸಾಗುವ ಮುಂದು ಮುಂದು ಮುಂದು ಹಸಿದ ಕಣ್ಣುಗಳಿಗೆ ಸಾಂತ್ವನ ಹೇಳುವ ಚಿತ್ತದಲಿ ತಾಪವನು ತುಂಬದೆಲೆ   ಹಣದಾಹ ಇಲ್ಲದೆಯೆ ಸೇವೆಯನು ಮಾಡು ಗಳಿಸಿ ಉಳಿಸಿದುದನೆಲ್ಲ ದಾನ ಮಾಡು  ಅವರಿಗೆ…