ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › Quotes › uniquesupri ರವರು ಸೇರಿಸಿರುವ ನುಡಿಮುತ್ತುಗಳು

ಪ್ರೀತಿ

February 7, 2008 - 6:42pm — uniquesupri

ಪ್ರೀತಿಸುವ ಅತ್ಯುತ್ತಮವಾದ ಮಾರ್ಗವೆಂದರೆ ಅದು ಕಳೆದು ಹೋಗಬಹುದು ಎಂದು ಅರಿಯುವುದು.

— ಗಿಲ್ಬರ್ಟ್ ಚೆಸ್ಟರ್‌ಸನ್

~.~
  • 123 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • uniquesupri ರವರು ಸೇರಿಸಿರುವ ನುಡಿಮುತ್ತುಗಳು
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುನಿಸು...
  • ಪ್ರೀತಿ
  • ಪ್ರೀತಿ
  • ಪ್ರೀತಿ...
  • ಮನದ ಮಾತನ್ನು ಹೇಳುವ ಬಣ್ಣ
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

ಹೆಸರು ಸುಪ್ರೀತ್.ಕೆ.ಎಸ್. ವಯಸ್ಸು ಇಪ್ಪತ್ತು. ಇಂಜಿನಿಯರಿಂಗ್ ಓದು.

ಕನ್ನಡದಲ್ಲಿ ಬರೆಯುವುದೆಂದರೆ ಇಷ್ಟ. ಸಾಹಿತ್ಯದಲ್ಲಿ ಆಸಕ್ತಿಯಿದೆ. ಕತೆ, ಕಾದಂಬರಿ, ಕವನಗಳು ಇಷ್ಟವಾದ ಹಾಗೆಯೇ ವೈಜ್ಞಾನಿಕ ಬರಹಗಳೂ, ರಾಜಕೀಯ ವಿಶ್ಲೇಷಣೆಗಳೂ ಗಮನ ಸೆಳೆಯುತ್ತವೆ. ಬರವಣಿಗೆ ಹಾಗೂ ಓದುವುದು ಮುಖ್ಯ ಹವ್ಯಾಸವಾದರೂ ಆಗಾಗ ಸಮಕಾಲೀನ ವಿಷಯಗಳ ಚರ್ಚೆಗಳಲ್ಲಿ ಭಾರಿ ಆಸಕ್ತಿಯಿಂದ ಭಾಗವಹಿಸುತ್ತೇನೆ. ಕನ್ನಡದಷ್ಟು ಇಂಗ್ಲೀಷ್ ಸರಾಗವಿಲ್ಲ ಎಂಬ ಬಗ್ಗೆ ಸಂಕೋಚ ಹಾಗೂ ಉಡಾಫೆಯಿದೆ.

ಎಲ್ಲಾ ಬಗೆಯ ಸ್ಥಾಪಿತ ಸಿದ್ಧಾಂತಗಳ, ಮನಸ್ಥಿತಿಗಳ ಬಗ್ಗೆ ಸಿಟ್ಟಿದೆ. ಅವೆಲ್ಲವನ್ನೂ ಮೀರಬೇಕೆಂಬ ಹಂಬಲವಿದೆ. ಬ್ಲಾಗಿನಲ್ಲಿ ಕವಿತೆಯ ಬಗ್ಗೆ ಆಸಕ್ತಿ ಬೆಳೆಯಿತು. ಇಷ್ಟ ಎನ್ನುವ ಮಟ್ಟಿಗೆ ಯಾವ ಕವಿಯನ್ನೂ ಓದಿಕೊಂಡಿಲ್ಲ. ಲಂಕೇಶ್, ಶಿವರಾಮ ಕಾರಂತ, ತೇಜಸ್ವಿ, ಡಿ.ಎಸ್.ನಾಗಭೂಷಣ್, ಅನಂತಮೂರ್ತಿಯರ ವೈಚಾರಿಕತೆಯನ್ನು ಆಸ್ವಾದಿಸುತ್ತಾ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ರವಿ ಬೆಳಗೆರೆ, ಜೋಗಿ,ಜಯಂತ ಕಾಯ್ಕಿಣಿ, ಅಗ್ನಿ ಶ್ರೀಧರ್, ತೇಜಸ್ವಿ, ನಾಗೇಶ್ ಹೆಗಡೆ, ಚೇತನಾ ತೀರ್ಥಹಳ್ಳಿಯವರ ಬರವಣಿಗೆಯ ಶೈಲಿಯನ್ನು ಆರಾಧಿಸುತ್ತಾ, ಅನುಕರಿಸುತ್ತಾ, ಅನುಮಾನಿಸುತ್ತಾ ಅವೆಲ್ಲವನ್ನೂ ದಾಟುವ ಪ್ರಯತ್ನ ಮಾಡುತ್ತಾ ಬರೆಯುತ್ತಿದ್ದೇನೆ. ಹೆಚ್ಚು ಓದಿರುವುದು ಕಾರಂತರ ಕಾದಂಬರಿಗಳು. ಸಾಹಿತ್ಯಿಕ ಓದಿಗಿಂತ ಪತ್ರಿಕೆಗಳು, ಮ್ಯಾಗಝೀನುಗಳ ಓದೇ ಹೆಚ್ಚು. ಇದರಿಂದ ಎಲ್ಲಾ ತಿಳಿದಿದ್ದೇನೆ ಎನ್ನುವ ಭ್ರಮೆ ಆಗಾಗ ತಲೆಗೆ ಹತ್ತುತ್ತದೆ. ಅಷ್ಟೇ ಬೇಗನೇ ಇಳಿದುಹೋಗುತ್ತದೆ. ಓಶೋ ನನ್ನನ್ನು ಗೊಂದಲಕ್ಕೆ ತಳ್ಳಿ ನಾನಾಗಿ ಈಜಿ ದಡ ತಲುಪುವಂತೆ ಮಾಡುತ್ತಾರೆ, ನನ್ನೆಲ್ಲಾ ಊರುಗೋಲುಗಳನ್ನು ನಿಷ್ಕರುಣೆಯಿಂದ ಕಿತ್ತೆಸೆಯುತ್ತಾರೆ ಎಂಬ ಕಾರಣಕ್ಕೆ ಇಷ್ಟವಾಗುತ್ತಾರೆ. ಗಾಂಧಿ ಬಗ್ಗೆ ಆಳವಾಗಿ ಅಧ್ಯಯನ ಮಾಡುವ ಇಚ್ಛೆಯಿದೆ. ವಿಜ್ಞಾನವನ್ನು ಸರಳವಾಗಿ ಬರೆಯಬೇಕೆಂಬ ಕನಸಿದೆ. ನನ್ನ ಸಹಜೀವಿಗಳ ಬಗೆಗೇ ಏನೂ ಆಸಕ್ತಿ ಬೆಳೆಸಿಕೊಂಡಿಲ್ಲವಲ್ಲ ಎಂಬ ಯೋಚನೆಯಿದೆ.

ಒಮ್ಮೆ ಬ್ಲಾಗಿಂಗಿನ ಗುಂಗಿಗೆ ಬಿದ್ದು ಐದಾರು ಬ್ಲಾಗ್ ತೆರೆದು ಕೈಲಾದಷ್ಟು ಬರೆದು ಅನಂತರ ತಲೆಕೆಟ್ಟು ಎಲ್ಲವನ್ನೂ ಅಳಿಸಿಹಾಕಿ ನಿರಾಳನಾಗಿದ್ದ ಅನುಭವವಿದೆ. ಮತ್ತೆ ಕೈ ಕಡಿಯಲು ಶುರು ಮಾಡಿದಾಗ ಬ್ಲಾಗಿನ ಜಗತ್ತಿಗೆ ವಾಪಸ್ಸಾಗಿದ್ದೇನೆ. ಕಳೇದ ಎರಡು ವರ್ಷಗಳಿಂದ ನಾನು ಹಾಗೂ ನನ್ನ ವಯಸ್ಸಿನ ಕೆಲವು ಗೆಳೆಯರು ಸೇರಿ ‘ಸಡಗರ’ ಎಂಬ ಹೆಸರಿನ ಮಾಸ ಪತ್ರಿಕೆಯೊಂದನ್ನು ಪ್ರಕಟಿಸಿ ಚಂದಾದಾರರಿಗೆ ಕಳುಹಿಸಿಕೊಡುತ್ತಿದ್ದೇವೆ. ನನ್ನನ್ನು ಅವರು ಪತ್ರಿಕೆಯ ಸಂಪಾದಕ ಎಂದು ನೇಮಿಸಿದ್ದಾರೆ.

ಸಂಗೀತ ಸಂಯೋಜನೆಯಲ್ಲಿ ಆಸಕ್ತಿ ಇದೆ. ಆದರೆ ಅದರ ಎಬಿಸಿಡಿಯೂ ತಿಳಿದಿಲ್ಲ. ಸಾಯುವುದರೊಳಗೆ ಕೊಳನ್ನು ನುಡಿಸುವುದನ್ನು ಕಲಿಯಬೇಕು ಎಂದು ಹಗಲು ಗನಸು ಕಾಣುವಾಗಲೆಲ್ಲಾ ತಪ್ಪದೆ ನೆನಪು ಮಾಡಿಕೊಳ್ಳುತ್ತೇನೆ. ತಿಂಗಳಿಗೊಮ್ಮೆ ಗಲ್ಲಿ ಕ್ರಿಕೆಟ್ ಆಡಿದಾಗಲೆಲ್ಲಾ ನಾನು ಅದ್ಭುತ ಕ್ರಿಕೆಟರ್ ಆಗಬೇಕು ಎಂದುಕೊಳ್ಳುತ್ತೇನೆ. ಮುಂದೇನಾಗಬೇಕು ಎಂದು ಯೋಚಿಸುತ್ತ ಕುಳಿತರೆ ಸಾಲುಗಟ್ಟಿಬರುವ ನೂರಾರು ಆಲೋಚನೆಗಳನ್ನು ಕಂಡು ನನಗಿನ್ನೂ ಕನಸು ಕಾಣುವುದಕ್ಕೆ ಬರುತ್ತೆ ಎಂದುಕೊಂಡು ಖುಶಿಯಾಗುತ್ತೇನೆ.

ಇದು ಈವರೆಗಿನ ಪ್ರವರ. ಮರುಕ್ಷಣವೇ ಏನಾದರೂ ಬದಲಾವಣೆಗಳಾಗಬಹುದು. ಹೀಗಾಗಿ ಮೇಲೆ ಹೇಳಿರುವುದೆಲ್ಲಾ ಸತ್ಯ ಎಂದು ಪ್ರಮಾಣೀಕರಿಸುವ ಅಪರಾಧ ಮಾಡುವುದಿಲ್ಲ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 2:09pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 2:09pm
  • Rakesh Shetty
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 2:08pm
  • gurubaliga
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 2:07pm
  • Aravind M.S
    ಉ: ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.
    December 3, 2008 - 2:02pm
  • Rakesh Shetty
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 2:00pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:58pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:54pm
  • benaka
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 1:52pm
  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
ಇನ್ನಷ್ಟು


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator