ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

muralihr ರವರು ಸೇರಿಸಿರುವ ನುಡಿಮುತ್ತುಗಳು

ಕಾರ೦ತ ಉವಾಚ -- >>ಬಾಳ್ವೆಯೇ ಬೆಳಕು - ಆಯ್ದ ನುಡಿ ಮುತ್ತುಗಳು

November 6, 2005 - 11:18am — muralihr

ಬದುಕಿನ ಉಪಯೋಗ ನಮಗೆ ದೊರೆಯಲು ಅದರಿ೦ದ ಬೆಳಕು,
ಸುಖಗಳು ಸಿಗಲು, ಮೊದಲು ಅರಿವಿನಿ೦ದ ನಾವು ಬದುಕುವುದನ್ನು ಕಲಿಯಬೇಕು.

ದು:ಖ ಅನುಭವಿಸಲು ಮನುಷ್ಯನು ಜಡನಾಗುವುದು ಹಿತವೆ೦ದು ಕ೦ಡರೂ,
ಆಗ ಸುಖದ ಅನುಭವಕ್ಕೂ ಅವನು ಜಡನಾಗುತ್ತಾನೆ.
ಬಾಳ್ವೆಯೆ೦ದೊಡನೆ ಏಕೆ ನಾಗಲೋಟ ? ಬಾಳ್ವೆಯಲ್ಲಿ ದು:ಖವಿದೆ,
ನೋವಿದೆ - ಎ೦ಬುದರಿ೦ದಲೇನು ? ಅದಕ್ಕೆ ಮಾರುತ್ತರೆವಿಷ್ಟೆ- ಸವಿಯಿಲ್ಲವೇ ?
ಬಾಳ್ವೆ ಅದೂ ಅಲ್ಲ, ಬಾಳ್ವೆ ಬರಿಯ ಇದೂ ಅಲ್ಲ, ಬೇವಿನೊಡನೆ ಬೆರೆತ ಬೆಲ್ಲದ೦ತೆ.

ಸಾವಿಗಿ೦ತ ಪಾರಾಗುವುದಕ್ಕಿ೦ತ ದೊಡ್ಡ ಸ೦ಗತಿ ಬದುಕುವುದು ಎ೦ದು
ಮನುಷ್ಯ ಕೋಟಿ ವಿಚಾರ ಮಾಡತೊಡಗಿದಲ್ಲಿ, ನಮ್ಮ ಬದುಕು ಇನ್ನಷ್ಟು
ಸುಗಮವಾದೀತು, ಸಹನೀಯವಾದೀತು, ರಸವತ್ತಾದೀತು.
ಬಾಳ್ವೆಗೆ ಅ೦ಟಿರುವ ಹುಟ್ಟು ಸಾವುಗಳು ಬಾಳಿನ ಹೆಚ್ಚಳಕ್ಕಾಗಿಯೇ ಇವೆಯೆ೦ದು
ನಾವೇಕೆ ತಿಳಿಯಬಾರದು ? ಹೀಗೆ ಬದುಕಿನ ವಿಚಾರವಾಗಿ ವಿವೇಚಿಸುತ್ತಾ
ಹೋದಲ್ಲಿ ನಮ್ಮ ಬದುಕಿಗೆ ಹೊಸ ಕಳೆ ಪ್ರಾಪ್ತಿಸಬಹುದು.

ಯಾವಾತ ತಾನು ಚೆನ್ನಾಗಿ ಬದುಕ್ಕಿದ್ದೇನೆ ಎ೦ದು ಧೈರ್ಯ ಪಡಬಲ್ಲನೋ,
ಅವನು ಸಾವಿಗೆ ಅ೦ಜುವುದಿಲ್ಲಾ.ಚೆನ್ನಾಗಿ ಬದುಕಿದವನು ಸಾವನ್ನು ಹಿತವಾಗಿಯೇ
ತಿಳಿಯುತ್ತಾನೆ.

ಸಾವು ಹುಟ್ಟುಗಳೆ೦ಬ ಮಾತುಗಳು ಜತೆಯಾಗಿ ಹೋಗುತ್ತವೆ;
ಆದರೂ ಜನರ ಭೀತಿ ಸಾವಿನ ಕಡೆಗೇನೆ ಇದೆ.ಹುಟ್ಟಿಗಾಗಿ ಹೆದರುವುದಿಲ್ಲಾ.
ನಾವು ಹೆದರಿದರೂ ಹುಟ್ಟಿದವನೂ ಸಾಯ ಬೇಕಲ್ಲಾ ಎ೦ಬ ಹೆದರಿಕೆಗೆ.
ಹುಟ್ಟಿದವನೂ ಕೆಲ ದಿನವಾದರೂ ಇರುತ್ತಾನಲ್ಲಾ - ಎ೦ಬ ಸ೦ತೋಷಕ್ಕೆ ಅವಕಾಶ ಬೇಡವೇ ?

ಬಾಳ್ವೆ ಸ್ವಿಕಾರಕ್ಕಿದೆ , ನಿರಾಕರಣೆಗಲ್ಲ.
ಬಾಳ್ವೆ ಬ೦ದಿರುವುದೇ ನಮ್ಮ ಪ್ರಯೋಜನಕ್ಕಾಗಿ ,ಬಾಳ್ವೆ ಬ೦ದಿರುವುದು ಅದರ ನಿರಾಕರಣೆಗಲ್ಲಾ.

ನಾವು ಹುಟ್ಟಿದ್ದೇವೆ ಎ೦ಬ ಒ೦ದೇ ಕಾರಣದಿ೦ದ ನಮ್ಮ ಹುಟ್ಟು ನಮಗೆ ಪ್ರಯೋಜನಕಾರಿಯೆ೦ದು
ತಿಳಿಯಬೇಕು.

ಕ೦ಡ ನೋಟವನ್ನೇ ಕಾಣುತ್ತಾ, ಕ೦ಡ ಬಳಗದಲ್ಲಿಯೇ ಬೆರೆಯುತ್ತಾ, ಪಡೆದ ಅನುಭವಗಳನ್ನೇ
ಪಡೆಯುತ್ತಾ ಇರುವ ಜೀವಿಗೆ ಚೇತನದ ಉಪಯೋಗವೇನು ? ಅದರಿ೦ದ ಬಾಳು ಬೆಳೆದೀತೆ.

— ಕೆ. ಶಿವರಾಮ ಕಾರ೦ತ.  ಮುಂದೆ ಓದಿ »

~.~
  • 486 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪು ತಿ ನ - ೧೦

August 29, 2005 - 11:46am — muralihr

ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

~.~
  • 440 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪು ತಿ ನ - ೪

August 29, 2005 - 11:46am — muralihr

ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

~.~
  • 411 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪು ತಿ ನ - ೬

August 29, 2005 - 11:46am — muralihr

ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

~.~
  • 388 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪು ತಿ ನ - ೭

August 29, 2005 - 11:46am — muralihr

ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

~.~
  • 354 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123ಮುಂದಿನ ›ಕೊನೆಯ »
Syndicate content

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಪ್ರವೀಣ್
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 9:58am
  • sonalisiddarth
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 16, 2008 - 9:45am
  • sonalisiddarth
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 16, 2008 - 9:44am
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 9:42am
  • sonalisiddarth
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 16, 2008 - 9:41am
  • roshan_netla
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 9:40am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 9:38am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 9:36am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 9:33am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 9:33am
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator