srikanth ರವರು ಸೇರಿಸಿರುವ ನುಡಿಮುತ್ತುಗಳು
ನೀತಿ
November 22, 2005 - 7:24pm — srikanthಹರಿಶ್ಚಂದ್ರನ ದುಃಖವ ನೋಡಿ ಹುಡುಗನೊಬ್ಬ ಕಣ್ಣೀರಿಟ್ಟನು
ದೇವರನ್ನು ಅರಿಯಲು ತರುಣನೊಬ್ಬ ಗುರುವನ್ನರಸಿದನು
ತನ್ನ ಮಹತ್ಸಾಧನೆ ಕಂಟಕವಾಯ್ತಲ್ಲವೆನ್ದು ಮುದುಕನೊಬ್ಬ ಮರುಗಿದನು
ಸತ್ಯ ಸಿಕ್ಕಿತೋ...? ಗೊತ್ತಿಲ್ಲ
ದೇವರನ್ನರಿತನೋ...? ಗೊತ್ತಿಲ್ಲ
ಮನಃಶಾಂತಿ ಸಿಕ್ಕಿತೋ...? ಗೊತ್ತಿಲ್ಲ
ಇತಿಹಾಸದ ಕಾಡಲ್ಲಿ ನೀತಿಯ ಬೇರೂರಿ ಹೆಮ್ಮರಗಳಾಗಿ ನಿಂತರು ಮುಂದೆ ಓದಿ »

ಕೋಗಿಲೆ-ನನ್ನ ಮನೆಯ ಎದುರಿನ ಮರದಲ್ಲಿ ಕುಳಿತು ನಿತ್ಯವೂ ಹಾಡುತ್ತಿದ್ದ ಹಾಡುಗಾರನ ನೆನಪು
November 22, 2005 - 10:44am — srikanthಮಾವಿನ ಚಿಗುರೆಲೆಗಳ ಮರೆಯಿಂದ ಕೂಗುತಿರುವರಾರು
ಕುಹೂ , ಕುಹೂ ನಾದದಿಂದ ಮನವ ತುಂಬುತಿರುವರಾರು
ವಸಂತದಾಗಮನದ ಸಂದೇೇಶವ ಪಸರಿಸುತ್ತಿಹರಾರು
ಮೋಸದಿಂದ ಕಾಗೆ ಗುಬ್ಬಿಗಳ ಮನೆಗೆ ನುಗ್ಗುತಿರುವ ಕಳ್ಳನಾರು
ಇರುವುದೊಂದು ಪುಟ್ಟ ಹಕ್ಕಿ, ಕಪ್ಪು ಹಕ್ಕಿ
ಮೈ ತುಂಬು ಕಪ್ಪು ಬಿಳಿ ಚುಕ್ಕಿ
ಮಾವಿನಾ ಸವಿಯನುಂಡು, ಕಂಠದೀ ಸವಿಯ ಉಳಿಸಿ,
ಗಾಯನದಿ ಕಂಠಸವಿಯ ಲೋಕಕೆಲ್ಲ ಉಣಿಸಿ,
ಮನಕೆ ಮುದ ನೀಡುವ ಗಾಯಕನಿಗೆ
ಸ್ವಾಗತ ಪ್ರೀತಿಯಾ ಸುಸ್ವಾಗತ ಮುಂದೆ ಓದಿ »

ನನ್ನ ಪದ್ಯ
November 21, 2005 - 10:57am — srikanthಪದ್ಯವೊನ್ದ ಬರೆದೆನು ಶ್ರಾವಣದೀ ಸನ್ಜೆಯನ್ದು
ತಿಳಿಯಲಿಲ್ಲ ಮನಕೆ ಬಯಕೆ ಏಕಾಯ್ತೆನ್ದು
ಚರ್ಚಿಸಿದೆನು ಎನ್ನೊಳು ಏನು ಇದಕೆ ಕಾರಣ
ಸಿಕ್ಕುವುದಿಲ್ಲ ಬಿರುದು ಸನ್ಮಾನ ಇಲ್ಲವೇ ಇಲ್ಲ ಹಣದ ಝಣಝಣ
ಛೇಡಿಸುವರು ಜನರು ಸೊಮಾರಿಗಳ ಕಾಲಹರಣವೆನ್ದು
ನಗುವರು ಮೂರ್ಖತೆಯ ಪ್ರಮಾಣವೆನ್ದು
ಚಿನ್ತೆಯಲಿ ಈಕ್ಷಿಸಿದೆನು ನಾ ಬರೆದ ಪದ್ಯವಾ
ಪದ್ಯದೀ ಕಣ್ಡೆನು ಎನ್ನ ಮನದ ಭಾವವ
ಸೂರ್ಯನ ರಶ್ಮಿಗೆ ಮನ್ಜು ಕರಗುವನ್ತೆ
ಮಾಸುವವು ಭಾವಗಳು ಕಾಲ ಕಳೆದನ್ತೆ
ಪದ್ಯಗಳು ಭಾವಗಳ ರಕ್ಷಿಸುವ ಸಾಧನ
ಅವುಗಳ ಮಧುರ ನೆನಪಾಗಿಸುವ ವಿಧಾನ
ಮುಗಿಯಿತು ಯುಕ್ತಿಯ ವಿಶ್ಲೇಶಣೆ, ಮೂಡಿತು ಮನದಿ ಹರುಷದ ಭಾವನೆ
ಒಡನೆ ಬರೆದೆನು ಈ ಪದ್ಯವ, ಮಧುರ ನೆನಪಾಗಿಸಿದೆನು ಈ ಹರುಷದಾ ಭಾವವ ಮುಂದೆ ಓದಿ »








RSS: