venkatesh ರವರು ಸೇರಿಸಿರುವ ನುಡಿಮುತ್ತುಗಳು
ಶಂಕರಲಿಂಗ ಸ್ತೋತ್ರಂ
January 29, 2007 - 1:41pm — venkateshಶಂಕರಲಿಂಗಾ ಸದ್ಗುರು ತಂದೆ ನಾ ನಿಮ್ಮ ಪಾದವ ನಂಬಿ ಬಂದೇ [ಪ]
ಶಂಕೆಯ ಹರಿಸೊ ಸಂಕಟ ಬಿಡಿಸೋ ಕಿಂಕರನಾದೆನು ಭುವಿಯೊಳಗೇ [ಅ.ಪ]
ಆತ್ಮ ವಿಚಾರವ ನಿತ್ಯವು ಬೊಧಿಪ ಪ್ರತ್ಯಗಾತ್ಮನೂ ನೀ ಎನಗೇ
ಭಕ್ತಿಯಿಂದಲೀ ಬೇಡಿಕೊಂಬೆನೂ ಕೃಪೆಮಾಡೊ ಸದ್ಗುರು ತಂದೇ [೧]
ಅಂಗಅಂಗದಾ ಸಮರಸವನ್ನೂ ಹಿಂಗದೆ ಪೇಳೈ ನೀ ಎನಗೇ
ಸಂಗರಹಿತನಾಗಿ ಮಾಡೆನ್ನ ಬಳಲು ತಿರುವೆನೋ ಭುವಿಯೊಳಗೇ [೨]
ಜನನಿಯು ನೀನೇ ಜನಕನು ನೀನೇ ತನುಮನ ಧನಗಳು ನಿನದಯ್ಯಾ
ನಿನಗೊಪ್ಪಿಸಿಹೆನು ಕಾಯೋ ಎನ್ನನು ಕರುಣದಿ ನೋಡೋ
ಗುರುತಂದೆ. [೩]
ಧರೆಯೊಳಧಿಕವಾದ ಹೆಳವನ ಗಿರಿಯೊಳು ಪರಿಪರಿ ಲೀಲೆಯ ತೋರುತಲೀ
ಶರಣಾಗತರಾಗಿಹ ಭಕ್ತರನು ಪರಿಪಾಲಿಸೋ ನೀ ಗುರು ತಂದೇ [೪]

ತಿರುಕರ ನುಡಿ ಮುತ್ತುಗಳು :
January 13, 2007 - 7:34pm — venkatesh* ಅಲ್ಲಾನಲ್ಲಿ ನಂಬುಗೆ, ಪುನರುತ್ಥಾನದಲ್ಲಿ, ನಂಬುಗೆ, ಪುಣ್ಯಕಾರ್ಯಗಳಲ್ಲಿ ನಂಬುಗೆ
ಈ ಮೂರು ನಂಬುಗೆಯಿಂದ ಜೀವನ ನಡೆಯಿಸುವವನು ಯಾರೇ ಆದರೂ ಆತನಿಗೆ
ಸಂಪೂರ್ಣತೆಯೂ, ಮೋಕ್ಷವೂ ಉಂಟಾಗುತ್ತದೆಂದು ಹೇಳುತ್ತದೆ ಖುರಾನ್.
* ಭಗವಂತನ ಒಲುಮೆಗಾಗಿ ಎಲ್ಲ ಕಾರ್ಯವನ್ನೂ ಯಜ್ಞಭಾವದಿಂದ ಮಾಡಿ
ನಮ್ಮಲ್ಲಿಯ ಪಶುತ್ವವನ್ನು ಅದರಲ್ಲಿ ಬಲಿಕೊಡಬೇಕು.
* ಜೀವಧಾರಿಗಳಾದ ಮಾನವರೇ ಅಭಿನಯಕಾರರು, ವಿಶಾಲ ಪ್ರಪಂಚವೇ ಒಂದು
ರಂಗಭೂಮಿ, ಜೀವರುಗಳ ಜೀವನವೇ ಒಂದು ಮಹಾನಾಟಕ.
* ಪೂಜೆಯ ಸಾನುಗಳನ್ನು ತರಲು ಸಂತೆಗೆ ಹೋದ ಒಬ್ಬ ವ್ಯಕ್ತಿಯು ಅಲ್ಲಿ
ಮಾರಾಟಕ್ಕೆ ಬಂದ ಸಾಮನುಗಳಿಂದ ಆಕರ್ಷಿತನಾಗಿ ಯಾವಯಾವುದೋ
ಸಾಮಾನುಗಳನ್ನು ತಂದು, ತಿರು ತಿರುಗಿ ಪೂಜೆ ಸಾಮಾನಿಗಾಗಿ ಸಂತೆಗೆ
ಹೋಗುವಂತೆ ಪರಮಾತ್ಮನು ಜೀವರುಗಳಿಗೆ ಲೋಕದಿಂದ ಭಕ್ತಿಯ ಜಲವನ್ನು
ತುಂಬಿಕೊಂಡು ಬಾ ಎಂದು ಕಳುಹಿಸಿದರೆ ಜೀವರುಗಳು ಪ್ರಪಂಚದ ಮಾಯಾ
ಜಾಲದಲ್ಲಿ ಸಿಕ್ಕು ಒದ್ದಾಡುತ್ತಾ ಹುಟ್ಟು ಸಾವಿನ ಪರಿಭ್ರಮಣಕ್ಕೆ ಗುರಿಯಗಿ
ಒದ್ದಾಡುತ್ತಿರುತ್ತಾರೆ.
* ಮರುದ್ವನಿಗೊಡುವ ಪ್ರಪಂಚವಿದು. ಬಿರುನುಡಿಗೆ-ಬಿರುನುಡಿ, ಪ್ರೇಮಕ್ಕೆ- ಪ್ರೇಮ
ಇದು ಪ್ರಪಂಚ ಧರ್ಮ.
* ಜ್ಞಾನ ಮತ್ತು ಬ್ರಹ್ಮಪಟ್ಟವು ಯವುದೇ ಒಂದು ಜಾತಿಗೆ ಮೀಸಲಾದ ಸ್ವತ್ತಲ್ಲ;
ಅದು ಯಾವನೇ ಶ್ರದ್ಧಾವಂತ ಸಾಧಕನಿಗೆ ದೊರೆಯುವ ಅಂತಿಮ ಫಲ.
* ಸಾಮಾನ್ಯ ವ್ಯಕ್ತಿಗಿಂತ ರಾಷ್ಟ್ರಕ್ಕಾಗಿ ದುಡಿವ ನಿಷ್ಕಾಮಕರ್ಮಿ ಸೇವಾ ಧುರೀಣರನ್ನು
ಜನತೆ, ಸಮಾಜ, ಪುರಸ್ಕರಿಸಬೇಕು; ಗೌರವಿಸಬೇಕು.
* ನಮ್ಮದೆಲ್ಲ ವೇದಿಕೆಯ ಭಾಷಣದಲ್ಲಿ ಏಕತೆಯ ಜೀವನ; ಆಚರಣೆಯಲ್ಲಿ ನೀವು
ನೀವೆ- ನಾವು ನಾವೇ.

ತಿರುಕರ ನುಡಿ ಮುತ್ತುಗಳು.
January 12, 2007 - 7:50pm — venkateshನಾಳೆ ಸುಖವೋ ದುಖಃವೋ ಬಲ್ಲವರ್ಯಾರು ? ಇರುವ ನಾಲ್ಕು ದಿನ ಸಮಾಜಕ್ಕೆ
ಉಪಕಾರಿಗಳಾಗಿ ಬಾಳುವುದನ್ನು ಕಲಿಯಿರಯ್ಯಾ.
ಜಾತಿ ಜಾತಿ ಹೆಸರಿನಲ್ಲಿ ಬಡಿದಾಡಬೇಡಿರಯ್ಯಾ. ಆ ಜಾತಿ ಈ ಜಾತಿಎಂಬುವುಗಳೆಲ್ಲಾ ರಾಷ್ಟ್ರಮಹಾಪುರುಷನ ಅಂಗಾಂಗಗಳು ಕಾಣಿರಯ್ಯಾ ಎಂತೆಂಬೆನಾ ಪರಮೇಶದಾಸ.
ಶವಾಸನವೆಂದರೆ ಕೈಕಾಲು ಚಾಚಿ ಮಲಗುವುದಲ್ಲ, ಜೊತೆಯಲ್ಲಿ ಮನಸ್ಸು ಶವವಾಗಬೇಕು.
ಬೆಣ್ಣೆಯನ್ನು ಒಲೆಯಮೇಲಿಟ್ಟು ಕಾಸುವಾಗ ಅದು ಚುರ್ ಚುರ್ ಎಂದು ಧ್ವನಿಗೈಯುತ್ತದೆ, ಆದರೆ ಅದೇ ಬೆಣ್ಣೆ ತುಪ್ಪವಾದಾಗ ಅಲ್ಲಿ ನಿಶ್ಯಬ್ದ, ಅದೇ ರೀತಿ ಸಾಧಕನು ಸಿಧ್ಧನಾದಾಗ ಅಲ್ಲಿ ಮೌನ.

ತಿರುಕರ ನುಡಿ ಮಾಣಿಕ್ಯಗಳು .. !
January 10, 2007 - 11:04pm — venkatesh"ಮೌನದಾಚರಣೆಯಲ್ಲಿ ಕೆಲವರು ಕಾಗದದ ಮೇಲೆ, ಸ್ಲೇಟಿನಮೇಲೆ ಬರೆದು ತೋರಿಸಿದರೆ ಮತ್ತೆ ಕೆಲವರು ಕೈಕಾಲು ಅಲ್ಲಾಡಿಸಿ ಅಭಿನಯಿಸಿ ತೋರಿಸುತ್ತಾರೆ. ಆದರೆ ಇವುಗಳೆಲ್ಲ ಮೌನವಲ್ಲ. ನೃತ್ಯಾಭಿನಯ; ಆದರೆ ನಿಜವಾದ ಮೌನದಲ್ಲಿ ಮನಸ್ಸು ಮೌನವಾಗಿರಬೇಕು".
'ಯೋಗಿಗಳ ಸಿದ್ದಸ್ಥಿತಿಯಲ್ಲಿ ಅವರು ಮೌನವಾಗಿರುತ್ತಾರೆ'.
"ಸೃಷ್ಟಿ, ಸ್ಥಿತಿ,ಲಯ ಕರ್ತೃಗಳಾದ ಬ್ರಹ್ಮ, ವಿಷ್ಣು, ಮಶೆಶ್ವರರನ್ನು ಅವರವರ ಕಾರ್ಯಕ್ಷೇತ್ರದಲ್ಲಿ ಬೇರೆ ಬೇರೆಯಾಗಿ ಹೆಸರಿಸಿದರೂ ಮೂಲ ಚೈತನ್ಯವು ಒಂದೇ ಆಗಿರುತ್ತದೆ. ಅದೇ ಪರಬ್ರಹ್ಮ".
"ಚೆನ್ನಾಗಿ ಸುಟ್ಟ ಮಡಕೆಯನ್ನು ನೀರಲ್ಲಿ ಮುಳುಗಿಸಿಟ್ಟರೆ ಅದು ಕರಗುವುದಿಲ್ಲ. ಅದೇ ಸುಡದ ಹಸಿ ಮಡಕೆಯನ್ನು ನೀರಲ್ಲಿರಿಸಿದರೆ ಅದು ಮಣ್ಣೇ ಆಗುತ್ತದೆ. ಅದರಂತೆಯೇ ಸಿದ್ಧಿಯನ್ನು ಪಡೆದ ಯೋಗಿಯು ಎಲ್ಲೇ ಇದ್ದರೂ ಆತನು ಕೆಡುವುದಿಲ್ಲ. ಅದೇ ಢೋಂಗಿ ಸನ್ಯಾಸಿಗೆ ಎಲ್ಲೂ ಬೆಲೆ ಇರುವುದಿಲ್ಲ".





RSS: