ಈಗಿನಂತೆ 3 ಸದಸ್ಯರು ಮತ್ತು 55 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಬೆಂಕಿ ಬಿದ್ದ ಹುಲ್ಲಿನ ದಾರಿಯಲ್ಲಿ: ಕುಂತಿಬೆಟ್ಟ
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
16
Jan
2006
ಬ್ಲಾಗ್ ಬರಹ

[೧೩ ಚಿತ್ರ ಮತ್ತು ಎರಡು ವೀಡಿಯೋ ಇವೆ. ನೋಡಿ. ಇವನ್ನು ನಾನೇ ಸೇರಿಸುವಷ್ಟು ಕೌಶಲ ಇಲ್ಲ. ಗೆಳೆಯ ನಾಡಿಗ್ ಅವನ್ನೆಲ್ಲ ಸೇರಿಸುತ್ತೇನೆ ಅಂದಿದ್ದಾರೆ.]


ನಿನ್ನೆ, ೧೫...

ಪ್ರತಿಕ್ರಿಯೆಗಳು: 1
ಹಿಟ್ಸ್ : 2,113
ಒಲವೆಂಬ ಹೊತ್ತಿಗೆ
naasomeswara's picture
ನಾ.ಸೋಮೇಶ್ವರ
23
Apr
2010
ಬ್ಲಾಗ್ ಬರಹ

ಒಲವೆಂಬ ಹೊತ್ತಿಗೆ 

ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು

ಬೆಲೆ ಎಷ್ಟು...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,104
3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
santhosh_87's picture
ಸಂತೋಷ್ ಎನ್. ಆಚಾರ್ಯ
12
Jan
2010
ಬ್ಲಾಗ್ ಬರಹ

ಹುಟ್ಟಿದ ಮರು ನಿಮಿಷವೇ, ಅಪ್ಪ 'ತನ್ನ ಮಗ ಇಂಜಿನಿಯರ್ ಆಗ್ತಾನೆ' ಎಂಬ ನಿರೀಕ್ಷೆಯಿಂದ ಮಗುವಿನ ಇಷ್ಟ ಏನೇ ಇದ್ದರೂ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಎಂಬ ಹುಚ್ಚು ರೇಸಿಗೆ ಹಚ್ಚುವ...

ಪ್ರತಿಕ್ರಿಯೆಗಳು: 17
ಹಿಟ್ಸ್ : 1,645
ಬೆಳಕಿನ ವೇಗವೂ ಮಿತಿಯಲ್ಲ!
uniquesupri's picture
ಸುಪ್ರೀತ್.ಕೆ.ಎಸ್
27
Sep
2011
ಲೇಖನ

ವಸ್ತುವೊಂದರ ಚಲನೆಯ ವೇಗವು ಅಳತೆ ಮಾಡುತ್ತಿರುವ ವಸ್ತು ಅಥವಾ ವೇದಿಕೆಯ ಚಲನೆಯ ವೇಗವನ್ನು ಅವಲಂಬಿಸಿರುತ್ತದೆ. ಚಲನೆಯ ವೇಗ ಎನ್ನುವುದು ಸಾಪೇಕ್ಷ ಎಂದು ಸಾಬೀತು ಪಡಿಸಿದ್ದು ಐಸಾಕ್...

ಪ್ರತಿಕ್ರಿಯೆಗಳು: 9
ಹಿಟ್ಸ್ : 322
LaTeX ಪರಿಚಯ ಮತ್ತು ಕನ್ನಡದಲ್ಲಿ LaTeX !
summer_glau's picture
summer_glau
20
Jan
2011
ಲೇಖನ

LaTeX ಎಂಬ ಪದ ನನಗೆ ಮೊದಲು ಪರಿಚಯ ಆಗಿದ್ದು ಸುಮಾರು ೮-೧೦ ವರ್ಷಗಳ ಹಿಂದೆ ಇರಬೇಕು. ಅಲ್ಲಿಯವರೆಗೂ latex  ಎಂದರೆ ವೈದ್ಯರು ಬಳಸುವ ಕೈ ಗವಜುಗಳನ್ನೂ, ಮತ್ತುಳಿದವರು...

ಪ್ರತಿಕ್ರಿಯೆಗಳು: 14
ಹಿಟ್ಸ್ : 984
ಋತುಗಾನ.....
vinyasa's picture
ಮಂಜುಳಾ ದೇವಿ
04
Apr
2011
ಲೇಖನ

ಸದಾ ಹರಿಯುತ್ತಿರುವ ನೀರು ಶುಭ್ರವಾಗಿರುತ್ತದೆ. ಆದರೆ ನಿಂತ ನೀರಲ್ಲಿ ಪಾಚಿ ಕಟ್ಟುವುದು ಸಹಜ. ಇದೇ ರೀತಿ ಪ್ರಕೃತಿ ಮತ್ತು ನಮ್ಮ ಜೀವನವೂ ಚಲನಶೀಲವಾಗಿರಬೇಕು. ಆಗಲೇ ಅದಕ್ಕೊಂದು...

ಪ್ರತಿಕ್ರಿಯೆಗಳು: 18
ಹಿಟ್ಸ್ : 649
ಎಚೆಸ್ವಿ-ಎಚ್.ಎಸ್.ವೆಂಕಟೇಶ ಮೂರ್ತಿಗಳಿಗೆ ೬೭-ಒಂದು ನುಡಿ ನಮನ
ramaswamy's picture
ಡಿ.ಎಸ್.ರಾಮಸ್ವಾಮಿ
21
Jun
2010
ಪುಟ

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .

 

ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್....

ಪ್ರತಿಕ್ರಿಯೆಗಳು: 12
ಹಿಟ್ಸ್ : 977
ಬಾಲ್ಯದ ಸ್ವಾತಂತ್ರದಿನ ಹೀಗಿತ್ತು...
rashmi_pai's picture
Rashmi Pai
14
Aug
2010
ಬ್ಲಾಗ್ ಬರಹ

ನ್ಮಾನ್ಯ ಅಧ್ಯಕ್ಷರೆ, ಗುರುಗಳೇ...ಎಂದು ಆರಂಭಿಸಿ ಇವತ್ತು ನಾವು.....ವರುಷದ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಭಾಷಣ ಕಂಠ ಪಾಠ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,004
ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!
naasomeswara's picture
ನಾ.ಸೋಮೇಶ್ವರ
10
Jun
2010
ಬ್ಲಾಗ್ ಬರಹ

ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!
    ಮಂಜುನಾಥ್, ನನ್ನ ಜ್ಯೋತಿಷ ಹಾಗೂ ಜನ್ಮಸಮಯ ಎನ್ನುವ ಲೇಖನಕ್ಕೆ ತಾವು ತಮ್ಮ ಅನಿಸಿಕೆ, ಅಭಿಪ್ರಾಯ...

ಪ್ರತಿಕ್ರಿಯೆಗಳು: 53
ಹಿಟ್ಸ್ : 2,756
ಚಿಂತನೆ :- ಕಾಫಿಯಿಂದ ಸಂಸ್ಕೃತಿವರೆಗು
partha1059's picture
ಪಾರ್ಥಸಾರಥಿ
10
May
2011
ಬ್ಲಾಗ್ ಬರಹ

    ಹೀಗೆ ಸುಮ್ಮನೆ ಕುಳಿತ್ತಿದ್ದೆ, ಸ್ವಲ್ಪ ಕಾಫಿ ಬೇಕೆನಿಸಿತು. ನಾನೇ ಏಕೆ ಮಾಡಬಾರದು ಅನ್ನಿಸಿ ಅಡಿಗೆಮನೆಯೊಳಗೆ ಹೋದೆ,...

ಪ್ರತಿಕ್ರಿಯೆಗಳು: 6
ಹಿಟ್ಸ್ : 427

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ritershivaram ರವರ ಬ್ಲಾಗ್

ಕಂಪ್ಯೂಟರ್ ಮತ್ತು ಕನ್ನಡ ಅನುವಾದಗಳು ಹಾಗೂ ಅಧ್ವಾನಗಳು

ಇಂಗ್ಲೀಷ್ ನಮ್ಮ ಭಾಷೆಯಲ್ಲ. ಆದರೂ ಇಂಗ್ಲೀಷ್ ಪದಗಳನ್ನು ನಮ್ಮಕನ್ನಡದ ಆಡುಭಾಷೆಯಲ್ಲಿ ಬಳಸುವುದು ತೀರಾ ಸಹಜವಾಗಿದೆ; ಸರ್ವಮಾನ್ಯವೇ ಆಗಿಬಿಟ್ಟಿದೆ. ಅಷ್ಟೇ ಅನಿವಾರ್ಯವಾಗಿ ಹೊಸ ಹೊಸ ಇಂಗ್ಲೀ಼ಷ್ ಪದಗಳು ನಮ್ಮ ಕನ್ನಡಕ್ಕೆ ಸೇರ್ಪಡೆಯಾಗುತ್ತಲೇ ಇರುವುದನ್ನೂ ನಾವು ಕಾಣುತ್ತಿದ್ದೇವೆ; ಅದೇನೂ ಅಸಹಜವಲ್ಲವೆಂಬತೆ ಅಲಿಖಿತವಾದ ನಿಯಮದಂತೆ ಅವುಗಳನ್ನು ಒಪ್ಪಿಕೊಳ್ಳುತ್ತಿದ್ದೇವೆ.

ಇನ್ನೂ ಇಂಗ್ಲೀಷ್ ಚೆನ್ನಾಗಿ ಮಾತನಾಡಲು ಬಾರದೇ ಇರುವವರೇ ಕನ್ನಡ ಮಾತನಾಡುವಾಗ ಹೆಚ್ಚು ಇಂಗ್ಲೀಷ್ ಪದಗಳನ್ನು "ಮಿಕ್ಸ್" ಮಾಡುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಕಂಪ್ಯೂಟರ‍್ ಬಂದಮೇಲಂತು ಅದರ ಪರಿಭಾಷೆಯ ಬಹಳಷ್ಟು ತಾಂತ್ರಿಕ ಶಬ್ದಗಳು, ಕಂಪ್ಯೂಟರ‍್ ಕಲಿಯುವ ಕಲಿತಿರುವವರೆಲ್ಲರ ಹಾಗೂ ಕಂಪ್ಯೂಟರ‍್ ಬಗ್ಗೆ ಮಾತನಾಡುವ ಜನಸಾಮಾನ್ಯರ ಬಾಯಲ್ಲಿ ಇನ್ನಿಲ್ಲವೆಂಬಂತೆ ಹೊರಬರತೊಡಗಿವೆ; ಬಳಕೆಯಲ್ಲಿವೆ. ಮೊಬೈಲ್ ಮತ್ತು ಟಿ.ವಿ.ಚಾನೆಲ್ಸ್‌ ಷೋಗಳ ವಿಷಯದಲ್ಲಂತು ಇದು ತೀರಾ ಸರ್ವೇಸಾಮಾನ್ಯವೆನಿಸಿದೆ.

ಇನ್ನು ಚಿಕ್ಕಂದಿನಿಂದಲೇ ಸ್ಪೋಕನ್‌ ಇಂಗ್ಲೀಷ್ ಕಲಿಯದಿದ್ದರೆ, ಮುಂದೆ ತಮ್ಮ ಮಕ್ಕಳು ಈ ಪ್ರಪಂಚದಲ್ಲಿ ಉತ್ತಮ ಸಂಪಾದನೆ ಮಾಡಲು ಸಾಧ್ಯವೇ ಇಲ್ಲವೆಂಬ ಭಾವನೆ ಹೆತ್ತವರಲ್ಲಿ ಮೂಡುತ್ತಿರುವದಂತೂ ಖೇದಕರ ಸಂಗತಿಯೇ ಆಗಿದೆ. ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು; ಜೊತೆಗೆ ಇಂಗ್ಲೀಷ್ ಇರಬೇಕಷ್ಟೇ. ಅಷ್ಟಕ್ಕೂ, ರೂಢಿಯಲ್ಲಿ ಇಂಗ್ಲೀಷ್ ಪದಗಳು ನಮ್ಮ ಮಾತೃಭಾಷೆಯೊಂದಿಗೆ ಬೆರೆಯುವುದು ಅನಿವಾರ್ಯವಾದರೆ ಪರವಾಯಿಲ್ಲ.


ಅನುವಾದದ ವಿಷಯಕ್ಕೆ ಬಂದರೆ, ವಿಜ್ಞಾನ- ತಂತ್ರಜ್ಞಾನದಲ್ಲಿರುವ ಒಂದು ಇಂಗ್ಲೀಷ್ ಪದಕ್ಕೆ ಸಮಾನವಾದ ಅಥವಾ ಸಮಾನ ರೂಪದ ಇನ್ನೊಂದು ಪದ ಸಿಗದೇ ಇದ್ದಾಗ, ಸಿಕ್ಕರೂ ಅದು ಇಂಗ್ಲೀಷ್ ಪದಕೊಡುವಷ್ಟು ತೃಪ್ತಿಕೊಡದಿದ್ದಾಗ, ಆ ಇಂಗ್ಲೀಷ್ ಪದದ ಮೋಹವೇ ನಮ್ಮನ್ನು ಕಾಡುವುದುಂಟು. ಆಗ ಆ ಪದವನ್ನೇ ಕನ್ನಡದೊಂದಿಗೆ ಬಳಸಿಕೊಳ್ಳುವುದೂ ಅದರ ಅರ್ಥ ವಿವರಣೆಯನ್ನೂ ಜೊತೆಗೆ ಕೊಡುವುದೂ ಸೂಕ್ತವೆನಿಸುತ್ತದೆ. ಬರವಣಿಗೆಯಲ್ಲಿ ಸೋಪಜ್ಞತೆಗೂ ಬಾಧಕವಾಗುವುದಿಲ್ಲ. ಆದರೆ, ಇಂಗ್ಲೀಷ್ ಪದವೊಂದರ ಮೋಹಕ್ಕಿಂತ ಇಂಗ್ಲೀಷ್ ವ್ಯಾಮೋಹವೇ ಮೇಲುಗೈಯಾದರೆ, ಅದು ಅತಿಯಾಗುತ್ತದೆ; ಅತಿರೇಕದ ಪರಮಾವಧಿಯೂ ಆಗಿಬಿಡುವುದಿದೆ. ಚಿಕ್ಕಂದಿನಿಂದ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಓದಿದವರೂ ಆಮೇಲೆ ಇಂಗ್ಲೀಷ್ ಚೆನ್ನಾಗಿ ಓದಲು ಬರೆಯಲು ಬಲ್ಲವರಾಗಿದ್ದಾರೆ ಎಂಬುದೂ ನಿರ್ವಿವಾದವೇ.  ಮುಂದೆ ಓದಿ »

73 ಹಿಟ್ಸ್

ಪ್ರತಿಭೆ, ದೈವಿಕತೆ ಇವು ಬುದ್ಧಿಯ ಕಣ್ಣಲ್ಲ...

ಪ್ರತಿಭೆ ದೈವಿಕ ಎನ್ನುತ್ತಾರೆ. ಮೇಧಾ ಶಕ್ತಿ ಪುಸ್ತಕಗಳಿಂದ ಎನ್ನುತ್ತಾರೆ. ಪ್ರತಿಭೆ ಇಲ್ಲದೇ ಮೇಧಾಶಕ್ತಿ ಇರಲುಂಟೇ...  ಇರುವುದು ಸಾಧ್ಯವಿದೆ. ಅಂತಹ  ಮೇಧಾಶಕ್ತಿ ಬುದ್ಧಿಪೂರ್ವಕ ನೆಲೆಯಲ್ಲೇ  ಮೈತಳೆದಿರುತ್ತದೆ. ಪ್ರತಿಭೆಯ ಮೂಲ ಹಾಗಲ್ಲ;  ಅದು ಹೃತ್ಪೂರ್ವಕವಾದ ನೆಲೆಯಿಂದ ಉದಿಸಿ ಬಂದಿರುತ್ತದೆ.  ಪ್ರತಿಭೆ  ಹುಟ್ಟಿನಿಂದ ಎಂದೂ  ಹೇಳುತ್ತಾರೆ.
 ಮುಂದೆ ಓದಿ »

564 ಹಿಟ್ಸ್

ಲೋಕಾಯುಕ್ತರಿಗೆ ಪರಮಾಧಿಕಾರ: ಮುಖ್ಯ ಮಂತ್ರಿಯ ಕಟುನಿರ್ಧಾರ..?

ಇತ್ತೀಚಿನ ವರ್ಷಗಳಲ್ಲಿ ವಿಜಯ ಕರ್ನಾಟಕ ನನ್ನ ಮೆಚ್ಚಿನ ದಿನ ಪತ್ರಿಕೆಯಾಗಿದೆ. ಪತ್ರಿಕೆಯ ಅಂತರ್ಮುಖಿ ಮತ್ತು ಮುಖಾಮುಖಿ ಪುಟದ ಲೇಖನಗಳು ಬಹಳ ಮೆಚ್ಚುಗೆಯಾಗುತ್ತವೆ. ವಿ.ಕ.೨೮ ಜನವರಿ ೨೦೧೦ರ ಸಂಚಿಕೆಯಲ್ಲಿ ಸಂಪಾದಕರ ಅಂಕಣದಲ್ಲಿ(ನೂರೆಂಟು ಮಾತು) "ಮರ್ಜಿಗೆ ಬೀಳದವ ನಾಯಕ, ಉಳಿದವ ಹಿಂಬಾಲಕ" ಎಂಬ ಲೇಖನದಲ್ಲಿ ನಮ್ಮ "ಜನನಾಯಕ"ರುಗಳ ಬಗ್ಗೆ ಹೇಳುತ್ತಾ.... ಕೆಲವರಿರತ್ತಾರೆ ಅವರಿಗೆ ಕಟು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಪರಿಣಾಮದ ಭಯ. ಹೀಗಾಗಿ ಅವರು ಯಾವುದೇ ಕಟು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ...ಇನ್ನು ಮೊರುವರ್ಷ ಸರಕಾರಿ ನೌಕರರಿಗೆ ತುಟ್ಟಿಭತ್ತೆ ನೀಡಲಾಗವುದಿಲ್ಲ, ನಾನು ಅಧಿಕಾರದಲ್ಲಿರುವಷ್ಟು ದಿನ ರೈತರಿಗೆ ಪುಕ್ಕಟ್ಟೆ ವಿದ್ಯುತ್ ನೀಡಲಾಗುವುದಿಲ್ಲ. ಸಾಲ ಮನ್ನಾ ಮಾಡುವುದಿಲ್ಲ ಎಂದು ಯಾವನಾದರೂ ಘೋಷಿಸಿದರೆ ಆ ಮುಖ್ಯ ಮಂತ್ರಿಯ ಎದೆಗಾರಿಕೆಯನ್ನು ಮುಟ್ಟಿನೋಡಬೇಕಾಗುತ್ತದೆ ಎಂದಿದ್ದಾರೆ.  ಮುಂದೆ ಓದಿ »

449 ಹಿಟ್ಸ್

ಶ್ರೀಕೃಷ್ಣದೇವರಾಯರ ಫಟ್ಟಾಭಿಷೇಕ- 500 ರ ನೆನಪು...

ವಿಜಯ ನಗರ ಸಾಮ್ಯಾಜ್ಯ ಅಂದಿನ ಕಾಲ ಘಟ್ಟದಲ್ಲಿ ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿತ್ತು. ಸುಮಾರು 300 ವರ್ಷಗಳ ಆಳ್ವಿಕೆಯ ಸಾಮ್ಯಾಜ್ಯ,. ಅದರ ವೈಭವವನ್ನು ಶ್ರೀ ಕೃಷ್ಣದೇವರಾಯನ ಆಳ್ವಿಕೆಯೊಂದಿಗೇ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದದ್ದು. ಶ್ರೀ ಕೃಷ್ಣದೇವರಾಯ ವಿಜಯ ನಗರ ವೈಭವವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಜಗತ್ಪ್ರಸಿದ್ಧ ಚಕ್ರವರ್ತಿ.  ವಿಚ್ಛಿದ್ರಕಾರೀ ಶಕ್ತಿಗಳ ದುರಾಕ್ರಮಣವನ್ನು ದಮನಗೊಳಿಸಿ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಚೈತನ್ಯ ನೀಡಿದ ಮಹಾರಾಯ ರಾಯರ ರಾಯ ಶ್ರೀ ಕೃಷ್ಣದೇವರಾಯ. ಆತನ ಆಳ್ವಿಕೆ ಮುಕ್ತಾಯಗೊಂಡ ಬೆನ್ನಿಗೇ ಆಕ್ರಮಣ ಕಾರರಿಂದ  ವಿಜಯನಗರ ಭಗ್ನಗೊಂಡು ಪಳಿಯುಳಿಕೆಯಾಯಿತು. ಇಂದಿನ ಹಾಳು ಹಂಪೆಯಲ್ಲಿರುವ ಆ ಪಳಿಯುಳಿಕೆಗಳು ಮೊಕವಾಗಿ ರೋಧಿಸುತ್ತಿವೆ; ಮರೆಯಲಾಗದ ಸಾಮ್ರಾಜ್ಯವೊಂದರ ಕಥೆ ಹೇಳುತ್ತಿವೆ.  ಈ ವಾರದ ತರಂಗ ವಾರ ಪತ್ರಿಕೆ ( (4 ಫೆಬ್ರವರಿ 2010) ವಿಶೇಷ ಲೇಖನ ಪ್ರಕಟಿಸಿ ಸಮೃದ್ಧ ಮಾಹಿತಿಯನ್ನೊದಗಿಸಿದೆ ..ಲೇಖನ ಹೀಗೆ ಆರಂಭವಾಗುತ್ತದೆ-
 ಮುಂದೆ ಓದಿ »

624 ಹಿಟ್ಸ್

ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು....!!

ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗೆ ಕ್ಯೂ ನಿಲ್ಲದೇ ಸಲಭವಾಗಿ ಅಲ್ಲಿ ಕೆಲಸ ಪೂರೈಸಿಕೊಳ್ಳಲು ಸಾಧ್ಯವಾಗಿತ್ತಲ್ಲ..! ಅದರಲಿ, ಆ ಕಛೇರಿ ಹೇಗಿತ್ತೂಂತೀರಾ... ಹಾಯಾಗಿ ಎಲ್ಲರೊಂದಿಗೂ(ನಮ್ಮೊಂದಿಗೂ) ಹರಟೆ ಹೊಡೆಯುತ್ತಾ ಸರಾಗವಾಗಿ ಕೆಲಸ ಮಾಡಿ ಕೊಡುತ್ತಿದ್ದರು.  ಮುಂದೆ ಓದಿ »

358 ಹಿಟ್ಸ್

Syndicate content