ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ritershivaram ರವರ ಬ್ಲಾಗ್

ಪ್ರತಿಭೆ, ದೈವಿಕತೆ ಇವು ಬುದ್ಧಿಯ ಕಣ್ಣಲ್ಲ...

ಪ್ರತಿಭೆ ದೈವಿಕ ಎನ್ನುತ್ತಾರೆ. ಮೇಧಾ ಶಕ್ತಿ ಪುಸ್ತಕಗಳಿಂದ ಎನ್ನುತ್ತಾರೆ. ಪ್ರತಿಭೆ ಇಲ್ಲದೇ ಮೇಧಾಶಕ್ತಿ ಇರಲುಂಟೇ...  ಇರುವುದು ಸಾಧ್ಯವಿದೆ. ಅಂತಹ  ಮೇಧಾಶಕ್ತಿ ಬುದ್ಧಿಪೂರ್ವಕ ನೆಲೆಯಲ್ಲೇ  ಮೈತಳೆದಿರುತ್ತದೆ. ಪ್ರತಿಭೆಯ ಮೂಲ ಹಾಗಲ್ಲ;  ಅದು ಹೃತ್ಪೂರ್ವಕವಾದ ನೆಲೆಯಿಂದ ಉದಿಸಿ ಬಂದಿರುತ್ತದೆ.  ಪ್ರತಿಭೆ  ಹುಟ್ಟಿನಿಂದ ಎಂದೂ  ಹೇಳುತ್ತಾರೆ.
 ಮುಂದೆ ಓದಿ »

ಲೋಕಾಯುಕ್ತರಿಗೆ ಪರಮಾಧಿಕಾರ: ಮುಖ್ಯ ಮಂತ್ರಿಯ ಕಟುನಿರ್ಧಾರ..?

ಇತ್ತೀಚಿನ ವರ್ಷಗಳಲ್ಲಿ ವಿಜಯ ಕರ್ನಾಟಕ ನನ್ನ ಮೆಚ್ಚಿನ ದಿನ ಪತ್ರಿಕೆಯಾಗಿದೆ. ಪತ್ರಿಕೆಯ ಅಂತರ್ಮುಖಿ ಮತ್ತು ಮುಖಾಮುಖಿ ಪುಟದ ಲೇಖನಗಳು ಬಹಳ ಮೆಚ್ಚುಗೆಯಾಗುತ್ತವೆ. ವಿ.ಕ.೨೮ ಜನವರಿ ೨೦೧೦ರ ಸಂಚಿಕೆಯಲ್ಲಿ ಸಂಪಾದಕರ ಅಂಕಣದಲ್ಲಿ(ನೂರೆಂಟು ಮಾತು) "ಮರ್ಜಿಗೆ ಬೀಳದವ ನಾಯಕ, ಉಳಿದವ ಹಿಂಬಾಲಕ" ಎಂಬ ಲೇಖನದಲ್ಲಿ ನಮ್ಮ "ಜನನಾಯಕ"ರುಗಳ ಬಗ್ಗೆ ಹೇಳುತ್ತಾ.... ಕೆಲವರಿರತ್ತಾರೆ ಅವರಿಗೆ ಕಟು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಪರಿಣಾಮದ ಭಯ. ಹೀಗಾಗಿ ಅವರು ಯಾವುದೇ ಕಟು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ...ಇನ್ನು ಮೊರುವರ್ಷ ಸರಕಾರಿ ನೌಕರರಿಗೆ ತುಟ್ಟಿಭತ್ತೆ ನೀಡಲಾಗವುದಿಲ್ಲ, ನಾನು ಅಧಿಕಾರದಲ್ಲಿರುವಷ್ಟು ದಿನ ರೈತರಿಗೆ ಪುಕ್ಕಟ್ಟೆ ವಿದ್ಯುತ್ ನೀಡಲಾಗುವುದಿಲ್ಲ. ಸಾಲ ಮನ್ನಾ ಮಾಡುವುದಿಲ್ಲ ಎಂದು ಯಾವನಾದರೂ ಘೋಷಿಸಿದರೆ ಆ ಮುಖ್ಯ ಮಂತ್ರಿಯ ಎದೆಗಾರಿಕೆಯನ್ನು ಮುಟ್ಟಿನೋಡಬೇಕಾಗುತ್ತದೆ ಎಂದಿದ್ದಾರೆ.  ಮುಂದೆ ಓದಿ »

ಶ್ರೀಕೃಷ್ಣದೇವರಾಯರ ಫಟ್ಟಾಭಿಷೇಕ- 500 ರ ನೆನಪು...

ವಿಜಯ ನಗರ ಸಾಮ್ಯಾಜ್ಯ ಅಂದಿನ ಕಾಲ ಘಟ್ಟದಲ್ಲಿ ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿತ್ತು. ಸುಮಾರು 300 ವರ್ಷಗಳ ಆಳ್ವಿಕೆಯ ಸಾಮ್ಯಾಜ್ಯ,. ಅದರ ವೈಭವವನ್ನು ಶ್ರೀ ಕೃಷ್ಣದೇವರಾಯನ ಆಳ್ವಿಕೆಯೊಂದಿಗೇ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದದ್ದು. ಶ್ರೀ ಕೃಷ್ಣದೇವರಾಯ ವಿಜಯ ನಗರ ವೈಭವವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಜಗತ್ಪ್ರಸಿದ್ಧ ಚಕ್ರವರ್ತಿ.  ವಿಚ್ಛಿದ್ರಕಾರೀ ಶಕ್ತಿಗಳ ದುರಾಕ್ರಮಣವನ್ನು ದಮನಗೊಳಿಸಿ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಚೈತನ್ಯ ನೀಡಿದ ಮಹಾರಾಯ ರಾಯರ ರಾಯ ಶ್ರೀ ಕೃಷ್ಣದೇವರಾಯ. ಆತನ ಆಳ್ವಿಕೆ ಮುಕ್ತಾಯಗೊಂಡ ಬೆನ್ನಿಗೇ ಆಕ್ರಮಣ ಕಾರರಿಂದ  ವಿಜಯನಗರ ಭಗ್ನಗೊಂಡು ಪಳಿಯುಳಿಕೆಯಾಯಿತು. ಇಂದಿನ ಹಾಳು ಹಂಪೆಯಲ್ಲಿರುವ ಆ ಪಳಿಯುಳಿಕೆಗಳು ಮೊಕವಾಗಿ ರೋಧಿಸುತ್ತಿವೆ; ಮರೆಯಲಾಗದ ಸಾಮ್ರಾಜ್ಯವೊಂದರ ಕಥೆ ಹೇಳುತ್ತಿವೆ.  ಈ ವಾರದ ತರಂಗ ವಾರ ಪತ್ರಿಕೆ ( (4 ಫೆಬ್ರವರಿ 2010) ವಿಶೇಷ ಲೇಖನ ಪ್ರಕಟಿಸಿ ಸಮೃದ್ಧ ಮಾಹಿತಿಯನ್ನೊದಗಿಸಿದೆ ..ಲೇಖನ ಹೀಗೆ ಆರಂಭವಾಗುತ್ತದೆ-
 ಮುಂದೆ ಓದಿ »

ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು....!!

ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗೆ ಕ್ಯೂ ನಿಲ್ಲದೇ ಸಲಭವಾಗಿ ಅಲ್ಲಿ ಕೆಲಸ ಪೂರೈಸಿಕೊಳ್ಳಲು ಸಾಧ್ಯವಾಗಿತ್ತಲ್ಲ..! ಅದರಲಿ, ಆ ಕಛೇರಿ ಹೇಗಿತ್ತೂಂತೀರಾ... ಹಾಯಾಗಿ ಎಲ್ಲರೊಂದಿಗೂ(ನಮ್ಮೊಂದಿಗೂ) ಹರಟೆ ಹೊಡೆಯುತ್ತಾ ಸರಾಗವಾಗಿ ಕೆಲಸ ಮಾಡಿ ಕೊಡುತ್ತಿದ್ದರು.  ಮುಂದೆ ಓದಿ »

ಇಹದಲ್ಲೇ ಸತ್ತವನು ಮತ್ತೆ ಹುಟ್ಟಲಾರನೇ...?

ದೇವರನ್ನು ಪೂಜಿಸುವುದು ಸುಲಭ.ಆದರೆ,ಪ್ರೀತಿಸುವುದು ಕಷ್ಟ.ಭಕ್ತಿಯಲ್ಲಿ ನವ ವಿಧವೆಂದು ಶ್ರೀಮಧ್ಬಾಗವತವು ಹೇಳುತ್ತದೆ.
ಶ್ರವಣ,ಕೀರ್ತನ,ವಿಷ್ಣು ಸ್ಮರಣ,ಪಾದ ಸೇವನ,ಅರ್ಚನ,ವಂದನ,ದಾಸ್ಯ,ಆತ್ಮ ನಿವೇದನ ಇವುಗಳಲ್ಲಿ ಎರಡನೆಯದೇ ಭಕ್ತಿ ಕೀರ್ತನ.

ಪರಿವರ್ತಿನೀ ಸಂಸಾರೇ ಮೃತಃ ಕೋವಾನ ಜಾಯತೇ|
ಸಜಾತೋಯೇನ ಜಾತೇನಯಾತಿವಂಶಃ ಸಮುನ್ನತಿಮ್||

ಬದಲಾಗುತ್ತಿರುವ ಈ ಸಂಸಾರದಲ್ಲಿ ಸತ್ತವನು ಯಾರು ತಾನೆ ಮತ್ತೆ ಹುಟ್ಟಲಾರ..?
ಯಾರ ಹುಟ್ಟಿನಿಂದ ವಂಶವು ಉನ್ನತಿಯನ್ನು ಪಡೆಯುವುದೋ ಅವನ ಹುಟ್ಟೇ ಸಾರ್ಥಕವಾದುದು.
-ನೀತಿ ಶತಕ.

Syndicate content