ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಶ್ಯಾಮ ಕಶ್ಯಪ ರವರ ಬ್ಲಾಗ್

ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?

ಉತ್ತರ: ಇಂಥಾ ರೈತ ಇಂಥಾ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಎಕ್ಸೆಲ್ ಫ಼ೈಲಿನಲ್ಲಿ ಬರೆದುಕೊಳ್ಳುತ್ತೇನೆ.

ರೈತನಾದರೂ ವಾಸಿ. ಅವನ ಸಾವಾದರೂ ನನ್ನ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಕೂಲಿ ಕಾರ್ಮಿಕರೋ ರೈತನ ಮನೆಯ ಹೆಣ್ಣುಮಕ್ಕಳೋ ಆತ್ಮಹತ್ಯೆ ಮಾಡಿಕೊಂಡರೆ ಇದೂ ಇಲ್ಲ.

ವರ್ಣಭೇದ ಈಗ ಕ್ರಿಕೆಟ್‍ನಲ್ಲೂ

ಭಾರತೀಯ ಮಾಧ್ಯಮಗಳು ಮತ್ತು ಅವು ಬಿತ್ತರಿಸುವ ಅಂತರ್ರಾಷ್ಟ್ರೀಯ ವರದಿಗಳನ್ನು ಬಿಟ್ಟರೆ ಮಿಕ್ಕವರು ಸುಮಾರು ಜನ ಭಾರತೀಯ ತಂಡವನ್ನು, ಹರ್ಭಜನ್ ಸಿಂಗ್‍ರನ್ನು ವಿಶೇಷ ಪದಗಳಿಂದ ಬಯ್ಯುತ್ತಿದ್ದಾರೆ. ನಮ್ಮ ಕ್ರಿಕೆಟ್ಟಿಗರೂ ರೇಸಿಸ್ಟ್ ಭಾಷೆ ಬಳಸುತ್ತರೆಯೇ ಎಂಬು ಸಣ್ಣ ಅನುಮಾನ ನಮ್ಮ ಹೃದಯದಲ್ಲೂ ಹುಟ್ಟಿದೆ.  ಮುಂದೆ ಓದಿ »

ಹೆಗ್ಗೋಡಿನ ಹಾದಿಯಲ್ಲಿ

ನೀನಾಸಂ ಸಂಸ್ಕೃತಿ ಶಿಬಿರ ಅಕ್ಟೋಬರ್ ನಲ್ಲಿ ನಡೆಯುತ್ತಿರುವುದು ಸಂಪದದಲ್ಲಿ ಈಗಾಗಲೇ ಪ್ರಕಟವಾಗಿದೆ. 

ಇನ್ನೇನು ತಡ, ಹೊರಡುವ ಬೇಗ.. ಮತ್ತೆಂತ? ಸಿಗುವ ಮಾರಾಯ್ರೆ ಹೆಗ್ಗೋಡಿನಲ್ಲಿ?

ನಾವೆಂಥಾ ಜನ!

ಅಲ್ಲಾ ಗುರು,
ಬಂಜಗೆರೆ ಬರೆದರೆ ಇವರು ಮಾಡುತ್ತಿರುವುದೆಲ್ಲ ಊಹಾಪೋಹ, ತಮಗೆ ಬೇಕಾದನ್ನಷ್ಟೇ ತೆಗೆದು ಮಿಕ್ಕವುಗಳ ಬಗ್ಗೆ ಬೇಕಂತಲೇ ದೃಷ್ಟಿ ಹರಿಸಿಲ್ಲ ಎನ್ನುವ ನಾವು (ನಾನಲ್ಲ, ನಮ್ಮಲ್ಲಿ ಕೆಲವರು) ಭೈರಪ್ಪ ಬರೆದಾಗ ಇದು "ಸಂಪೂರ್ಣ ಸತ್ಯ" ಎಂದು ನಂಬುವುದೇಕೆ?  ಮುಂದೆ ಓದಿ »

Brahmins for Dummies

ಇಲ್ಲಿ ನಾನು ಏನನ್ನೂ ಉತ್ಪ್ರೇಕ್ಷೆ ಮಾಡಲು ಹೊರಟಿಲ್ಲ. ನಿಮ್ಮ ಜಾತಿ/ಮತಕ್ಕಿಂತ ನನ್ನದು ಹೆಚ್ಚು ಎಂದು ನನಗೆ ವೈಯುಕ್ತಿಕವಾಗಿ ಅನ್ನಿಸಿದ್ದಿಲ್ಲ. ಇಲ್ಲಿರುವುದು ನನಗೆ ಅನ್ನಿಸಿದಂತೆ, ನಾ ಕಂಡಂತೆ ನನ್ನ ಜಾತಿಯ ಕೆಲವು ವಿಚಾರಗಳಷ್ಟೇ.ನ

ನಾನು ಮಲೆನಾಡಿನ ಸ್ಮಾರ್ತ ಬಬ್ಬೂರುಕಮ್ಮೆ ಬ್ರಾಹ್ಮಣ. ನಮ್ಮದು ಯಜುರ್ವೇದ. ನಮ್ಮ ಕಡೆ ಬಬ್ಬೂರುಕಮ್ಮೆ ಬ್ರಾಹ್ಮಣರು ಕಡಿಮೆಯಂತೆ. ಇದ್ದುದರಲ್ಲಿ ಹವ್ಯಕರೇ ಹೆಚ್ಚು ನಮ್ಮ ಕಡೆ. ಅವರನ್ನು ಬಿಟ್ಟರೆ ಕೋಟ, ಕಂದಾವರ, ಶಿವಳ್ಳಿ, ಅಥವ ಮಾಧ್ವಮಣಿಗಳು. ಹೊಯ್ಸಳ ಕರ್ನಾಟಕರು ಇಲ್ಲವೇ ಇಲ್ವಂತೆ...ಹೀಗೆ ಸಾಗುತ್ತದೆ ನಮ್ಮ ಮಲೆನಾಡಿನ ಬ್ರಾಹ್ಮಣ ಪುರಾಣ.

ಬ್ರಾಹ್ಮಣ ಸಾರಂಶ:
೧. ನಿಮಗೆ ಬೇಕೋ ಬೇಡವೋ, ಒಳ್ಳೇದಕ್ಕೋ ಕೆಟ್ಟದ್ದಕ್ಕೋ, ಬ್ರಾಹ್ಮಣರು ಕಳೆದ ಒಂದೆರೆಡು ಸಾವಿರ ವರ್ಷಗಳಿಂದ, ನಾವು ಇಂದು ತಿಳಿದ ಇತಿಹಾಸದಂತೆ, ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಪ್ರಮುಖ ಪಾತ್ರವನ್ನು ತೊಟ್ಟಿದ್ದಾರೆ. ಭಾರತೀಯ ಸಮಾಜವು ಯಾವುದಕ್ಕೆ ಸ್ಪಂದಿಸಿದರೂ, ಅದರಲ್ಲಿ ಬ್ರಾಹ್ಮಣರ ಪಾತ್ರ ಎದ್ದುಕಾಣುತ್ತದೆ.
೨. ಸಮಾಜದಲ್ಲೇ ಯಾವುದೇ ಬಗೆಯ ಹೊಸ ಪ್ರಗತಿಯುಂಟಾದರೂ ಅದರ ಉಪಯೋಗವನ್ನು ಪಡೆದವರ ಮಂಚೂಣಿಯಲ್ಲಿ ಬ್ರಾಹ್ಮಣರಿರುತ್ತಾರೆ.  ಮುಂದೆ ಓದಿ »

Syndicate content